<blockquote>ಚಿತ್ರಯೋಗಿ </blockquote>.<p>ಚಿತ್ರ ಸಿದ್ಧಾಂತವನ್ನು ಯೋಗದ ರೀತಿ ಅನುಸರಿಸಿ ವರ್ಣಶಿಲ್ಪಿಯಾಗಿ ಖ್ಯಾತರಾದವರು ಶ್ರೀ ಕೆ.ವೆಂಕಟಪ್ಪನವರು. ಅವರು ರಚಿಸಿದ ‘ಶಕುಂತಲೆ ಕಣ್ವಾಶ್ರಮದಿಂದ ಬೀಳ್ಕೊಳ್ಳುವ ಮೃತ್ತಿಕಾ ಚಿತ್ರದಿಂದ ಪ್ರೇರಿತವಾಗಿ’ ಕುವೆಂಪು ಅವರು ‘ವರ್ಣಶಿಲ್ಪಿ ವೆಂಕಟಪ್ಪನವರಿಗೆ’ ಕವನ ರಚಿಸಿದ್ದಾರೆ. ಆ ಚಿತ್ರ ಭೂತಕಾಲದ ಘಟನೆಯಾಗಿ, ವರ್ತಮಾನದಲ್ಲಿ ಶೋಭಿಸುತ್ತ, ಭವಿತವ್ಯದ ಚಿತ್ರಕಲಾ ಚತುರರಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳುತ್ತ ಕುವೆಂಪು ಅವರು ವೆಂಕಟಪ್ಪನವರ ಕುಶಲತೆಗೆ ತಲೆಬಾಗಿ ‘ಚಿತ್ರಯೋಗಿ’ ಎಂದು ಬಣ್ಣಿಸಿದ್ದಾರೆ.</p>.<p>‘ಭೂತಕಾಲವ ಸುಲಿದು ವರ್ತಮಾನಕೆ ನೀಡಿ</p><p>ಭವಿತವ್ಯಕಿಣುಕುತಿದೆ, ಚಿತ್ರಯೋಗಿ!’</p>.<blockquote>ಹೊಗೆವಳ್ಳಿ</blockquote>.<p>ಕುವೆಂಪು ಅವರು ಒಮ್ಮೆ ಸ್ನೇಹಿತ ಮೂರ್ತಿಯೊಂದಿಗೆ ಮಲೆನಾಡಿನ ಬೆಟ್ಟಗಳನ್ನು ಏರಿ ಸಾಗುವ ಸೊಬಗಿನ ಚಿತ್ರಣದ ಕವನ ‘ವೈಶಾಖ ಸೂರ್ಯೋದಯ’. ಮುಗಿಲಿನ ಮಟ್ಟ ಸೇರಿ ಕೆಳಗಡೆ ಕಣಿವೆಯಲ್ಲಿ ಅಲ್ಲಲ್ಲಿ ತಲೆಯೆತ್ತಿರುವ ‘ಬಿಂಕದ ಹುಲ್ಮನೆ ನೋಟಗಳನ್ನು ನೋಡುತ್ತಾರೆ. ಕವಿಯು ಆ ಮನೆಗಳಿಂದ ಮೆಲ್ಲಗೆ ಮೇಲಕ್ಕೆ ಏರುವ ಹೊಗೆಯ ಆಕಾರವನ್ನು ಬಳ್ಳಿಗೆ ಹೋಲಿಸಿ ಹೊಸ ಪದ ‘ಹೊಗೆವಳ್ಳಿ’ಯಿಂದ ಹೀಗೆ ಚಿತ್ರಿಸಿದ್ದಾರೆ:</p><p>ಮನೆಮನೆಯಿಂದ ಸುನೀಲಾಕಾಶಕೆ</p><p>ಮೆಲ್ಲಗೇರ್ವ ಹೊಗೆವಳ್ಳಿಗಳು</p><p>ನೀಲಿಯ ಕನಸಿನ ಬಳ್ಳಿಗಳು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಚಿತ್ರಯೋಗಿ </blockquote>.<p>ಚಿತ್ರ ಸಿದ್ಧಾಂತವನ್ನು ಯೋಗದ ರೀತಿ ಅನುಸರಿಸಿ ವರ್ಣಶಿಲ್ಪಿಯಾಗಿ ಖ್ಯಾತರಾದವರು ಶ್ರೀ ಕೆ.ವೆಂಕಟಪ್ಪನವರು. ಅವರು ರಚಿಸಿದ ‘ಶಕುಂತಲೆ ಕಣ್ವಾಶ್ರಮದಿಂದ ಬೀಳ್ಕೊಳ್ಳುವ ಮೃತ್ತಿಕಾ ಚಿತ್ರದಿಂದ ಪ್ರೇರಿತವಾಗಿ’ ಕುವೆಂಪು ಅವರು ‘ವರ್ಣಶಿಲ್ಪಿ ವೆಂಕಟಪ್ಪನವರಿಗೆ’ ಕವನ ರಚಿಸಿದ್ದಾರೆ. ಆ ಚಿತ್ರ ಭೂತಕಾಲದ ಘಟನೆಯಾಗಿ, ವರ್ತಮಾನದಲ್ಲಿ ಶೋಭಿಸುತ್ತ, ಭವಿತವ್ಯದ ಚಿತ್ರಕಲಾ ಚತುರರಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳುತ್ತ ಕುವೆಂಪು ಅವರು ವೆಂಕಟಪ್ಪನವರ ಕುಶಲತೆಗೆ ತಲೆಬಾಗಿ ‘ಚಿತ್ರಯೋಗಿ’ ಎಂದು ಬಣ್ಣಿಸಿದ್ದಾರೆ.</p>.<p>‘ಭೂತಕಾಲವ ಸುಲಿದು ವರ್ತಮಾನಕೆ ನೀಡಿ</p><p>ಭವಿತವ್ಯಕಿಣುಕುತಿದೆ, ಚಿತ್ರಯೋಗಿ!’</p>.<blockquote>ಹೊಗೆವಳ್ಳಿ</blockquote>.<p>ಕುವೆಂಪು ಅವರು ಒಮ್ಮೆ ಸ್ನೇಹಿತ ಮೂರ್ತಿಯೊಂದಿಗೆ ಮಲೆನಾಡಿನ ಬೆಟ್ಟಗಳನ್ನು ಏರಿ ಸಾಗುವ ಸೊಬಗಿನ ಚಿತ್ರಣದ ಕವನ ‘ವೈಶಾಖ ಸೂರ್ಯೋದಯ’. ಮುಗಿಲಿನ ಮಟ್ಟ ಸೇರಿ ಕೆಳಗಡೆ ಕಣಿವೆಯಲ್ಲಿ ಅಲ್ಲಲ್ಲಿ ತಲೆಯೆತ್ತಿರುವ ‘ಬಿಂಕದ ಹುಲ್ಮನೆ ನೋಟಗಳನ್ನು ನೋಡುತ್ತಾರೆ. ಕವಿಯು ಆ ಮನೆಗಳಿಂದ ಮೆಲ್ಲಗೆ ಮೇಲಕ್ಕೆ ಏರುವ ಹೊಗೆಯ ಆಕಾರವನ್ನು ಬಳ್ಳಿಗೆ ಹೋಲಿಸಿ ಹೊಸ ಪದ ‘ಹೊಗೆವಳ್ಳಿ’ಯಿಂದ ಹೀಗೆ ಚಿತ್ರಿಸಿದ್ದಾರೆ:</p><p>ಮನೆಮನೆಯಿಂದ ಸುನೀಲಾಕಾಶಕೆ</p><p>ಮೆಲ್ಲಗೇರ್ವ ಹೊಗೆವಳ್ಳಿಗಳು</p><p>ನೀಲಿಯ ಕನಸಿನ ಬಳ್ಳಿಗಳು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>