<p>ಹಾಸ್ಯ ಚಕ್ರವರ್ತಿ ಎಂದೇ ಪ್ರಸಿದ್ಧಿ ಪಡೆದ ನಟ ದಿವಂಗತ ನರಸಿಂಹರಾಜು ಅವರ 89ನೇ ಜನ್ಮದಿನೋತ್ಸವ ಪ್ರಯುಕ್ತ `ಗೋಲ್ಸ್ ಅಂಡ್ ಡ್ರೀಮ್ಜ~ ಸಂಸ್ಥೆಯು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.<br /> <br /> ತಮ್ಮ ಹಾಸ್ಯ ನಟನೆಯ ಮೂಲಕ ರಾಜ್ಯದಾದ್ಯಂತ ಮನೆಮಾತಾಗಿದ್ದ ನಟ ಟಿ.ಆರ್. ನರಸಿಂಹರಾಜು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಪಾತ್ರಗಳು, ಅದರ ವಿಶೇಷತೆ, ಆ ಪಾತ್ರಗಳು ಮಾಡಿದ ಪರಿಣಾಮ ಸೇರಿದಂತೆ ಅನೇಕ ವಿಷಯಗಳನ್ನೊಳಗೊಂಡ ಪ್ರಬಂಧ ಸ್ಪರ್ಧೆ ಇರುತ್ತದೆ.<br /> <br /> `ಹಾಸ್ಯಾಭಿನಯಕ್ಕೆ ನರಸಿಂಹರಾಜು ಅವರ ಕೊಡುಗೆ~ ಮತ್ತು `ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜು ಅವರು ಬೆಳೆದು ಬಂದ ಪರಿ~ ಈ ಎರಡು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಸಂಶೋಧನಾತ್ಮಕ ಪ್ರಬಂಧ ಬರೆಯಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ಜು.15ರೊಳಗೆ ಪ್ರಬಂಧ ಬರೆದು ಕಳುಹಿಸಬೇಕು. <br /> <br /> ಮೊದಲ ಬಹುಮಾನ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ಮೂರನೇ ಸ್ಥಾನಕ್ಕೆ ಎರಡು ಸಾವಿರ ರೂ. ನಗದು ಬಹುಮಾನ. ಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. <br /> <br /> ಜು.24ರಂದು ಟೌನ್ಹಾಲ್ನಲ್ಲಿ ನಡೆಯುವ ನರಸಿಂಹರಾಜು ಜನ್ಮ ದಿನಾಚರಣೆಯಂದು ಬಹುಮಾನ ವಿತರಸಲಾಗುತ್ತದೆ.<br /> <br /> ಮಾಹಿತಿಗೆ: 94820 71501. <a href="mailto:narasimharaju.essay@gmail.com">narasimharaju.essay@gmail.com</a>. <br /> . <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸ್ಯ ಚಕ್ರವರ್ತಿ ಎಂದೇ ಪ್ರಸಿದ್ಧಿ ಪಡೆದ ನಟ ದಿವಂಗತ ನರಸಿಂಹರಾಜು ಅವರ 89ನೇ ಜನ್ಮದಿನೋತ್ಸವ ಪ್ರಯುಕ್ತ `ಗೋಲ್ಸ್ ಅಂಡ್ ಡ್ರೀಮ್ಜ~ ಸಂಸ್ಥೆಯು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.<br /> <br /> ತಮ್ಮ ಹಾಸ್ಯ ನಟನೆಯ ಮೂಲಕ ರಾಜ್ಯದಾದ್ಯಂತ ಮನೆಮಾತಾಗಿದ್ದ ನಟ ಟಿ.ಆರ್. ನರಸಿಂಹರಾಜು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಪಾತ್ರಗಳು, ಅದರ ವಿಶೇಷತೆ, ಆ ಪಾತ್ರಗಳು ಮಾಡಿದ ಪರಿಣಾಮ ಸೇರಿದಂತೆ ಅನೇಕ ವಿಷಯಗಳನ್ನೊಳಗೊಂಡ ಪ್ರಬಂಧ ಸ್ಪರ್ಧೆ ಇರುತ್ತದೆ.<br /> <br /> `ಹಾಸ್ಯಾಭಿನಯಕ್ಕೆ ನರಸಿಂಹರಾಜು ಅವರ ಕೊಡುಗೆ~ ಮತ್ತು `ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜು ಅವರು ಬೆಳೆದು ಬಂದ ಪರಿ~ ಈ ಎರಡು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಸಂಶೋಧನಾತ್ಮಕ ಪ್ರಬಂಧ ಬರೆಯಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ಜು.15ರೊಳಗೆ ಪ್ರಬಂಧ ಬರೆದು ಕಳುಹಿಸಬೇಕು. <br /> <br /> ಮೊದಲ ಬಹುಮಾನ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ಮೂರನೇ ಸ್ಥಾನಕ್ಕೆ ಎರಡು ಸಾವಿರ ರೂ. ನಗದು ಬಹುಮಾನ. ಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. <br /> <br /> ಜು.24ರಂದು ಟೌನ್ಹಾಲ್ನಲ್ಲಿ ನಡೆಯುವ ನರಸಿಂಹರಾಜು ಜನ್ಮ ದಿನಾಚರಣೆಯಂದು ಬಹುಮಾನ ವಿತರಸಲಾಗುತ್ತದೆ.<br /> <br /> ಮಾಹಿತಿಗೆ: 94820 71501. <a href="mailto:narasimharaju.essay@gmail.com">narasimharaju.essay@gmail.com</a>. <br /> . <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>