ಶ್ಯಾಮಲಾದೇವಿ ಮತ್ತು ಅವರ ಪತಿ ಆರ್.ಪಿ. ಬೆಳಗಾಂವ್ಕರ್ ಎಂದು ಹೆಸರಾಗಿದ್ದ ರಾಮಚಂದ್ರರಾಯರು. ಇವರಿಬ್ಬರ ಬದುಕು ಮತ್ತು ಬರಹ ಆಗಿನ ಕಾಲದಲ್ಲಿ ಗಾಢವಾಗಿದ್ದ ಸಾಮಾಜಿಕ, ಜಾತಿ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಕ್ರಿಯಾಶೀಲರಾಗಿದ್ದ ಶ್ಯಾಮಲಾದೇವಿ ಯಾವೆಲ್ಲ ಕಾರಣಗಳಿಗೆ ಎಲೆಮರೆಯ ಕಾಯಿಯಂತೆ ಉಳಿದರು ಎಂಬುದನ್ನು ಈ ಪುಸ್ತಕ ತೆರೆದಿಟ್ಟಿದೆ.