<p>ಮಂಗಳೂರು: ನೀರಿನ ಕೊರತೆಯಿಂದಲೇ ಮಂಗಳೂರು ತೈಲ ಶುದ್ಧೀಕರಣ ಕಂಪೆನಿಯ (ಎಂಆರ್ಪಿಎಲ್) ಎರಡು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪೆನಿ ಪ್ರಕಟಣೆ ಹೊರಡಿಸಿದ್ದು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ತಂತ್ರವೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.<br /> <br /> ತುಂಬೆ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಉದ್ದಿಮೆಗಳ ಬದಲಿಗೆ ಜನತೆಯ ಕುಡಿಯುವ ನೀರಿಗೆ ಆದ್ಯತೆ ನೀಡುವುದು ಜಿಲ್ಲಾಡಳಿತದ ಉದ್ದೇಶವಾಗಿತ್ತು. ಅದರಂತೆ ಎಂಸಿಎಫ್ಗೆ ಮೊದಲೇ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿ, ಎಂಆರ್ಪಿಎಲ್ಗೂ ನೀರು ಬಳಸದಂತೆ ಸೂಚಿಸಿತ್ತು.<br /> <br /> ಜಿಲ್ಲಾಡಳಿತದ ಈ ಸೂಚನೆಯನ್ನೇ ತಿರುಗುಬಾಣ ವನ್ನಾಗಿ ಕಂಪೆನಿ ಮಾಡಿಕೊಂಡಿದೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ಅಭಾವ ಎದುರಾದೀತು ಎಂಬ ಚಿತ್ರಣವನ್ನು ಬಿಂಬಿಸುವ ಸಲುವಾಗಿ ಎರಡು ಘಟಕಗಳನ್ನು ಸ್ಥಗಿತಗೊಳಿಸಿದ್ದನ್ನು ಕಂಪೆನಿ ದೊಡ್ಡದಾಗಿ ಪ್ರಚಾರಗೊಳಿಸಿದೆ ಎಂದು ಹೇಳಲಾಗುತ್ತಿದೆ.<br /> <br /> ವಾಸ್ತವವಾಗಿ ಎಂಆರ್ಪಿಎಲ್ನ 3ನೇ ಹಂತದ ಘಟಕ ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಿದ್ದು 15 ದಿನಗಳ ಹಿಂದೆಯಷ್ಟೇ. ಅಂದರೆ 3ನೇ ಹಂತದ ಕಾಮಗಾರಿ ಈಗ ನಡೆಯುತ್ತಿದೆ. ಈ ಘಟಕದಲ್ಲಿ ಶುದ್ಧೀಕರಣ ಕಾರ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಯೇ ಇಲ್ಲ. ಎರಡನೇ ಘಟಕವನ್ನು ವಾರ್ಷಿಕ ನಿರ್ವಹಣೆಗಾಗಿ ಸ್ಥಗಿತಗೊಳಿಸಲು ನಾಲ್ಕು ತಿಂಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಅದರಂತೆ ಏಪ್ರಿಲ್ 17ರಂದು ಈ ಘಟಕ ಸ್ಥಗಿತಗೊಳ್ಳಲಿತ್ತು. <br /> <br /> ನೀರು ಬಳಸಬಾರದು ಎಂಬ ಜಿಲ್ಲಾಡಳಿತದ ಆದೇಶವನ್ನು ಪ್ರತಿ ಅಸ್ತ್ರವಾಗಿ ಮಾಡಿಕೊಳ್ಳುವ ಸಲುವಾಗಿ, ನಿಗದಿತ ಸಮಯಕ್ಕಿಂತ ನಾಲ್ಕು ದಿನ ಮುಂಚಿತವಾಗಿಯೇ ಎರಡನೇ ಘಟಕವನ್ನು ಸ್ಥಗಿತಗೊಳಿಸಿ ನೀರಿನ ಅಭಾವಕ್ಕಾಗಿಯೇ ಸ್ಥಗಿತಗೊಳಿಸಿದ್ದಾಗಿ ಕಂಪೆನಿ ಪ್ರಕಟಣೆ ನೀಡಿದೆ ಎಂದು ಹೇಳಲಾಗಿದೆ.<br /> <br /> `ನೀರಿನ ಅಭಾವದಿಂದ ಎಂಆರ್ಪಿಎಲ್ಗೆ ಬಿಸಿ ತಟ್ಟಿಲ್ಲ ಎಂದಲ್ಲ, ಆದರೆ ಅದನ್ನು ಮೊದಲಾಗಿಯೇ ಯೋಚಿಸಿ ವಾರ್ಷಿಕ ನಿರ್ವಹಣೆಯಂತಹ ಕಾರ್ಯ ಗಳನ್ನು ಈ ಅವಧಿಗೆ ನಿದಗಿಪಡಿಸಲಾಗಿರುತ್ತದೆ. ನಾಲ್ಕಾರು ತಿಂಗಳು ಮೊದಲೇ ಇದೆಲ್ಲ ನಿರ್ಧಾರವಾಗಿರುತ್ತದೆ. ಕಂಪೆನಿಯೊಳಗೆ ಉದ್ಯಾನಗಳಿಗೆ ನೀರು ಹಾಕುವುದು ಸಹಿತ ಇತರ ಕಡೆ ನೀರು ಬಳಕೆಯಲ್ಲಿ ಕಡಿತ ಮಾಡಲಾಗಿದೆ. ಆದರೆ ಇಡೀ ಕಂಪೆನಿಯೇ ಸ್ಥಗಿತಗೊಳ್ಳುವಂತಹ ಸ್ಥಿತಿಯಂತೂ ಸದ್ಯಕ್ಕಿಲ್ಲ~ ಎಂದು ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ಲಭ್ಯ ಇರುವ ನೀರಿನಲ್ಲಿ ಒಂದನೇ ಘಟಕ ಮುಂದಿನ ಹಲವಾರು ದಿನ ತನ್ನ ಉತ್ಪಾದನಾ ಕಾರ್ಯ ಮುಂದು ವರಿಸಲಿದೆ. ಒಂದನೇ ಘಟಕ ನಡೆಯುವಷ್ಟು ನೀರಿನ ಸಂಗ್ರಹ ಈಗಲೂ ಇದೆ. ಒಂದು ವಾರ ಅಥವಾ 10 ದಿನಗಳಲ್ಲಿ ಉತ್ಪಾದನಾ ಕಾರ್ಯ ಸ್ಥಗಿತಗೊಳ್ಳುವ ಸಾಧ್ಯತೆಯಂತೂ ಇಲ್ಲ.<br /> <br /> ಎರಡನೇ ಘಟಕ ಸ್ಥಗಿತಗೊಳಿಸುವುದರಿಂದ ಉದ್ಭವವಾಗುವ ಪೆಟ್ರೋಲಿಯಂ ಕೊರತೆಯನ್ನು ನೀಗಿಸಲು ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ನೀರಿನ ಕೊರತೆಯಿಂದಲೇ ಮಂಗಳೂರು ತೈಲ ಶುದ್ಧೀಕರಣ ಕಂಪೆನಿಯ (ಎಂಆರ್ಪಿಎಲ್) ಎರಡು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪೆನಿ ಪ್ರಕಟಣೆ ಹೊರಡಿಸಿದ್ದು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ತಂತ್ರವೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.<br /> <br /> ತುಂಬೆ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಉದ್ದಿಮೆಗಳ ಬದಲಿಗೆ ಜನತೆಯ ಕುಡಿಯುವ ನೀರಿಗೆ ಆದ್ಯತೆ ನೀಡುವುದು ಜಿಲ್ಲಾಡಳಿತದ ಉದ್ದೇಶವಾಗಿತ್ತು. ಅದರಂತೆ ಎಂಸಿಎಫ್ಗೆ ಮೊದಲೇ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿ, ಎಂಆರ್ಪಿಎಲ್ಗೂ ನೀರು ಬಳಸದಂತೆ ಸೂಚಿಸಿತ್ತು.<br /> <br /> ಜಿಲ್ಲಾಡಳಿತದ ಈ ಸೂಚನೆಯನ್ನೇ ತಿರುಗುಬಾಣ ವನ್ನಾಗಿ ಕಂಪೆನಿ ಮಾಡಿಕೊಂಡಿದೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ಅಭಾವ ಎದುರಾದೀತು ಎಂಬ ಚಿತ್ರಣವನ್ನು ಬಿಂಬಿಸುವ ಸಲುವಾಗಿ ಎರಡು ಘಟಕಗಳನ್ನು ಸ್ಥಗಿತಗೊಳಿಸಿದ್ದನ್ನು ಕಂಪೆನಿ ದೊಡ್ಡದಾಗಿ ಪ್ರಚಾರಗೊಳಿಸಿದೆ ಎಂದು ಹೇಳಲಾಗುತ್ತಿದೆ.<br /> <br /> ವಾಸ್ತವವಾಗಿ ಎಂಆರ್ಪಿಎಲ್ನ 3ನೇ ಹಂತದ ಘಟಕ ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಿದ್ದು 15 ದಿನಗಳ ಹಿಂದೆಯಷ್ಟೇ. ಅಂದರೆ 3ನೇ ಹಂತದ ಕಾಮಗಾರಿ ಈಗ ನಡೆಯುತ್ತಿದೆ. ಈ ಘಟಕದಲ್ಲಿ ಶುದ್ಧೀಕರಣ ಕಾರ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಯೇ ಇಲ್ಲ. ಎರಡನೇ ಘಟಕವನ್ನು ವಾರ್ಷಿಕ ನಿರ್ವಹಣೆಗಾಗಿ ಸ್ಥಗಿತಗೊಳಿಸಲು ನಾಲ್ಕು ತಿಂಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಅದರಂತೆ ಏಪ್ರಿಲ್ 17ರಂದು ಈ ಘಟಕ ಸ್ಥಗಿತಗೊಳ್ಳಲಿತ್ತು. <br /> <br /> ನೀರು ಬಳಸಬಾರದು ಎಂಬ ಜಿಲ್ಲಾಡಳಿತದ ಆದೇಶವನ್ನು ಪ್ರತಿ ಅಸ್ತ್ರವಾಗಿ ಮಾಡಿಕೊಳ್ಳುವ ಸಲುವಾಗಿ, ನಿಗದಿತ ಸಮಯಕ್ಕಿಂತ ನಾಲ್ಕು ದಿನ ಮುಂಚಿತವಾಗಿಯೇ ಎರಡನೇ ಘಟಕವನ್ನು ಸ್ಥಗಿತಗೊಳಿಸಿ ನೀರಿನ ಅಭಾವಕ್ಕಾಗಿಯೇ ಸ್ಥಗಿತಗೊಳಿಸಿದ್ದಾಗಿ ಕಂಪೆನಿ ಪ್ರಕಟಣೆ ನೀಡಿದೆ ಎಂದು ಹೇಳಲಾಗಿದೆ.<br /> <br /> `ನೀರಿನ ಅಭಾವದಿಂದ ಎಂಆರ್ಪಿಎಲ್ಗೆ ಬಿಸಿ ತಟ್ಟಿಲ್ಲ ಎಂದಲ್ಲ, ಆದರೆ ಅದನ್ನು ಮೊದಲಾಗಿಯೇ ಯೋಚಿಸಿ ವಾರ್ಷಿಕ ನಿರ್ವಹಣೆಯಂತಹ ಕಾರ್ಯ ಗಳನ್ನು ಈ ಅವಧಿಗೆ ನಿದಗಿಪಡಿಸಲಾಗಿರುತ್ತದೆ. ನಾಲ್ಕಾರು ತಿಂಗಳು ಮೊದಲೇ ಇದೆಲ್ಲ ನಿರ್ಧಾರವಾಗಿರುತ್ತದೆ. ಕಂಪೆನಿಯೊಳಗೆ ಉದ್ಯಾನಗಳಿಗೆ ನೀರು ಹಾಕುವುದು ಸಹಿತ ಇತರ ಕಡೆ ನೀರು ಬಳಕೆಯಲ್ಲಿ ಕಡಿತ ಮಾಡಲಾಗಿದೆ. ಆದರೆ ಇಡೀ ಕಂಪೆನಿಯೇ ಸ್ಥಗಿತಗೊಳ್ಳುವಂತಹ ಸ್ಥಿತಿಯಂತೂ ಸದ್ಯಕ್ಕಿಲ್ಲ~ ಎಂದು ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ಲಭ್ಯ ಇರುವ ನೀರಿನಲ್ಲಿ ಒಂದನೇ ಘಟಕ ಮುಂದಿನ ಹಲವಾರು ದಿನ ತನ್ನ ಉತ್ಪಾದನಾ ಕಾರ್ಯ ಮುಂದು ವರಿಸಲಿದೆ. ಒಂದನೇ ಘಟಕ ನಡೆಯುವಷ್ಟು ನೀರಿನ ಸಂಗ್ರಹ ಈಗಲೂ ಇದೆ. ಒಂದು ವಾರ ಅಥವಾ 10 ದಿನಗಳಲ್ಲಿ ಉತ್ಪಾದನಾ ಕಾರ್ಯ ಸ್ಥಗಿತಗೊಳ್ಳುವ ಸಾಧ್ಯತೆಯಂತೂ ಇಲ್ಲ.<br /> <br /> ಎರಡನೇ ಘಟಕ ಸ್ಥಗಿತಗೊಳಿಸುವುದರಿಂದ ಉದ್ಭವವಾಗುವ ಪೆಟ್ರೋಲಿಯಂ ಕೊರತೆಯನ್ನು ನೀಗಿಸಲು ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>