<p><strong>ಚಿಂತಾಮಣಿ: </strong>ತಾಲ್ಲೂಕಿನ ವಿಪತ್ತು ನಿರ್ವಹಣೆಗೆ ಇರುವ ಅಗ್ನಿಶಾಮಕ ಠಾಣೆಗೆ ಮೂರು ತಿಂಗಳಿನಿಂದ ದೂರವಾಣಿ ಸಂಪರ್ಕ ಇಲ್ಲದಂತಾಗಿದೆ. ಕಾರಣ ಕಾಮಗಾರಿಯೊಂದರ ಕೆಲಸದಲ್ಲಿ ತುಂಡಾದ ಬಿಎಸ್ಎನ್ಎಲ್ ಕೇಬಲ್ ಅನ್ನು ಇಂದಿಗೂ ದುರಸ್ತಿಗೊಳಿಸದಿರುವುದು.<br /> <br /> ಸುಮಾರು ಮೂರು ತಿಂಗಳು ಕಳೆದರೂ ಬಿಎಸ್ಎನ್ಎಲ್ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಅಗ್ನಿಶಾಮಕ ಠಾಣೆ ಅಧಿಕಾರಿಗಳು.ಕರಿಯಪ್ಪಲ್ಲಿ ಸಮೀಪ ಒಳಚರಂಡಿ ಕಾಮಗಾರಿ ನಡೆಯುವ ಹಂತದಲ್ಲಿ 200 ಅಡಿ ಕೇಬಲ್ ತುಂಡಾಗಿದೆ.<br /> <br /> ಇದಕ್ಕೆ ಗುತ್ತಿಗೆದಾರರು ಹೊಣೆಗಾರರಾಗಿದ್ದಾರೆ. ಸುಮಾರು 80 ಸಾವಿರ ದಂಡ ತುಂಬಿದರೆ ಇದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಗುತ್ತಿಗೆದಾರರ ಹಾಗೂ ಬಿಎಸ್ಎನ್ಎಲ್ ನಡುವಿನ ಕಿತ್ತಾಟದಿಂದ ಇಲಾಖೆಗೆ ದೂರವಾಣಿ ಸಂಪರ್ಕ ಕಡಿತಗೊಂಡಿದೆ ಎನ್ನಲಾಗುತ್ತಿದೆ.<br /> <br /> ಬೇಸಿಗೆ ಆಗಮನದಿಂದ ಅಗ್ನಿ ಅನಾಹುತಗಳು ಹೆಚ್ಚಾಗಿವೆ. ಆದರೆ ದೂರವಾಣಿ ಸಂಪರ್ಕ ಇಲ್ಲದಿರುವುದರಿಂದ ಜನತೆಗೆ ತೊಂದರೆಯಾಗಿದೆ. ಕೂಡಲೇ ಇದನ್ನು ಸರಿ ಪಡಿಸಬೇಕು ಎನ್ನುವುದು ಅಧಿಕಾರಿಗಳ ಒತ್ತಾಯ.<br /> <br /> ತಾಲ್ಲೂಕಿನಲ್ಲಿ ಏನಾದರೂ ಅಗ್ನಿ ಅನಾಹುತಗಳು ಸಂಭವಿಸಿದರೆ ಕೂಡಲೇ ಮೊಬೈಲ್ ಸಂಖ್ಯೆ 9901426323 ಅಥವಾ 903586612 ಸಂಪರ್ಕಿಸುವಂತೆ ಠಾಣೆ ಅಧಿಕಾರಿ ಪಿ.ಎಂ.ನಾಗೇಶ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ: </strong>ತಾಲ್ಲೂಕಿನ ವಿಪತ್ತು ನಿರ್ವಹಣೆಗೆ ಇರುವ ಅಗ್ನಿಶಾಮಕ ಠಾಣೆಗೆ ಮೂರು ತಿಂಗಳಿನಿಂದ ದೂರವಾಣಿ ಸಂಪರ್ಕ ಇಲ್ಲದಂತಾಗಿದೆ. ಕಾರಣ ಕಾಮಗಾರಿಯೊಂದರ ಕೆಲಸದಲ್ಲಿ ತುಂಡಾದ ಬಿಎಸ್ಎನ್ಎಲ್ ಕೇಬಲ್ ಅನ್ನು ಇಂದಿಗೂ ದುರಸ್ತಿಗೊಳಿಸದಿರುವುದು.<br /> <br /> ಸುಮಾರು ಮೂರು ತಿಂಗಳು ಕಳೆದರೂ ಬಿಎಸ್ಎನ್ಎಲ್ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಅಗ್ನಿಶಾಮಕ ಠಾಣೆ ಅಧಿಕಾರಿಗಳು.ಕರಿಯಪ್ಪಲ್ಲಿ ಸಮೀಪ ಒಳಚರಂಡಿ ಕಾಮಗಾರಿ ನಡೆಯುವ ಹಂತದಲ್ಲಿ 200 ಅಡಿ ಕೇಬಲ್ ತುಂಡಾಗಿದೆ.<br /> <br /> ಇದಕ್ಕೆ ಗುತ್ತಿಗೆದಾರರು ಹೊಣೆಗಾರರಾಗಿದ್ದಾರೆ. ಸುಮಾರು 80 ಸಾವಿರ ದಂಡ ತುಂಬಿದರೆ ಇದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಗುತ್ತಿಗೆದಾರರ ಹಾಗೂ ಬಿಎಸ್ಎನ್ಎಲ್ ನಡುವಿನ ಕಿತ್ತಾಟದಿಂದ ಇಲಾಖೆಗೆ ದೂರವಾಣಿ ಸಂಪರ್ಕ ಕಡಿತಗೊಂಡಿದೆ ಎನ್ನಲಾಗುತ್ತಿದೆ.<br /> <br /> ಬೇಸಿಗೆ ಆಗಮನದಿಂದ ಅಗ್ನಿ ಅನಾಹುತಗಳು ಹೆಚ್ಚಾಗಿವೆ. ಆದರೆ ದೂರವಾಣಿ ಸಂಪರ್ಕ ಇಲ್ಲದಿರುವುದರಿಂದ ಜನತೆಗೆ ತೊಂದರೆಯಾಗಿದೆ. ಕೂಡಲೇ ಇದನ್ನು ಸರಿ ಪಡಿಸಬೇಕು ಎನ್ನುವುದು ಅಧಿಕಾರಿಗಳ ಒತ್ತಾಯ.<br /> <br /> ತಾಲ್ಲೂಕಿನಲ್ಲಿ ಏನಾದರೂ ಅಗ್ನಿ ಅನಾಹುತಗಳು ಸಂಭವಿಸಿದರೆ ಕೂಡಲೇ ಮೊಬೈಲ್ ಸಂಖ್ಯೆ 9901426323 ಅಥವಾ 903586612 ಸಂಪರ್ಕಿಸುವಂತೆ ಠಾಣೆ ಅಧಿಕಾರಿ ಪಿ.ಎಂ.ನಾಗೇಶ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>