<p><strong>ಗ್ರಂಥಲಕ್ಷ್ಮೀ</strong><br /><strong>ಎಸ್.ಎನ್. ಲಕ್ಷ್ಮೀನಾರಾಯಣ ಅವರ ಸಂಸ್ಮರಣ ಗ್ರಂಥ</strong><br /><strong>ಪ್ರಧಾನ ಸಂಪಾದಕ</strong>: ಡಾ. ಸಿ.ಪಿ. ಕೃಷ್ಣಕುಮಾರ್<br /><strong>ಸಂಪಾದಕ:</strong> ಡಾ. ಎಸ್.ಟಿ. ರಾಮಚಂದ್ರ<br /><strong>ಪ್ರ:</strong> ಮಾನಸ ಪ್ರಕಾಶನ<br /><strong>ಸಂ:</strong> 9945988388</p>.<p>**<br />ಗ್ರಂಥಪಾಲಕರಾಗಿ, ಗ್ರಂಥಾಲಯ ಅಧಿಕಾರಿಯಾಗಿ ‘ನುಡಿ ಸೇವೆ’ ಮಾಡಿದ ಎಸ್.ಎನ್. ಲಕ್ಷ್ಮೀನಾರಾಯಣ ಅವರ ಸಂಸ್ಮರಣಾ ಗ್ರಂಥ ‘ಗ್ರಂಥಲಕ್ಷ್ಮೀ’. ಅಭಿನಂದನಾ ಗ್ರಂಥವಾಗಿ ರೂಪುಗೊಳ್ಳುತ್ತಿದ್ದ ಈ ಕೃತಿ, ಆ ಹಂತದಲ್ಲಿಯೇ ಲಕ್ಷ್ಮೀನಾರಾಯಣ ಅವರು ಅಗಲಿದ್ದರಿಂದ ಸಂಸ್ಮರಣಾ ಗ್ರಂಥದ ಸ್ವರೂಪ ತಾಳಿ, ಓದುಗರ ಕೈಸೇರಿದೆ. ಗ್ರಂಥಾಲಯ ಅಧಿಕಾರಿಯ ಸಂಸ್ಮರಣೆ ಗ್ರಂಥ ಇದಾಗಿರುವುದರಿಂದ ಸಹಜವಾಗಿಯೇ ಇಲ್ಲಿ ಪುಸ್ತಕ ಪ್ರಪಂಚವೇ ಅನಾವರಣಗೊಂಡಿದೆ. ಲಕ್ಷ್ಮೀನಾರಾಯಣ ಅವರ ಕಾರ್ಯದಕ್ಷತೆ<br />ಯಿಂದ ಗ್ರಂಥಾಲಯಗಳು ಹೇಗೆ ಓದುಗ ಸ್ನೇಹಿಯಾಗಿ ಮಾರ್ಪಟ್ಟವು ಎನ್ನುವುದರ ಚಿತ್ರಣವನ್ನು ಇಲ್ಲಿನ ಲೇಖನಗಳು ಸವಿವರ<br />ವಾಗಿ ಕಟ್ಟಿಕೊಟ್ಟಿವೆ. ವಿದ್ಯಾರ್ಥಿಗಳ ಜ್ಞಾನದ ಹಸಿವು ನೀಗಿಸಲು ಅಧ್ಯಾಪಕರು ಹೇಗೆ ಪರಿಶ್ರಮ ಹಾಕುತ್ತಿದ್ದರು ಎನ್ನುವ ಸಂಗತಿ<br />ಇಲ್ಲಿನ ಪ್ರತೀ ಬರಹದಲ್ಲಿ ದಾಖಲಾಗಿದೆ.</p>.<p>ಸ್ವಯಂಬಂಧ, ವ್ಯಕ್ತಿಬಂಧ, ಗ್ರಂಥಬಂಧ ಹಾಗೂ ಸಂಕೀರ್ಣಬಂಧ– ಹೀಗೆ ಈ ಕೃತಿಯ ಲೇಖನಗಳನ್ನು ನಾಲ್ಕು ಸ್ಥೂಲ ಭಾಗಗಳಾಗಿ ವಿಂಗಡಿಸಲಾಗಿದೆ. ಅಗಲಿಕೆಯ ಮುನ್ನ ಲಕ್ಷ್ಮೀನಾರಾಯಣ ಅವರು ಬರೆದ ಅಪರೂಪದ ಸ್ವ–ದರ್ಶನ ಬರಹವನ್ನೂ ಇಲ್ಲಿನ ಲೇಖನ ಮಾಲೆಯಲ್ಲಿ ಪೋಣಿಸಲಾಗಿದೆ.</p>.<p>ಗ್ರಂಥಾಲಯ ಸಂಬಂಧವಾದ ಕಾರ್ಯಕಲಾಪದ ಎಷ್ಟೋ ಸಂಗತಿಗಳನ್ನು ವಸ್ತುನಿಷ್ಠವಾಗಿ ಅವರು ಓದುಗರ ಮುಂದಿಟ್ಟಿದ್ದಾರೆ. ಈ ಗ್ರಂಥಾಲಯ ಅಧಿಕಾರಿಯ ಗ್ರಂಥಪ್ರೀತಿ, ಜ್ಞಾನಶೀಲತೆ ಹಾಗೂ ಶಿಸ್ತಿನ ವ್ಯಕ್ತಿತ್ವವನ್ನು ಅವರನ್ನು ಹತ್ತಿರದಿಂದ ಬಲ್ಲವರು ಕಂಡರಿಸಿದ್ದಾರೆ. ಸಂಸ್ಮರಣೆ ನೆಪದಲ್ಲಿ ಗ್ರಂಥಾಲಯದ ನಾನಾ ಮಗ್ಗಲುಗಳ ಕುರಿತು ಚರ್ಚಿಸಿರುವ ಬರಹಗಳು ಇದರಲ್ಲಿದ್ದು, ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ರಂಥಲಕ್ಷ್ಮೀ</strong><br /><strong>ಎಸ್.ಎನ್. ಲಕ್ಷ್ಮೀನಾರಾಯಣ ಅವರ ಸಂಸ್ಮರಣ ಗ್ರಂಥ</strong><br /><strong>ಪ್ರಧಾನ ಸಂಪಾದಕ</strong>: ಡಾ. ಸಿ.ಪಿ. ಕೃಷ್ಣಕುಮಾರ್<br /><strong>ಸಂಪಾದಕ:</strong> ಡಾ. ಎಸ್.ಟಿ. ರಾಮಚಂದ್ರ<br /><strong>ಪ್ರ:</strong> ಮಾನಸ ಪ್ರಕಾಶನ<br /><strong>ಸಂ:</strong> 9945988388</p>.<p>**<br />ಗ್ರಂಥಪಾಲಕರಾಗಿ, ಗ್ರಂಥಾಲಯ ಅಧಿಕಾರಿಯಾಗಿ ‘ನುಡಿ ಸೇವೆ’ ಮಾಡಿದ ಎಸ್.ಎನ್. ಲಕ್ಷ್ಮೀನಾರಾಯಣ ಅವರ ಸಂಸ್ಮರಣಾ ಗ್ರಂಥ ‘ಗ್ರಂಥಲಕ್ಷ್ಮೀ’. ಅಭಿನಂದನಾ ಗ್ರಂಥವಾಗಿ ರೂಪುಗೊಳ್ಳುತ್ತಿದ್ದ ಈ ಕೃತಿ, ಆ ಹಂತದಲ್ಲಿಯೇ ಲಕ್ಷ್ಮೀನಾರಾಯಣ ಅವರು ಅಗಲಿದ್ದರಿಂದ ಸಂಸ್ಮರಣಾ ಗ್ರಂಥದ ಸ್ವರೂಪ ತಾಳಿ, ಓದುಗರ ಕೈಸೇರಿದೆ. ಗ್ರಂಥಾಲಯ ಅಧಿಕಾರಿಯ ಸಂಸ್ಮರಣೆ ಗ್ರಂಥ ಇದಾಗಿರುವುದರಿಂದ ಸಹಜವಾಗಿಯೇ ಇಲ್ಲಿ ಪುಸ್ತಕ ಪ್ರಪಂಚವೇ ಅನಾವರಣಗೊಂಡಿದೆ. ಲಕ್ಷ್ಮೀನಾರಾಯಣ ಅವರ ಕಾರ್ಯದಕ್ಷತೆ<br />ಯಿಂದ ಗ್ರಂಥಾಲಯಗಳು ಹೇಗೆ ಓದುಗ ಸ್ನೇಹಿಯಾಗಿ ಮಾರ್ಪಟ್ಟವು ಎನ್ನುವುದರ ಚಿತ್ರಣವನ್ನು ಇಲ್ಲಿನ ಲೇಖನಗಳು ಸವಿವರ<br />ವಾಗಿ ಕಟ್ಟಿಕೊಟ್ಟಿವೆ. ವಿದ್ಯಾರ್ಥಿಗಳ ಜ್ಞಾನದ ಹಸಿವು ನೀಗಿಸಲು ಅಧ್ಯಾಪಕರು ಹೇಗೆ ಪರಿಶ್ರಮ ಹಾಕುತ್ತಿದ್ದರು ಎನ್ನುವ ಸಂಗತಿ<br />ಇಲ್ಲಿನ ಪ್ರತೀ ಬರಹದಲ್ಲಿ ದಾಖಲಾಗಿದೆ.</p>.<p>ಸ್ವಯಂಬಂಧ, ವ್ಯಕ್ತಿಬಂಧ, ಗ್ರಂಥಬಂಧ ಹಾಗೂ ಸಂಕೀರ್ಣಬಂಧ– ಹೀಗೆ ಈ ಕೃತಿಯ ಲೇಖನಗಳನ್ನು ನಾಲ್ಕು ಸ್ಥೂಲ ಭಾಗಗಳಾಗಿ ವಿಂಗಡಿಸಲಾಗಿದೆ. ಅಗಲಿಕೆಯ ಮುನ್ನ ಲಕ್ಷ್ಮೀನಾರಾಯಣ ಅವರು ಬರೆದ ಅಪರೂಪದ ಸ್ವ–ದರ್ಶನ ಬರಹವನ್ನೂ ಇಲ್ಲಿನ ಲೇಖನ ಮಾಲೆಯಲ್ಲಿ ಪೋಣಿಸಲಾಗಿದೆ.</p>.<p>ಗ್ರಂಥಾಲಯ ಸಂಬಂಧವಾದ ಕಾರ್ಯಕಲಾಪದ ಎಷ್ಟೋ ಸಂಗತಿಗಳನ್ನು ವಸ್ತುನಿಷ್ಠವಾಗಿ ಅವರು ಓದುಗರ ಮುಂದಿಟ್ಟಿದ್ದಾರೆ. ಈ ಗ್ರಂಥಾಲಯ ಅಧಿಕಾರಿಯ ಗ್ರಂಥಪ್ರೀತಿ, ಜ್ಞಾನಶೀಲತೆ ಹಾಗೂ ಶಿಸ್ತಿನ ವ್ಯಕ್ತಿತ್ವವನ್ನು ಅವರನ್ನು ಹತ್ತಿರದಿಂದ ಬಲ್ಲವರು ಕಂಡರಿಸಿದ್ದಾರೆ. ಸಂಸ್ಮರಣೆ ನೆಪದಲ್ಲಿ ಗ್ರಂಥಾಲಯದ ನಾನಾ ಮಗ್ಗಲುಗಳ ಕುರಿತು ಚರ್ಚಿಸಿರುವ ಬರಹಗಳು ಇದರಲ್ಲಿದ್ದು, ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>