ತುಳು ಭಾಷೆಯಲ್ಲಿ ‘ಮೊಡೆಪು’ ಎಂದರೆ ಕಲಾತ್ಮಕವಾಗಿ ಹೆಣೆಯುವುದು ಎಂದರ್ಥ. ಇದು ಅಲ್ಲಿನ ದೈನಂದಿನ ಬಳಕೆಯ ಪದ. ಈ ಕೃತಿ ಆ ಮಣ್ಣಿನ ಕಲಾ ಇತಿಹಾಸವನ್ನು ಹೆಣೆಯುವ ಪ್ರಯತ್ನವಾಗಿದೆ. ಇಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು, ಕೊಡಗು ಜಿಲ್ಲೆಯ ಕಲಾವಿದರ ನೋಟವಿದೆ. 34 ಕಲಾವಿದರ ಚಿತ್ರಕಲೆಗಳ ಸಹಿತ ಅವರ ಜೀವನದ ಸಂಕ್ಷಿಪ್ತ ದಾಖಲೆಗಳಿವೆ. ‘ನಾನು ಚಿತ್ರಕಲಾವಿದನೆಂಬುದು ನನಗೇ ಗೊತ್ತಿಲ್ಲ’ ಎಂದು ಉಲ್ಲೇಖಿಸುವ ಕಾರಂತರ ಹತ್ತು ಹಲವು ಕ್ಷೇತ್ರಗಳ ಪರಿಚಯ ಹಾಗೂ ಅವರು ರಚಿಸಿದ ಚಿತ್ರಕಲೆಗಳ ಸಂಗ್ರಹವೂ ಇಲ್ಲಿ ದಾಖಲಾಗಿದೆ. ಒಟ್ಟಿನಲ್ಲಿ ಇದೊಂದು ಕರಾವಳಿ ಕರ್ನಾಟಕದ ಕಲಾ ಇತಿಹಾಸವನ್ನು ಅಂಗೈಯಲ್ಲಿಡುವ ಹೊತ್ತಿಗೆ.