<p><strong>ಮೂರ್ಖನ ಮಾತುಗಳು!...<br /> ದೇವ ದೇಶ ದೇಹ, ಲೇ: ಅಹೋರಾತ್ರ, ಪ್ರ: ಸಾವಣ್ಣ ಎಂಟರ್ಪ್ರೈಸಸ್, ನಂ. 57, 1ನೇ ಮಹಡಿ, ಪುಟ್ಟಣ್ಣರಸ್ತೆ, ಬಸವನಗುಡಿ, ಬೆಂಗಳೂರು–04</strong><br /> <br /> ಅಹೋರಾತ್ರ ಅವರ ಈ ಪುಸ್ತಕದ ಹೆಸರು ‘ಮೂರ್ಖನ ಮಾತುಗಳು!...’ ಇದು ಓದುಗರನ್ನು ಸೆಳೆಯಲು ಇಟ್ಟ ಹೆಸರಾಗಿರಬಹುದಾದರೂ ವ್ಯಕ್ತಿಯೊಬ್ಬ ಕಂಡ ಬದುಕಿನ ಹಲ ಬಗೆಯ ನೋಟಗಳನ್ನು ಈ ಬರವಣಿಗೆ ಒಳಗೊಂಡಿದೆ. ಅದು ದೇವರು, ದೇಹ, ದೇಶದ ಬಗ್ಗೆ ಮುಖ್ಯವಾಗಿ ಮಾತನಾಡುತ್ತದೆ. ವ್ಯಕ್ತಿತ್ವ ವಿಕಸನ ಬರಹಗಳ ಸರಣಿಯಲ್ಲಿ ಈ ಪುಸ್ತಕ ಬೇರೊಂದು ರೀತಿಯ ಪ್ರಯತ್ನವಾಗಿದೆ. ವ್ಯಕ್ತಿತ್ವ ವಿಕಸನ ಪುಸ್ತಕಗಳು ಒಳಗೊಳ್ಳುವ ದೃಷ್ಟಾಂತ, ಕತೆ, ಉದಾಹರಣೆಗಳ ಮೂಲಕವೇ ಇದೂ ಮನುಷ್ಯ ಸ್ವಭಾವ, ಬದುಕಿನ ಬಗ್ಗೆ ಮಾತನಾಡಲು ಹೊರಡುತ್ತದೆ. ಅದರ ಹಿನ್ನೆಲೆಯಲ್ಲಿರು</p>.<p>ವುದು ಅಧ್ಯಾತ್ಮ, ವಿಜ್ಞಾನ, ಪುರಾಣ, ಇತಿಹಾಸದಂತಹ ವಿಷಯಗಳು. ನಮ್ಮ ವ್ಯಕ್ತಿತ್ವದಲ್ಲಿ ಇಲ್ಲದ್ದನ್ನು ಅಳವಡಿಸಿಕೊಂಡು ಅದನ್ನು ಬೆಳಸಿಕೊಳ್ಳುವ ದಿಸೆಯಲ್ಲಿ ಇದು ಧರ್ಮಗುರುಗಳ ಪ್ರವಚನದ ರೀತಿಯಲ್ಲಿ ಪ್ರವಹಿಸುತ್ತದೆ. ಈ ರೀತಿಯ ಪುಸ್ತಕಗಳ ಹಿಂದಿನ ಸೂತ್ರ ಏನೆಂದರೆ, ಅವುಗಳಲ್ಲಿ ಹೇಳಿದ್ದು ವ್ಯಕ್ತಿಗತವಾದರೆ ಬದುಕಿನಲ್ಲಿ ಯಶಸ್ವಿಯಾಗುತ್ತೀರಿ, ಇಲ್ಲದಿದ್ದರೆ ಮನೆಯಲ್ಲಿಯೇ ಉಳಿಯುತ್ತೀರಿ ಎಂಬುದಾಗಿದೆ. <br /> <br /> ಇಲ್ಲೊಂದು ಉದಾಹರಣೆ ಇದೆ. ಅದನ್ನು ನೋಡಿದರೆ ಈ ಪುಸ್ತಕದ ಮಿತಿ ಗೊತ್ತಾಗಬಹುದು. ‘ಮನುಕುಲದ ಮೊದಲದೊರೆ ಸೂರ್ಯಪುತ್ರ ಮನು. ಮನುಸ್ಮೃತಿ ಈತನ ಕೃತಿ. ಅದು ಹುಟ್ಟಿದಂದು ದೋಷರಹಿತವಾಗಿತ್ತು. ಕುಲಾತೀತವೂ ಆಗಿತ್ತು’ ಎನ್ನುವ ಲೇಖಕರು ಮನುಸ್ಮೃತಿ ಕುಲಕಂಟಕರಿಂದ, ಶೋಷಕರಿಂದ ಅತ್ಯಾಚಾರಕ್ಕೊಳಗಾಯಿತು, ಶೋಷಕರ ದಲ್ಲಾಳಿಯಾಯಿತು ಎನ್ನುತ್ತಾರೆ.<br /> <br /> ಮುಂದಕ್ಕೆ, ‘ಮನುಸ್ಮೃತಿಯ ಅಳಿಯದಿರಿ ಮನುಜರೇ, ಅದು ನಮ್ಮೆಲ್ಲರ ತಾತನ ಕಗ್ಗ, ಯಾರ ಅಪ್ಪನ ಸ್ವತ್ತೂ ಅಲ್ಲ. ಅದರ ಮಾಲಿನ್ಯ ತೊಳೆಯೋಣ’ ಎನ್ನುತ್ತಾರೆ (ಪು. 75). ಆಧುನಿಕ ಭಾಷೆ, ವರಸೆ, ಶೈಲಿಯಲ್ಲಿ ಮಾತನಾಡುವ ಇದು ಅದೇ ಹಳೆಯ ವಿರೋಧಾಭಾಸಗಳಿಂದ ಕೂಡಿದ ವಿಚಾರಗಳ ಸರಣಿಯನ್ನೇ ಮುಂದಿಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂರ್ಖನ ಮಾತುಗಳು!...<br /> ದೇವ ದೇಶ ದೇಹ, ಲೇ: ಅಹೋರಾತ್ರ, ಪ್ರ: ಸಾವಣ್ಣ ಎಂಟರ್ಪ್ರೈಸಸ್, ನಂ. 57, 1ನೇ ಮಹಡಿ, ಪುಟ್ಟಣ್ಣರಸ್ತೆ, ಬಸವನಗುಡಿ, ಬೆಂಗಳೂರು–04</strong><br /> <br /> ಅಹೋರಾತ್ರ ಅವರ ಈ ಪುಸ್ತಕದ ಹೆಸರು ‘ಮೂರ್ಖನ ಮಾತುಗಳು!...’ ಇದು ಓದುಗರನ್ನು ಸೆಳೆಯಲು ಇಟ್ಟ ಹೆಸರಾಗಿರಬಹುದಾದರೂ ವ್ಯಕ್ತಿಯೊಬ್ಬ ಕಂಡ ಬದುಕಿನ ಹಲ ಬಗೆಯ ನೋಟಗಳನ್ನು ಈ ಬರವಣಿಗೆ ಒಳಗೊಂಡಿದೆ. ಅದು ದೇವರು, ದೇಹ, ದೇಶದ ಬಗ್ಗೆ ಮುಖ್ಯವಾಗಿ ಮಾತನಾಡುತ್ತದೆ. ವ್ಯಕ್ತಿತ್ವ ವಿಕಸನ ಬರಹಗಳ ಸರಣಿಯಲ್ಲಿ ಈ ಪುಸ್ತಕ ಬೇರೊಂದು ರೀತಿಯ ಪ್ರಯತ್ನವಾಗಿದೆ. ವ್ಯಕ್ತಿತ್ವ ವಿಕಸನ ಪುಸ್ತಕಗಳು ಒಳಗೊಳ್ಳುವ ದೃಷ್ಟಾಂತ, ಕತೆ, ಉದಾಹರಣೆಗಳ ಮೂಲಕವೇ ಇದೂ ಮನುಷ್ಯ ಸ್ವಭಾವ, ಬದುಕಿನ ಬಗ್ಗೆ ಮಾತನಾಡಲು ಹೊರಡುತ್ತದೆ. ಅದರ ಹಿನ್ನೆಲೆಯಲ್ಲಿರು</p>.<p>ವುದು ಅಧ್ಯಾತ್ಮ, ವಿಜ್ಞಾನ, ಪುರಾಣ, ಇತಿಹಾಸದಂತಹ ವಿಷಯಗಳು. ನಮ್ಮ ವ್ಯಕ್ತಿತ್ವದಲ್ಲಿ ಇಲ್ಲದ್ದನ್ನು ಅಳವಡಿಸಿಕೊಂಡು ಅದನ್ನು ಬೆಳಸಿಕೊಳ್ಳುವ ದಿಸೆಯಲ್ಲಿ ಇದು ಧರ್ಮಗುರುಗಳ ಪ್ರವಚನದ ರೀತಿಯಲ್ಲಿ ಪ್ರವಹಿಸುತ್ತದೆ. ಈ ರೀತಿಯ ಪುಸ್ತಕಗಳ ಹಿಂದಿನ ಸೂತ್ರ ಏನೆಂದರೆ, ಅವುಗಳಲ್ಲಿ ಹೇಳಿದ್ದು ವ್ಯಕ್ತಿಗತವಾದರೆ ಬದುಕಿನಲ್ಲಿ ಯಶಸ್ವಿಯಾಗುತ್ತೀರಿ, ಇಲ್ಲದಿದ್ದರೆ ಮನೆಯಲ್ಲಿಯೇ ಉಳಿಯುತ್ತೀರಿ ಎಂಬುದಾಗಿದೆ. <br /> <br /> ಇಲ್ಲೊಂದು ಉದಾಹರಣೆ ಇದೆ. ಅದನ್ನು ನೋಡಿದರೆ ಈ ಪುಸ್ತಕದ ಮಿತಿ ಗೊತ್ತಾಗಬಹುದು. ‘ಮನುಕುಲದ ಮೊದಲದೊರೆ ಸೂರ್ಯಪುತ್ರ ಮನು. ಮನುಸ್ಮೃತಿ ಈತನ ಕೃತಿ. ಅದು ಹುಟ್ಟಿದಂದು ದೋಷರಹಿತವಾಗಿತ್ತು. ಕುಲಾತೀತವೂ ಆಗಿತ್ತು’ ಎನ್ನುವ ಲೇಖಕರು ಮನುಸ್ಮೃತಿ ಕುಲಕಂಟಕರಿಂದ, ಶೋಷಕರಿಂದ ಅತ್ಯಾಚಾರಕ್ಕೊಳಗಾಯಿತು, ಶೋಷಕರ ದಲ್ಲಾಳಿಯಾಯಿತು ಎನ್ನುತ್ತಾರೆ.<br /> <br /> ಮುಂದಕ್ಕೆ, ‘ಮನುಸ್ಮೃತಿಯ ಅಳಿಯದಿರಿ ಮನುಜರೇ, ಅದು ನಮ್ಮೆಲ್ಲರ ತಾತನ ಕಗ್ಗ, ಯಾರ ಅಪ್ಪನ ಸ್ವತ್ತೂ ಅಲ್ಲ. ಅದರ ಮಾಲಿನ್ಯ ತೊಳೆಯೋಣ’ ಎನ್ನುತ್ತಾರೆ (ಪು. 75). ಆಧುನಿಕ ಭಾಷೆ, ವರಸೆ, ಶೈಲಿಯಲ್ಲಿ ಮಾತನಾಡುವ ಇದು ಅದೇ ಹಳೆಯ ವಿರೋಧಾಭಾಸಗಳಿಂದ ಕೂಡಿದ ವಿಚಾರಗಳ ಸರಣಿಯನ್ನೇ ಮುಂದಿಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>