ಚೇಳೂರು: ಕೃಷಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿವೆ. ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿವೆ. ಇಂತಹ ಪ್ರಯೋಗಗಳ ನಡುವೆಯೇಇರಗಂಪಲ್ಲಿ ಗ್ರಾಮದ ತಲಾರಿ ನರಸಿಂಹಪ್ಪ ಅನುಪಯುಕ್ತವಾಗಿರುವ ಬೈಸಿಕಲ್ ಚಕ್ರಗಳನ್ನು ಶೇಂಗಾ ಬೆಳೆಯ ನಡುವಿನ ಕಳೆ ತೆಗೆಯಲು ಬಳಸುತ್ತಿದ್ದಾರೆ. ಈ ಮಾದರಿಯ ವಿಧಾನ ಸುತ್ತಲಿನ ರೈತರ ಗಮನ ಸೆಳೆದಿದೆ. ಇದಕ್ಕೆ ಕಡಿಮೆ ಖರ್ಚು ಮತ್ತು ಶ್ರಮ ಆಗುತ್ತದೆ.