ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಜಿ. ಸಿದ್ದರಾಮಯ್ಯ ಬರೆದ ಕವಿತೆ: ಗಂಗೆ ಅಳುತ್ತಿದ್ದಾಳೆ

Last Updated 5 ಜೂನ್ 2021, 23:32 IST
ಅಕ್ಷರ ಗಾತ್ರ

ಗಂಗೆ ಅಳುತ್ತಿದ್ದಾಳೆ

ಇದುವರೆಗೆ ಬೆಂದಹೆಣಗಳ ಬೂದಿಹೊತ್ತು

ಸ್ವರ್ಗ ಕಾಣಿಸುವ ನಂಬಿಕೆಯಲ್ಲಿ ಹರಿಯುತ್ತಿದ್ದವಳು

ಆಗ ಸಾವಿಗೊಂದು ಘನತೆಯಿತ್ತು

ಅಳುವಿಗೊಂದು ಅರ್ಥವಿತ್ತು

ತನ್ನೆದೆಯಲ್ಲಿ ತಾನು ಹೊತ್ತು ಸಾಗುತ್ತಿರುವ

ದಿಕ್ಕಿದ್ದೂ ದಿಕ್ಕಿಲ್ಲದ ಹೆಣಗಳಿಗಾಗಿ

ಅಳುವವರಿದ್ದೂ ಅಳು ಸತ್ತವರ ಅಳುವಿಗಾಗಿ

ಗಂಗೆ ಕೂಗಿ ಕೂಗಿ ಕರೆಯುತ್ತಿದ್ದಾಳೆ

ತನ್ನೆದೆಯಲ್ಲಿ ಆಗ ಹರಿಯುತ್ತಿದ್ದ

ಕೊಳೆ ತೊಳೆಯಲು ಬಂದವರನ್ನು

ಈಗ ಹೆಣಗಳ ಬಣವೆ ಮಾಡಿದ್ದಕ್ಕೆ ತನ್ನೆದೆಗೂಡನ್ನು


ಉಪಸಂಹಾರ

???

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT