ಸ್ವರ್ಣವಲ್ಲೀ ಮಠದಲ್ಲಿ 2007ರಿಂದ ಕೃಷಿ ಜಯಂತಿ ನಡೆಯುತ್ತಿದೆ. ಮಕ್ಕಳಿಗೆ ಎಳವೆಯಲ್ಲಿಯೇ ಕೃಷಿಯಲ್ಲಿ ಆಸಕ್ತಿ ಮೂಡಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಎಲೆ, ಬೀಜಗಳನ್ನು ಗುರುತಿಸುವಂಥ ಕೃಷಿ ಸಂಬಂಧಿ ಅನೇಕ ಸ್ಪರ್ಧೆಗಳು ನಡೆಯುತ್ತವೆ. ಸಾಧಕ ರೈತರನ್ನು ಗೌರವಿಸಲಾಗುತ್ತದೆ. ದೇಶದ ವಿವಿಧ ಭಾಗಗಳ ಕೃಷಿ ತಜ್ಞರ ಉಪನ್ಯಾಸಗಳೂ ಇದರ ಭಾಗವಾಗಿದೆ. ಈ ಸಲ ಮೇ 10 ಮತ್ತು 11ರಂದು ಈ ಕಾರ್ಯಕ್ರಮ ನಡೆಯಲಿದೆ.