<p>ಎಚ್.ಎಸ್.ಸುಧೀರ್ ಅವರು ಗುಬ್ಬಿ ಲ್ಯಾಬ್ಸ್ ಸಂಸ್ಥಾಪಕ. ಪಶ್ಚಿಮಘಟ್ಟಗಳ ಕಪ್ಪೆಗಳ ಬಗೆಗಿನ ಮೊದಲ ಪುಸ್ತಕದ ಪ್ರಕಾಶಕ. ಅಲ್ಲದೆ ಅಪರೂಪದ ಒಂದು ಕಪ್ಪೆಯನ್ನು ಹೊರ ಜಗತ್ತಿಗೆ ಪರಿಚಯಿಸಿದ ತಂಡದಲ್ಲಿ ಇವರೂ ಭಾಗಿ. ಬೆಂಗಳೂರಿನಲ್ಲಿ ಮರಗಳು, ಪಕ್ಷಿಗಳ ವೈವಿಧ್ಯತೆ ಲೆಕ್ಕಹಾಕುವುದು.</p>.<p>ನಗರಗಳ ಕ್ರಮಬದ್ಧ ಬೆಳವಣಿಗೆ, ಅಭಿವೃದ್ಧಿಯಲ್ಲಿ ಸುಸ್ಥಿರತೆ,ಭೂಬಳಕೆ, ಭೂ ಪ್ರದೇಶದಲ್ಲಿ ಆದ ಬದಲಾವಣೆಗಳಿಂದ ಪರಿಸರದ ಸುಸ್ಥಿರತೆಯ ಮೇಲಾಗುತ್ತಿರುವ ಪರಿಣಾಮಗಳು ಹಾಗೂ ನೈಸರ್ಗಿಕ ಸಂಪನ್ಮೂಲನದ ಬಳಕೆಯಿಂದ ಮಾನವ ಮತ್ತು ಪರಿಸರದ ಅಂತರ್ ಸಂಬಂಧವನ್ನು ಅರ್ಥೈಸುವಿಕೆಯ ಸಂಶೋಧನೆಗಳನ್ನು ನಿರಂತರವಾಗಿ ನಡೆಸಿದ್ದಾರೆ.</p>.<p>ವಾಹನಗಳಿಂದ ಆಗುವ ಮಾಲಿನ್ಯವನ್ನು ತಗ್ಗಿಸಲು ಐಐಎಸ್ಸಿ ಕ್ಯಾಂಪಸ್ನಲ್ಲಿ ‘ನಮ್ಮ ಸೈಕಲ್’ ಪಬ್ಲಿಕ್ ಬೈಸಿಕಲ್ ಶೇರಿಂಗ್ ವ್ಯವಸ್ಥೆ. ಜಯನಗರದಲ್ಲಿಸೈಕಲ್ ಸ್ನೇಹಿ ಪಥ ನಿರ್ಮಾಣದ ಯೋಜನೆ ರೂಪಿಸಿದರು. ಬಿಬಿಎಂಪಿ ಅದನ್ನು ಅನುಷ್ಠಾನಗೊಳಿಸಿತು. ಅಲ್ಲದೆ,ರಾಜ್ಯದಲ್ಲಿ 9 ಎರಡನೇ ಸ್ತರದ ನಗರಗಳಿಗೆ (ಟು ಟೈರ್ ಸಿಟೀಸ್) ವಾಹನಗಳ ಪಾರ್ಕಿಂಗ್ ನೀತಿ ರೂಪಿಸಿದರು.</p>.<p>ನಗರಗಳು ಮತ್ತು ಹವಾಮಾನ ವ್ಯವಸ್ಥೆಯ ನಕಾಶೆ ರೂಪಿಸುವ ಮತ್ತು ಅದಕ್ಕೆ ಬಳಸುವ ಟೂಲ್ಗಳ ಉಚಿತ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ. ‘ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್ಮೆಂಟ್’ನ ಫ್ಯಾಕಲ್ಟಿ ಆಗಿದ್ದಾಗ ಭಾರತದ 231 ನಗರಗಳು ಮತ್ತು ಆ ನಗರಗಳಲ್ಲಿ ಆದ ಬದಲಾವಣೆಯ ನಕಾಶೆ ರೂಪಿಸುವ ತಂಡವನ್ನು ಮುನ್ನಡೆಸಿದ್ದರು.</p>.<p>ಸಾರ್ವಜನಿಕರು ವಿಜ್ಞಾನದಲ್ಲಿ ಹೇಗೆ ಭಾಗವಹಿಸಬಹುದು ಎಂಬುದಕ್ಕೆ ‘ಸಿಟಿಜನ್ ಸೈನ್ಸ್’ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇದಕ್ಕೆ ಪ್ರಾಜೆಕ್ಟ್ ಅಶೋಕಎಂದು ಕರೆಯಲಾಗಿದೆ. ಇದರಡಿ ಪರಿಸರ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಶಿಬಿರಗಳನ್ನು ನಡೆಸಲಾಗಿದೆ. ಇದರಲ್ಲಿ ಕ್ರೋಡೀಕರಿಸಿದ ಮಾಹಿತಿ (ಡೇಟಾ) ಮುಕ್ತವಾಗಿ ಹಂಚಲಾಗಿದೆ.</p>.<p><strong>ಹೆಸರು</strong>: ಎಚ್.ಎಸ್.ಸುಧೀರ್<br /><strong>ವೃತ್ತಿ</strong>: ಗುಬ್ಬಿ ಲ್ಯಾಬ್ಸ್ ಸಂಸ್ಥಾಪಕ<br /><strong>ಸಾಧನೆ</strong>: ನಗರಗಳಿಗೆ ಪಾರ್ಕಿಂಗ್ ನೀತಿ, ಸೈಕಲ್ಸ್ನೇಹಿ ಪಥ ನಿರ್ಮಾಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಚ್.ಎಸ್.ಸುಧೀರ್ ಅವರು ಗುಬ್ಬಿ ಲ್ಯಾಬ್ಸ್ ಸಂಸ್ಥಾಪಕ. ಪಶ್ಚಿಮಘಟ್ಟಗಳ ಕಪ್ಪೆಗಳ ಬಗೆಗಿನ ಮೊದಲ ಪುಸ್ತಕದ ಪ್ರಕಾಶಕ. ಅಲ್ಲದೆ ಅಪರೂಪದ ಒಂದು ಕಪ್ಪೆಯನ್ನು ಹೊರ ಜಗತ್ತಿಗೆ ಪರಿಚಯಿಸಿದ ತಂಡದಲ್ಲಿ ಇವರೂ ಭಾಗಿ. ಬೆಂಗಳೂರಿನಲ್ಲಿ ಮರಗಳು, ಪಕ್ಷಿಗಳ ವೈವಿಧ್ಯತೆ ಲೆಕ್ಕಹಾಕುವುದು.</p>.<p>ನಗರಗಳ ಕ್ರಮಬದ್ಧ ಬೆಳವಣಿಗೆ, ಅಭಿವೃದ್ಧಿಯಲ್ಲಿ ಸುಸ್ಥಿರತೆ,ಭೂಬಳಕೆ, ಭೂ ಪ್ರದೇಶದಲ್ಲಿ ಆದ ಬದಲಾವಣೆಗಳಿಂದ ಪರಿಸರದ ಸುಸ್ಥಿರತೆಯ ಮೇಲಾಗುತ್ತಿರುವ ಪರಿಣಾಮಗಳು ಹಾಗೂ ನೈಸರ್ಗಿಕ ಸಂಪನ್ಮೂಲನದ ಬಳಕೆಯಿಂದ ಮಾನವ ಮತ್ತು ಪರಿಸರದ ಅಂತರ್ ಸಂಬಂಧವನ್ನು ಅರ್ಥೈಸುವಿಕೆಯ ಸಂಶೋಧನೆಗಳನ್ನು ನಿರಂತರವಾಗಿ ನಡೆಸಿದ್ದಾರೆ.</p>.<p>ವಾಹನಗಳಿಂದ ಆಗುವ ಮಾಲಿನ್ಯವನ್ನು ತಗ್ಗಿಸಲು ಐಐಎಸ್ಸಿ ಕ್ಯಾಂಪಸ್ನಲ್ಲಿ ‘ನಮ್ಮ ಸೈಕಲ್’ ಪಬ್ಲಿಕ್ ಬೈಸಿಕಲ್ ಶೇರಿಂಗ್ ವ್ಯವಸ್ಥೆ. ಜಯನಗರದಲ್ಲಿಸೈಕಲ್ ಸ್ನೇಹಿ ಪಥ ನಿರ್ಮಾಣದ ಯೋಜನೆ ರೂಪಿಸಿದರು. ಬಿಬಿಎಂಪಿ ಅದನ್ನು ಅನುಷ್ಠಾನಗೊಳಿಸಿತು. ಅಲ್ಲದೆ,ರಾಜ್ಯದಲ್ಲಿ 9 ಎರಡನೇ ಸ್ತರದ ನಗರಗಳಿಗೆ (ಟು ಟೈರ್ ಸಿಟೀಸ್) ವಾಹನಗಳ ಪಾರ್ಕಿಂಗ್ ನೀತಿ ರೂಪಿಸಿದರು.</p>.<p>ನಗರಗಳು ಮತ್ತು ಹವಾಮಾನ ವ್ಯವಸ್ಥೆಯ ನಕಾಶೆ ರೂಪಿಸುವ ಮತ್ತು ಅದಕ್ಕೆ ಬಳಸುವ ಟೂಲ್ಗಳ ಉಚಿತ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ. ‘ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್ಮೆಂಟ್’ನ ಫ್ಯಾಕಲ್ಟಿ ಆಗಿದ್ದಾಗ ಭಾರತದ 231 ನಗರಗಳು ಮತ್ತು ಆ ನಗರಗಳಲ್ಲಿ ಆದ ಬದಲಾವಣೆಯ ನಕಾಶೆ ರೂಪಿಸುವ ತಂಡವನ್ನು ಮುನ್ನಡೆಸಿದ್ದರು.</p>.<p>ಸಾರ್ವಜನಿಕರು ವಿಜ್ಞಾನದಲ್ಲಿ ಹೇಗೆ ಭಾಗವಹಿಸಬಹುದು ಎಂಬುದಕ್ಕೆ ‘ಸಿಟಿಜನ್ ಸೈನ್ಸ್’ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇದಕ್ಕೆ ಪ್ರಾಜೆಕ್ಟ್ ಅಶೋಕಎಂದು ಕರೆಯಲಾಗಿದೆ. ಇದರಡಿ ಪರಿಸರ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಶಿಬಿರಗಳನ್ನು ನಡೆಸಲಾಗಿದೆ. ಇದರಲ್ಲಿ ಕ್ರೋಡೀಕರಿಸಿದ ಮಾಹಿತಿ (ಡೇಟಾ) ಮುಕ್ತವಾಗಿ ಹಂಚಲಾಗಿದೆ.</p>.<p><strong>ಹೆಸರು</strong>: ಎಚ್.ಎಸ್.ಸುಧೀರ್<br /><strong>ವೃತ್ತಿ</strong>: ಗುಬ್ಬಿ ಲ್ಯಾಬ್ಸ್ ಸಂಸ್ಥಾಪಕ<br /><strong>ಸಾಧನೆ</strong>: ನಗರಗಳಿಗೆ ಪಾರ್ಕಿಂಗ್ ನೀತಿ, ಸೈಕಲ್ಸ್ನೇಹಿ ಪಥ ನಿರ್ಮಾಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>