ರಾಜೀವ ತಾರಾನಾಥ ಅವರ ಕುರಿತು ಈಗಾಗಲೇ ಹಲವು ಕೃತಿಗಳು ಪ್ರಕಟವಾಗಿವೆ. ಈ ನುಡಿತೋರಣ ‘ಸರೋದ್ ಸ್ವರಯಾನ’ದಲ್ಲಿ ಚಂದ್ರಶೇಖರ ಕಂಬಾರ, ನ.ರತ್ನ, ಸುಮಂಗಲಾ, ರಹಮತ್ ತರೀಕೆರೆ ಮುಂತಾದವರು ಬರೆದ ಲೇಖನಗಳನ್ನು ಆಯ್ದು ಪ್ರಕಟಿಸಲಾಗಿದೆ. ಜೊತೆಗೆ ರಾಜೀವ ತಾರಾನಾಥ ಅವರು ನುಡಿಸಿದ ತಮ್ಮ ಜೀವನದ ಚಿತ್ರಣ, ಸಂಗೀತ ಪಯಣವನ್ನು ಕೀರ್ತಿನಾಥ ಕುರ್ತಕೋಟಿ, ಯು.ಆರ್.ಅನಂತಮೂರ್ತಿ, ಜಯಂತ ಕಾಯ್ಕಿಣಿ, ಗಿರೀಶ ಕಾಸರವಳ್ಳಿ, ಶ್ರೀದೇವಿ ಕಳಸದ ಅವರು ಮಾತುಕತೆಯ ಸಂದರ್ಶನಗಳ ಮೂಲಕ ಇಲ್ಲಿ ಕಟ್ಟಿಕೊಟ್ಟಿದ್ದಾರೆ.