ಸಂದರ್ಶನಕ್ಕೆ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಸಾಕಷ್ಟು ಎಚ್ಚರ ವಹಿಸಲಾಗಿದೆ. ಗಿರೀಶ ಕಾಸರವಳ್ಳಿ, ಭಗವಾನ್, ಜಯಂತಿ ಅವರಂತಹ ಹಿರಿಯರು, ದರ್ಶನ್, ಶ್ರುತಿ ಹರಿಹರನ್ ಅವರಂತಹ ಈಗಿನ ತಲೆಮಾರಿನ ಪ್ರತಿಭಾನ್ವಿತರು, ‘ಶೃಂಗಾರದ ಹೊಂಗೆಮರ’ದ ಕುರಿತು ಧೇನಿಸುವ ಯೋಗರಾಜ ಭಟ್ಟರು, ರಿಚರ್ಡ್ ಅಟೆನ್ಬರೊ ಅವರ ಗಾಂಧಿ, ಕಾಸರವಳ್ಳಿ ಅವರ ಕೂರ್ಮಾವತಾರ, ಶೇಷಾದ್ರಿ ಅವರ ಮೋಹನ – ಹೀಗೆ, ಗಾಂಧಿ ಬಗೆಗಿನ ಪ್ರಮುಖ ಸಿನಿಮಾಗಳಲ್ಲಿ ಕೆಲಸ ಮಾಡಿದ ಛಾಯಾಗ್ರಹಣ ನಿರ್ದೇಶಕ ಜಿ.ಎಸ್. ಭಾಸ್ಕರರು... ಎಲ್ಲಾ ಇಲ್ಲಿ ಒಂದೆಡೆ ಸೇರಿದ್ದಾರೆ.