<p><strong>ನವದೆಹಲಿ(ಪಿಟಿಐ):</strong> ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾನು ಹಿಂದೂ ಭಯೋತ್ಪಾದಕರೊಂದಿಗೆ ಹೊಂದಿರುವ ಬಾಂಧವ್ಯವನ್ನು ಮರೆಮಾಚಲಿಕ್ಕಾಗಿಯೇ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ್ ಅವರ ಪ್ರತಿಭಟನೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಿತ್ತು ಎಂದು ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹರಿಹಾಯ್ದಿದ್ದಾರೆ.<br /> <br /> ಆರ್ಎಸ್ಎಸ್ ರೂಪಿಸಿದ್ದ ಯೋಜನೆ ಅನುಸಾರ ಮೂರು ವರ್ಗಗಳಿದ್ದವು. ಅವುಗಳಲ್ಲಿ ಅಣ್ಣಾ ಹಜಾರೆ `ಎ~ ವರ್ಗಕ್ಕೆ ಸೇರಿದ್ದರೆ, ಯೋಗುರು ಬಾಬಾ ರಾಮದೇವ್ `ಬಿ~ ಗುಂಪು ಮತ್ತು ಶ್ರೀ ಶ್ರೀ ರವಿಶಂಕರ್ `ಸಿ~ ಗುಂಪಿನಲ್ದ್ದ್ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.<br /> <br /> ಗುರುವಾರ ಈ ಕುರಿತು ತಮ್ಮ ಟ್ವಿಟ್ಟರ್ನಲ್ಲಿ ವಿವರಿಸಿರುವ ಸಿಂಗ್, ಸಂಘದ ಈ ಯೋಜನಾಬದ್ಧ ಕುತಂತ್ರಗಳು ದೇಶದ ಜನರ ಗಮನವನ್ನು ಬೇರೆಡೆ ತಿರುಗಿಸಲಿಕ್ಕಾಗಿಯೇ ರೂಪಿಸಲಾದದ್ದು ಎಂಬ ಸಂಗತಿ ನಿಸ್ಸಂದೇಹ ಎಂದು ಪ್ರತಿಪಾದಿಸಿದ್ದಾರೆ.<br /> <br /> ಸಂಘ ಪರಿವಾರವು ಮಾಲೆಗಾಂವ್ ಸ್ಫೋಟವನ್ನು ಒಳಗೊಂಡಂತೆ ಮಾದೋಸಾ, ಹೈದರಾಬಾದ್, ಅಜ್ಮೀರ್ ಷರೀಫ್ ಮತ್ತು ಸಮ್ಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣಗಳಲ್ಲಿ ತನ್ನ ನಂಟನ್ನು ಹೊಂದಿತ್ತು. ಈ ನಿಜಾಂಶ ಬಯಲಾಗುತ್ತಿದ್ದಂತೆಯೇ ಆರ್ಎಸ್ಎಸ್ ಇಂತಹ ತಂತ್ರವನ್ನು ಹೆಣೆಯಿತು. ಈ ಮೂಲಕ ಜನರ ಮನಸ್ಸನ್ನು ಭ್ರಷ್ಟಾಚಾರ ಮತ್ತು ಕಪ್ಪು ಹಣದ ಕಡೆ ತಿರುಗಿಸುವ ಪ್ರಯತ್ನ ನಡೆಸಿತು ಎಂದು ಸಿಂಗ್ ಹೇಳಿದ್ದಾರೆ.<br /> <br /> ಅಭಿಪ್ರಾಯ ದಾಖಲಿಸಲು ಸ್ವತಂತ್ರರು: ದಿಗ್ವಿಜಯ್ ಸಿಂಗ್ ಅವರ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶ್ರೀ ಶ್ರೀ ರವಿಶಂಕರ್ ಅವರು, ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಸ್ವತಂತ್ರರಿದ್ದಾರೆ. ಇದಕ್ಕೆ ನಾನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ):</strong> ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾನು ಹಿಂದೂ ಭಯೋತ್ಪಾದಕರೊಂದಿಗೆ ಹೊಂದಿರುವ ಬಾಂಧವ್ಯವನ್ನು ಮರೆಮಾಚಲಿಕ್ಕಾಗಿಯೇ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ್ ಅವರ ಪ್ರತಿಭಟನೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಿತ್ತು ಎಂದು ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹರಿಹಾಯ್ದಿದ್ದಾರೆ.<br /> <br /> ಆರ್ಎಸ್ಎಸ್ ರೂಪಿಸಿದ್ದ ಯೋಜನೆ ಅನುಸಾರ ಮೂರು ವರ್ಗಗಳಿದ್ದವು. ಅವುಗಳಲ್ಲಿ ಅಣ್ಣಾ ಹಜಾರೆ `ಎ~ ವರ್ಗಕ್ಕೆ ಸೇರಿದ್ದರೆ, ಯೋಗುರು ಬಾಬಾ ರಾಮದೇವ್ `ಬಿ~ ಗುಂಪು ಮತ್ತು ಶ್ರೀ ಶ್ರೀ ರವಿಶಂಕರ್ `ಸಿ~ ಗುಂಪಿನಲ್ದ್ದ್ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.<br /> <br /> ಗುರುವಾರ ಈ ಕುರಿತು ತಮ್ಮ ಟ್ವಿಟ್ಟರ್ನಲ್ಲಿ ವಿವರಿಸಿರುವ ಸಿಂಗ್, ಸಂಘದ ಈ ಯೋಜನಾಬದ್ಧ ಕುತಂತ್ರಗಳು ದೇಶದ ಜನರ ಗಮನವನ್ನು ಬೇರೆಡೆ ತಿರುಗಿಸಲಿಕ್ಕಾಗಿಯೇ ರೂಪಿಸಲಾದದ್ದು ಎಂಬ ಸಂಗತಿ ನಿಸ್ಸಂದೇಹ ಎಂದು ಪ್ರತಿಪಾದಿಸಿದ್ದಾರೆ.<br /> <br /> ಸಂಘ ಪರಿವಾರವು ಮಾಲೆಗಾಂವ್ ಸ್ಫೋಟವನ್ನು ಒಳಗೊಂಡಂತೆ ಮಾದೋಸಾ, ಹೈದರಾಬಾದ್, ಅಜ್ಮೀರ್ ಷರೀಫ್ ಮತ್ತು ಸಮ್ಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣಗಳಲ್ಲಿ ತನ್ನ ನಂಟನ್ನು ಹೊಂದಿತ್ತು. ಈ ನಿಜಾಂಶ ಬಯಲಾಗುತ್ತಿದ್ದಂತೆಯೇ ಆರ್ಎಸ್ಎಸ್ ಇಂತಹ ತಂತ್ರವನ್ನು ಹೆಣೆಯಿತು. ಈ ಮೂಲಕ ಜನರ ಮನಸ್ಸನ್ನು ಭ್ರಷ್ಟಾಚಾರ ಮತ್ತು ಕಪ್ಪು ಹಣದ ಕಡೆ ತಿರುಗಿಸುವ ಪ್ರಯತ್ನ ನಡೆಸಿತು ಎಂದು ಸಿಂಗ್ ಹೇಳಿದ್ದಾರೆ.<br /> <br /> ಅಭಿಪ್ರಾಯ ದಾಖಲಿಸಲು ಸ್ವತಂತ್ರರು: ದಿಗ್ವಿಜಯ್ ಸಿಂಗ್ ಅವರ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶ್ರೀ ಶ್ರೀ ರವಿಶಂಕರ್ ಅವರು, ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಸ್ವತಂತ್ರರಿದ್ದಾರೆ. ಇದಕ್ಕೆ ನಾನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>