<p>ಮಹಾವೀರನು (ಇವನಿಗೆ ವರ್ಧಮಾನ ಎಂಬ ಹೆಸರೂ ಉಂಟು) ತೀರ್ಥಂಕರರಲ್ಲಿ ಇಪ್ಪತ್ತನಾಲ್ಕನೆಯವನು ಮತ್ತು ಕೊನೆಯವನು. ಇವನು ಈಗಲೂ ಬಳಕೆಯಲ್ಲಿರುವ ಜೈನಶಕೆಯ ಪ್ರಕಾರ, ಕ್ರಿ. ಪೂ. 599ರಲ್ಲಿ ಹುಟ್ಟಿದನು.</p>.<p>ಇವನ ತಂದೆ ವೈಶಾಲಿಯ ಸಮೀಪದ ಕೌಂಡಿನ್ಯಪುರದ ದೊರೆ. (ವೈಶಾಲಿ – ಇದು ಇಂದಿನ ಪಟ್ನಾದಿಂದ ಉತ್ತರಕ್ಕೆ 44<br />ಕಿ. ಮೀ. ದೂರದಲ್ಲಿರುವ ಬಸ್ಹರ್ ಎಂಬ ಹಳ್ಳಿ.) ವೈಶಾಲಿಯ ಲಿಚ್ಛವಿದೊರೆಯ ಮಗಳಾದ ತ್ರಿಶಲಾದೇವಿ ಇವನ ತಾಯಿ. ಬಾಲ್ಯದಿಂದಲೂ ಮಹಾವೀರನು ಅಂತರ್ಮುಖಿಯಾಗಿದ್ದನು. ಆ ಕಾಲದ ರಾಜಕುಮಾರನಿಗೆ ಉಚಿತವಾದ ವಿದ್ಯೆ ಮತ್ತು ಶಿಕ್ಷಣಗಳನ್ನೆಲ್ಲ ಪಡೆದಮೇಲೆ, ಪ್ರಪಂಚದ ಅನಿತ್ಯತೆಯ ಅರಿವಾಗಿ ಅವನು ತನ್ನ ಮೂವತ್ತನೆಯ ವಯಸ್ಸಿನಲ್ಲಿ ಸನ್ಯಾಸಿಯಾದನು. ಅವನು ಹನ್ನೆರಡು ವರ್ಷಗಳವರೆಗೆ ಕಠೋರವಾದ ತಪಸ್ಸನ್ನೂ ಧ್ಯಾನವನ್ನೂ ಆಚರಿಸಿದ. ಈ ಅವಧಿಯಲ್ಲಿ ಅವನು ಅಜ್ಞರ ಕೈಯಿಂದ ಬಹುವಾದ ಹಿಂಸೆಗಳನ್ನು ಅನುಭವಿಸಿದರೂ, ಕೊನೆಗೆ ದಿವ್ಯಜ್ಞಾನವನ್ನು ಪಡೆದನು. ಅಲ್ಲಿಂದ ಜನರಿಗೆ ತನ್ನ ತತ್ವಗಳನ್ನು ಬೋಧಿಸಲು ಆರಂಭಮಾಡಿದನು.</p>.<p>ಅವನು ಹೀಗೆ ಪ್ರಚಾರಮಾಡಿದ ಮೂಲತತ್ವದಲ್ಲಿ ಐದು ವ್ರತಗಳು ಮತ್ತು ಇಪ್ಪತ್ತೆರಡು ರೀತಿಯ ಸಹನೆಗಳಿದ್ದವು. ಅವನ ಮುಖ್ಯ ಕಾಣಿಕೆ ಎಂದರೆ ಅಹಿಂಸಾತತ್ವವನ್ನು ಜನಪ್ರಿಯಗೊಳಿಸಿದ್ದು. ಈ ತತ್ವದ ಆಧಾರದ ಮೇಲೆ ಅವನು ಗೃಹಸ್ಥರಿಗೂ ಸನ್ಯಾಸಿಗಳಿಗೂ ಒಂದು ನೀತಿಮಾರ್ಗವನ್ನು ಹಾಕಿಕೊಟ್ಟ.</p>.<p>ಇದರ ಹಿನ್ನೆಲೆಯಲ್ಲಿ ಅವನು ತನ್ನ ಏಳು ತತ್ವಗಳ ದರ್ಶನವನ್ನು ರೂಪಿಸಿದ.ಮಹಾವೀರನು ತನ್ನ ಬೋಧನೆಗಳು ಮಾಗಧೀ ಮತ್ತು ಶೌರಸೇನೀಗಳನ್ನು ಮಾತನಾಡುವ ಎರಡು ಜನರಿಗೂ ಅರ್ಥವಾಗಬೇಕೆಂಬ ಉದ್ದೇಶದಿಂದ ಅರ್ಧಮಾಗಧೀ ಎಂಬ ಮಿಶ್ರಭಾಷೆಯಲ್ಲಿ ಬೋಧಿಸಿದನು. ಮಹಾವೀರನು ಬೋಧಿಸಿದ ದಾರಿಯೇ ಜೈನಧರ್ಮ ಎಂದು ಹೆಸರಾದದ್ದು.</p>.<p>ಮಹಾವೀರ ತನ್ನ ದೇಹವನ್ನು ವಿಸರ್ಜಿಸಿದ್ದು ಎಪ್ಪತ್ತೆರಡನೆಯ ವಯಸ್ಸಿನಲ್ಲಿ, ಕ್ರಿ. ಪೂ. 527ರಲ್ಲಿ.</p>.<p><strong>ಮೋಕ್ಷಮಾರ್ಗ</strong></p>.<p>ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ – ಇವನ್ನು ರತ್ನತ್ರಯ ಎಂದು ಕರೆದಿದ್ದಾರೆ. ಇವೇ ಮೋಕ್ಷಮಾರ್ಗಕ್ಕೆ ಸಾಧನಗಳು.ಆತ್ಮದಲ್ಲಿ ದೃಢವಿಶ್ವಾಸ ಸಮ್ಯಕ್ ಜ್ಞಾನ; ಆತ್ಮಜ್ಞಾನವೇ ಸಮ್ಯಕ್ ಜ್ಞಾನ; ಆತ್ಮಶಕ್ತಿಯಲ್ಲಿ ವಿಶ್ವಾಸ, ಆತ್ಮಶಕ್ತಿಯ ಜ್ಞಾನ – ಇವುಗಳಿಗೆ ಅನುಗುಣವಾದ ನಡತೆಯೇ ಸಮ್ಯಕ್ ಚಾರಿತ್ರ.ಗೃಹಸ್ಥರಿಗೂ ಸನ್ಯಾಸಿಗಳಿಗೂ ಜೈನಧರ್ಮದಲ್ಲಿ ಹಲವಾರು ಸಾಧನಗಳನ್ನು ಹೇಳಲಾಗಿದೆ.</p>.<p><strong><em>(ಆಧಾರ: ‘ವಿಶ್ವಧರ್ಮದರ್ಶನ’ ಸಂಪುಟ 1; ಸಂ: ಪ್ರಭುಶಂಕರ)</em></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾವೀರನು (ಇವನಿಗೆ ವರ್ಧಮಾನ ಎಂಬ ಹೆಸರೂ ಉಂಟು) ತೀರ್ಥಂಕರರಲ್ಲಿ ಇಪ್ಪತ್ತನಾಲ್ಕನೆಯವನು ಮತ್ತು ಕೊನೆಯವನು. ಇವನು ಈಗಲೂ ಬಳಕೆಯಲ್ಲಿರುವ ಜೈನಶಕೆಯ ಪ್ರಕಾರ, ಕ್ರಿ. ಪೂ. 599ರಲ್ಲಿ ಹುಟ್ಟಿದನು.</p>.<p>ಇವನ ತಂದೆ ವೈಶಾಲಿಯ ಸಮೀಪದ ಕೌಂಡಿನ್ಯಪುರದ ದೊರೆ. (ವೈಶಾಲಿ – ಇದು ಇಂದಿನ ಪಟ್ನಾದಿಂದ ಉತ್ತರಕ್ಕೆ 44<br />ಕಿ. ಮೀ. ದೂರದಲ್ಲಿರುವ ಬಸ್ಹರ್ ಎಂಬ ಹಳ್ಳಿ.) ವೈಶಾಲಿಯ ಲಿಚ್ಛವಿದೊರೆಯ ಮಗಳಾದ ತ್ರಿಶಲಾದೇವಿ ಇವನ ತಾಯಿ. ಬಾಲ್ಯದಿಂದಲೂ ಮಹಾವೀರನು ಅಂತರ್ಮುಖಿಯಾಗಿದ್ದನು. ಆ ಕಾಲದ ರಾಜಕುಮಾರನಿಗೆ ಉಚಿತವಾದ ವಿದ್ಯೆ ಮತ್ತು ಶಿಕ್ಷಣಗಳನ್ನೆಲ್ಲ ಪಡೆದಮೇಲೆ, ಪ್ರಪಂಚದ ಅನಿತ್ಯತೆಯ ಅರಿವಾಗಿ ಅವನು ತನ್ನ ಮೂವತ್ತನೆಯ ವಯಸ್ಸಿನಲ್ಲಿ ಸನ್ಯಾಸಿಯಾದನು. ಅವನು ಹನ್ನೆರಡು ವರ್ಷಗಳವರೆಗೆ ಕಠೋರವಾದ ತಪಸ್ಸನ್ನೂ ಧ್ಯಾನವನ್ನೂ ಆಚರಿಸಿದ. ಈ ಅವಧಿಯಲ್ಲಿ ಅವನು ಅಜ್ಞರ ಕೈಯಿಂದ ಬಹುವಾದ ಹಿಂಸೆಗಳನ್ನು ಅನುಭವಿಸಿದರೂ, ಕೊನೆಗೆ ದಿವ್ಯಜ್ಞಾನವನ್ನು ಪಡೆದನು. ಅಲ್ಲಿಂದ ಜನರಿಗೆ ತನ್ನ ತತ್ವಗಳನ್ನು ಬೋಧಿಸಲು ಆರಂಭಮಾಡಿದನು.</p>.<p>ಅವನು ಹೀಗೆ ಪ್ರಚಾರಮಾಡಿದ ಮೂಲತತ್ವದಲ್ಲಿ ಐದು ವ್ರತಗಳು ಮತ್ತು ಇಪ್ಪತ್ತೆರಡು ರೀತಿಯ ಸಹನೆಗಳಿದ್ದವು. ಅವನ ಮುಖ್ಯ ಕಾಣಿಕೆ ಎಂದರೆ ಅಹಿಂಸಾತತ್ವವನ್ನು ಜನಪ್ರಿಯಗೊಳಿಸಿದ್ದು. ಈ ತತ್ವದ ಆಧಾರದ ಮೇಲೆ ಅವನು ಗೃಹಸ್ಥರಿಗೂ ಸನ್ಯಾಸಿಗಳಿಗೂ ಒಂದು ನೀತಿಮಾರ್ಗವನ್ನು ಹಾಕಿಕೊಟ್ಟ.</p>.<p>ಇದರ ಹಿನ್ನೆಲೆಯಲ್ಲಿ ಅವನು ತನ್ನ ಏಳು ತತ್ವಗಳ ದರ್ಶನವನ್ನು ರೂಪಿಸಿದ.ಮಹಾವೀರನು ತನ್ನ ಬೋಧನೆಗಳು ಮಾಗಧೀ ಮತ್ತು ಶೌರಸೇನೀಗಳನ್ನು ಮಾತನಾಡುವ ಎರಡು ಜನರಿಗೂ ಅರ್ಥವಾಗಬೇಕೆಂಬ ಉದ್ದೇಶದಿಂದ ಅರ್ಧಮಾಗಧೀ ಎಂಬ ಮಿಶ್ರಭಾಷೆಯಲ್ಲಿ ಬೋಧಿಸಿದನು. ಮಹಾವೀರನು ಬೋಧಿಸಿದ ದಾರಿಯೇ ಜೈನಧರ್ಮ ಎಂದು ಹೆಸರಾದದ್ದು.</p>.<p>ಮಹಾವೀರ ತನ್ನ ದೇಹವನ್ನು ವಿಸರ್ಜಿಸಿದ್ದು ಎಪ್ಪತ್ತೆರಡನೆಯ ವಯಸ್ಸಿನಲ್ಲಿ, ಕ್ರಿ. ಪೂ. 527ರಲ್ಲಿ.</p>.<p><strong>ಮೋಕ್ಷಮಾರ್ಗ</strong></p>.<p>ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ – ಇವನ್ನು ರತ್ನತ್ರಯ ಎಂದು ಕರೆದಿದ್ದಾರೆ. ಇವೇ ಮೋಕ್ಷಮಾರ್ಗಕ್ಕೆ ಸಾಧನಗಳು.ಆತ್ಮದಲ್ಲಿ ದೃಢವಿಶ್ವಾಸ ಸಮ್ಯಕ್ ಜ್ಞಾನ; ಆತ್ಮಜ್ಞಾನವೇ ಸಮ್ಯಕ್ ಜ್ಞಾನ; ಆತ್ಮಶಕ್ತಿಯಲ್ಲಿ ವಿಶ್ವಾಸ, ಆತ್ಮಶಕ್ತಿಯ ಜ್ಞಾನ – ಇವುಗಳಿಗೆ ಅನುಗುಣವಾದ ನಡತೆಯೇ ಸಮ್ಯಕ್ ಚಾರಿತ್ರ.ಗೃಹಸ್ಥರಿಗೂ ಸನ್ಯಾಸಿಗಳಿಗೂ ಜೈನಧರ್ಮದಲ್ಲಿ ಹಲವಾರು ಸಾಧನಗಳನ್ನು ಹೇಳಲಾಗಿದೆ.</p>.<p><strong><em>(ಆಧಾರ: ‘ವಿಶ್ವಧರ್ಮದರ್ಶನ’ ಸಂಪುಟ 1; ಸಂ: ಪ್ರಭುಶಂಕರ)</em></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>