<p>ವಾಷಿಂಗ್ಟನ್: ‘ದೇಶವನ್ನು ಬಾಧಿಸುತ್ತಿರುವ ಕೋವಿಡ್ ಪಿಡುಗನ್ನು ನಿಯಂತ್ರಿಸುವುದೇ ನನ್ನ ಮೊದಲ ಆದ್ಯತೆ’ ಎಂದು ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ನಾಮನಿರ್ದೇಶನಗೊಂಡಿರುವ, ಭಾರತೀಯ ಅಮೆರಿಕನ್ ವೈದ್ಯ ಡಾ.ವಿವೇಕಮೂರ್ತಿ ಹೇಳಿದ್ದಾರೆ.</p>.<p>ಸರ್ಜನ್ ಜನರಲ್ ಹುದ್ದೆಗೆ ಅವರ ನಾಮನಿರ್ದೇಶನವನ್ನು ದೃಢಪಡಿಸುವ ಸಂಬಂಧ ಸೆನೆಟ್ನ ಆರೋಗ್ಯ, ಶಿಕ್ಷಣ, ಕಾರ್ಮಿಕರ ವ್ಯವಹಾರ ಹಾಗೂ ಪಿಂಚಣಿ ಕಮಿಟಿ ಕೈಗೊಂಡಿರುವ ವಿಚಾರಣೆ ಸಂದರ್ಭದಲ್ಲಿ ಅವರು ತಮ್ಮ ಆದ್ಯತೆಗಳ ಕುರಿತು ವಿವರಿಸಿದರು.</p>.<p>‘ಕೋವಿಡ್ಅನ್ನು ನಿಯಂತ್ರಿಸುವುದು ವೈಯಕ್ತಿಕವಾಗಿಯೂ ನನಗೆ ಬಹಳ ಮಹತ್ವದ ವಿಷಯ. ಈ ಮಾರಕ ಸೋಂಕಿಗೆ ನಾನು ನನ್ನ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದೇನೆ. ಅದರ ನೋವು ಏನೆಂಬುದು ನನಗೆ ತಿಳಿದಿದೆ’ ಎಂದೂ ಹೇಳಿದರು.</p>.<p>‘ಈ ಪಿಡುಗು ದೇಶವನ್ನು ಹಲವಾರು ರೀತಿಯಲ್ಲಿ ಬಾಧಿಸುತ್ತಿದೆ. ಕೆಲವರು ದೀರ್ಘಾವಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಆರ್ಥಿಕವಾಗಿ ಅನೇಕ ಜನರು ನಲುಗಿ ಹೋಗಿದ್ದಾರೆ. ಹೀಗಾಗಿ ಸರ್ಜನ್ ಜನರಲ್ ಆಗಿ ನನ್ನ ನಾಮನಿರ್ದೇಶನ ದೃಢಪಟ್ಟರೆ, ಈ ಸೋಂಕಿನ ನಿರ್ಮೂಲನೆಯೇ ನನ್ನ ಆದ್ಯತೆಯಾಗುವುದು’ ಎಂದು ಪುನರುಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾಷಿಂಗ್ಟನ್: ‘ದೇಶವನ್ನು ಬಾಧಿಸುತ್ತಿರುವ ಕೋವಿಡ್ ಪಿಡುಗನ್ನು ನಿಯಂತ್ರಿಸುವುದೇ ನನ್ನ ಮೊದಲ ಆದ್ಯತೆ’ ಎಂದು ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ನಾಮನಿರ್ದೇಶನಗೊಂಡಿರುವ, ಭಾರತೀಯ ಅಮೆರಿಕನ್ ವೈದ್ಯ ಡಾ.ವಿವೇಕಮೂರ್ತಿ ಹೇಳಿದ್ದಾರೆ.</p>.<p>ಸರ್ಜನ್ ಜನರಲ್ ಹುದ್ದೆಗೆ ಅವರ ನಾಮನಿರ್ದೇಶನವನ್ನು ದೃಢಪಡಿಸುವ ಸಂಬಂಧ ಸೆನೆಟ್ನ ಆರೋಗ್ಯ, ಶಿಕ್ಷಣ, ಕಾರ್ಮಿಕರ ವ್ಯವಹಾರ ಹಾಗೂ ಪಿಂಚಣಿ ಕಮಿಟಿ ಕೈಗೊಂಡಿರುವ ವಿಚಾರಣೆ ಸಂದರ್ಭದಲ್ಲಿ ಅವರು ತಮ್ಮ ಆದ್ಯತೆಗಳ ಕುರಿತು ವಿವರಿಸಿದರು.</p>.<p>‘ಕೋವಿಡ್ಅನ್ನು ನಿಯಂತ್ರಿಸುವುದು ವೈಯಕ್ತಿಕವಾಗಿಯೂ ನನಗೆ ಬಹಳ ಮಹತ್ವದ ವಿಷಯ. ಈ ಮಾರಕ ಸೋಂಕಿಗೆ ನಾನು ನನ್ನ ಕುಟುಂಬದ ಏಳು ಸದಸ್ಯರನ್ನು ಕಳೆದುಕೊಂಡಿದ್ದೇನೆ. ಅದರ ನೋವು ಏನೆಂಬುದು ನನಗೆ ತಿಳಿದಿದೆ’ ಎಂದೂ ಹೇಳಿದರು.</p>.<p>‘ಈ ಪಿಡುಗು ದೇಶವನ್ನು ಹಲವಾರು ರೀತಿಯಲ್ಲಿ ಬಾಧಿಸುತ್ತಿದೆ. ಕೆಲವರು ದೀರ್ಘಾವಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಆರ್ಥಿಕವಾಗಿ ಅನೇಕ ಜನರು ನಲುಗಿ ಹೋಗಿದ್ದಾರೆ. ಹೀಗಾಗಿ ಸರ್ಜನ್ ಜನರಲ್ ಆಗಿ ನನ್ನ ನಾಮನಿರ್ದೇಶನ ದೃಢಪಟ್ಟರೆ, ಈ ಸೋಂಕಿನ ನಿರ್ಮೂಲನೆಯೇ ನನ್ನ ಆದ್ಯತೆಯಾಗುವುದು’ ಎಂದು ಪುನರುಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>