<p><strong>ಬೆಂಗಳೂರು: </strong>ಅರಮನೆ ಮೈದಾನದಲ್ಲಿ ಮೂರು ದಿನ ‘ಇನ್ವೆಸ್ಟ್ ಕರ್ನಾಟಕ –2016’ ಎಂಬ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವುದರಿಂದ, ಫೆ. 1ರಿಂದ 5ರವರೆಗೆ ನಗರದೊಳಕ್ಕೆ ಖಾಸಗಿ ಬಸ್ಗಳ ಪ್ರವೇಶವನ್ನು ನಿಷೇಧಿಸಿ ನಗರ ಪೊಲೀಸ್ ಕಮಿಷನರ್ ಎನ್.ಎಸ್. ಮೇಘರಿಕ್ ಶನಿವಾರ ಆದೇಶ ಹೊರಡಿಸಿದ್ದಾರೆ.<br /> <br /> ಕಾಂಟ್ರಾಕ್ಟ್ ಕ್ಯಾರೇಜ್ ಹಾಗೂ ಅಖಿಲ ಭಾರತ ಪ್ರವಾಸಿ ಪರವಾನಗಿ ಹೊಂದಿರುವ ಖಾಸಗಿ ಬಸ್ಗಳಿಗೆ ಮತ್ರ ಈ ಆದೇಶ ಅನ್ವಯಿಸುತ್ತದೆ. ಇವು ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ಬೆಂಗಳೂರು ನಗರ ಪ್ರವೇಶಿಸುವಂತಿಲ್ಲ ಎಂದು ಪೊಲೀಸರು ತಿಳಿಸಿದರು.<br /> <br /> <strong>ಸಮಯ ಬದಲಾಯಿಸಿ:</strong> ‘ನಮ್ಮ ಬೇಡಿಕೆ ಮೇರೆಗೆ 10 ದಿನಗಳ ನಿಷೇಧವನ್ನು 5 ದಿನಕ್ಕೆ ಇಳಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿಷೇಧಿತ ಸಮಯವನ್ನು ಬೆಳಿಗ್ಗೆ 7 ಬದಲಿಗೆ 8 ಹಾಗೂ ರಾತ್ರಿ 10ರ ಬದಲಿಗೆ 9ರವರೆಗೆ ಬದಲಾಯಿಸಿದರೆ ಅನುಕೂಲ’ ಎಂದು ರಾಜ್ಯ ಪ್ರವಾಸಿ ಬಸ್ಗಳ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ‘ಪ್ರಜಾವಾಣಿ’ಗೆ ತಿಳಿಸಿದರು.<br /> *<br /> <strong>ಎಲ್ಲಿ ಇಳಿಸಬೇಕು?</strong><br /> *ತುಮಕೂರು ರಸ್ತೆ– ನೆಲಮಂಗಲ ಸಮೀಪದ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ<br /> *ಬಳ್ಳಾರಿ ರಸ್ತೆ– ಯಲಹಂಕದ (ಎಪಿಎಂಸಿ) ರೈತರ ಸಂತೆ<br /> *ಮೈಸೂರು ರಸ್ತೆ– ನೈಸ್ ರಸ್ತೆ ಸಮೀಪ<br /> *ಹೊಸೂರು ರಸ್ತೆ– ಅತ್ತಿಬೆಲೆ<br /> *ಕನಕಪುರ ರಸ್ತೆ– ತಲಘಟ್ಟಪುರದ ನೈಸ್ ರಸ್ತೆ ಬಳಿ<br /> *ಹಳೆ ಮದ್ರಾಸ್ ರಸ್ತೆ– ಕೆ.ಆರ್. ಪುರ ವಾಣಿಜ್ಯ ತೆರಿಗೆ ಚೆಕ್ಪೋಸ್ಟ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅರಮನೆ ಮೈದಾನದಲ್ಲಿ ಮೂರು ದಿನ ‘ಇನ್ವೆಸ್ಟ್ ಕರ್ನಾಟಕ –2016’ ಎಂಬ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವುದರಿಂದ, ಫೆ. 1ರಿಂದ 5ರವರೆಗೆ ನಗರದೊಳಕ್ಕೆ ಖಾಸಗಿ ಬಸ್ಗಳ ಪ್ರವೇಶವನ್ನು ನಿಷೇಧಿಸಿ ನಗರ ಪೊಲೀಸ್ ಕಮಿಷನರ್ ಎನ್.ಎಸ್. ಮೇಘರಿಕ್ ಶನಿವಾರ ಆದೇಶ ಹೊರಡಿಸಿದ್ದಾರೆ.<br /> <br /> ಕಾಂಟ್ರಾಕ್ಟ್ ಕ್ಯಾರೇಜ್ ಹಾಗೂ ಅಖಿಲ ಭಾರತ ಪ್ರವಾಸಿ ಪರವಾನಗಿ ಹೊಂದಿರುವ ಖಾಸಗಿ ಬಸ್ಗಳಿಗೆ ಮತ್ರ ಈ ಆದೇಶ ಅನ್ವಯಿಸುತ್ತದೆ. ಇವು ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ಬೆಂಗಳೂರು ನಗರ ಪ್ರವೇಶಿಸುವಂತಿಲ್ಲ ಎಂದು ಪೊಲೀಸರು ತಿಳಿಸಿದರು.<br /> <br /> <strong>ಸಮಯ ಬದಲಾಯಿಸಿ:</strong> ‘ನಮ್ಮ ಬೇಡಿಕೆ ಮೇರೆಗೆ 10 ದಿನಗಳ ನಿಷೇಧವನ್ನು 5 ದಿನಕ್ಕೆ ಇಳಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿಷೇಧಿತ ಸಮಯವನ್ನು ಬೆಳಿಗ್ಗೆ 7 ಬದಲಿಗೆ 8 ಹಾಗೂ ರಾತ್ರಿ 10ರ ಬದಲಿಗೆ 9ರವರೆಗೆ ಬದಲಾಯಿಸಿದರೆ ಅನುಕೂಲ’ ಎಂದು ರಾಜ್ಯ ಪ್ರವಾಸಿ ಬಸ್ಗಳ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ‘ಪ್ರಜಾವಾಣಿ’ಗೆ ತಿಳಿಸಿದರು.<br /> *<br /> <strong>ಎಲ್ಲಿ ಇಳಿಸಬೇಕು?</strong><br /> *ತುಮಕೂರು ರಸ್ತೆ– ನೆಲಮಂಗಲ ಸಮೀಪದ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ<br /> *ಬಳ್ಳಾರಿ ರಸ್ತೆ– ಯಲಹಂಕದ (ಎಪಿಎಂಸಿ) ರೈತರ ಸಂತೆ<br /> *ಮೈಸೂರು ರಸ್ತೆ– ನೈಸ್ ರಸ್ತೆ ಸಮೀಪ<br /> *ಹೊಸೂರು ರಸ್ತೆ– ಅತ್ತಿಬೆಲೆ<br /> *ಕನಕಪುರ ರಸ್ತೆ– ತಲಘಟ್ಟಪುರದ ನೈಸ್ ರಸ್ತೆ ಬಳಿ<br /> *ಹಳೆ ಮದ್ರಾಸ್ ರಸ್ತೆ– ಕೆ.ಆರ್. ಪುರ ವಾಣಿಜ್ಯ ತೆರಿಗೆ ಚೆಕ್ಪೋಸ್ಟ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>