<p>ಆನೇಕಲ್: ತ್ಯಾಜ್ಯ ವಸ್ತುಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಅತ್ತಿಬೆಲೆ-ಸರ್ಜಾಪುರ ರಸ್ತೆಯಲ್ಲಿ ಬುಧವಾರ ವಿದ್ಯುತ್ ತಂತಿ ತಗುಲಿ ಸಂಪೂರ್ಣ ದಹನಗೊಂಡ ಘಟನೆ ಬುಧವಾರ ಸಂಭವಿಸಿತು.<br /> <br /> ಅತ್ತಿಬೆಲೆಯಿಂದ ಸರ್ಜಾಪುರದ ಕಡೆ ಹೊರಟಿದ್ದ ಲಾರಿಯು ಸಿಂಡಿಕೇಟ್ ಬ್ಯಾಂಕ್ ಸಮೀಪ ಬರುತ್ತಿದ್ದಂತೆಯೇ ರಸ್ತೆಗೆ ಅಡ್ಡಲಾಗಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಲಾರಿಯಲ್ಲಿದ್ದ ವಸ್ತುಗಳು ತಾಗಿದವು. ಇದರಿಂದ ಬೆಂಕಿ ಉಂಟಾಗಿ ಹೊಗೆ ಬರಲು ಪ್ರಾರಂಭಿಸಿತು. ಇದರ ಅರಿವಿಲ್ಲದೆ ಚಾಲಕ ವಾಹನ ಚಾಲನೆಯಲ್ಲಿ ತೊಡಗಿದ್ದ. <br /> <br /> ಲಾರಿಯಿಂದ ಹೊಗೆ ಬರುತ್ತಿರುವುದನ್ನು ಕಂಡ ಜನತೆ ಕೂಗಿಕೊಂಡಾಗ ತಕ್ಷಣವೇ ಆತ ಲಾರಿ ನಿಲ್ಲಿಸಿ ಇಳಿದು ಹೊರಬಂದ. ಬೆಂಕಿಯು ದಿಢೀರನೆ ಇಡೀ ಲಾರಿಯನ್ನೇ ಆವರಿಸಿತು. ಅದರಲ್ಲಿದ್ದ ವಸ್ತುಗಳು ನೋಡ ನೋಡುತ್ತಿದ್ದಂತೆಯೇ ಸುಟ್ಟು ಬೆಂಕಿಗಾಹುತಿಯಾದವು.<br /> <br /> ತಮಿಳುನಾಡಿನ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರು. ಕೆಲ ಸಮಯದಲ್ಲಿ ಕರ್ನಾಟಕದ ಅಗ್ನಿಶಾಮಕ ದಳದವರೂ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕಾರ್ಯದಲ್ಲಿ ಜೊತೆಗೂಡಿ ನಂದಿಸಿದರು. ಆದರೆ ಲಾರಿಯಲ್ಲಿದ್ದ ತ್ಯಾಜ್ಯ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾದವು.<br /> <br /> ರಸ್ತೆ ಮಧ್ಯದಲ್ಲಿಯೇ ಈ ಘಟನೆ ಸಂಭವಿಸಿದ್ದರಿಂದ 1ಗಂಟೆಗೂ ಹೆಚ್ಚು ಕಾಲ ಸರ್ಜಾಪುರ-ಅತ್ತಿಬೆಲೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕುತೂಹಲಗೊಂಡ ಜನರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನೇಕಲ್: ತ್ಯಾಜ್ಯ ವಸ್ತುಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಅತ್ತಿಬೆಲೆ-ಸರ್ಜಾಪುರ ರಸ್ತೆಯಲ್ಲಿ ಬುಧವಾರ ವಿದ್ಯುತ್ ತಂತಿ ತಗುಲಿ ಸಂಪೂರ್ಣ ದಹನಗೊಂಡ ಘಟನೆ ಬುಧವಾರ ಸಂಭವಿಸಿತು.<br /> <br /> ಅತ್ತಿಬೆಲೆಯಿಂದ ಸರ್ಜಾಪುರದ ಕಡೆ ಹೊರಟಿದ್ದ ಲಾರಿಯು ಸಿಂಡಿಕೇಟ್ ಬ್ಯಾಂಕ್ ಸಮೀಪ ಬರುತ್ತಿದ್ದಂತೆಯೇ ರಸ್ತೆಗೆ ಅಡ್ಡಲಾಗಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಲಾರಿಯಲ್ಲಿದ್ದ ವಸ್ತುಗಳು ತಾಗಿದವು. ಇದರಿಂದ ಬೆಂಕಿ ಉಂಟಾಗಿ ಹೊಗೆ ಬರಲು ಪ್ರಾರಂಭಿಸಿತು. ಇದರ ಅರಿವಿಲ್ಲದೆ ಚಾಲಕ ವಾಹನ ಚಾಲನೆಯಲ್ಲಿ ತೊಡಗಿದ್ದ. <br /> <br /> ಲಾರಿಯಿಂದ ಹೊಗೆ ಬರುತ್ತಿರುವುದನ್ನು ಕಂಡ ಜನತೆ ಕೂಗಿಕೊಂಡಾಗ ತಕ್ಷಣವೇ ಆತ ಲಾರಿ ನಿಲ್ಲಿಸಿ ಇಳಿದು ಹೊರಬಂದ. ಬೆಂಕಿಯು ದಿಢೀರನೆ ಇಡೀ ಲಾರಿಯನ್ನೇ ಆವರಿಸಿತು. ಅದರಲ್ಲಿದ್ದ ವಸ್ತುಗಳು ನೋಡ ನೋಡುತ್ತಿದ್ದಂತೆಯೇ ಸುಟ್ಟು ಬೆಂಕಿಗಾಹುತಿಯಾದವು.<br /> <br /> ತಮಿಳುನಾಡಿನ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರು. ಕೆಲ ಸಮಯದಲ್ಲಿ ಕರ್ನಾಟಕದ ಅಗ್ನಿಶಾಮಕ ದಳದವರೂ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕಾರ್ಯದಲ್ಲಿ ಜೊತೆಗೂಡಿ ನಂದಿಸಿದರು. ಆದರೆ ಲಾರಿಯಲ್ಲಿದ್ದ ತ್ಯಾಜ್ಯ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾದವು.<br /> <br /> ರಸ್ತೆ ಮಧ್ಯದಲ್ಲಿಯೇ ಈ ಘಟನೆ ಸಂಭವಿಸಿದ್ದರಿಂದ 1ಗಂಟೆಗೂ ಹೆಚ್ಚು ಕಾಲ ಸರ್ಜಾಪುರ-ಅತ್ತಿಬೆಲೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕುತೂಹಲಗೊಂಡ ಜನರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>