ಚಳವಳಿಗೆ ದನಿಯಾದ ‘ಪಂಚಮ’, ‘ಶೋಷಿತ’, ‘ಆಂದೋಲನ’ ಪತ್ರಿಕೆಗಳು, ಅವುಗಳ ಪ್ರಕಾಶಕರು ಎದುರಿಸಿದ ಸಂಕಷ್ಟಗಳು, ಹಸಿವು ನಿರೂಪಣೆಗೊಂಡಿವೆ. ಅಂದಿನ ನಾಯಕರು, ಘಟನೆಗಳ ಪ್ರತ್ಯಕ್ಷದರ್ಶಿತ್ವ, ನೆನಪುಗಳ ಭಂಡಾರದಿಂದ ಆಯ್ದು ಸಂಗತಿಗಳಿಂದಾಗಿ ಈ ಕೃತಿ ಒಂದು ಅಧ್ಯಯನಯೋಗ್ಯ ದಾಖಲೆಯಾಗಿ ಮೂಡಿಬಂದಿದೆ. ದಲಿತ ಚಳವಳಿಯು ಹೇಗೆ ಒಂದು ಸ್ವರೂಪ ಪಡೆಯುತ್ತಾ ಬಂತು ಎಂಬುದನ್ನು ಈ ಕೃತಿ ಸೊಗಸಾಗಿ ಕಟ್ಟಿಕೊಟ್ಟಿದೆ. ಆ ನಿಟ್ಟಿನಲ್ಲಿ ಇದೊಂದು ಆಕರ ಗ್ರಂಥವೂ ಆಗಿದೆ.