<p><strong>ಉಡುಪಿ:</strong> ನಂದಿಕೂರಿನಲ್ಲಿರುವ ಉಡುಪಿ ಉಷ್ಣವಿದ್ಯುತ್ ಸ್ಥಾವರದ (ಯುಪಿಸಿಎಲ್) ಎರಡನೇ ಹಂತ ಕಾರ್ಯಾರಂಭ ಮಾಡುವಂತೆ ಮುಖ್ಯಮಂತ್ರಿ ಸದಾನಂದ ಗೌಡರು ಸೂಚನೆ ನೀಡಿರುವುದನ್ನು ಟೀಕಿಸಿರುವ ನಂದಿಕೂರು ಜನಜಾಗೃತಿ ಸಮಿತಿ, `ಎರಡನೇ ಹಂತದ ಕಾರ್ಯಾರಂಭಕ್ಕೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ನಿಜಕ್ಕೂ ಆಘಾತಕಾರಿ~ ಎಂದು ಹೇಳಿದೆ.<br /> <br /> ಈ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣಶೆಟ್ಟಿ ದುಬೈ, `ಯುಪಿಸಿಎಲ್ ಎರಡನೇ ಹಂತಕ್ಕೆ ಅನುಮೋದನೆ ನೀಡುವ ಮೂಲಕ ಕಂಪೆನಿಯ ಮೋಡಿಗೆ ಮುಖ್ಯಮಂತ್ರಿಗಳೂ ಬಲಿಯಾದರೇ?~ ಎಂದು ಪ್ರಶ್ನಿಸಿದ್ದಾರೆ. <br /> <br /> `ಸರ್ಕಾರಕ್ಕೆ ಸ್ವಂತ ಸಾಮರ್ಥ್ಯದಿಂದ ಸಾಕಷ್ಟು ವಿದ್ಯುತ್ ಉತ್ಪಾದಿಸಲು ಸಾಮರ್ಥ್ಯವಿದೆ. ಆದರೂ ನಾಗರಿಕರಿಗೆ ತೊಂದರೆ ನೀಡುವ ಖಾಸಗಿ ವಿದ್ಯುತ್ ಕಂಪೆನಿಗಳಿಗೆ ಸರ್ಕಾರ ಏಕೆ ಅಷ್ಟೊಂದು ಮಣೆ ಹಾಕುತ್ತಿದೆ~ ಎಂದು ಅವರು ಪ್ರಶ್ನಿಸಿದ್ದಾರೆ.<br /> <br /> `ಮುಖ್ಯಮಂತ್ರಿ ಸದಾನಂದ ಗೌಡ ಅವರು ಯುಪಿಸಿಎಲ್ನಿಂದ ಆಗಿರುವ ಸಮಸ್ಯೆಗಳ ಸಂಪೂರ್ಣ ಅರಿವಿದ್ದವರು. ಈಗಾಗಲೇ ಕಂಪೆನಿ ಪ್ರಾರಂಭಿಸಿದ ಮೊದಲ ಘಟಕದಿಂದಾಗಿ ಸ್ಥಳೀಯರು ಬಹಳಷ್ಟು ತೊಂದರೆ ಪಡುತ್ತಿದ್ದಾರೆ.<br /> <br /> ಚರ್ಮರೋಗ, ಆಸ್ತಮಾ ಮತ್ತಿತರ ರೋಗ ರುಜಿನಗಳಿಗೆ ಈಡಾಗಿದ್ದಾರೆ. ಇಲ್ಲಿನ ಕುಡಿಯುವ ನೀರು ಕಲುಷಿತಗೊಂಡಿದೆ. ಅಡಿಕೆ, ತೆಂಗು, ಕಂಗು, ಮಲ್ಲಿಗೆ ಬಾಡಿಹೋಗಿವೆ. ಮೂರು ಬೆಲೆ ತೆಗೆಯುವ ಬತ್ತದ ಗದ್ದೆಗಳು ನಾಶವಾಗಿವೆ. ಹಾಗಿದ್ದರೂ ಎರಡನೇ ಹಂತದ ಕಾರ್ಯಾರಂಭಕ್ಕೆ ಅನುಮತಿ ನೀಡಿದ್ದು ಏಕೆ?~ ಎಂದರು. <br /> <br /> `ಇಲ್ಲಿನ ರೈತರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಸರ್ಕಾರ ಬಯಸಿದೆಯೇ?~ ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ. `ನಂದಿಕೂರಿನ ಯುಪಿಸಿಎಲ್ ಕಂಪೆನಿಯನ್ನು ಶಾಶ್ವತವಾಗಿ ಮುಚ್ಚಬೇಕು. ಸರ್ಕಾರ ಅಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು~ ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಅವರು ಆಗ್ರಹಿಸಿದ್ದಾರೆ.<br /> <br /> <strong>`ಸಿ.ಎಂ. ಜತೆ ಮಾತನಾಡುವೆ~</strong><br /> `ಯುಪಿಸಿಎಲ್ನ ಮೊದಲ ಘಟಕ ಕಾರ್ಯಾರಂಭ ಮಾಡಿದ ಮೇಲೆ ಸ್ಥಳೀಯ ಪರಿಸರಕ್ಕೆ, ಜನಸಾಮಾನ್ಯರಿಗೆ ಉಂಟಾಗಿರುವ ತೊಂದರೆ ಈವರೆಗೂ ಪರಿಹಾರವೇ ಆಗಿಲ್ಲ. ಹೀಗಾಗಿ ಮೊದಲ ಘಟಕದಿಂದ ಉಂಟಾಗಿರುವ ಸಮಸ್ಯೆ ಪರಿಹಾರವಾದ ಮೇಲೆ ಮಾತ್ರವೇ ಎರಡನೇ ಹಂತ ಕಾರ್ಯಾರಂಭಕ್ಕೆ ಅನುಮೋದನೆ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಜತೆ ಕೂಡಲೇ ಮಾತುಕತೆ ನಡೆಸುತ್ತೇನೆ~<br /> <strong>-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಅಧೋಕ್ಷಜ ಮಠ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ನಂದಿಕೂರಿನಲ್ಲಿರುವ ಉಡುಪಿ ಉಷ್ಣವಿದ್ಯುತ್ ಸ್ಥಾವರದ (ಯುಪಿಸಿಎಲ್) ಎರಡನೇ ಹಂತ ಕಾರ್ಯಾರಂಭ ಮಾಡುವಂತೆ ಮುಖ್ಯಮಂತ್ರಿ ಸದಾನಂದ ಗೌಡರು ಸೂಚನೆ ನೀಡಿರುವುದನ್ನು ಟೀಕಿಸಿರುವ ನಂದಿಕೂರು ಜನಜಾಗೃತಿ ಸಮಿತಿ, `ಎರಡನೇ ಹಂತದ ಕಾರ್ಯಾರಂಭಕ್ಕೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ನಿಜಕ್ಕೂ ಆಘಾತಕಾರಿ~ ಎಂದು ಹೇಳಿದೆ.<br /> <br /> ಈ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣಶೆಟ್ಟಿ ದುಬೈ, `ಯುಪಿಸಿಎಲ್ ಎರಡನೇ ಹಂತಕ್ಕೆ ಅನುಮೋದನೆ ನೀಡುವ ಮೂಲಕ ಕಂಪೆನಿಯ ಮೋಡಿಗೆ ಮುಖ್ಯಮಂತ್ರಿಗಳೂ ಬಲಿಯಾದರೇ?~ ಎಂದು ಪ್ರಶ್ನಿಸಿದ್ದಾರೆ. <br /> <br /> `ಸರ್ಕಾರಕ್ಕೆ ಸ್ವಂತ ಸಾಮರ್ಥ್ಯದಿಂದ ಸಾಕಷ್ಟು ವಿದ್ಯುತ್ ಉತ್ಪಾದಿಸಲು ಸಾಮರ್ಥ್ಯವಿದೆ. ಆದರೂ ನಾಗರಿಕರಿಗೆ ತೊಂದರೆ ನೀಡುವ ಖಾಸಗಿ ವಿದ್ಯುತ್ ಕಂಪೆನಿಗಳಿಗೆ ಸರ್ಕಾರ ಏಕೆ ಅಷ್ಟೊಂದು ಮಣೆ ಹಾಕುತ್ತಿದೆ~ ಎಂದು ಅವರು ಪ್ರಶ್ನಿಸಿದ್ದಾರೆ.<br /> <br /> `ಮುಖ್ಯಮಂತ್ರಿ ಸದಾನಂದ ಗೌಡ ಅವರು ಯುಪಿಸಿಎಲ್ನಿಂದ ಆಗಿರುವ ಸಮಸ್ಯೆಗಳ ಸಂಪೂರ್ಣ ಅರಿವಿದ್ದವರು. ಈಗಾಗಲೇ ಕಂಪೆನಿ ಪ್ರಾರಂಭಿಸಿದ ಮೊದಲ ಘಟಕದಿಂದಾಗಿ ಸ್ಥಳೀಯರು ಬಹಳಷ್ಟು ತೊಂದರೆ ಪಡುತ್ತಿದ್ದಾರೆ.<br /> <br /> ಚರ್ಮರೋಗ, ಆಸ್ತಮಾ ಮತ್ತಿತರ ರೋಗ ರುಜಿನಗಳಿಗೆ ಈಡಾಗಿದ್ದಾರೆ. ಇಲ್ಲಿನ ಕುಡಿಯುವ ನೀರು ಕಲುಷಿತಗೊಂಡಿದೆ. ಅಡಿಕೆ, ತೆಂಗು, ಕಂಗು, ಮಲ್ಲಿಗೆ ಬಾಡಿಹೋಗಿವೆ. ಮೂರು ಬೆಲೆ ತೆಗೆಯುವ ಬತ್ತದ ಗದ್ದೆಗಳು ನಾಶವಾಗಿವೆ. ಹಾಗಿದ್ದರೂ ಎರಡನೇ ಹಂತದ ಕಾರ್ಯಾರಂಭಕ್ಕೆ ಅನುಮತಿ ನೀಡಿದ್ದು ಏಕೆ?~ ಎಂದರು. <br /> <br /> `ಇಲ್ಲಿನ ರೈತರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಸರ್ಕಾರ ಬಯಸಿದೆಯೇ?~ ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ. `ನಂದಿಕೂರಿನ ಯುಪಿಸಿಎಲ್ ಕಂಪೆನಿಯನ್ನು ಶಾಶ್ವತವಾಗಿ ಮುಚ್ಚಬೇಕು. ಸರ್ಕಾರ ಅಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು~ ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಅವರು ಆಗ್ರಹಿಸಿದ್ದಾರೆ.<br /> <br /> <strong>`ಸಿ.ಎಂ. ಜತೆ ಮಾತನಾಡುವೆ~</strong><br /> `ಯುಪಿಸಿಎಲ್ನ ಮೊದಲ ಘಟಕ ಕಾರ್ಯಾರಂಭ ಮಾಡಿದ ಮೇಲೆ ಸ್ಥಳೀಯ ಪರಿಸರಕ್ಕೆ, ಜನಸಾಮಾನ್ಯರಿಗೆ ಉಂಟಾಗಿರುವ ತೊಂದರೆ ಈವರೆಗೂ ಪರಿಹಾರವೇ ಆಗಿಲ್ಲ. ಹೀಗಾಗಿ ಮೊದಲ ಘಟಕದಿಂದ ಉಂಟಾಗಿರುವ ಸಮಸ್ಯೆ ಪರಿಹಾರವಾದ ಮೇಲೆ ಮಾತ್ರವೇ ಎರಡನೇ ಹಂತ ಕಾರ್ಯಾರಂಭಕ್ಕೆ ಅನುಮೋದನೆ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಜತೆ ಕೂಡಲೇ ಮಾತುಕತೆ ನಡೆಸುತ್ತೇನೆ~<br /> <strong>-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಅಧೋಕ್ಷಜ ಮಠ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>