<p>ಅಂತರಂಗದ ಭಾವನೆಗಳಿಗೆ ಒದಗಿಬರುವ ಗೀತೆ, ಸಮುದಾಯದ ಸಮೂಹಗಾನವೂ ಆಗಬಲ್ಲದು ಎನ್ನುವುದನ್ನು ಮನದಟ್ಟು ಮಾಡಿಸುವಂತಹ ನಲವತ್ತೆರಡು ಹಾಡುಗಳ ಕಟ್ಟು ಬರಗೂರು ರಾಮಚಂದ್ರಪ್ಪ ಅವರ – ‘ಚಳವಳಿಯ ಹಾಡುಗಳು.’</p>.<p>ಚಳವಳಿಯ ಬಿತ್ತದಲ್ಲಿರುವುದು ಸಮಾನತೆ ಹಾಗೂ ನ್ಯಾಯದ ಅಪೇಕ್ಷೆ. ಆ ಹಂಬಲವೇ ಇಲ್ಲಿನ ರಚನೆಗಳ ಹೂರಣವೂ ಆಗಿದೆ. ಆಕ್ರೋಶ ಮತ್ತು ಭಾವುಕತೆ ಚಳವಳಿಯ ಹಾಡುಗಳಲ್ಲಿನ ಸಾಮಾನ್ಯ ಅಂಶಗಳು. ಬರಗೂರರ ಗೀತೆಗಳಲ್ಲೂ ಭಾವುಕತೆ ಇದೆ, ಭಾವಾವೇಶವಿಲ್ಲ. ಆಕ್ರೋಶದ ಬದಲು ಸತ್ಯಾಗ್ರಹಿಯ ಸಂಯಮವಿದೆ. ಈ ಸಾವಧಾನವೇ ಇಲ್ಲಿನ ರಚನೆಗಳನ್ನು ಚಳವಳಿಯ ಹಾಡುಗಳ ಪರಂಪರೆಯಲ್ಲಿ ಭಿನ್ನವಾಗಿ ನೋಡಲು ಒತ್ತಾಯಿಸುತ್ತವೆ. ನಲವತ್ತೆರಡು ಗೀತೆಗಳು ಈ ಸಂಕಲನದಲ್ಲಿವೆ. ಈ ಗೀತೆಗಳ ಮೂಲಕ ಬರಗೂರರ ವೈಚಾರಿಕತೆಯ ಪಾರ್ಶ್ವನೋಟ ಸಾಧ್ಯ. ಬರಗೂರರ ವಿಚಾರ ಸಾಹಿತ್ಯದಲ್ಲಿ ಮತ್ತೆ ಮತ್ತೆ ಕಾಣುವ ಬೆವರು, ಬೆವರಿನ ಇಂಡಿಯಾ, ಜಾಲೀಮರ, ಶ್ರಮಜೀವಿ, ಕರುಳು, ಸೂರ್ಯ, ಮುಂತಾದ ಪ್ರತಿಮೆಗಳು ಇಲ್ಲಿನ ಹಾಡುಗಳಲ್ಲೂ ಇವೆ.</p>.<p>‘ಚಳವಳಿ ಮತ್ತು ಸಾಹಿತ್ಯ’ ಶೀರ್ಷಿಕೆಯ ದೀರ್ಘ ಪ್ರಸ್ತಾವನೆ ಸಂಕಲನದ ವಿಶೇಷಗಳಲ್ಲೊಂದು. ಚಳವಳಿಯಿಂದ ಸೃಜನಶೀಲ ಸಾಹಿತ್ಯ ರಚನೆಗೆ ಹಿನ್ನಡೆಯಾಗುತ್ತದೆ ಎನ್ನುವ ನಂಬಿಕೆಯ ಪೊಳ್ಳುತನವನ್ನು ಉದಾಹರಣೆಗಳ ಸಮೇತ ನಿರಾಕರಿಸುವ ಈ ಬರಹ ಸಾಹಿತ್ಯ ವಿದ್ಯಾರ್ಥಿಗಳು ಗಮನಿಸಬೇಕಾದುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂತರಂಗದ ಭಾವನೆಗಳಿಗೆ ಒದಗಿಬರುವ ಗೀತೆ, ಸಮುದಾಯದ ಸಮೂಹಗಾನವೂ ಆಗಬಲ್ಲದು ಎನ್ನುವುದನ್ನು ಮನದಟ್ಟು ಮಾಡಿಸುವಂತಹ ನಲವತ್ತೆರಡು ಹಾಡುಗಳ ಕಟ್ಟು ಬರಗೂರು ರಾಮಚಂದ್ರಪ್ಪ ಅವರ – ‘ಚಳವಳಿಯ ಹಾಡುಗಳು.’</p>.<p>ಚಳವಳಿಯ ಬಿತ್ತದಲ್ಲಿರುವುದು ಸಮಾನತೆ ಹಾಗೂ ನ್ಯಾಯದ ಅಪೇಕ್ಷೆ. ಆ ಹಂಬಲವೇ ಇಲ್ಲಿನ ರಚನೆಗಳ ಹೂರಣವೂ ಆಗಿದೆ. ಆಕ್ರೋಶ ಮತ್ತು ಭಾವುಕತೆ ಚಳವಳಿಯ ಹಾಡುಗಳಲ್ಲಿನ ಸಾಮಾನ್ಯ ಅಂಶಗಳು. ಬರಗೂರರ ಗೀತೆಗಳಲ್ಲೂ ಭಾವುಕತೆ ಇದೆ, ಭಾವಾವೇಶವಿಲ್ಲ. ಆಕ್ರೋಶದ ಬದಲು ಸತ್ಯಾಗ್ರಹಿಯ ಸಂಯಮವಿದೆ. ಈ ಸಾವಧಾನವೇ ಇಲ್ಲಿನ ರಚನೆಗಳನ್ನು ಚಳವಳಿಯ ಹಾಡುಗಳ ಪರಂಪರೆಯಲ್ಲಿ ಭಿನ್ನವಾಗಿ ನೋಡಲು ಒತ್ತಾಯಿಸುತ್ತವೆ. ನಲವತ್ತೆರಡು ಗೀತೆಗಳು ಈ ಸಂಕಲನದಲ್ಲಿವೆ. ಈ ಗೀತೆಗಳ ಮೂಲಕ ಬರಗೂರರ ವೈಚಾರಿಕತೆಯ ಪಾರ್ಶ್ವನೋಟ ಸಾಧ್ಯ. ಬರಗೂರರ ವಿಚಾರ ಸಾಹಿತ್ಯದಲ್ಲಿ ಮತ್ತೆ ಮತ್ತೆ ಕಾಣುವ ಬೆವರು, ಬೆವರಿನ ಇಂಡಿಯಾ, ಜಾಲೀಮರ, ಶ್ರಮಜೀವಿ, ಕರುಳು, ಸೂರ್ಯ, ಮುಂತಾದ ಪ್ರತಿಮೆಗಳು ಇಲ್ಲಿನ ಹಾಡುಗಳಲ್ಲೂ ಇವೆ.</p>.<p>‘ಚಳವಳಿ ಮತ್ತು ಸಾಹಿತ್ಯ’ ಶೀರ್ಷಿಕೆಯ ದೀರ್ಘ ಪ್ರಸ್ತಾವನೆ ಸಂಕಲನದ ವಿಶೇಷಗಳಲ್ಲೊಂದು. ಚಳವಳಿಯಿಂದ ಸೃಜನಶೀಲ ಸಾಹಿತ್ಯ ರಚನೆಗೆ ಹಿನ್ನಡೆಯಾಗುತ್ತದೆ ಎನ್ನುವ ನಂಬಿಕೆಯ ಪೊಳ್ಳುತನವನ್ನು ಉದಾಹರಣೆಗಳ ಸಮೇತ ನಿರಾಕರಿಸುವ ಈ ಬರಹ ಸಾಹಿತ್ಯ ವಿದ್ಯಾರ್ಥಿಗಳು ಗಮನಿಸಬೇಕಾದುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>