<p>ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಆದಿ ಶಂಕರಾಚಾರ್ಯರ ಕಲ್ಪನೆಯನ್ನು ಚಿತ್ರರೂಪಕ್ಕಿಳಿಸಿದ ಕಲಾವಿದ ಹುಣಸಗಹಳ್ಳಿ ಜಯದೇವ. ದೇವರು ಹಾಗೂ ಶಂಕರಾಚಾರ್ಯರ ಭಕ್ತಿಭಾವದ ಸಂಬಂಧವನ್ನು ತೋರ್ಪಡಿಸುವ ಚಿತ್ರಗಳನ್ನು ರಚಿಸಿದ್ದಾರೆ. ಕಲಾಸಕ್ತರಲ್ಲಿ ಗೊಂದಲ ಮೂಡಿಸದೆ ಚಿತ್ರಭಾಷೆಗೆ ಒಗ್ಗುವಂತೆ ಸರಳೀಕರಿಸಿ ಚಿತ್ರಿಸಿರುವುದು ಕಲಾವಿದರ ಪ್ರತಿಭೆಗೆ ಸಾಕ್ಷಿ.<br /> <br /> ದೈವತ್ವ, ಭಕ್ತಿಗೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಇವರು ರಚಿಸಿದ್ದು ಪ್ರತಿಯೊಂದು ಅಂಶವೂ ಸೂಕ್ಷ್ಮವಾಗಿ ಚಿತ್ರಿತವಾಗಿದೆ. ನೋಡುಗನ ಮನಸ್ಸಲ್ಲಿ ಯಾವುದೇ ಗೊಂದಲವನ್ನುಳಿಸದೆ ಚಿತ್ರಗಳು ಅರ್ಥವಿವರಣೆ ನೀಡುತ್ತವೆ. ಬಳಸಿರುವ ಬಣ್ಣ, ಸಂಕೇತಗಳು ಅರ್ಥ ಸ್ಫುರಿಸುವಂತಿದೆ.<br /> <br /> ತಂದೆ ಎಚ್.ಡಿ. ಮುತ್ತಣ್ಣ ಅವರ ಆದರ್ಶಗಳನ್ನೇ ಬದುಕಿನಲ್ಲಿ ಅಳವಡಿಸಿಕೊಂಡು ಚಿತ್ರಕಲೆಗೆ ಆಕರ್ಷಿತರಾಗಿ ಚಿತ್ರಕಲೆಯನ್ನು ಅಭ್ಯಸಿಸಿದವರು ಜಯದೇವ. ಮೈಸೂರಿನ ಚಾಮರಾಜೇಂದ್ರ ಚಿತ್ರಕಲಾ ಶಾಲೆಯಲ್ಲಿ ಎಸ್.ಎನ್. ಸ್ವಾಮಿ, ಎಫ್.ಎಂ. ಸೂಫಿ, ವೈ ಸುಬ್ರಹ್ಮಣ್ಯರಾಜು ಅವರಲ್ಲಿ ಕಲಾಭ್ಯಾಸ ಮಾಡಿದ್ದಾರೆ.<br /> <br /> ಹದಿನಾರು ವರ್ಷಗಳ ಹಿಂದೆಯೇ ಜಯದೇವ ಅವರನ್ನು ಆಕರ್ಷಿಸಿದ ಶಂಕರಾಚಾರ್ಯ ಅವರ ಆನಂದ ಲಹರಿ, ಕಲೆಯ ರೂಪದಲ್ಲಿ ಈಗ ಸಾಕಾರಗೊಂಡಿದೆ. ನಲವತ್ತು ಚಿತ್ರಗಳು ಈ ಆನಂದ ಲಹರಿಯ ಭಾಗವಾಗಿದ್ದು ಪ್ರತಿಯೊಂದು ಚಿತ್ರವೂ ಮನಸೂರೆಗೊಳ್ಳುವಂತಿದೆ.<br /> ಈ ಕಲಾಕೃತಿ ‘ಸಚಿತ್ರ ಆನಂದಲಹರಿ’ ಪ್ರದರ್ಶನ ಫೆಬ್ರುವರಿ 5ರಿಂದ ಫೆಬ್ರುವರಿ 9ರವರೆಗೆ ನಡೆಯಲಿದೆ. ಬುಧವಾರ ಸಂಜೆ 6ಕ್ಕೆ ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ ಭಾಗವಹಿಸಲಿದ್ದಾರೆ.<br /> <br /> ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ವೀಕ್ಷಣೆಗೆ ಅವಕಾಶವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಆದಿ ಶಂಕರಾಚಾರ್ಯರ ಕಲ್ಪನೆಯನ್ನು ಚಿತ್ರರೂಪಕ್ಕಿಳಿಸಿದ ಕಲಾವಿದ ಹುಣಸಗಹಳ್ಳಿ ಜಯದೇವ. ದೇವರು ಹಾಗೂ ಶಂಕರಾಚಾರ್ಯರ ಭಕ್ತಿಭಾವದ ಸಂಬಂಧವನ್ನು ತೋರ್ಪಡಿಸುವ ಚಿತ್ರಗಳನ್ನು ರಚಿಸಿದ್ದಾರೆ. ಕಲಾಸಕ್ತರಲ್ಲಿ ಗೊಂದಲ ಮೂಡಿಸದೆ ಚಿತ್ರಭಾಷೆಗೆ ಒಗ್ಗುವಂತೆ ಸರಳೀಕರಿಸಿ ಚಿತ್ರಿಸಿರುವುದು ಕಲಾವಿದರ ಪ್ರತಿಭೆಗೆ ಸಾಕ್ಷಿ.<br /> <br /> ದೈವತ್ವ, ಭಕ್ತಿಗೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಇವರು ರಚಿಸಿದ್ದು ಪ್ರತಿಯೊಂದು ಅಂಶವೂ ಸೂಕ್ಷ್ಮವಾಗಿ ಚಿತ್ರಿತವಾಗಿದೆ. ನೋಡುಗನ ಮನಸ್ಸಲ್ಲಿ ಯಾವುದೇ ಗೊಂದಲವನ್ನುಳಿಸದೆ ಚಿತ್ರಗಳು ಅರ್ಥವಿವರಣೆ ನೀಡುತ್ತವೆ. ಬಳಸಿರುವ ಬಣ್ಣ, ಸಂಕೇತಗಳು ಅರ್ಥ ಸ್ಫುರಿಸುವಂತಿದೆ.<br /> <br /> ತಂದೆ ಎಚ್.ಡಿ. ಮುತ್ತಣ್ಣ ಅವರ ಆದರ್ಶಗಳನ್ನೇ ಬದುಕಿನಲ್ಲಿ ಅಳವಡಿಸಿಕೊಂಡು ಚಿತ್ರಕಲೆಗೆ ಆಕರ್ಷಿತರಾಗಿ ಚಿತ್ರಕಲೆಯನ್ನು ಅಭ್ಯಸಿಸಿದವರು ಜಯದೇವ. ಮೈಸೂರಿನ ಚಾಮರಾಜೇಂದ್ರ ಚಿತ್ರಕಲಾ ಶಾಲೆಯಲ್ಲಿ ಎಸ್.ಎನ್. ಸ್ವಾಮಿ, ಎಫ್.ಎಂ. ಸೂಫಿ, ವೈ ಸುಬ್ರಹ್ಮಣ್ಯರಾಜು ಅವರಲ್ಲಿ ಕಲಾಭ್ಯಾಸ ಮಾಡಿದ್ದಾರೆ.<br /> <br /> ಹದಿನಾರು ವರ್ಷಗಳ ಹಿಂದೆಯೇ ಜಯದೇವ ಅವರನ್ನು ಆಕರ್ಷಿಸಿದ ಶಂಕರಾಚಾರ್ಯ ಅವರ ಆನಂದ ಲಹರಿ, ಕಲೆಯ ರೂಪದಲ್ಲಿ ಈಗ ಸಾಕಾರಗೊಂಡಿದೆ. ನಲವತ್ತು ಚಿತ್ರಗಳು ಈ ಆನಂದ ಲಹರಿಯ ಭಾಗವಾಗಿದ್ದು ಪ್ರತಿಯೊಂದು ಚಿತ್ರವೂ ಮನಸೂರೆಗೊಳ್ಳುವಂತಿದೆ.<br /> ಈ ಕಲಾಕೃತಿ ‘ಸಚಿತ್ರ ಆನಂದಲಹರಿ’ ಪ್ರದರ್ಶನ ಫೆಬ್ರುವರಿ 5ರಿಂದ ಫೆಬ್ರುವರಿ 9ರವರೆಗೆ ನಡೆಯಲಿದೆ. ಬುಧವಾರ ಸಂಜೆ 6ಕ್ಕೆ ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ ಭಾಗವಹಿಸಲಿದ್ದಾರೆ.<br /> <br /> ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ವೀಕ್ಷಣೆಗೆ ಅವಕಾಶವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>