<p><strong>ಬೆಂಗಳೂರು:</strong> ಡಿವೈಎಸ್ಎಸ್ ಹಾಕಿ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್.ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ 2-0ಗೋಲುಗಳಿಂದ ಎಚ್ಎಎಲ್ ಎದುರು ಗೆಲುವು ಸಾಧಿಸಿದರು.<br /> <br /> ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಚೆಂಗಪ್ಪ ಹಾಗೂ ಸುಧಾಕರ್ ಕ್ರಮವಾಗಿ 5 ಹಾಗೂ 59ನೇ ನಿಮಿಷದಲ್ಲಿ ಗೋಲು ಗಳಿಸಿದರು. ಎದುರಾಳಿ ತಂಡದ ಪರ ಯಾವುದೇ ಗೋಲು ಬರಲಿಲ್ಲ.<br /> <br /> ದಿನದ ಇನ್ನೊಂದು ಪಂದ್ಯದಲ್ಲಿ ಎಸ್ಎಐ 9-0ಗೋಲುಗಳಿಂದ ಕೆಜಿಎಫ್ನ ಐಡಿಯಲ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು. <br /> <br /> ಎಸ್ಎಐನ ಮನು ಪಟೇಲ್ (5ನೇ ನಿಮಿಷ), ಉಮೇಶ್ (10), ರಫೀಕ್ (13), ವಿನಯ್ ಬಿಜ್ವಾಡ್ (15), ಬಿಜು (17), ತಿಮ್ಮಣ್ಣ (22 ಹಾಗೂ 35), ದರ್ಶನ್ (38) ಮತ್ತು ಬಿದ್ದಪ್ಪ (42) ಗೋಲು ಗಳಿಸಿದರು. ಎದುರಾಳಿ ತಂಡ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು. <br /> <br /> ಆರ್ಬಿಐ-ಬಿಇಎಂಎಲ್ ಬೆಂಗಳೂರು ಹಾಗೂ ಎಚ್ಎಎಲ್-ಎಬಿಎಚ್ಎ ತಂಡಗಳು ಮಂಗಳವಾರ ಪೈಪೋಟಿ ನಡೆಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಡಿವೈಎಸ್ಎಸ್ ಹಾಕಿ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್.ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ 2-0ಗೋಲುಗಳಿಂದ ಎಚ್ಎಎಲ್ ಎದುರು ಗೆಲುವು ಸಾಧಿಸಿದರು.<br /> <br /> ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಚೆಂಗಪ್ಪ ಹಾಗೂ ಸುಧಾಕರ್ ಕ್ರಮವಾಗಿ 5 ಹಾಗೂ 59ನೇ ನಿಮಿಷದಲ್ಲಿ ಗೋಲು ಗಳಿಸಿದರು. ಎದುರಾಳಿ ತಂಡದ ಪರ ಯಾವುದೇ ಗೋಲು ಬರಲಿಲ್ಲ.<br /> <br /> ದಿನದ ಇನ್ನೊಂದು ಪಂದ್ಯದಲ್ಲಿ ಎಸ್ಎಐ 9-0ಗೋಲುಗಳಿಂದ ಕೆಜಿಎಫ್ನ ಐಡಿಯಲ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು. <br /> <br /> ಎಸ್ಎಐನ ಮನು ಪಟೇಲ್ (5ನೇ ನಿಮಿಷ), ಉಮೇಶ್ (10), ರಫೀಕ್ (13), ವಿನಯ್ ಬಿಜ್ವಾಡ್ (15), ಬಿಜು (17), ತಿಮ್ಮಣ್ಣ (22 ಹಾಗೂ 35), ದರ್ಶನ್ (38) ಮತ್ತು ಬಿದ್ದಪ್ಪ (42) ಗೋಲು ಗಳಿಸಿದರು. ಎದುರಾಳಿ ತಂಡ ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು. <br /> <br /> ಆರ್ಬಿಐ-ಬಿಇಎಂಎಲ್ ಬೆಂಗಳೂರು ಹಾಗೂ ಎಚ್ಎಎಲ್-ಎಬಿಎಚ್ಎ ತಂಡಗಳು ಮಂಗಳವಾರ ಪೈಪೋಟಿ ನಡೆಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>