<p><strong>ಕೋಲ್ಕತ್ತ:</strong> ವಿಶ್ವಕಪ್ ಕ್ರಿಕೆಟ್ ಫೈನಲ್ನಲ್ಲಿ ಆಕರ್ಷಕ 97 ರನ್ ಗಳಿಸಿ ಭಾರತ ಚಾಂಪಿಯನ್ ಆಗಲು ಕಾರಣರಾಗಿದ್ದ ಗೌತಮ್ ಗಂಭೀರ್ ಈಗ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಕ್ರೀಡಾಂಗಣದ ಹೊರಗೆ...!<br /> <br /> ಕಾರಣ ಆರಂಭಿಕ ಬ್ಯಾಟ್ಸ್ಮನ್ ಗಂಭೀರ್ ಅಕ್ಟೋಬರ್ 28ರಂದು ದೆಹಲಿ ಹುಡುಗಿ ನತಾಶಾ ಜೈನ್ ಅವರ ಕೈ ಹಿಡಿಯಲಿದ್ದಾರೆ. ಈ ವಿವಾಹ ಸಮಾರಂಭ ಗುಡಗಾಂವ್ನಲ್ಲಿ ನಡೆಯಲಿದೆ. <br /> <br /> `ವಿವಾಹ ಕಾರಣ ಗಂಭೀರ್ ಟ್ವೆಂಟಿ-20 ಪಂದ್ಯದಲ್ಲಿ ಆಡುತ್ತಿಲ್ಲ~ ಎಂದು ಬಿಸಿಸಿಐ ಕೂಡ ತಿಳಿಸಿದೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯ ಅ.29ರಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅವರ ಬದಲಿಗೆ ಕರ್ನಾಟಕದ ರಾಬಿನ್ ಉತ್ತಪ್ಪ ಅವರಿಗೆ ಅವಕಾಶ ನೀಡಲಾಗಿದೆ.<br /> <br /> ಈ ವಿವಾಹ ಸಮಾರಂಭಕ್ಕೆ ಭಾರತ ತಂಡದ ಕೆಲ ಆಟಗಾರರು ತೆರಳಲು ಸಾಧ್ಯವಾಗುತ್ತಿಲ್ಲ. ಕಾರಣ ಮರುದಿನವೇ ಕ್ರಿಕೆಟ್ ಪಂದ್ಯವಿದೆ. ಆದರೆ ಆಪ್ತ ಸ್ನೇಹಿತ ವೀರೇಂದ್ರ ಸೆಹ್ವಾಗ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.<br /> 29 ವರ್ಷ ವಯಸ್ಸಿನ ಗಂಭೀರ್ ಮಂಗಳವಾರ ನಡೆಯಲಿರುವ ಐದನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಡಲು ಸದ್ಯ ಕೋಲ್ಕತ್ತದಲ್ಲಿದ್ದಾರೆ. ಅವರು ಬುಧವಾರ ಬೆಳಿಗ್ಗೆ ನವದೆಹಲಿಗೆ ಹಿಂತಿರುಗಲಿದ್ದಾರೆ.<br /> <br /> 27ರ ಹರೆಯದ ನತಾಶಾ ದೆಹಲಿಯ ಪ್ರಸಿದ್ಧ ಉದ್ಯಮಿ ರವೀಂದ್ರ ಜೈನ್ ಅವರ ಪುತ್ರಿ. ಐದು ತಿಂಗಳ ಹಿಂದೆಯೇ ಇವರಿಬ್ಬರ ನಡುವೆ ಪರಿಚಯವಾಗಿತ್ತು ಎನ್ನಲಾಗಿದೆ. ಆದರೆ ಭಾರತ ತಂಡದ ಉಪನಾಯಕ ಕೂಡ ಆಗಿರುವ ಗೌತಿ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ.<br /> <br /> ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 5-0ರಲ್ಲಿ ಗೆದ್ದು ಗಂಭೀರ್ಗೆ ಉಡುಗೊರೆ ನೀಡಲು ಸಹ ಆಟಗಾರರು ಈಗ ಎದುರು ನೋಡುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ವಿಶ್ವಕಪ್ ಕ್ರಿಕೆಟ್ ಫೈನಲ್ನಲ್ಲಿ ಆಕರ್ಷಕ 97 ರನ್ ಗಳಿಸಿ ಭಾರತ ಚಾಂಪಿಯನ್ ಆಗಲು ಕಾರಣರಾಗಿದ್ದ ಗೌತಮ್ ಗಂಭೀರ್ ಈಗ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಕ್ರೀಡಾಂಗಣದ ಹೊರಗೆ...!<br /> <br /> ಕಾರಣ ಆರಂಭಿಕ ಬ್ಯಾಟ್ಸ್ಮನ್ ಗಂಭೀರ್ ಅಕ್ಟೋಬರ್ 28ರಂದು ದೆಹಲಿ ಹುಡುಗಿ ನತಾಶಾ ಜೈನ್ ಅವರ ಕೈ ಹಿಡಿಯಲಿದ್ದಾರೆ. ಈ ವಿವಾಹ ಸಮಾರಂಭ ಗುಡಗಾಂವ್ನಲ್ಲಿ ನಡೆಯಲಿದೆ. <br /> <br /> `ವಿವಾಹ ಕಾರಣ ಗಂಭೀರ್ ಟ್ವೆಂಟಿ-20 ಪಂದ್ಯದಲ್ಲಿ ಆಡುತ್ತಿಲ್ಲ~ ಎಂದು ಬಿಸಿಸಿಐ ಕೂಡ ತಿಳಿಸಿದೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯ ಅ.29ರಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅವರ ಬದಲಿಗೆ ಕರ್ನಾಟಕದ ರಾಬಿನ್ ಉತ್ತಪ್ಪ ಅವರಿಗೆ ಅವಕಾಶ ನೀಡಲಾಗಿದೆ.<br /> <br /> ಈ ವಿವಾಹ ಸಮಾರಂಭಕ್ಕೆ ಭಾರತ ತಂಡದ ಕೆಲ ಆಟಗಾರರು ತೆರಳಲು ಸಾಧ್ಯವಾಗುತ್ತಿಲ್ಲ. ಕಾರಣ ಮರುದಿನವೇ ಕ್ರಿಕೆಟ್ ಪಂದ್ಯವಿದೆ. ಆದರೆ ಆಪ್ತ ಸ್ನೇಹಿತ ವೀರೇಂದ್ರ ಸೆಹ್ವಾಗ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.<br /> 29 ವರ್ಷ ವಯಸ್ಸಿನ ಗಂಭೀರ್ ಮಂಗಳವಾರ ನಡೆಯಲಿರುವ ಐದನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಡಲು ಸದ್ಯ ಕೋಲ್ಕತ್ತದಲ್ಲಿದ್ದಾರೆ. ಅವರು ಬುಧವಾರ ಬೆಳಿಗ್ಗೆ ನವದೆಹಲಿಗೆ ಹಿಂತಿರುಗಲಿದ್ದಾರೆ.<br /> <br /> 27ರ ಹರೆಯದ ನತಾಶಾ ದೆಹಲಿಯ ಪ್ರಸಿದ್ಧ ಉದ್ಯಮಿ ರವೀಂದ್ರ ಜೈನ್ ಅವರ ಪುತ್ರಿ. ಐದು ತಿಂಗಳ ಹಿಂದೆಯೇ ಇವರಿಬ್ಬರ ನಡುವೆ ಪರಿಚಯವಾಗಿತ್ತು ಎನ್ನಲಾಗಿದೆ. ಆದರೆ ಭಾರತ ತಂಡದ ಉಪನಾಯಕ ಕೂಡ ಆಗಿರುವ ಗೌತಿ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ.<br /> <br /> ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 5-0ರಲ್ಲಿ ಗೆದ್ದು ಗಂಭೀರ್ಗೆ ಉಡುಗೊರೆ ನೀಡಲು ಸಹ ಆಟಗಾರರು ಈಗ ಎದುರು ನೋಡುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>