ಮೊದಲೇ ಘಮಘಮ ಕಡುಬು, ಅದಕ್ಕೊಂದಿಷ್ಟು ತುಪ್ಪ ಸವರಿ ಬಾಯಿಗಿಟ್ಟರೆ, ಆಹಾ... ಆ ರುಚಿಗೆ ಸಾಟಿಯುಂಟೇ? ಇನ್ನು, ಶುರುವಾಗೇ ಬಿಟ್ಟಿದೆ ಹಬ್ಬದ ಗೌಜಿ, ಅದಕ್ಕೆ ಹಾಸ್ಯ ರಸಾಯನವೂ ಬೆರೆತರೆ... ಆ ಸಂಭ್ರಮಕ್ಕೆ ಎಣೆಯುಂಟೇ? ‘ಭೂಮಿಕಾ’ ಕೇಳಿದ ತುಂಟ ಪ್ರಶ್ನೆಗಳಿಗೆ ನಮ್ಮ ಹಾಸ್ಯ ಕಲಾವಿದರು ಕೊಟ್ಟಿರುವ ಜಾಣ ಉತ್ತರಗಳ ಜುಗಲ್ಬಂದಿ ಇದು. ಹಾಸ್ಯದ ರಸದೌತಣ ಸವಿಯಲು ನಾವು ಏಪ್ರಿಲ್ವರೆಗೂ ಕಾಯಬೇಕು ಯಾಕೆ? ನಮ್ಮ ಹಾಸ್ಯ ಚತುರರು ಗಣೇಶ ಚತುರ್ಥಿಗೇ ಉಣಬಡಿಸಲು ಸಿದ್ಧರಿರುವಾಗ?
ಪ್ರ
ಜೀವನದಲ್ಲಿ ಮುಂದೆ ಬರಲು ಯಾರ ಮಾತು ಕೇಳಬೇಕು? ಹೆಂಡತಿಯದೋ? ಅಮ್ಮನದೋ?