ಮೊದಲೇ ಘಮಘಮ ಕಡುಬು, ಅದಕ್ಕೊಂದಿಷ್ಟು ತುಪ್ಪ ಸವರಿ ಬಾಯಿಗಿಟ್ಟರೆ, ಆಹಾ... ಆ ರುಚಿಗೆ ಸಾಟಿಯುಂಟೇ? ಇನ್ನು, ಶುರುವಾಗೇ ಬಿಟ್ಟಿದೆ ಹಬ್ಬದ ಗೌಜಿ, ಅದಕ್ಕೆ ಹಾಸ್ಯ ರಸಾಯನವೂ ಬೆರೆತರೆ... ಆ ಸಂಭ್ರಮಕ್ಕೆ ಎಣೆಯುಂಟೇ? ‘ಭೂಮಿಕಾ’ ಕೇಳಿದ ತುಂಟ ಪ್ರಶ್ನೆಗಳಿಗೆ ನಮ್ಮ ಹಾಸ್ಯ ಕಲಾವಿದರು ಕೊಟ್ಟಿರುವ ಜಾಣ ಉತ್ತರಗಳ ಜುಗಲ್ಬಂದಿ ಇದು. ಹಾಸ್ಯದ ರಸದೌತಣ ಸವಿಯಲು ನಾವು ಏಪ್ರಿಲ್ವರೆಗೂ ಕಾಯಬೇಕು ಯಾಕೆ? ನಮ್ಮ ಹಾಸ್ಯ ಚತುರರು ಗಣೇಶ ಚತುರ್ಥಿಗೇ ಉಣಬಡಿಸಲು ಸಿದ್ಧರಿರುವಾಗ?