ಐದು ಮುಖ್ಯ ಶೀರ್ಷಿಕೆಗಳ ಅಡಿಯಲ್ಲಿ ಬರಹಗಳನ್ನು ವಿಂಗಡಣೆ ಮಾಡಲಾಗಿದ್ದು, ಅಧ್ಯಯನದ ಹಾದಿಯನ್ನು ಸಲೀಸಾಗಿಸಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಜನಪದದ ನೆಲೆಗಟ್ಟಿನಲ್ಲಿ ನೋಡುವ ಪ್ರಯತ್ನ ಅಪೂರ್ವವಾದುದು. ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ನೆಲೆಗಳನ್ನು ಕೃತಿಯಲ್ಲಿ ತುಂಬಾ ದೀರ್ಘವಾಗಿ ಚರ್ಚಿಸಲಾಗಿದೆ. ಆದಿಮರು, ಸಿದ್ಧರು, ನಾಥರು, ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ ಎಲ್ಲರೂ ಇಲ್ಲಿ ಸಂಗಮಿಸಿದ್ದಾರೆ.