<p><strong>ಬೆಂಗಳೂರು</strong>: ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾದ ಪೊಲೀಸರ ಮೇಲೆಯೇ ಯುವತಿಯೊಬ್ಬಳು ಕಾರು ಚಾಲನೆ ಮಾಡಲೆತ್ನಿಸಿದ ಘಟನೆ ಅನಿಲ್ ಕುಂಬ್ಳೆ ವೃತ್ತದಲ್ಲಿ ಗುರುವಾರ ರಾತ್ರಿ ನಡೆದಿದೆ.<br /> <br /> ಹೈಗ್ರೌಂಡ್ಸ್ ನಿವಾಸಿಯಾದ ಮೋನಿಷ್ ಹಾಗೂ ಆತನ ಪ್ರಿಯಕರೆ, ರಾತ್ರಿ 12 ಗಂಟೆ ಸುಮಾರಿಗೆ ಸೇಂಟ್ ಮಾರ್ಕ್ಸ್ ರಸ್ತೆ ಕಡೆಯಿಂದ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ಕುಂಬ್ಳೆ ವೃತ್ತದಲ್ಲಿ ಆ ಕಾರನ್ನು ಅಡ್ಡಗಟ್ಟಿದ ಕಬ್ಬನ್ಪಾರ್ಕ್ ಸಂಚಾರ ಠಾಣೆ ಪೊಲೀಸರು, ಚಾಲಕ ಪಾನಮತ್ತನಾಗಿರುವುದನ್ನು ದೃಢಪಡಿಸಿಕೊಂಡಿದ್ದಾರೆ. ಬಳಿಕ ಎಸ್ಐ ರಾಮಚಂದ್ರ ಅವರು ಕಾರಿನ ಕೀ ತೆಗೆದುಕೊಳ್ಳಲು ಮುಂದಾದಾಗ ಚಾಲಕ ಕೋಪಗೊಂಡು ಅವರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾನೆ.<br /> <br /> ಮೋನಿಷ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಆತನ ಪ್ರಿಯತಮೆ, ಚಾಲಕನ ಸೀಟಿಗೆ ಬಂದು ಎಸ್ಐ ಮೇಲೆಯೇ ಕಾರು ಚಾಲನೆ ಮಾಡಲೆತ್ನಿಸಿದ್ದಾರೆ. ಅದೃಷ್ಟವಷಾತ್ ರಾಮಚಂದ್ರ ಅವರು ತಪ್ಪಿಸಿಕೊಂಡು ಎಡಬದಿಗೆ ಉರುಳಿಬಿದ್ದಿದ್ದಾರೆ. ಈ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯ ಸ್ಥಳಕ್ಕೆ ಬಂದ ಸಿಬ್ಬಂದಿ, ಕಾರನ್ನು ಠಾಣೆಗೆ ಕೊಂಡೊಯ್ದಿದ್ದಾರೆ.<br /> <br /> ಇದರಿಂದ ಆಕ್ರೋಶಗೊಂಡ ಯುವತಿ, ಸ್ನೇಹಿತರಿಗೆ ಕರೆ ಮಾಡಿ ಠಾಣೆ ಬಳಿ ಬರುವಂತೆ ಹೇಳಿದ್ದಾಳೆ. ಹತ್ತು ನಿಮಿಷಗಳ ಅಂತರದಲ್ಲೇ ಠಾಣೆ ಬಳಿ ಬಂದ ಆಕೆಯ ಮೂರ್ನಾಲ್ಕು ಮಂದಿ ಸ್ನೇಹಿತರು, ಕಾರಿನ ಕೀ ಕೊಡುವಂತೆ ಪೊಲೀಸರಿಗೆ ಒತ್ತಡ ಹೇರಿದರು ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾದ ಪೊಲೀಸರ ಮೇಲೆಯೇ ಯುವತಿಯೊಬ್ಬಳು ಕಾರು ಚಾಲನೆ ಮಾಡಲೆತ್ನಿಸಿದ ಘಟನೆ ಅನಿಲ್ ಕುಂಬ್ಳೆ ವೃತ್ತದಲ್ಲಿ ಗುರುವಾರ ರಾತ್ರಿ ನಡೆದಿದೆ.<br /> <br /> ಹೈಗ್ರೌಂಡ್ಸ್ ನಿವಾಸಿಯಾದ ಮೋನಿಷ್ ಹಾಗೂ ಆತನ ಪ್ರಿಯಕರೆ, ರಾತ್ರಿ 12 ಗಂಟೆ ಸುಮಾರಿಗೆ ಸೇಂಟ್ ಮಾರ್ಕ್ಸ್ ರಸ್ತೆ ಕಡೆಯಿಂದ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ಕುಂಬ್ಳೆ ವೃತ್ತದಲ್ಲಿ ಆ ಕಾರನ್ನು ಅಡ್ಡಗಟ್ಟಿದ ಕಬ್ಬನ್ಪಾರ್ಕ್ ಸಂಚಾರ ಠಾಣೆ ಪೊಲೀಸರು, ಚಾಲಕ ಪಾನಮತ್ತನಾಗಿರುವುದನ್ನು ದೃಢಪಡಿಸಿಕೊಂಡಿದ್ದಾರೆ. ಬಳಿಕ ಎಸ್ಐ ರಾಮಚಂದ್ರ ಅವರು ಕಾರಿನ ಕೀ ತೆಗೆದುಕೊಳ್ಳಲು ಮುಂದಾದಾಗ ಚಾಲಕ ಕೋಪಗೊಂಡು ಅವರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾನೆ.<br /> <br /> ಮೋನಿಷ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಆತನ ಪ್ರಿಯತಮೆ, ಚಾಲಕನ ಸೀಟಿಗೆ ಬಂದು ಎಸ್ಐ ಮೇಲೆಯೇ ಕಾರು ಚಾಲನೆ ಮಾಡಲೆತ್ನಿಸಿದ್ದಾರೆ. ಅದೃಷ್ಟವಷಾತ್ ರಾಮಚಂದ್ರ ಅವರು ತಪ್ಪಿಸಿಕೊಂಡು ಎಡಬದಿಗೆ ಉರುಳಿಬಿದ್ದಿದ್ದಾರೆ. ಈ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯ ಸ್ಥಳಕ್ಕೆ ಬಂದ ಸಿಬ್ಬಂದಿ, ಕಾರನ್ನು ಠಾಣೆಗೆ ಕೊಂಡೊಯ್ದಿದ್ದಾರೆ.<br /> <br /> ಇದರಿಂದ ಆಕ್ರೋಶಗೊಂಡ ಯುವತಿ, ಸ್ನೇಹಿತರಿಗೆ ಕರೆ ಮಾಡಿ ಠಾಣೆ ಬಳಿ ಬರುವಂತೆ ಹೇಳಿದ್ದಾಳೆ. ಹತ್ತು ನಿಮಿಷಗಳ ಅಂತರದಲ್ಲೇ ಠಾಣೆ ಬಳಿ ಬಂದ ಆಕೆಯ ಮೂರ್ನಾಲ್ಕು ಮಂದಿ ಸ್ನೇಹಿತರು, ಕಾರಿನ ಕೀ ಕೊಡುವಂತೆ ಪೊಲೀಸರಿಗೆ ಒತ್ತಡ ಹೇರಿದರು ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>