81 ವರ್ಷದ ಇತಿಹಾಸ ಇರುವ ಈ ಉತ್ಸವದಲ್ಲಿ ನೂರಾರು ಗಾನಕೋಗಿಲೆಗಳು ಹಾಡುವ ಮೂಲಕ ರಂಗು ಹೆಚ್ಚಿಸಲಿದ್ದಾರೆ. ಉದ್ಘಾಟನೆಯ ಸಂದರ್ಭದಲ್ಲಿಬಾಂಬೆ ಜಯಶ್ರೀ ರಾಮನಾಥ್ ಅವರಿಗೆ ‘ರಾಮಗಾನ ಕಲಾಚಾರ್ಯ’ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತದೆ. ಸಂಜೆ 6.45ಕ್ಕೆ ಅವರು ಗಾಯನ ಸಂಜೆ ನಡೆಸಿಕೊಡಲಿದ್ದಾರೆ.ಎಚ್.ಎನ್. ಭಾಸ್ಕರ್, ಡೆಲ್ಲಿ ಸಾಯಿರಾಂ, ಬಿ.ಎಸ್. ಪುರುಷೋತ್ತಮ್ ಅವರು ವಾದ್ಯ ಸಹಕಾರ ನೀಡಲಿದ್ದಾರೆ.