<p><strong>ದಲಿತ ಚಳುವಳಿಯ ಹೆಜ್ಜೆಗಳು</strong><br />ಲೇ: ಶಿವಾಜಿ ಗಣೇಶನ್<br />ಪ್ರ: ಬೆವರಹನಿ ಪ್ರಕಾಶನ<br />ಸಂ: 9845606952</p>.<p>‘ದಲಿತ ವರ್ಗದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದ ಬಹುತೇಕರು ಹೇಡಿಗಳಂತೆ ಬದುಕಿದರು. ಇಂಥವರನ್ನು ಸಮಾಜವಾಗಲಿ ದಲಿತರಾಗಲಿ ನೆನಪಿಸಿಕೊಳ್ಳುವುದಿಲ್ಲ. ಏಕೆಂದರೆ ಇತಿಹಾಸದಲ್ಲಿ ಅವರ ಹೆಜ್ಜೆ ಗುರುತುಗಳೇ ಕಾಣಿಸುತ್ತಿಲ್ಲ...’<br /><br />ಸಮುದಾಯವೊಂದನ್ನು ಮೆಟ್ಟಿಲಾಗಿಸಿಕೊಂಡು ಮೇಲೇರಿದವರ ಗುಣಧರ್ಮ ವಿವರಿಸುವಾಗ ಲೇಖಕ ಶಿವಾಜಿ ಗಣೇಶನ್ ‘ದಲಿತ ಚಳವಳಿಯ ಹೆಜ್ಜೆಗಳು’ ಕೃತಿಯಲ್ಲಿ ಹೀಗೆ ಚಾಟಿ ಬೀಸಿದ್ದಾರೆ. ಹಾಗೆಯೇ ಮುಂಚೂಣಿ ನಾಯಕರ ಗುಣಾವಗುಣಗಳನ್ನೂ ನಿರ್ದಾಕ್ಷಿಣ್ಯವಾಗಿ ತೆರೆದಿಟ್ಟಿದ್ದಾರೆ.</p>.<p>ಬಸವಲಿಂಗಪ್ಪ ಅವರ ‘ಕನ್ನಡ ಸಾಹಿತ್ಯದಲ್ಲಿರುವುದೆಲ್ಲಾ ಬೂಸಾ ಸಾಹಿತ್ಯ’ ಎಂಬ ಹೇಳಿಕೆ ಮುಂದೆ ಸವರ್ಣೀಯ ಮತ್ತು ದಲಿತ ವಿದ್ಯಾರ್ಥಿಗಳ ನಡುವೆ ಕಿಚ್ಚು ಹಬ್ಬಿಸಿ ದಲಿತ ಚಳವಳಿಗೆ ಮುನ್ನುಡಿ ಬರೆದದ್ದು ಕಥನ ರೂಪದಲ್ಲಿದೆ.</p>.<p>ಬಸವಲಿಂಗಪ್ಪ ಅವರು ‘ಬೂಸಾ ಸಾಹಿತ್ಯ’ ಎಂದು ಜರೆದದ್ದು ಮಾತ್ರ ಹೆಚ್ಚು ಪ್ರಚಾರ ಪಡೆದಿದೆ.ಕನ್ನಡ ಸಾಹಿತ್ಯದಲ್ಲಿ ನಿಮ್ಮ ದುಃಖ ದುಮ್ಮಾನ, ನಿಮ್ಮ ಬದುಕಿನ ಚಿತ್ರಣ ಇದೆಯಾ ಎಂದು ಬಸವಲಿಂಗಪ್ಪನವರು ಪ್ರಶ್ನಿಸಿದ ಸಂಗತಿ ದಾಖಲಾಗಿರುವುದು ಬಹುಶಃ ಈ ಕೃತಿಯಲ್ಲೇ ಮೊದಲು ಇರಬೇಕು. ಆ ಘಟನೆಗೆ ಲೇಖಕರು ಪ್ರತ್ಯಕ್ಷದರ್ಶಿ ಆಗಿರುವುದೂ ಲೇಖನಕ್ಕೊಂದು ನಿಖರತೆ ಒದಗಿಸಿದೆ.</p>.<p>ಚಳವಳಿಗೆ ದನಿಯಾದ ‘ಪಂಚಮ’, ‘ಶೋಷಿತ’, ‘ಆಂದೋಲನ’ ಪತ್ರಿಕೆಗಳು, ಅವುಗಳ ಪ್ರಕಾಶಕರು ಎದುರಿಸಿದ ಸಂಕಷ್ಟಗಳು, ಹಸಿವು ನಿರೂಪಣೆಗೊಂಡಿವೆ. ಅಂದಿನ ನಾಯಕರು, ಘಟನೆಗಳ ಪ್ರತ್ಯಕ್ಷದರ್ಶಿತ್ವ, ನೆನಪುಗಳ ಭಂಡಾರದಿಂದ ಆಯ್ದು ಸಂಗತಿಗಳಿಂದಾಗಿ ಈ ಕೃತಿ ಒಂದು ಅಧ್ಯಯನಯೋಗ್ಯ ದಾಖಲೆಯಾಗಿ ಮೂಡಿಬಂದಿದೆ. ದಲಿತ ಚಳವಳಿಯು ಹೇಗೆ ಒಂದು ಸ್ವರೂಪ ಪಡೆಯುತ್ತಾ ಬಂತು ಎಂಬುದನ್ನು ಈ ಕೃತಿ ಸೊಗಸಾಗಿ ಕಟ್ಟಿಕೊಟ್ಟಿದೆ. ಆ ನಿಟ್ಟಿನಲ್ಲಿ ಇದೊಂದು ಆಕರ ಗ್ರಂಥವೂ ಆಗಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಲಿತ ಚಳುವಳಿಯ ಹೆಜ್ಜೆಗಳು</strong><br />ಲೇ: ಶಿವಾಜಿ ಗಣೇಶನ್<br />ಪ್ರ: ಬೆವರಹನಿ ಪ್ರಕಾಶನ<br />ಸಂ: 9845606952</p>.<p>‘ದಲಿತ ವರ್ಗದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದ ಬಹುತೇಕರು ಹೇಡಿಗಳಂತೆ ಬದುಕಿದರು. ಇಂಥವರನ್ನು ಸಮಾಜವಾಗಲಿ ದಲಿತರಾಗಲಿ ನೆನಪಿಸಿಕೊಳ್ಳುವುದಿಲ್ಲ. ಏಕೆಂದರೆ ಇತಿಹಾಸದಲ್ಲಿ ಅವರ ಹೆಜ್ಜೆ ಗುರುತುಗಳೇ ಕಾಣಿಸುತ್ತಿಲ್ಲ...’<br /><br />ಸಮುದಾಯವೊಂದನ್ನು ಮೆಟ್ಟಿಲಾಗಿಸಿಕೊಂಡು ಮೇಲೇರಿದವರ ಗುಣಧರ್ಮ ವಿವರಿಸುವಾಗ ಲೇಖಕ ಶಿವಾಜಿ ಗಣೇಶನ್ ‘ದಲಿತ ಚಳವಳಿಯ ಹೆಜ್ಜೆಗಳು’ ಕೃತಿಯಲ್ಲಿ ಹೀಗೆ ಚಾಟಿ ಬೀಸಿದ್ದಾರೆ. ಹಾಗೆಯೇ ಮುಂಚೂಣಿ ನಾಯಕರ ಗುಣಾವಗುಣಗಳನ್ನೂ ನಿರ್ದಾಕ್ಷಿಣ್ಯವಾಗಿ ತೆರೆದಿಟ್ಟಿದ್ದಾರೆ.</p>.<p>ಬಸವಲಿಂಗಪ್ಪ ಅವರ ‘ಕನ್ನಡ ಸಾಹಿತ್ಯದಲ್ಲಿರುವುದೆಲ್ಲಾ ಬೂಸಾ ಸಾಹಿತ್ಯ’ ಎಂಬ ಹೇಳಿಕೆ ಮುಂದೆ ಸವರ್ಣೀಯ ಮತ್ತು ದಲಿತ ವಿದ್ಯಾರ್ಥಿಗಳ ನಡುವೆ ಕಿಚ್ಚು ಹಬ್ಬಿಸಿ ದಲಿತ ಚಳವಳಿಗೆ ಮುನ್ನುಡಿ ಬರೆದದ್ದು ಕಥನ ರೂಪದಲ್ಲಿದೆ.</p>.<p>ಬಸವಲಿಂಗಪ್ಪ ಅವರು ‘ಬೂಸಾ ಸಾಹಿತ್ಯ’ ಎಂದು ಜರೆದದ್ದು ಮಾತ್ರ ಹೆಚ್ಚು ಪ್ರಚಾರ ಪಡೆದಿದೆ.ಕನ್ನಡ ಸಾಹಿತ್ಯದಲ್ಲಿ ನಿಮ್ಮ ದುಃಖ ದುಮ್ಮಾನ, ನಿಮ್ಮ ಬದುಕಿನ ಚಿತ್ರಣ ಇದೆಯಾ ಎಂದು ಬಸವಲಿಂಗಪ್ಪನವರು ಪ್ರಶ್ನಿಸಿದ ಸಂಗತಿ ದಾಖಲಾಗಿರುವುದು ಬಹುಶಃ ಈ ಕೃತಿಯಲ್ಲೇ ಮೊದಲು ಇರಬೇಕು. ಆ ಘಟನೆಗೆ ಲೇಖಕರು ಪ್ರತ್ಯಕ್ಷದರ್ಶಿ ಆಗಿರುವುದೂ ಲೇಖನಕ್ಕೊಂದು ನಿಖರತೆ ಒದಗಿಸಿದೆ.</p>.<p>ಚಳವಳಿಗೆ ದನಿಯಾದ ‘ಪಂಚಮ’, ‘ಶೋಷಿತ’, ‘ಆಂದೋಲನ’ ಪತ್ರಿಕೆಗಳು, ಅವುಗಳ ಪ್ರಕಾಶಕರು ಎದುರಿಸಿದ ಸಂಕಷ್ಟಗಳು, ಹಸಿವು ನಿರೂಪಣೆಗೊಂಡಿವೆ. ಅಂದಿನ ನಾಯಕರು, ಘಟನೆಗಳ ಪ್ರತ್ಯಕ್ಷದರ್ಶಿತ್ವ, ನೆನಪುಗಳ ಭಂಡಾರದಿಂದ ಆಯ್ದು ಸಂಗತಿಗಳಿಂದಾಗಿ ಈ ಕೃತಿ ಒಂದು ಅಧ್ಯಯನಯೋಗ್ಯ ದಾಖಲೆಯಾಗಿ ಮೂಡಿಬಂದಿದೆ. ದಲಿತ ಚಳವಳಿಯು ಹೇಗೆ ಒಂದು ಸ್ವರೂಪ ಪಡೆಯುತ್ತಾ ಬಂತು ಎಂಬುದನ್ನು ಈ ಕೃತಿ ಸೊಗಸಾಗಿ ಕಟ್ಟಿಕೊಟ್ಟಿದೆ. ಆ ನಿಟ್ಟಿನಲ್ಲಿ ಇದೊಂದು ಆಕರ ಗ್ರಂಥವೂ ಆಗಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>