<p><strong>ಬಟಾಬಯಲು<br />ಲೇ:</strong> ಮುದಿಗೆರೆ ರಮೇಶ್ಕುಮಾರ್<br /><strong>ಪ್ರ: </strong>ಕರ್ನಾಟಕ ಅಂಧರ ವಿಮೋಚನಾ ವೇದಿಕೆ<br /><strong>ಸಂ:</strong> 9844769007</p>.<p>**<br />ಮುದಿಗೆರೆ ರಮೇಶ್ಕುಮಾರ್ ಅವರು ಅಂಧರಾದರೂ ಅವರೊಳಗಿನ ಕವಿಯು ಜಗತ್ತನ್ನು ಎಷ್ಟು ತೀಕ್ಷ್ಣ ದೃಷ್ಟಿಯಿಂದ ನೋಡಬಲ್ಲ ಎನ್ನುವುದಕ್ಕೆ ಸಾಕ್ಷಿ ಅವರ ಇತ್ತೀಚಿನ ಕಾವ್ಯ ಸಂಕಲನ ಬಟಾಬಯಲು. ಅಂಧರು ಎಂಬ ರಿಯಾಯಿತಿ ತೋರಿಸದೆ ನೋಡಿದಾಗಲೂ ಗಮನ ಸೆಳೆಯುವಂತಹ ಹಲವಾರು ಕವನಗಳು ಈ ಸಂಕಲನದಲ್ಲಿವೆ.<br /><br />‘ಲೆಕ್ಕ ಇಟ್ಟವರಿಲ್ಲ ಕಲ್ಲುಗಳ ಹೊತ್ತವರ/ ಲೆಕ್ಕ ಇಟ್ಟವರಿಲ್ಲ ಗುಡಿ ಕಟ್ಟಿ ಮಣಿದವರ/ ಲೆಕ್ಕಕ್ಕೆ ನನದೊಂದು ನಿನದೊಂದು ಕಲ್ಲು’ ಎಂದು ಕಳವಳಿಸುವ ಕವಿಯ ಮನಸ್ಸು, ಮರೆಯಾಗುತ್ತಿರುವ ಮನುಷ್ಯತ್ವದ ಬಗ್ಗೆಯೂ ಮಾತನಾಡುತ್ತದೆ. ಉದಾಹರಣೆ ಬೇಕೇ? ‘ಬಿದ್ದುದಷ್ಟೇ ನಾವು ಕೆಳಗೆ/ಬಿದ್ದವರೆಷ್ಟೋ ಒಳಗೊಳಗೆ.’ ಕಣ್ಣು ಕಾಣದ ತಮ್ಮಂಥವರು ಬಾಹ್ಯವಾಗಿ ಬಿದ್ದರೂ ಅದರಿಂದ ಯಾವ ಅಪಾಯವೂ ಇಲ್ಲ. ಅದೇ ಕಣ್ಣಿದ್ದೂ ಅಂತಃಸಾಕ್ಷಿಯ ಮುಂದೆ ಬಿದ್ದವರು ತಂದೊಡ್ಡುವ ಅಪಾಯ ದೊಡ್ಡದು ಎಂಬುದನ್ನು ಈ ಕವನ ಸೂಚ್ಯವಾಗಿ ಹೇಳುತ್ತದೆ.<br /><br />ಹಕ್ಕಿಗಳ ಚಿಲಿಪಿಲಿ ನಾದದ ಜತೆಗೆ ದುಃಖಿತರ ಆರ್ತನಾದವೂ ಕವಿಗೆ ಕೇಳಿಸುತ್ತದೆ. ದೇವರು, ಧರ್ಮ, ನಾಡು, ನುಡಿ, ನಿಸರ್ಗ ಹೀಗೆ ಇಲ್ಲಿನ ಕಾವ್ಯಗಳಲ್ಲಿ ಒಳಗಣ್ಣಿನ ದೃಷ್ಟಿ ವ್ಯಾಪಕವಾಗಿ ಹರಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಟಾಬಯಲು<br />ಲೇ:</strong> ಮುದಿಗೆರೆ ರಮೇಶ್ಕುಮಾರ್<br /><strong>ಪ್ರ: </strong>ಕರ್ನಾಟಕ ಅಂಧರ ವಿಮೋಚನಾ ವೇದಿಕೆ<br /><strong>ಸಂ:</strong> 9844769007</p>.<p>**<br />ಮುದಿಗೆರೆ ರಮೇಶ್ಕುಮಾರ್ ಅವರು ಅಂಧರಾದರೂ ಅವರೊಳಗಿನ ಕವಿಯು ಜಗತ್ತನ್ನು ಎಷ್ಟು ತೀಕ್ಷ್ಣ ದೃಷ್ಟಿಯಿಂದ ನೋಡಬಲ್ಲ ಎನ್ನುವುದಕ್ಕೆ ಸಾಕ್ಷಿ ಅವರ ಇತ್ತೀಚಿನ ಕಾವ್ಯ ಸಂಕಲನ ಬಟಾಬಯಲು. ಅಂಧರು ಎಂಬ ರಿಯಾಯಿತಿ ತೋರಿಸದೆ ನೋಡಿದಾಗಲೂ ಗಮನ ಸೆಳೆಯುವಂತಹ ಹಲವಾರು ಕವನಗಳು ಈ ಸಂಕಲನದಲ್ಲಿವೆ.<br /><br />‘ಲೆಕ್ಕ ಇಟ್ಟವರಿಲ್ಲ ಕಲ್ಲುಗಳ ಹೊತ್ತವರ/ ಲೆಕ್ಕ ಇಟ್ಟವರಿಲ್ಲ ಗುಡಿ ಕಟ್ಟಿ ಮಣಿದವರ/ ಲೆಕ್ಕಕ್ಕೆ ನನದೊಂದು ನಿನದೊಂದು ಕಲ್ಲು’ ಎಂದು ಕಳವಳಿಸುವ ಕವಿಯ ಮನಸ್ಸು, ಮರೆಯಾಗುತ್ತಿರುವ ಮನುಷ್ಯತ್ವದ ಬಗ್ಗೆಯೂ ಮಾತನಾಡುತ್ತದೆ. ಉದಾಹರಣೆ ಬೇಕೇ? ‘ಬಿದ್ದುದಷ್ಟೇ ನಾವು ಕೆಳಗೆ/ಬಿದ್ದವರೆಷ್ಟೋ ಒಳಗೊಳಗೆ.’ ಕಣ್ಣು ಕಾಣದ ತಮ್ಮಂಥವರು ಬಾಹ್ಯವಾಗಿ ಬಿದ್ದರೂ ಅದರಿಂದ ಯಾವ ಅಪಾಯವೂ ಇಲ್ಲ. ಅದೇ ಕಣ್ಣಿದ್ದೂ ಅಂತಃಸಾಕ್ಷಿಯ ಮುಂದೆ ಬಿದ್ದವರು ತಂದೊಡ್ಡುವ ಅಪಾಯ ದೊಡ್ಡದು ಎಂಬುದನ್ನು ಈ ಕವನ ಸೂಚ್ಯವಾಗಿ ಹೇಳುತ್ತದೆ.<br /><br />ಹಕ್ಕಿಗಳ ಚಿಲಿಪಿಲಿ ನಾದದ ಜತೆಗೆ ದುಃಖಿತರ ಆರ್ತನಾದವೂ ಕವಿಗೆ ಕೇಳಿಸುತ್ತದೆ. ದೇವರು, ಧರ್ಮ, ನಾಡು, ನುಡಿ, ನಿಸರ್ಗ ಹೀಗೆ ಇಲ್ಲಿನ ಕಾವ್ಯಗಳಲ್ಲಿ ಒಳಗಣ್ಣಿನ ದೃಷ್ಟಿ ವ್ಯಾಪಕವಾಗಿ ಹರಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>