<p><strong>ಪೋರ್ಟ್ ಆಫ್ ಸ್ಪೇನ್ (ಐಎಎನ್ಎಸ್):</strong> ಕೆರಿಬಿಯನ್ ಕಡಲು ಪ್ರದೇಶದ ದ್ವೀಪ ರಾಷ್ಟ್ರ ಟ್ರಿನಿಡಾಡ್ ಮತ್ತು ಟೊಬಾಗೊದಾದ್ಯಂತ ಶನಿವಾರ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು.<br /> <br /> ಇಲ್ಲಿನ ಮಹಾತ್ಮ ಗಾಂಧಿ ಸಂಸ್ಕೃತಿ ಮತ್ತು ಸಹಕಾರ ಕೇಂದ್ರದಲ್ಲಿ ನಡೆದ ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿ ಮಲಯ್ ಮಿಶ್ರಾ ಪಾಲ್ಗೊಂಡಿದ್ದರು. ಇಲ್ಲಿ ಈ ಹಬ್ಬಕ್ಕೆ ಸರ್ಕಾರಿ ರಜೆ ಇಲ್ಲದ ಕಾರಣ, ಸರ್ಕಾರಿ ರಜೆ ದಿನವಾದ ಭಾನುವಾರದಂದು ಹಬ್ಬವನ್ನು ಆಚರಿಸಲಾಯಿತು.<br /> <br /> `ಈ ಹಬ್ಬದ ನೆಪದಲ್ಲಿ ಹಿಂದೂಗಳೆಲ್ಲ ಒಟ್ಟಿಗೆ ಸೇರುತ್ತೇವೆ. ಮಕ್ಕಳ ಭವಿಷ್ಯದ ಕುರಿತು ಚಿಂತಿಸಲು ಹೋಳಿ ಹಬ್ಬ ನೆರವಾಗುತ್ತದೆ~ ಎಂದು ಟ್ರಿನಿಡಾಡ್ ಮತ್ತು ಟೊಬಾಗೊ ರಾಷ್ಟ್ರದ ಪ್ರಧಾನಿ ಕಮಲಾ ಪ್ರಸಾದ್ ಬಸ್ಸೇಸಾರ್ ಅಭಿಪ್ರಾಯಪಟ್ಟಿದ್ದಾರೆ<br /> <br /> `ಶತಮಾನದ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಇಲ್ಲಿಗೆ ಬಂದು ನೆಲಸಿದ ಪೂರ್ವಿಕರಿಗೆ ಈ ಹಬ್ಬದ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತದೆ~ ಎಂದು ಹಣಕಾಸು ಸಚಿವ ವಿನ್ಸ್ಟನ್ ಡೂಕೆರಾನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೋರ್ಟ್ ಆಫ್ ಸ್ಪೇನ್ (ಐಎಎನ್ಎಸ್):</strong> ಕೆರಿಬಿಯನ್ ಕಡಲು ಪ್ರದೇಶದ ದ್ವೀಪ ರಾಷ್ಟ್ರ ಟ್ರಿನಿಡಾಡ್ ಮತ್ತು ಟೊಬಾಗೊದಾದ್ಯಂತ ಶನಿವಾರ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು.<br /> <br /> ಇಲ್ಲಿನ ಮಹಾತ್ಮ ಗಾಂಧಿ ಸಂಸ್ಕೃತಿ ಮತ್ತು ಸಹಕಾರ ಕೇಂದ್ರದಲ್ಲಿ ನಡೆದ ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿ ಮಲಯ್ ಮಿಶ್ರಾ ಪಾಲ್ಗೊಂಡಿದ್ದರು. ಇಲ್ಲಿ ಈ ಹಬ್ಬಕ್ಕೆ ಸರ್ಕಾರಿ ರಜೆ ಇಲ್ಲದ ಕಾರಣ, ಸರ್ಕಾರಿ ರಜೆ ದಿನವಾದ ಭಾನುವಾರದಂದು ಹಬ್ಬವನ್ನು ಆಚರಿಸಲಾಯಿತು.<br /> <br /> `ಈ ಹಬ್ಬದ ನೆಪದಲ್ಲಿ ಹಿಂದೂಗಳೆಲ್ಲ ಒಟ್ಟಿಗೆ ಸೇರುತ್ತೇವೆ. ಮಕ್ಕಳ ಭವಿಷ್ಯದ ಕುರಿತು ಚಿಂತಿಸಲು ಹೋಳಿ ಹಬ್ಬ ನೆರವಾಗುತ್ತದೆ~ ಎಂದು ಟ್ರಿನಿಡಾಡ್ ಮತ್ತು ಟೊಬಾಗೊ ರಾಷ್ಟ್ರದ ಪ್ರಧಾನಿ ಕಮಲಾ ಪ್ರಸಾದ್ ಬಸ್ಸೇಸಾರ್ ಅಭಿಪ್ರಾಯಪಟ್ಟಿದ್ದಾರೆ<br /> <br /> `ಶತಮಾನದ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಇಲ್ಲಿಗೆ ಬಂದು ನೆಲಸಿದ ಪೂರ್ವಿಕರಿಗೆ ಈ ಹಬ್ಬದ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುತ್ತದೆ~ ಎಂದು ಹಣಕಾಸು ಸಚಿವ ವಿನ್ಸ್ಟನ್ ಡೂಕೆರಾನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>