<p><strong>ಚಿಂಚೋಳಿ: </strong>ಜಿಲ್ಲೆಯಲ್ಲಿಯೇ ಯಶಸ್ವಿ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಕಾಲುವೆಗಳು ನವೀಕರಣಕ್ಕಾಗಿ ಕಾಯುತ್ತಿವೆ.</p>.<p>ಬಲದಂಡೆ ಹಾಗೂ ಎಡದಂಡೆ ಹೀಗೆ ಎರಡು ಮುಖ್ಯನಾಲೆಗಳನ್ನು ಹೊಂದಿರುವ ಈ ಯೋಜನೆಯ ಕಾಲುವೆಗಳು ಅಲ್ಲಲ್ಲಿ ಹಾಳಾಗಿವೆ. ಅಕ್ವಡಕ್ಟ್ಗಳು ಪುನರ್ ನಿರ್ಮಾಣಕ್ಕೆ ಕಾಯುತ್ತಿವೆ. ಜಲಾಶಯದಿಂದ ಕಾಲುವೆಗಳಿಗೆ ಬಿಟ್ಟ ನೀರು ಪೋಲಾಗುತ್ತಿದೆ.</p>.<p>ಬಲದಂಡೆ 14 ಕಿ.ಮೀ ಹಾಗೂ ಎಡದಂಡೆ 21 ಕಿ.ಮೀ ಉದ್ದ ಹೊಂದಿರುವ ಈ ಯೋಜನೆಗೆ ಬಚಾವತ್ ಐತೀರ್ಪಿನ ಅಡಿಯಲ್ಲಿ 1.05 ಟಿಎಂಸಿ ಅಡಿ ನೀರಿನ ಹಂಚಿಕೆಯಾಗಿದೆ. ಇದರಿಂದ 5223 ಹೆಕ್ಟೇರ್ ನೀರಾವರಿ ಗುರಿ ಹೊಂದಿದೆ. ಮುಲ್ಲಾಮಾರಿಯ ಉಪ ನದಿಯಾದ ಸರನಾಲ ನದಿಗೆ ಅಡ್ಡಲಾಗಿ ಚಂದ್ರಂಪಳ್ಳಿ ಬಳಿ ಜಲಾಶಯ ನಿರ್ಮಿಸಿದ್ದು ಕಲ್ಯಾಣ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ತಾಣವಾಗಿ ಈ ಜಲಾಶಯ ಖ್ಯಾತಿ ಪಡೆದಿದೆ.</p>.<p>ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಕನಸಿನ ಈ ಯೋಜನೆಗೆ ಜಿಲ್ಲೆಯಲ್ಲಿಯೇ ಕಾಲಮಿತಿಯಲ್ಲಿ ಪೂರ್ಣಗೊಂಡ ಯೋಜನೆ ಎಂಬ ಖ್ಯಾತಿ ಇದೆ. ಯೋಜನೆಯ ಮುಖ್ಯನಾಲೆ ಹಾಗೂ ವಿತರಣೆ ನಾಲೆಗಳು ಹಾಳಾಗಿದ್ದು, ನವೀಕರಣಗೊಳಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.</p>.<p>ತಾಲ್ಲೂಕಿನ ಕಲಭಾವಿ ತಾಂಡಾದಿಂದ ಚಂದಾಪುರ ಮಧ್ಯೆ ನಮ್ಮ ಹೊಲದ ಮೇಲ್ಭಾಗದಲ್ಲಿ ಕಾಲುವೆಗೆ ಸಿಸಿ ಲೈನಿಂಗ್ ಮಾಡದ ಕಾರಣ ಹೊಲಕ್ಕೆ ಕಾಲುವೆಯ ನೀರು ಬಸಿದು ಬೆಳೆ ಹಾಳಾಗಿದೆ. ಇದಕ್ಕೆ ನೀರಾವರಿ ಇಲಾಖೆಯ ಹೊಣೆ ಎಂದು ರೈತ ಸಾಯಿರೆಡ್ಡಿ ಅಡವಾಲ್ ದೂರಿದ್ದಾರೆ.</p>.<p>ನಾಲೆಯ ಸಿಸಿ ಲೈನಿಂಗ್ ಅಲ್ಲಲ್ಲಿ ಬಿರುಕು ಬಿಟ್ಟಿದೆ, ಒಡೆದು ಹೋಗಿವೆ. ಹೀಗಾಗಿ ಪುನರ್ ನಿರ್ಮಾಣದ ಅಗತ್ಯವಿದೆ ಎನ್ನುತ್ತಾರೆ ಅಚ್ಚುಕಟ್ಟು ಪ್ರದೆಶ ರೈತರು.</p>.<p>ಜಿಲ್ಲೆಯಲ್ಲಿ ಅತಿ ಹೆಚ್ಚು ಅರಿಶಿಣವನ್ನು ಈ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ ಎರಡು ವರ್ಷಗಳಿಂದ ಜಲಾಶಯ ಭರ್ತಿಯಾಗದೆ ರೈತರಿಗೆ ತೊಂದರೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ: </strong>ಜಿಲ್ಲೆಯಲ್ಲಿಯೇ ಯಶಸ್ವಿ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಕಾಲುವೆಗಳು ನವೀಕರಣಕ್ಕಾಗಿ ಕಾಯುತ್ತಿವೆ.</p>.<p>ಬಲದಂಡೆ ಹಾಗೂ ಎಡದಂಡೆ ಹೀಗೆ ಎರಡು ಮುಖ್ಯನಾಲೆಗಳನ್ನು ಹೊಂದಿರುವ ಈ ಯೋಜನೆಯ ಕಾಲುವೆಗಳು ಅಲ್ಲಲ್ಲಿ ಹಾಳಾಗಿವೆ. ಅಕ್ವಡಕ್ಟ್ಗಳು ಪುನರ್ ನಿರ್ಮಾಣಕ್ಕೆ ಕಾಯುತ್ತಿವೆ. ಜಲಾಶಯದಿಂದ ಕಾಲುವೆಗಳಿಗೆ ಬಿಟ್ಟ ನೀರು ಪೋಲಾಗುತ್ತಿದೆ.</p>.<p>ಬಲದಂಡೆ 14 ಕಿ.ಮೀ ಹಾಗೂ ಎಡದಂಡೆ 21 ಕಿ.ಮೀ ಉದ್ದ ಹೊಂದಿರುವ ಈ ಯೋಜನೆಗೆ ಬಚಾವತ್ ಐತೀರ್ಪಿನ ಅಡಿಯಲ್ಲಿ 1.05 ಟಿಎಂಸಿ ಅಡಿ ನೀರಿನ ಹಂಚಿಕೆಯಾಗಿದೆ. ಇದರಿಂದ 5223 ಹೆಕ್ಟೇರ್ ನೀರಾವರಿ ಗುರಿ ಹೊಂದಿದೆ. ಮುಲ್ಲಾಮಾರಿಯ ಉಪ ನದಿಯಾದ ಸರನಾಲ ನದಿಗೆ ಅಡ್ಡಲಾಗಿ ಚಂದ್ರಂಪಳ್ಳಿ ಬಳಿ ಜಲಾಶಯ ನಿರ್ಮಿಸಿದ್ದು ಕಲ್ಯಾಣ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ತಾಣವಾಗಿ ಈ ಜಲಾಶಯ ಖ್ಯಾತಿ ಪಡೆದಿದೆ.</p>.<p>ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಕನಸಿನ ಈ ಯೋಜನೆಗೆ ಜಿಲ್ಲೆಯಲ್ಲಿಯೇ ಕಾಲಮಿತಿಯಲ್ಲಿ ಪೂರ್ಣಗೊಂಡ ಯೋಜನೆ ಎಂಬ ಖ್ಯಾತಿ ಇದೆ. ಯೋಜನೆಯ ಮುಖ್ಯನಾಲೆ ಹಾಗೂ ವಿತರಣೆ ನಾಲೆಗಳು ಹಾಳಾಗಿದ್ದು, ನವೀಕರಣಗೊಳಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.</p>.<p>ತಾಲ್ಲೂಕಿನ ಕಲಭಾವಿ ತಾಂಡಾದಿಂದ ಚಂದಾಪುರ ಮಧ್ಯೆ ನಮ್ಮ ಹೊಲದ ಮೇಲ್ಭಾಗದಲ್ಲಿ ಕಾಲುವೆಗೆ ಸಿಸಿ ಲೈನಿಂಗ್ ಮಾಡದ ಕಾರಣ ಹೊಲಕ್ಕೆ ಕಾಲುವೆಯ ನೀರು ಬಸಿದು ಬೆಳೆ ಹಾಳಾಗಿದೆ. ಇದಕ್ಕೆ ನೀರಾವರಿ ಇಲಾಖೆಯ ಹೊಣೆ ಎಂದು ರೈತ ಸಾಯಿರೆಡ್ಡಿ ಅಡವಾಲ್ ದೂರಿದ್ದಾರೆ.</p>.<p>ನಾಲೆಯ ಸಿಸಿ ಲೈನಿಂಗ್ ಅಲ್ಲಲ್ಲಿ ಬಿರುಕು ಬಿಟ್ಟಿದೆ, ಒಡೆದು ಹೋಗಿವೆ. ಹೀಗಾಗಿ ಪುನರ್ ನಿರ್ಮಾಣದ ಅಗತ್ಯವಿದೆ ಎನ್ನುತ್ತಾರೆ ಅಚ್ಚುಕಟ್ಟು ಪ್ರದೆಶ ರೈತರು.</p>.<p>ಜಿಲ್ಲೆಯಲ್ಲಿ ಅತಿ ಹೆಚ್ಚು ಅರಿಶಿಣವನ್ನು ಈ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಆದರೆ ಎರಡು ವರ್ಷಗಳಿಂದ ಜಲಾಶಯ ಭರ್ತಿಯಾಗದೆ ರೈತರಿಗೆ ತೊಂದರೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>