<p>ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪ್ರಜಾವಾಣಿ, ಇದೀಗ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಸಹಯೋಗದಲ್ಲಿ ಡಿ.4 ಶುಕ್ರವಾರದಿಂದ ಡಿ.13ರವರೆಗೆ ಕನ್ನಡದ ಪ್ರಯೋಗಾತ್ಮಕ ನಾಟಕಗಳನ್ನು ಮೆಲುಕು ಹಾಕುವ 'ರಾಷ್ಟ್ರೀಯ ನಾಟಕೋತ್ಸವ 2020' ಆಯೋಜಿಸುತ್ತಿದೆ.</p>.<p>10 ದಿನಗಳ 'ಪ್ರಜಾವಾಣಿ ದಸರಾ ಸಂಗೀತೋತ್ಸವ', 15 ದಿನಗಳ 'ಆನ್ಲೈನ್ ಪ್ರಜಾವಾಣಿ ನುಡಿ ಹಬ್ಬ' ಲೈವ್ ಕಾರ್ಯಕ್ರಮಗಳ ಬಳಿಕ, ಕೋವಿಡ್ ದುರಿತದ ಕಾಲದಲ್ಲಿ ನೊಂದ ಮನಗಳಿಗೆ ಮನೋಲ್ಲಾಸ ನೀಡುವ ಕಾರ್ಯಕ್ರಮದ ಸರಣಿ ಮುಂದುವರಿದಿದೆ. ಪ್ರಜಾವಾಣಿ ಫೇಸ್ಬುಕ್ ಪುಟದಲ್ಲಿ ಡಿ.4ರಿಂದ ಪ್ರತಿ ದಿನ ಸಂಜೆ 6 ಗಂಟೆಯಿಂದ ನಾಟಕಗಳು ಪ್ರಸಾರವಾಗಲಿವೆ.</p>.<p>ರಂಗಕರ್ಮಿಗಳಾದ ಶ್ರೀನಿವಾಸ್ ಜಿ.ಕಪ್ಪಣ್ಣ ಮತ್ತು ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ಆಯೋಜನೆಯಲ್ಲಿ ಶಶಿಧರ ಬಾರಿಘಾಟ್, ಸಿ.ಕೆ.ಗುಂಡಣ್ಣ ಸಂಚಾಲಕತ್ವದಲ್ಲಿ ಈ ಎಲ್ಲ ನಾಟಕಗಳು ಪ್ರದರ್ಶನಗೊಳ್ಳಲಿವೆ.</p>.<p><strong>ನಾಟಕ ವಿಮರ್ಶಾ ಸ್ಫರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗೆಲ್ಲಿ</strong><br />10 ದಿನಗಳ ನಾಟಕೋತ್ಸವದ ಎಲ್ಲ ಅಂಶಗಳ ಮೇಲೆ500ರಿಂದ ಗರಿಷ್ಠ 1000 ಪದಗಳ ಮಿತಿಯೊಳಗೆ ಬೆಳಕು ಚೆಲ್ಲುವ ಸಮಗ್ರ ವಿಮರ್ಶೆಯೊಂದನ್ನು ಓದುಗರಿಂದ ಆಹ್ವಾನಿಸಲಾಗುತ್ತದೆ.</p>.<p>ರಂಗಕರ್ಮಿಗಳೇ ಆಯ್ಕೆ ಮಾಡುವ ಉತ್ತಮವಾದ 3 ವಿಮರ್ಶೆಗಳು prajavani.net ನಲ್ಲಿ ಪ್ರಕಟವಾಗಲಿದ್ದು, ಅವುಗಳಿಗೆ ಖ್ಯಾತ ರಂಗ ನಿರ್ದೇಶಕ ಬಿ.ಸುರೇಶ್ ಅವರು ₹5000, ₹3000 ಹಾಗೂ ₹2000 ನಗದು ಪುರಸ್ಕಾರ ನೀಡಲಿದ್ದಾರೆ. ನಾಟಕ ವಿಮರ್ಶೆಯು ನಮಗೆ ತಲುಪಬೇಕಾದ ಅಂತಿಮ ದಿನಾಂಕ 20 ಡಿಸೆಂಬರ್ 2020. ಇಮೇಲ್ ಮೂಲಕ ವಿಮರ್ಶೆ ಕಳುಹಿಸಬೇಕಾದ ವಿಳಾಸ: prajavani9@gmail.com</p>.<p><strong>ಕಾರ್ಯಕ್ರಮದ ವಿವರ:</strong></p>.<p><strong>ಡಿಸೆಂಬರ್ 4 ಶುಕ್ರವಾರ ಸಂಜೆ 6ಕ್ಕೆ</strong><br />ಸಿರಿ (2 ಗಂಟೆ)<br />ಜಾನಪದ ಮೂಲ, ರಂಗರೂಪ: ಡಾ.ನಾ.ದಾಮೋದರ ಶೆಟ್ಟಿ<br />ನಿರ್ದೇಶನ: ಡಾ.ಬಿ.ಜಯಶ್ರೀ</p>.<p><strong>ಡಿಸೆಂಬರ್ 5 ಶನಿವಾರ ಸಂಜೆ 6ಕ್ಕೆ</strong><br />'ವೀರಗಾಸೆ - ನೀರಒಡಪು' (1 ಗಂ. 25 ನಿ.)<br />ದೊಂಬಿದಾಸರ ಜಾನಪದ ಕಥೆ ಆಧಾರಿತ<br />ನಿರ್ದೇಶನ: ಗೋಪಾಲಕೃಷ್ಣ ನಾಯರಿ<br /><strong>ಸಂಜೆ: 7.30ಕ್ಕೆ</strong><br />ಯಕ್ಷಗಾನ ಆಧಾರಿತ 'ಊರು ಭಂಗ' (50 ನಿ.)<br />ನಿರ್ದೇಶನ: ಸಂಜೀವ ಸುವರ್ಣ</p>.<p><strong>ಡಿಸೆಂಬರ್ 6 ಭಾನುವಾರ ಸಂಜೆ 6ಕ್ಕೆ</strong><br />ಬೆರಳ್ಗೆ ಕೊರಳ್ (55 ನಿ.)<br />ರಚನೆ: ಕುವೆಂಪು<br />ನಿರ್ದೇಶನ: ಪ್ರಸನ್ನ ರಾಮಸ್ವಾಮಿ<br /><strong>ಸಂಜೆ 7ಕ್ಕೆ</strong><br />'ಸೀತಾ ಸ್ವಯಂವರ' (1 ಗಂ. 10 ನಿ.)<br />ರಚನೆ: ಮಹಾಕವಿ ರಾಜಶೇಖರ/ಎಂ.ಎ.ಹೆಗಡೆ<br />ನಿರ್ದೇಶನ: ಚಿದಂಬರ ರಾವ್ ಜಂಬೆ</p>.<p><strong>ಡಿಸೆಂಬರ್ 7 ಸೋಮವಾರ</strong><br />ಮಾರೀಚನ ಬಂಧುಗಳು (1 ಗಂ. 50 ನಿ.)<br />ರಚನೆ: ಅರುಣ್ ಮುಖ್ಯೋಪಾಧ್ಯಾಯ, ಕನ್ನಡಕ್ಕೆ: ಬಿಂಡಿಗನವಿಲೆ ನಾರಾಯಣಸ್ವಾಮಿ<br />ನಿರ್ದೇಶನ: ವಾಲ್ಟರ್ ಡಿಸೋಜ</p>.<p><strong>ಡಿಸೆಂಬರ್ 8 ಮಂಗಳವಾರ</strong><br />ಗುಳ್ಳಕಾಯಜ್ಜಿ (50 ನಿ.)<br />ರಚನೆ: ಡಾ.ಚಂದ್ರಶೇಖರ ಕಂಬಾರ<br />ನಿರ್ದೇಶನ: ಮಾಲತೇಶ್ ಬಡಿಗೇರ</p>.<p><strong>ಡಿಸೆಂಬರ್ 9 ಬುಧವಾರ</strong><br />ಕರಿಯ ದೇವರ ಹುಡುಕಿ (1 ಗಂ.30 ನಿ.)<br />ರಚನೆ: ಪ್ರೊ.ಶಂಕರ ಪಿಳ್ಳೈ, ಡಾ.ನಾ.ದಾಮೋದರ ಶೆಟ್ಟಿ<br />ನಿರ್ದೇಶನ: ಚಂದ್ರದಾಸನ್</p>.<p><strong>ಡಿಸೆಂಬರ್ 10 ಗುರುವಾರ</strong><br />ಕುರ್ಚಿ ಮತ್ತು ಆ... ನಂತರ (50 ನಿ.)<br />ಕನ್ನಡ, ತಮಿಳು, ತೆಲುಗು, ಮಲಯಾಳಂ ಕಥಾರಂಗ<br />ನಿರ್ದೇಶನ: ದೇವೇಂದ್ರರಾಜ್ ಅಂಕುರ್</p>.<p><strong>ಡಿಸೆಂಬರ್ 11 ಶುಕ್ರವಾರ</strong><br />ಅನಿಮಲ್ ಫಾರ್ಮ್ (1 ಗಂ. 30 ನಿ.)<br />ರಚನೆ: ಜಾರ್ಜ್ ಆರ್ವೆಲ್. ರೂಪಾಂತರ: ಪ್ರೊ.ಸತ್ಯಬ್ರತ್ ರೌತ್, ಕನ್ನಡಕ್ಕೆ: ಸಿ.ಬಸವಲಿಂಗಯ್ಯ<br />ನಿರ್ದೇಶನ: ಪ್ರೊ.ಸತ್ಯಬ್ರತ್ ರೌತ್</p>.<p><strong>ಡಿಸೆಂಬರ್ 12 ಶನಿವಾರ</strong><br />ಗುಣಮುಖ (2 ಗಂಟೆ)<br />ರಚನೆ: ಪಿ.ಲಂಕೇಶ್<br />ನಿರ್ದೇಶನ: ಬಸವಲಿಂಗಯ್ಯ</p>.<p><strong>ಡಿಸೆಂಬರ್ 13 ಭಾನುವಾರ (50 ನಿ.)</strong><br />ಹಯವದನ, ನಾಗಮಂಡಲ, ಅಗ್ನಿ ಮತ್ತು ಮಳೆ<br />ರಚನೆ: ಗಿರೀಶ್ ಕಾರ್ನಾಡ್<br />ನಿರ್ದೇಶನ: ಸಿ.ಬಸವಲಿಂಗಯ್ಯ<br /><strong>ಸಂಜೆ 7ಕ್ಕೆ</strong><br />ಕುಸುಮಬಾಲೆ (2 ಗಂ. 20 ನಿ.)<br />ರಚನೆ: ದೇವನೂರು ಮಹಾದೇವ<br />ನಿರ್ದೇಶನ: ಸಿ.ಬಸವಲಿಂಗಯ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪ್ರಜಾವಾಣಿ, ಇದೀಗ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಸಹಯೋಗದಲ್ಲಿ ಡಿ.4 ಶುಕ್ರವಾರದಿಂದ ಡಿ.13ರವರೆಗೆ ಕನ್ನಡದ ಪ್ರಯೋಗಾತ್ಮಕ ನಾಟಕಗಳನ್ನು ಮೆಲುಕು ಹಾಕುವ 'ರಾಷ್ಟ್ರೀಯ ನಾಟಕೋತ್ಸವ 2020' ಆಯೋಜಿಸುತ್ತಿದೆ.</p>.<p>10 ದಿನಗಳ 'ಪ್ರಜಾವಾಣಿ ದಸರಾ ಸಂಗೀತೋತ್ಸವ', 15 ದಿನಗಳ 'ಆನ್ಲೈನ್ ಪ್ರಜಾವಾಣಿ ನುಡಿ ಹಬ್ಬ' ಲೈವ್ ಕಾರ್ಯಕ್ರಮಗಳ ಬಳಿಕ, ಕೋವಿಡ್ ದುರಿತದ ಕಾಲದಲ್ಲಿ ನೊಂದ ಮನಗಳಿಗೆ ಮನೋಲ್ಲಾಸ ನೀಡುವ ಕಾರ್ಯಕ್ರಮದ ಸರಣಿ ಮುಂದುವರಿದಿದೆ. ಪ್ರಜಾವಾಣಿ ಫೇಸ್ಬುಕ್ ಪುಟದಲ್ಲಿ ಡಿ.4ರಿಂದ ಪ್ರತಿ ದಿನ ಸಂಜೆ 6 ಗಂಟೆಯಿಂದ ನಾಟಕಗಳು ಪ್ರಸಾರವಾಗಲಿವೆ.</p>.<p>ರಂಗಕರ್ಮಿಗಳಾದ ಶ್ರೀನಿವಾಸ್ ಜಿ.ಕಪ್ಪಣ್ಣ ಮತ್ತು ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ಆಯೋಜನೆಯಲ್ಲಿ ಶಶಿಧರ ಬಾರಿಘಾಟ್, ಸಿ.ಕೆ.ಗುಂಡಣ್ಣ ಸಂಚಾಲಕತ್ವದಲ್ಲಿ ಈ ಎಲ್ಲ ನಾಟಕಗಳು ಪ್ರದರ್ಶನಗೊಳ್ಳಲಿವೆ.</p>.<p><strong>ನಾಟಕ ವಿಮರ್ಶಾ ಸ್ಫರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗೆಲ್ಲಿ</strong><br />10 ದಿನಗಳ ನಾಟಕೋತ್ಸವದ ಎಲ್ಲ ಅಂಶಗಳ ಮೇಲೆ500ರಿಂದ ಗರಿಷ್ಠ 1000 ಪದಗಳ ಮಿತಿಯೊಳಗೆ ಬೆಳಕು ಚೆಲ್ಲುವ ಸಮಗ್ರ ವಿಮರ್ಶೆಯೊಂದನ್ನು ಓದುಗರಿಂದ ಆಹ್ವಾನಿಸಲಾಗುತ್ತದೆ.</p>.<p>ರಂಗಕರ್ಮಿಗಳೇ ಆಯ್ಕೆ ಮಾಡುವ ಉತ್ತಮವಾದ 3 ವಿಮರ್ಶೆಗಳು prajavani.net ನಲ್ಲಿ ಪ್ರಕಟವಾಗಲಿದ್ದು, ಅವುಗಳಿಗೆ ಖ್ಯಾತ ರಂಗ ನಿರ್ದೇಶಕ ಬಿ.ಸುರೇಶ್ ಅವರು ₹5000, ₹3000 ಹಾಗೂ ₹2000 ನಗದು ಪುರಸ್ಕಾರ ನೀಡಲಿದ್ದಾರೆ. ನಾಟಕ ವಿಮರ್ಶೆಯು ನಮಗೆ ತಲುಪಬೇಕಾದ ಅಂತಿಮ ದಿನಾಂಕ 20 ಡಿಸೆಂಬರ್ 2020. ಇಮೇಲ್ ಮೂಲಕ ವಿಮರ್ಶೆ ಕಳುಹಿಸಬೇಕಾದ ವಿಳಾಸ: prajavani9@gmail.com</p>.<p><strong>ಕಾರ್ಯಕ್ರಮದ ವಿವರ:</strong></p>.<p><strong>ಡಿಸೆಂಬರ್ 4 ಶುಕ್ರವಾರ ಸಂಜೆ 6ಕ್ಕೆ</strong><br />ಸಿರಿ (2 ಗಂಟೆ)<br />ಜಾನಪದ ಮೂಲ, ರಂಗರೂಪ: ಡಾ.ನಾ.ದಾಮೋದರ ಶೆಟ್ಟಿ<br />ನಿರ್ದೇಶನ: ಡಾ.ಬಿ.ಜಯಶ್ರೀ</p>.<p><strong>ಡಿಸೆಂಬರ್ 5 ಶನಿವಾರ ಸಂಜೆ 6ಕ್ಕೆ</strong><br />'ವೀರಗಾಸೆ - ನೀರಒಡಪು' (1 ಗಂ. 25 ನಿ.)<br />ದೊಂಬಿದಾಸರ ಜಾನಪದ ಕಥೆ ಆಧಾರಿತ<br />ನಿರ್ದೇಶನ: ಗೋಪಾಲಕೃಷ್ಣ ನಾಯರಿ<br /><strong>ಸಂಜೆ: 7.30ಕ್ಕೆ</strong><br />ಯಕ್ಷಗಾನ ಆಧಾರಿತ 'ಊರು ಭಂಗ' (50 ನಿ.)<br />ನಿರ್ದೇಶನ: ಸಂಜೀವ ಸುವರ್ಣ</p>.<p><strong>ಡಿಸೆಂಬರ್ 6 ಭಾನುವಾರ ಸಂಜೆ 6ಕ್ಕೆ</strong><br />ಬೆರಳ್ಗೆ ಕೊರಳ್ (55 ನಿ.)<br />ರಚನೆ: ಕುವೆಂಪು<br />ನಿರ್ದೇಶನ: ಪ್ರಸನ್ನ ರಾಮಸ್ವಾಮಿ<br /><strong>ಸಂಜೆ 7ಕ್ಕೆ</strong><br />'ಸೀತಾ ಸ್ವಯಂವರ' (1 ಗಂ. 10 ನಿ.)<br />ರಚನೆ: ಮಹಾಕವಿ ರಾಜಶೇಖರ/ಎಂ.ಎ.ಹೆಗಡೆ<br />ನಿರ್ದೇಶನ: ಚಿದಂಬರ ರಾವ್ ಜಂಬೆ</p>.<p><strong>ಡಿಸೆಂಬರ್ 7 ಸೋಮವಾರ</strong><br />ಮಾರೀಚನ ಬಂಧುಗಳು (1 ಗಂ. 50 ನಿ.)<br />ರಚನೆ: ಅರುಣ್ ಮುಖ್ಯೋಪಾಧ್ಯಾಯ, ಕನ್ನಡಕ್ಕೆ: ಬಿಂಡಿಗನವಿಲೆ ನಾರಾಯಣಸ್ವಾಮಿ<br />ನಿರ್ದೇಶನ: ವಾಲ್ಟರ್ ಡಿಸೋಜ</p>.<p><strong>ಡಿಸೆಂಬರ್ 8 ಮಂಗಳವಾರ</strong><br />ಗುಳ್ಳಕಾಯಜ್ಜಿ (50 ನಿ.)<br />ರಚನೆ: ಡಾ.ಚಂದ್ರಶೇಖರ ಕಂಬಾರ<br />ನಿರ್ದೇಶನ: ಮಾಲತೇಶ್ ಬಡಿಗೇರ</p>.<p><strong>ಡಿಸೆಂಬರ್ 9 ಬುಧವಾರ</strong><br />ಕರಿಯ ದೇವರ ಹುಡುಕಿ (1 ಗಂ.30 ನಿ.)<br />ರಚನೆ: ಪ್ರೊ.ಶಂಕರ ಪಿಳ್ಳೈ, ಡಾ.ನಾ.ದಾಮೋದರ ಶೆಟ್ಟಿ<br />ನಿರ್ದೇಶನ: ಚಂದ್ರದಾಸನ್</p>.<p><strong>ಡಿಸೆಂಬರ್ 10 ಗುರುವಾರ</strong><br />ಕುರ್ಚಿ ಮತ್ತು ಆ... ನಂತರ (50 ನಿ.)<br />ಕನ್ನಡ, ತಮಿಳು, ತೆಲುಗು, ಮಲಯಾಳಂ ಕಥಾರಂಗ<br />ನಿರ್ದೇಶನ: ದೇವೇಂದ್ರರಾಜ್ ಅಂಕುರ್</p>.<p><strong>ಡಿಸೆಂಬರ್ 11 ಶುಕ್ರವಾರ</strong><br />ಅನಿಮಲ್ ಫಾರ್ಮ್ (1 ಗಂ. 30 ನಿ.)<br />ರಚನೆ: ಜಾರ್ಜ್ ಆರ್ವೆಲ್. ರೂಪಾಂತರ: ಪ್ರೊ.ಸತ್ಯಬ್ರತ್ ರೌತ್, ಕನ್ನಡಕ್ಕೆ: ಸಿ.ಬಸವಲಿಂಗಯ್ಯ<br />ನಿರ್ದೇಶನ: ಪ್ರೊ.ಸತ್ಯಬ್ರತ್ ರೌತ್</p>.<p><strong>ಡಿಸೆಂಬರ್ 12 ಶನಿವಾರ</strong><br />ಗುಣಮುಖ (2 ಗಂಟೆ)<br />ರಚನೆ: ಪಿ.ಲಂಕೇಶ್<br />ನಿರ್ದೇಶನ: ಬಸವಲಿಂಗಯ್ಯ</p>.<p><strong>ಡಿಸೆಂಬರ್ 13 ಭಾನುವಾರ (50 ನಿ.)</strong><br />ಹಯವದನ, ನಾಗಮಂಡಲ, ಅಗ್ನಿ ಮತ್ತು ಮಳೆ<br />ರಚನೆ: ಗಿರೀಶ್ ಕಾರ್ನಾಡ್<br />ನಿರ್ದೇಶನ: ಸಿ.ಬಸವಲಿಂಗಯ್ಯ<br /><strong>ಸಂಜೆ 7ಕ್ಕೆ</strong><br />ಕುಸುಮಬಾಲೆ (2 ಗಂ. 20 ನಿ.)<br />ರಚನೆ: ದೇವನೂರು ಮಹಾದೇವ<br />ನಿರ್ದೇಶನ: ಸಿ.ಬಸವಲಿಂಗಯ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>