<p>ಮಂಗಳೂರು: ಮರುಬಳಕೆ ತಡೆಯಲು ಸೂಜಿಯನ್ನು ತುಂಡರಿಸುವ ಯಂತ್ರ, ವೈದ್ಯಕೀಯ ತ್ಯಾಜ್ಯಗಳ ಪರಿಸರ ಸ್ನೇಹಿ ವಿಲೇವಾರಿಗೆ ನೆರವಾಗುವ ಜೈವಿಕ ಕೈಚೀಲ, ರೋಗಿಯ ಅನುಕೂಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ವಿದ್ಯುಚ್ಚಾಲಿತ ಹಾಸಿಗೆ, ಸೂಕ್ಷ್ಮಾಣುಗಳನ್ನು ಕಂಪ್ಯೂಟರ್ ಪರದೆಮೇಲೆ ತಂತ್ರಜ್ಞರ ಅನೂಕೂಲಕ್ಕೆ ಬೇಕಾದಷ್ಟು ಹಿರಿದಾಗಿ ತೋರಿಸಬಲ್ಲ ಅತ್ಯಾಧುನಿಕ ಸೂಕ್ಷ್ಮ ದರ್ಶಕ....<br /> ತಂತ್ರಜ್ಞಾನದ ನೆರವಿನಿಂದ ಅಭಿವೃದ್ಧಿಪಡಿಸಿದ ವೈದ್ಯಲೋಕದ ಅತ್ಯಾಧುನಿಕ ಪರಿಕರಗಳೆಲ್ಲವೂ ಸೋಮವಾರ ಇಲ್ಲಿನ ಟಿ.ಎಂ.ಎ ಪೈ ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಮೇಳೈಸಿದ್ದವು.<br /> <br /> ಎಸ್ಆರ್ಎಸ್ ಇಂಡಸ್ಟ್ರೀ ಗ್ಲೋಬಲ್ ಸೊಲ್ಯೂಷನ್ಸ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ವೈವಿಧ್ಯಮಯ ವೈದ್ಯಕೀಯ ಪರಿಕರಗಳ ಪ್ರದರ್ಶನ (ಹೆಲ್ತ್ಕೇರ್ ಎಕ್ವಿಪ್ಮೆಂಟ್ ಎಕ್ಸ್ಪೊ) ‘ಆರೋಗ್ಯ 2013’, ವೈದ್ಯಲೋಕದ ಇತ್ತೀಚಿನ ಬೆಳವಣಿಗೆಗಳನ್ನು ಮಂಗಳೂರಿನ ವೈದ್ಯರಿಗೆ, ಆಸ್ಪತ್ರೆಗಳಿಗೆ ಪರಿಚಯಿಸಿದೆ. ಈ ವಸ್ತು ಪ್ರದರ್ಶನದಲ್ಲಿ ಒಟ್ಟು 58 ಮಳಿಗೆಗಳಿದ್ದು, ಸ್ಟೆಥೋಸ್ಕೋಪ್ಗಳಿಂದ ಹಿಡಿದು ಥರ್ಮೋಮೀಟರ್ಗಳು, ಆಫ್ತಲ್ಮೋಸ್ಕೋಪ್... ಮೊದಲಾದ ವೈದ್ಯಕೀಯ ಪರಿಕರಗಳ ಆಧುನಿಕ ರೂಪಾಂತರಗಳೆಲ್ಲವೂ ಇಲ್ಲಿ ಲಭ್ಯ. ಈ ವಸ್ತು ಪ್ರದರ್ಶನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸೋಮವಾರ ಚಾಲನೆ ನೀಡಿದರು.<br /> <br /> ನವದೆಹಲಿಯ ಎಆರ್ವಿಎಸ್ ಎಕ್ವಿಪ್ಮೆಂಟ್ಸ್ ಕಂಪೆನಿ ಇಂಜಕ್ಷನ್ ನೀಡಲು ಬಳಸುವ ಸೂಜಿಯನ್ನು ತುಂಡರಿಸುವ ಯಂತ್ರವನ್ನು ಪ್ರದರ್ಶನಕ್ಕಿಟ್ಟಿದೆ.<br /> <br /> ‘ವಿಲೇವಾರಿ ಮಾಡಿದ ಸೂಜಿಯನ್ನು ಕದ್ದುಮುಚ್ಚಿ ಬಳಸುವುದನ್ನು ತಡೆಯುವ ಸಲುವಾಗಿ ಅದನ್ನು ತುಂಡರಿಸುವುದಕ್ಕೆ ಈ ಯಂತ್ರ ಸಹಕಾರಿ. ಇದರ ಬೆಲೆ 2,200ರಿಂದ ಆರಂಭವಾಗುತ್ತದೆ. ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಮಾನದಂಡಕ್ಕೆ ಅನುಗುಣವಾಗಿ ಈ ಯಂತ್ರವನ್ನು ನಿರ್ಮಿಸಲಾಗಿದೆ’ ಎನ್ನುತ್ತಾರೆ ಈ ಕಂಪೆನಿಯ ನಿರ್ದೇಶಕ ವಿಶ್ವೇಶ್ ಅಹ್ಲುವಾಲಿಯ. <br /> <br /> ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಹ್ಯಾಲೋಜನ್ ವಿದ್ಯುದ್ದೀಪಗಳನ್ನು ಎಲ್ಇಡಿ ಬಲ್ಬ್ಗಳು ಆಕ್ರಮಿಸುತ್ತಿವೆ. ಹುಬ್ಬಳ್ಳಿಯ ಆಕ್ಸಿ ಮೆಡಿ ಸಿಸ್ಟಮ್ಸ್ ಕಂಪೆನಿಯು ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿದ ಶಸ್ತ್ರಚಿಕಿತ್ಸಾ ಪರಿಕರವನ್ನು ಪ್ರದರ್ಶನಕ್ಕಿಟ್ಟಿತ್ತು.<br /> <br /> ಬೆಂಗಳೂರಿನ ಆರ್ವಿ ಸರ್ಜಿಕಲ್ಸ್ ಕಂಪೆನಿಯು ಸೊಳ್ಳೆಗಳನ್ನು ಆಕರ್ಷಿಸಿ ಕೊಲ್ಲುವ ಪುಟ್ಟ ಪರಿಕರವನ್ನು ಪ್ರದರ್ಶನದಲ್ಲಿಟ್ಟಿತ್ತು.<br /> ‘ಮಂಗಳೂರಿನಲ್ಲಿ ಮಲೇರಿಯ, ಡೆಂಗೆ ಹಾವಳಿ ಹೆಚ್ಚು ಇರುವ ಕಾರಣ ಇಲ್ಲೇ ಈ ಪರಿಕರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಈ ಯಂತ್ರವು ಬೆವರಿನ ವಾಸನೆಯನ್ನು ಹೊರಸೂಸುವ ಮೂಲಕ ಸೊಳ್ಳೆಗಳನ್ನು ಆಕರ್ಷಿಸುತ್ತದೆ. 1600 ಚ.ಮೀ ಪ್ರದೇಶದಿಂದ ಸೊಳ್ಳೆಗಳನ್ನು ಆಕರ್ಷಿಸುವ ಸಾಮರ್ಥ್ಯ ಈ ಪರಿಕರಕ್ಕಿದೆ. ಇದಕ್ಕಿಂತ ಸಣ್ಣಗಾತ್ರದ ಪರಿಕರವೂ ಲಭ್ಯ. ಸತ್ತ ಸೊಳ್ಳೆಗಳು ಯಂತ್ರದ ತಳಭಾಗದಲ್ಲಿ ಸಂಗ್ರಹವಾಗುತ್ತದೆ. ಅವುಗಳನ್ನು ವಿಲೇವಾರಿ ಮಾಡಬಹುದು. ಈ ಪರಿಕರದ ಬೆಲೆ ₨ 1700 ರೂಪಾಯಿಯಿಂದ ಆರಂಭವಾಗುತ್ತದೆ’ ಎನ್ನುತ್ತಾರೆ ಮೂಲತಃ ಬದಿಯಡ್ಕದವರಾದ ಕಂಪೆನಿಯ ಮಾಲೀಕ ಬಿ.ಚಂದ್ರಶೇಖರ್. ಬೆಂಗಳೂರಿನ ಬಾಪೂಜಿ ಸರ್ಜಿಕಲ್ಸ್ ಮತ್ತು ಅಮರಿಲಿಸ್ ಹೆಲ್ತ್ಕೇರ್ ಕಂಪೆನಿಯು ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ತೊಡಿಸುವ ವಸ್ತ್ರಗಳನ್ನು ಪ್ರದರ್ಶನಕ್ಕಿಟ್ಟಿತ್ತು. ಈ ವಸ್ತ್ರಗಳನ್ನು ಶಸ್ತ್ರಚಿಕಿತ್ಸೆ ಬಳಿಕ ವಿಲೇವಾರಿ ಮಾಡಬಹುದು.<br /> <br /> ‘ಜೈವಿಕವಾಗಿ ವಿಘಟನೆ ಹೊಂದುವ ಪದಾರ್ಥದಿಂದ ಸಿದ್ಧಪಡಿಸಿರುವ ಈ ವಸ್ತ್ರಗಳು ಪರಿಸರ ಸ್ನೇಹಿಯಾಗಿವೆ. ಬೆಲೆ ₨ 200ರಿಂದ ಆರಂಭವಾಗುತ್ತದೆ. ಶಸ್ತ್ರಚಿಕಿತ್ಸೆಯ ಮಾದರಿಗೆ ಅನುಗುಣವಾಗಿ ನಾವು ಈ ವಸ್ತ್ರಗಳನ್ನು ತಯಾರಿಸಿಕೊಡುತ್ತೇವೆ’ ಎನ್ನುತ್ತಾರೆ ಕಂಪೆನಿಯ ಮಾರುಕಟ್ಟೆ ವ್ಯವಸ್ಥಾಪಕ ಪ್ರವೀಣ್. <br /> <br /> ಉಡುಪಿ ಮೂಲದ ರೋಬೋಸಾಫ್ಟ್ ಕಂಪೆನಿಯು ವೈದ್ಯರು ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಸುಲಭವಾಗಿ ನಿರ್ವಹಿಸುವುದಕ್ಕೆ ಅನುಕೂಲವಾದ ತಂತ್ರಾಂಶವನ್ನು ಪ್ರದರ್ಶನಕ್ಕಿಟ್ಟಿತ್ತು.<br /> <br /> ‘ರೋಗಿಗೆ ನೀಡುವ ಔಷಧಿಯ ಹೆಸರು ಬರೆದುಕೊಡುವುದರಿಂದ ಹಿಡಿದು, ಅವರ ವೈದ್ಯಕೀಯ ತಪಾಸಣೆಯ ಅಂಶಗಳನ್ನು ರಕ್ಷಿಸಿಡುವವರೆಗೆ ಎಲ್ಲ ರೀತಿಯಲ್ಲೂ ಈ ತಂತ್ರಾಂಶ ಪ್ರಯೋಜನಕಾರಿ’ ಎನ್ನುತ್ತಾರೆ ಕಂಪೆನಿಯ ಸೇಲ್ಸ್ ಆಂಡ್ ಸಪೋರ್ಟ್ ಎಂಜಿನಿಯರ್ ಶ್ರೀರಂಗ ಕಾಮತ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಮರುಬಳಕೆ ತಡೆಯಲು ಸೂಜಿಯನ್ನು ತುಂಡರಿಸುವ ಯಂತ್ರ, ವೈದ್ಯಕೀಯ ತ್ಯಾಜ್ಯಗಳ ಪರಿಸರ ಸ್ನೇಹಿ ವಿಲೇವಾರಿಗೆ ನೆರವಾಗುವ ಜೈವಿಕ ಕೈಚೀಲ, ರೋಗಿಯ ಅನುಕೂಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ವಿದ್ಯುಚ್ಚಾಲಿತ ಹಾಸಿಗೆ, ಸೂಕ್ಷ್ಮಾಣುಗಳನ್ನು ಕಂಪ್ಯೂಟರ್ ಪರದೆಮೇಲೆ ತಂತ್ರಜ್ಞರ ಅನೂಕೂಲಕ್ಕೆ ಬೇಕಾದಷ್ಟು ಹಿರಿದಾಗಿ ತೋರಿಸಬಲ್ಲ ಅತ್ಯಾಧುನಿಕ ಸೂಕ್ಷ್ಮ ದರ್ಶಕ....<br /> ತಂತ್ರಜ್ಞಾನದ ನೆರವಿನಿಂದ ಅಭಿವೃದ್ಧಿಪಡಿಸಿದ ವೈದ್ಯಲೋಕದ ಅತ್ಯಾಧುನಿಕ ಪರಿಕರಗಳೆಲ್ಲವೂ ಸೋಮವಾರ ಇಲ್ಲಿನ ಟಿ.ಎಂ.ಎ ಪೈ ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಮೇಳೈಸಿದ್ದವು.<br /> <br /> ಎಸ್ಆರ್ಎಸ್ ಇಂಡಸ್ಟ್ರೀ ಗ್ಲೋಬಲ್ ಸೊಲ್ಯೂಷನ್ಸ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ವೈವಿಧ್ಯಮಯ ವೈದ್ಯಕೀಯ ಪರಿಕರಗಳ ಪ್ರದರ್ಶನ (ಹೆಲ್ತ್ಕೇರ್ ಎಕ್ವಿಪ್ಮೆಂಟ್ ಎಕ್ಸ್ಪೊ) ‘ಆರೋಗ್ಯ 2013’, ವೈದ್ಯಲೋಕದ ಇತ್ತೀಚಿನ ಬೆಳವಣಿಗೆಗಳನ್ನು ಮಂಗಳೂರಿನ ವೈದ್ಯರಿಗೆ, ಆಸ್ಪತ್ರೆಗಳಿಗೆ ಪರಿಚಯಿಸಿದೆ. ಈ ವಸ್ತು ಪ್ರದರ್ಶನದಲ್ಲಿ ಒಟ್ಟು 58 ಮಳಿಗೆಗಳಿದ್ದು, ಸ್ಟೆಥೋಸ್ಕೋಪ್ಗಳಿಂದ ಹಿಡಿದು ಥರ್ಮೋಮೀಟರ್ಗಳು, ಆಫ್ತಲ್ಮೋಸ್ಕೋಪ್... ಮೊದಲಾದ ವೈದ್ಯಕೀಯ ಪರಿಕರಗಳ ಆಧುನಿಕ ರೂಪಾಂತರಗಳೆಲ್ಲವೂ ಇಲ್ಲಿ ಲಭ್ಯ. ಈ ವಸ್ತು ಪ್ರದರ್ಶನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸೋಮವಾರ ಚಾಲನೆ ನೀಡಿದರು.<br /> <br /> ನವದೆಹಲಿಯ ಎಆರ್ವಿಎಸ್ ಎಕ್ವಿಪ್ಮೆಂಟ್ಸ್ ಕಂಪೆನಿ ಇಂಜಕ್ಷನ್ ನೀಡಲು ಬಳಸುವ ಸೂಜಿಯನ್ನು ತುಂಡರಿಸುವ ಯಂತ್ರವನ್ನು ಪ್ರದರ್ಶನಕ್ಕಿಟ್ಟಿದೆ.<br /> <br /> ‘ವಿಲೇವಾರಿ ಮಾಡಿದ ಸೂಜಿಯನ್ನು ಕದ್ದುಮುಚ್ಚಿ ಬಳಸುವುದನ್ನು ತಡೆಯುವ ಸಲುವಾಗಿ ಅದನ್ನು ತುಂಡರಿಸುವುದಕ್ಕೆ ಈ ಯಂತ್ರ ಸಹಕಾರಿ. ಇದರ ಬೆಲೆ 2,200ರಿಂದ ಆರಂಭವಾಗುತ್ತದೆ. ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಮಾನದಂಡಕ್ಕೆ ಅನುಗುಣವಾಗಿ ಈ ಯಂತ್ರವನ್ನು ನಿರ್ಮಿಸಲಾಗಿದೆ’ ಎನ್ನುತ್ತಾರೆ ಈ ಕಂಪೆನಿಯ ನಿರ್ದೇಶಕ ವಿಶ್ವೇಶ್ ಅಹ್ಲುವಾಲಿಯ. <br /> <br /> ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಹ್ಯಾಲೋಜನ್ ವಿದ್ಯುದ್ದೀಪಗಳನ್ನು ಎಲ್ಇಡಿ ಬಲ್ಬ್ಗಳು ಆಕ್ರಮಿಸುತ್ತಿವೆ. ಹುಬ್ಬಳ್ಳಿಯ ಆಕ್ಸಿ ಮೆಡಿ ಸಿಸ್ಟಮ್ಸ್ ಕಂಪೆನಿಯು ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿದ ಶಸ್ತ್ರಚಿಕಿತ್ಸಾ ಪರಿಕರವನ್ನು ಪ್ರದರ್ಶನಕ್ಕಿಟ್ಟಿತ್ತು.<br /> <br /> ಬೆಂಗಳೂರಿನ ಆರ್ವಿ ಸರ್ಜಿಕಲ್ಸ್ ಕಂಪೆನಿಯು ಸೊಳ್ಳೆಗಳನ್ನು ಆಕರ್ಷಿಸಿ ಕೊಲ್ಲುವ ಪುಟ್ಟ ಪರಿಕರವನ್ನು ಪ್ರದರ್ಶನದಲ್ಲಿಟ್ಟಿತ್ತು.<br /> ‘ಮಂಗಳೂರಿನಲ್ಲಿ ಮಲೇರಿಯ, ಡೆಂಗೆ ಹಾವಳಿ ಹೆಚ್ಚು ಇರುವ ಕಾರಣ ಇಲ್ಲೇ ಈ ಪರಿಕರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಈ ಯಂತ್ರವು ಬೆವರಿನ ವಾಸನೆಯನ್ನು ಹೊರಸೂಸುವ ಮೂಲಕ ಸೊಳ್ಳೆಗಳನ್ನು ಆಕರ್ಷಿಸುತ್ತದೆ. 1600 ಚ.ಮೀ ಪ್ರದೇಶದಿಂದ ಸೊಳ್ಳೆಗಳನ್ನು ಆಕರ್ಷಿಸುವ ಸಾಮರ್ಥ್ಯ ಈ ಪರಿಕರಕ್ಕಿದೆ. ಇದಕ್ಕಿಂತ ಸಣ್ಣಗಾತ್ರದ ಪರಿಕರವೂ ಲಭ್ಯ. ಸತ್ತ ಸೊಳ್ಳೆಗಳು ಯಂತ್ರದ ತಳಭಾಗದಲ್ಲಿ ಸಂಗ್ರಹವಾಗುತ್ತದೆ. ಅವುಗಳನ್ನು ವಿಲೇವಾರಿ ಮಾಡಬಹುದು. ಈ ಪರಿಕರದ ಬೆಲೆ ₨ 1700 ರೂಪಾಯಿಯಿಂದ ಆರಂಭವಾಗುತ್ತದೆ’ ಎನ್ನುತ್ತಾರೆ ಮೂಲತಃ ಬದಿಯಡ್ಕದವರಾದ ಕಂಪೆನಿಯ ಮಾಲೀಕ ಬಿ.ಚಂದ್ರಶೇಖರ್. ಬೆಂಗಳೂರಿನ ಬಾಪೂಜಿ ಸರ್ಜಿಕಲ್ಸ್ ಮತ್ತು ಅಮರಿಲಿಸ್ ಹೆಲ್ತ್ಕೇರ್ ಕಂಪೆನಿಯು ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ತೊಡಿಸುವ ವಸ್ತ್ರಗಳನ್ನು ಪ್ರದರ್ಶನಕ್ಕಿಟ್ಟಿತ್ತು. ಈ ವಸ್ತ್ರಗಳನ್ನು ಶಸ್ತ್ರಚಿಕಿತ್ಸೆ ಬಳಿಕ ವಿಲೇವಾರಿ ಮಾಡಬಹುದು.<br /> <br /> ‘ಜೈವಿಕವಾಗಿ ವಿಘಟನೆ ಹೊಂದುವ ಪದಾರ್ಥದಿಂದ ಸಿದ್ಧಪಡಿಸಿರುವ ಈ ವಸ್ತ್ರಗಳು ಪರಿಸರ ಸ್ನೇಹಿಯಾಗಿವೆ. ಬೆಲೆ ₨ 200ರಿಂದ ಆರಂಭವಾಗುತ್ತದೆ. ಶಸ್ತ್ರಚಿಕಿತ್ಸೆಯ ಮಾದರಿಗೆ ಅನುಗುಣವಾಗಿ ನಾವು ಈ ವಸ್ತ್ರಗಳನ್ನು ತಯಾರಿಸಿಕೊಡುತ್ತೇವೆ’ ಎನ್ನುತ್ತಾರೆ ಕಂಪೆನಿಯ ಮಾರುಕಟ್ಟೆ ವ್ಯವಸ್ಥಾಪಕ ಪ್ರವೀಣ್. <br /> <br /> ಉಡುಪಿ ಮೂಲದ ರೋಬೋಸಾಫ್ಟ್ ಕಂಪೆನಿಯು ವೈದ್ಯರು ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಸುಲಭವಾಗಿ ನಿರ್ವಹಿಸುವುದಕ್ಕೆ ಅನುಕೂಲವಾದ ತಂತ್ರಾಂಶವನ್ನು ಪ್ರದರ್ಶನಕ್ಕಿಟ್ಟಿತ್ತು.<br /> <br /> ‘ರೋಗಿಗೆ ನೀಡುವ ಔಷಧಿಯ ಹೆಸರು ಬರೆದುಕೊಡುವುದರಿಂದ ಹಿಡಿದು, ಅವರ ವೈದ್ಯಕೀಯ ತಪಾಸಣೆಯ ಅಂಶಗಳನ್ನು ರಕ್ಷಿಸಿಡುವವರೆಗೆ ಎಲ್ಲ ರೀತಿಯಲ್ಲೂ ಈ ತಂತ್ರಾಂಶ ಪ್ರಯೋಜನಕಾರಿ’ ಎನ್ನುತ್ತಾರೆ ಕಂಪೆನಿಯ ಸೇಲ್ಸ್ ಆಂಡ್ ಸಪೋರ್ಟ್ ಎಂಜಿನಿಯರ್ ಶ್ರೀರಂಗ ಕಾಮತ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>