<p>ಕಾರ್ತೀಕದಮಾವಾಸ್ಯೆ ಸೂರ್ಯ ಕರಗಿದ ಮೇಲೆ</p>.<p>ಬಾ ಬಾಪು ಮಹದೇವರ ಆಶ್ರಮಕೆ ಕಾಲಿಟ್ಟೆ</p>.<p>ದುಧಾ ದಾನಿ ಮಗನರು ನೆಟ್ಟ ನೆರಳಡಿ ಕೂತೆ</p>.<p>ಜನದೇವರ ಹೆಜ್ಜೆಗುರುತು ಕದ್ದಿಂಗಳಲು ಕಂಡೆ</p>.<p>ಅದೇನದೇನು ಚಂದವೋ, ಅದೇನು ಹರಿತ ನೋಟವೋ!</p>.<p>ಇರುಳ ಮೌನ ಸೀಳುತ್ತ ಗೂಬೆ ಕವಿ ಹಾರಿ ಬಂತು</p>.<p>ಗುಹಾ ನಿಯೋಗಿ ಜೀವವದು ವಿರಾಮವಿರದ ಒಳಗಣ್ಣು</p>.<p>ಸುತ್ತಮುತ್ತ ಗಸ್ತುನೋಟ ಹರಿಸಿ ಗತ್ತು ಇಳಿಸಿಕೊಂಡು</p>.<p>ಕಳೆದ ಬಂಧು ದೊರೆತ ಖುಷಿಗೆ ಮಾತಿನವರೆ ಸುಲಿಯಿತು:</p>.<p>`ಬರಗಾಲವಿಲ್ಲಿ ಹೊಸದಲ್ಲ, ಕೇಳಿಲ್ಲಿ, ಕನಸುಗಣ್ಣೇ</p>.<p>ನೂರಕಿಪ್ಪತ್ತೇ ವರುಷ ಮಳೆಯ ವರವೀ ನಾಡಿಗೆ</p>.<p>ಮಳೆಯಿರದೆ ಜಲಕಣ್ಣು ಒಣಗಿ ಇಂಗಿ ನೀರಿರದೆ</p>.<p>ಡೌಗಿ ಬರ ಆಗಲೀಗ ಮೇಲೆರಗುವುದೂ ಇದೆ</p>.<p>ಬರಕೆ ಬೆದರಿದವರಲ್ಲ ಭೂಕಂಪಕಂಜಿದವರಲ್ಲ</p>.<p>ನೀರ ಜಾಣಜಾಣೆಯರು ರಣ ನೆಲದ ಕಚ್ಛರು</p>.<p>ನೆಲದಾಳದ ಒರತೆಗಣ್ಣು ಬೆಂಕಿಯನ್ನುಗುಳುತಿರಲು</p>.<p>ಕೃಷ್ಣ ಕ್ರಿಸ್ತ ನಬಿ ಜಿನರೆ ಜೀವಕೆ ತಂಪೆರೆವರು</p>.<p>ಕವಿಯೇ ನೀನು? ಎಚ್ಚರ! ಕವಿ ಹೆಣ್ಣೇ? ಎಚ್ಚರ!</p>.<p>ಕಂಡು, ಕೇಳಿ, ಅತ್ತರಾಗಲಿಲ್ಲ ಇರಲಿ ಎಚ್ಚರ</p>.<p>ಲೆಕ್ಕವಿಲ್ಲ ಹಸಿದವರ ಸಾವುನೋವು ದುಗುಡ ದುಃಖ</p>.<p>ಕಣ್ಣು ತಿವಿವ ಉರಿಸಂಕಟ ಕಾಣದೆಂದರಾಶ್ಚರ್ಯ!</p>.<p>ನಿನ್ನ ಮೌನ ನಿನ್ನ ನೆತ್ತರಿಂದ ನಾಳೆ ಮೀಯುವುದು</p>.<p>ಉಂಡುತಿಂದು ಗೆಂಡೆ ರೋಗ, ಕವಿಗೆ ಬಂದಿತೇಕಿಂದು?</p>.<p>ಬೆಲ್ಲ ಬಂತು ಕೇರಿಗೆ ಜೊತೆಗೆ ವಿಷವೂ ನುಸುಳಿದೆ</p>.<p>ವಿಷವಾವುದು ಕಹಿ ಯಾವುದು ಜಿಹ್ವೆ ರುಚಿಯ ಮರೆತಿದೆ</p>.<p>ಬಾಯಲಿಹುದು ಬೆಲ್ಲವಲ್ಲ ಸಿಹಿ ಸವರಿದ ಕಲ್ಲಷ್ಟೇ</p>.<p>ಸವಿ ಕರಗಿ ಇಳಿದ ಮೇಲೆ ಸುಲಿಯಲಿದೆ ನಾಲಿಗೆ</p>.<p>ಎದ್ದೇಳು ಕವಿ ಎಚ್ಚರ, ಎಬ್ಬಿಸು ಮೈ ಮರೆತವರ</p>.<p>ಪ್ರಾಣ ಹೋದರೂನು ಮಾತು ಅಡವಿಡದಿರು, ಎಚ್ಚರ</p>.<p>ಎವೆಯಿಕ್ಕುವುದರಲ್ಲಿ ಸಗ್ಗಕೆ ಕವಿ ಒಯ್ಯುವರು</p>.<p>ಹೂವರಳಿಸಲಾರರು ಮನ ಅರಳಿಸಬಲ್ಲರು</p>.<p>ಸುಖ ಶವಾಸನದಿ ಕವಿಗಳೇಕೆ ಪವಡಿಸಿರುವರು?</p>.<p>ಎದೆ ಕವಿತೆ ಕಷ್ಟದಲ್ಲಿದೆ, ಕವಿ ಜನರ ಎಚ್ಚರಿಸು</p>.<p>ಕವಿತೆ ಕದನಪ್ರೇಮಿಯಲ್ಲ, ನೆತ್ತರಲಿ ತೊಯ್ದು ಬರುವುದಿಲ್ಲ</p>.<p>ಪ್ರೇಮಗಂಧ ಬೆವರ ಗಂಧ ಮೈತ್ರಿ ಗಂಧ ಕವಿತೆಗೆ</p>.<p>ಸೇಡಿನಿಂದ ಹೊಸತೆಂದೂ ಹುಟ್ಟಲಾರದು ಕವಿಯೆ</p>.<p>ಹಾಡು ಹಾಡಿ ಅರುಹು ನಿಜವ ಕುರುಡ ಜನ ಸಮೂಹಕೆ</p>.<p>ಎಚ್ಚರ ಕವಿ ಎಚ್ಚರ! ಎದೆ ನುಡಿಯು ಕಷ್ಟದಲ್ಲಿದೆ</p>.<p>ಕಂಡೂ ಸುಮ್ಮಗಿರುವೆಯೇಕೆ? ಬಳಗ ಕಷ್ಟದಲ್ಲಿದೆ</p>.<p>ಒರೆಯ ಕತ್ತಿಯಲ್ಲ ಮಾತು ಎದೆಗುರಾಣಿಯಲ್ಲ ಮಾತು</p>.<p>ಎದೆಯಲರಳಿದಂಥ ಸಹಜ ಹೂವಿನಂತೆ ಕವಿ ಮಾತು</p>.<p>ಮಾತು ದುಃಖ ಅರಿವ ದಾರಿ, ದುಃಖವೇ ಶಕ್ತಿ ನೆನಪಿಡು</p>.<p>ದುಃಖ ಸಹಿಸು, ಎಂದಿಗೂ ಉಂಡ ದುಃಖ ಮರೆಯದಿರು</p>.<p>ದುಃಖವನೆ ಬದುಕಿ ಬಿಡು, ಸುಮ್ಮನೆಂದು ಇರದಿರು</p>.<p>ಕವಿತೆಯೇ ನಿತ್ಯ ಸತ್ಯ, ದುಃಖ ನುಂಗಿ ಬರೆದುಬಿಡು’</p>.<p>ಬಿರುಗಣ್ಣ ಚೆಲುವ ಗೂಬೆಯೇ, ನಿನ್ನ ಕಾಲಗ್ಯಾನಕೆ ಶರಣು</p>.<p>ಇರುಳು ಕಾಂಬ ಹಕ್ಕಿಯೇ, ನಿನ್ನ ಕಣ್ಣ ಶಕುತಿಗೆ ಶರಣು</p>.<p>ಸಬರಮತಿಯ ಸಾಕ್ಷಿಯಾಗಿ, ಕೊಡುವೆನು ನಿನಗೀ ಮಾತು</p>.<p>ಇಂದಿನಿಂದ ಕಂಡುದನ್ನು ಹೇಳದೆ ಇರಲಾರೆನು..</p>.<p><strong>(ಸದ್ಯವೇ ಬಿಡುಗಡೆಯಾಗಲಿರುವ ಎಚ್.ಎಸ್. ಅನುಪಮಾ ಅವರ ‘ಸಬರಮತಿ’ ನೀಳ್ಗವಿತೆಯ ಒಂದು ಭಾಗ)</strong></p>.<p><strong>ರೇಖಾ ಚಿತ್ರ: ಡಾ. ಕೃಷ್ಣ ಗಿಳಿಯಾರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ತೀಕದಮಾವಾಸ್ಯೆ ಸೂರ್ಯ ಕರಗಿದ ಮೇಲೆ</p>.<p>ಬಾ ಬಾಪು ಮಹದೇವರ ಆಶ್ರಮಕೆ ಕಾಲಿಟ್ಟೆ</p>.<p>ದುಧಾ ದಾನಿ ಮಗನರು ನೆಟ್ಟ ನೆರಳಡಿ ಕೂತೆ</p>.<p>ಜನದೇವರ ಹೆಜ್ಜೆಗುರುತು ಕದ್ದಿಂಗಳಲು ಕಂಡೆ</p>.<p>ಅದೇನದೇನು ಚಂದವೋ, ಅದೇನು ಹರಿತ ನೋಟವೋ!</p>.<p>ಇರುಳ ಮೌನ ಸೀಳುತ್ತ ಗೂಬೆ ಕವಿ ಹಾರಿ ಬಂತು</p>.<p>ಗುಹಾ ನಿಯೋಗಿ ಜೀವವದು ವಿರಾಮವಿರದ ಒಳಗಣ್ಣು</p>.<p>ಸುತ್ತಮುತ್ತ ಗಸ್ತುನೋಟ ಹರಿಸಿ ಗತ್ತು ಇಳಿಸಿಕೊಂಡು</p>.<p>ಕಳೆದ ಬಂಧು ದೊರೆತ ಖುಷಿಗೆ ಮಾತಿನವರೆ ಸುಲಿಯಿತು:</p>.<p>`ಬರಗಾಲವಿಲ್ಲಿ ಹೊಸದಲ್ಲ, ಕೇಳಿಲ್ಲಿ, ಕನಸುಗಣ್ಣೇ</p>.<p>ನೂರಕಿಪ್ಪತ್ತೇ ವರುಷ ಮಳೆಯ ವರವೀ ನಾಡಿಗೆ</p>.<p>ಮಳೆಯಿರದೆ ಜಲಕಣ್ಣು ಒಣಗಿ ಇಂಗಿ ನೀರಿರದೆ</p>.<p>ಡೌಗಿ ಬರ ಆಗಲೀಗ ಮೇಲೆರಗುವುದೂ ಇದೆ</p>.<p>ಬರಕೆ ಬೆದರಿದವರಲ್ಲ ಭೂಕಂಪಕಂಜಿದವರಲ್ಲ</p>.<p>ನೀರ ಜಾಣಜಾಣೆಯರು ರಣ ನೆಲದ ಕಚ್ಛರು</p>.<p>ನೆಲದಾಳದ ಒರತೆಗಣ್ಣು ಬೆಂಕಿಯನ್ನುಗುಳುತಿರಲು</p>.<p>ಕೃಷ್ಣ ಕ್ರಿಸ್ತ ನಬಿ ಜಿನರೆ ಜೀವಕೆ ತಂಪೆರೆವರು</p>.<p>ಕವಿಯೇ ನೀನು? ಎಚ್ಚರ! ಕವಿ ಹೆಣ್ಣೇ? ಎಚ್ಚರ!</p>.<p>ಕಂಡು, ಕೇಳಿ, ಅತ್ತರಾಗಲಿಲ್ಲ ಇರಲಿ ಎಚ್ಚರ</p>.<p>ಲೆಕ್ಕವಿಲ್ಲ ಹಸಿದವರ ಸಾವುನೋವು ದುಗುಡ ದುಃಖ</p>.<p>ಕಣ್ಣು ತಿವಿವ ಉರಿಸಂಕಟ ಕಾಣದೆಂದರಾಶ್ಚರ್ಯ!</p>.<p>ನಿನ್ನ ಮೌನ ನಿನ್ನ ನೆತ್ತರಿಂದ ನಾಳೆ ಮೀಯುವುದು</p>.<p>ಉಂಡುತಿಂದು ಗೆಂಡೆ ರೋಗ, ಕವಿಗೆ ಬಂದಿತೇಕಿಂದು?</p>.<p>ಬೆಲ್ಲ ಬಂತು ಕೇರಿಗೆ ಜೊತೆಗೆ ವಿಷವೂ ನುಸುಳಿದೆ</p>.<p>ವಿಷವಾವುದು ಕಹಿ ಯಾವುದು ಜಿಹ್ವೆ ರುಚಿಯ ಮರೆತಿದೆ</p>.<p>ಬಾಯಲಿಹುದು ಬೆಲ್ಲವಲ್ಲ ಸಿಹಿ ಸವರಿದ ಕಲ್ಲಷ್ಟೇ</p>.<p>ಸವಿ ಕರಗಿ ಇಳಿದ ಮೇಲೆ ಸುಲಿಯಲಿದೆ ನಾಲಿಗೆ</p>.<p>ಎದ್ದೇಳು ಕವಿ ಎಚ್ಚರ, ಎಬ್ಬಿಸು ಮೈ ಮರೆತವರ</p>.<p>ಪ್ರಾಣ ಹೋದರೂನು ಮಾತು ಅಡವಿಡದಿರು, ಎಚ್ಚರ</p>.<p>ಎವೆಯಿಕ್ಕುವುದರಲ್ಲಿ ಸಗ್ಗಕೆ ಕವಿ ಒಯ್ಯುವರು</p>.<p>ಹೂವರಳಿಸಲಾರರು ಮನ ಅರಳಿಸಬಲ್ಲರು</p>.<p>ಸುಖ ಶವಾಸನದಿ ಕವಿಗಳೇಕೆ ಪವಡಿಸಿರುವರು?</p>.<p>ಎದೆ ಕವಿತೆ ಕಷ್ಟದಲ್ಲಿದೆ, ಕವಿ ಜನರ ಎಚ್ಚರಿಸು</p>.<p>ಕವಿತೆ ಕದನಪ್ರೇಮಿಯಲ್ಲ, ನೆತ್ತರಲಿ ತೊಯ್ದು ಬರುವುದಿಲ್ಲ</p>.<p>ಪ್ರೇಮಗಂಧ ಬೆವರ ಗಂಧ ಮೈತ್ರಿ ಗಂಧ ಕವಿತೆಗೆ</p>.<p>ಸೇಡಿನಿಂದ ಹೊಸತೆಂದೂ ಹುಟ್ಟಲಾರದು ಕವಿಯೆ</p>.<p>ಹಾಡು ಹಾಡಿ ಅರುಹು ನಿಜವ ಕುರುಡ ಜನ ಸಮೂಹಕೆ</p>.<p>ಎಚ್ಚರ ಕವಿ ಎಚ್ಚರ! ಎದೆ ನುಡಿಯು ಕಷ್ಟದಲ್ಲಿದೆ</p>.<p>ಕಂಡೂ ಸುಮ್ಮಗಿರುವೆಯೇಕೆ? ಬಳಗ ಕಷ್ಟದಲ್ಲಿದೆ</p>.<p>ಒರೆಯ ಕತ್ತಿಯಲ್ಲ ಮಾತು ಎದೆಗುರಾಣಿಯಲ್ಲ ಮಾತು</p>.<p>ಎದೆಯಲರಳಿದಂಥ ಸಹಜ ಹೂವಿನಂತೆ ಕವಿ ಮಾತು</p>.<p>ಮಾತು ದುಃಖ ಅರಿವ ದಾರಿ, ದುಃಖವೇ ಶಕ್ತಿ ನೆನಪಿಡು</p>.<p>ದುಃಖ ಸಹಿಸು, ಎಂದಿಗೂ ಉಂಡ ದುಃಖ ಮರೆಯದಿರು</p>.<p>ದುಃಖವನೆ ಬದುಕಿ ಬಿಡು, ಸುಮ್ಮನೆಂದು ಇರದಿರು</p>.<p>ಕವಿತೆಯೇ ನಿತ್ಯ ಸತ್ಯ, ದುಃಖ ನುಂಗಿ ಬರೆದುಬಿಡು’</p>.<p>ಬಿರುಗಣ್ಣ ಚೆಲುವ ಗೂಬೆಯೇ, ನಿನ್ನ ಕಾಲಗ್ಯಾನಕೆ ಶರಣು</p>.<p>ಇರುಳು ಕಾಂಬ ಹಕ್ಕಿಯೇ, ನಿನ್ನ ಕಣ್ಣ ಶಕುತಿಗೆ ಶರಣು</p>.<p>ಸಬರಮತಿಯ ಸಾಕ್ಷಿಯಾಗಿ, ಕೊಡುವೆನು ನಿನಗೀ ಮಾತು</p>.<p>ಇಂದಿನಿಂದ ಕಂಡುದನ್ನು ಹೇಳದೆ ಇರಲಾರೆನು..</p>.<p><strong>(ಸದ್ಯವೇ ಬಿಡುಗಡೆಯಾಗಲಿರುವ ಎಚ್.ಎಸ್. ಅನುಪಮಾ ಅವರ ‘ಸಬರಮತಿ’ ನೀಳ್ಗವಿತೆಯ ಒಂದು ಭಾಗ)</strong></p>.<p><strong>ರೇಖಾ ಚಿತ್ರ: ಡಾ. ಕೃಷ್ಣ ಗಿಳಿಯಾರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>