<p><strong>ಬೆಂಗಳೂರು: `</strong>ಸಾಹಿತ್ಯ ವಲಯವನ್ನು ವಿಸ್ತೃತವಾಗಿ ಚರ್ಚಿಸುವ ಸಂದರ್ಭದಲ್ಲಿ ವಿಮರ್ಶಕರು ಕಾವ್ಯಮೀಮಾಂಸೆಗೆ ನೀಡುವ ಪ್ರಾಧಾನ್ಯತೆಯನ್ನು ನಾಟಕ ಮೀಮಾಂಸೆಯಂತಹ ಪ್ರಮುಖ ಅಂಶಕ್ಕೆ ನೀಡುತ್ತಿಲ್ಲ~ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸದಸ್ಯ ಪ್ರಸನ್ನ ಅವರು ಖೇದ ವ್ಯಕ್ತಪಡಿಸಿದರು. <br /> <br /> ಕೇಂದ್ರ ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ನವ್ಯೋತ್ತರ ಸಂದರ್ಭದ ಕನ್ನಡ ನಾಟಕಗಳು~ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. <br /> <br /> `ನಾಟಕಗಳು ಕೇವಲ ಕಲೆಯ ಭಾಗವಾಗದೇ ಚಳವಳಿಯ ವೇದಿಕೆಯಾಗಿ ಬಳಕೆಗೊಂಡಿವೆ. ಹೊಸ ಸಮುದಾಯಕ್ಕೆ ದನಿಯಾಗಿ ನಾಟಕಗಳು ಮರು ರೂಪ ಪಡೆದಿದೆ.<br /> <br /> ಆದರೆ ನಾಟಕದಲ್ಲಿರುವ ಕಾವ್ಯಮೀಮಾಂಸೆಯನ್ನು ಮಾತ್ರ ಪ್ರಮುಖವಾಗಿಸಿ ಈ ಬಗ್ಗೆ ಚರ್ಚಿಸಲಾಗುತ್ತದೆ ಹೊರತು ನಾಟಕದ ಸಮಗ್ರ ರೂಪವನ್ನು ವಿಮರ್ಶಿಸುವುದು ವಿರಳ~ ಎಂದು ಅಭಿಪ್ರಾಯಪಟ್ಟರು. <br /> <br /> `ಕುವೆಂಪು ಅವರು ತಮ್ಮ ನಾಟಕಗಳು ಜನರ ಮನೋರಂಗದಲ್ಲಿ ಮಾತ್ರ ಬಿಂಬಿತಗೊಳ್ಳಬೇಕು ಎಂದು ಬಯಸಿದ್ದರು. ಇದು ಕಾವ್ಯ ಮೀಮಾಂಸೆಯೆಡೆಗೆ ಅವರಿಗಿದ್ದ ಒಲವನ್ನು ಸೂಚಿಸುತ್ತದೆ. ಎಲ್ಲ ಗೌರವಗಳ ನಡುವೆಯು ಕುವೆಂಪು ಅವರ ಈ ಭಾವವನ್ನು ತಿರಸ್ಕರಿಸಬೇಕಿದೆ. <br /> <br /> ಆ ಮೂಲಕ ಹೊಸ ಭಾಷ್ಯ ಬರೆಯಬೇಕಿದೆ~ ಎಂದು ಹೇಳಿದರು. `ನಾಟಕ ರಂಗದಲ್ಲಿ `ರೂಪಾಂತರ~ ಮತ್ತು `ಅನುವಾದ~ಗಳೆಂಬ ತ್ರಿಶಂಕು ಸ್ವರ್ಗವನ್ನು ಅನಾವಶ್ಯಕವಾಗಿ ಸೃಷ್ಟಿಸಲಾಗಿದೆ. ಮಹಾನ್ ನಾಟಕಕಾರರೆಲ್ಲರೂ ಇತರೆ ಭಾಷೆಗಳ ನಾಟಕವನ್ನು ತಮ್ಮ ಸೃಜನಶೀಲತೆಯಿಂದ ಮರು ವ್ಯಾಖ್ಯಾನಗೊಳಿಸಿದ್ದು, ಇದನ್ನು ರೂಪಾಂತರ ಎಂಬ ಕ್ಲೀಷೆಯಿಂದ ಕರೆಯುವ ಅಗತ್ಯವಿಲ್ಲ~ ಎಂದರು. <br /> <br /> ವಿಮರ್ಶಕ ಕೆ.ಮರುಳಸಿದ್ಧಪ್ಪ, `ಎಪ್ಪತ್ತರ ದಶಕದಲ್ಲಿ ರಾಜಕೀಯ ಅಂಶಗಳನ್ನಿಟ್ಟುಕೊಂಡು ಮೂಡಿ ಬಂದ ನಾಟಕಗಳು ಪರಿಣಾಮಕಾರಿಯಾಗಿದ್ದವು. ಅಷ್ಟೇ ಜನಪ್ರಿಯತೆ ಪಡೆದುಕೊಂಡವು. ನಾಟಕ ವಲಯದ ಸಮಗ್ರ ವಿಮರ್ಶೆಯನ್ನು ನಡೆಸುವ ಮೂಲಕ ಹೊಸ ದಿಕ್ಕನ್ನು ಕಂಡುಕೊಳ್ಳಬೇಕಿದೆ~ ಎಂದರು. <br /> <br /> `ನವ್ಯೋತ್ತರ ಕಾಲಘಟ್ಟದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಬೀದಿ ನಾಟಕಗಳು ವಿಮರ್ಶೆಗೆ ಒಳಪಡದೇ ಇದ್ದರೂ ನಾಟಕದ ಇತಿಹಾಸದಲ್ಲಿಯೇ ಮಹತ್ತರ ಪಾತ್ರವನ್ನು ಪಡೆದುಕೊಳ್ಳುತ್ತವೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ಹೆಚ್ಚು ತಿರುವು ಪಡೆದುಕೊಂಡ ಎಪ್ಪತ್ತರ ದಶಕವು ರಂಗಭೂಮಿ ಚಟುವಟಿಕೆಗಳನ್ನು ಹೆಚ್ಚು ಜನಪ್ರಿಯಗೊಳಿಸಿತು~ ಎಂದರು. <br /> <br /> ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಪ್ರಾದೇಶಿಕ ಕಾರ್ಯದರ್ಶಿ ಎ.ಎಸ್.ಇಳಂಗೋವನ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಸಾಹಿತ್ಯ ವಲಯವನ್ನು ವಿಸ್ತೃತವಾಗಿ ಚರ್ಚಿಸುವ ಸಂದರ್ಭದಲ್ಲಿ ವಿಮರ್ಶಕರು ಕಾವ್ಯಮೀಮಾಂಸೆಗೆ ನೀಡುವ ಪ್ರಾಧಾನ್ಯತೆಯನ್ನು ನಾಟಕ ಮೀಮಾಂಸೆಯಂತಹ ಪ್ರಮುಖ ಅಂಶಕ್ಕೆ ನೀಡುತ್ತಿಲ್ಲ~ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸದಸ್ಯ ಪ್ರಸನ್ನ ಅವರು ಖೇದ ವ್ಯಕ್ತಪಡಿಸಿದರು. <br /> <br /> ಕೇಂದ್ರ ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ನವ್ಯೋತ್ತರ ಸಂದರ್ಭದ ಕನ್ನಡ ನಾಟಕಗಳು~ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. <br /> <br /> `ನಾಟಕಗಳು ಕೇವಲ ಕಲೆಯ ಭಾಗವಾಗದೇ ಚಳವಳಿಯ ವೇದಿಕೆಯಾಗಿ ಬಳಕೆಗೊಂಡಿವೆ. ಹೊಸ ಸಮುದಾಯಕ್ಕೆ ದನಿಯಾಗಿ ನಾಟಕಗಳು ಮರು ರೂಪ ಪಡೆದಿದೆ.<br /> <br /> ಆದರೆ ನಾಟಕದಲ್ಲಿರುವ ಕಾವ್ಯಮೀಮಾಂಸೆಯನ್ನು ಮಾತ್ರ ಪ್ರಮುಖವಾಗಿಸಿ ಈ ಬಗ್ಗೆ ಚರ್ಚಿಸಲಾಗುತ್ತದೆ ಹೊರತು ನಾಟಕದ ಸಮಗ್ರ ರೂಪವನ್ನು ವಿಮರ್ಶಿಸುವುದು ವಿರಳ~ ಎಂದು ಅಭಿಪ್ರಾಯಪಟ್ಟರು. <br /> <br /> `ಕುವೆಂಪು ಅವರು ತಮ್ಮ ನಾಟಕಗಳು ಜನರ ಮನೋರಂಗದಲ್ಲಿ ಮಾತ್ರ ಬಿಂಬಿತಗೊಳ್ಳಬೇಕು ಎಂದು ಬಯಸಿದ್ದರು. ಇದು ಕಾವ್ಯ ಮೀಮಾಂಸೆಯೆಡೆಗೆ ಅವರಿಗಿದ್ದ ಒಲವನ್ನು ಸೂಚಿಸುತ್ತದೆ. ಎಲ್ಲ ಗೌರವಗಳ ನಡುವೆಯು ಕುವೆಂಪು ಅವರ ಈ ಭಾವವನ್ನು ತಿರಸ್ಕರಿಸಬೇಕಿದೆ. <br /> <br /> ಆ ಮೂಲಕ ಹೊಸ ಭಾಷ್ಯ ಬರೆಯಬೇಕಿದೆ~ ಎಂದು ಹೇಳಿದರು. `ನಾಟಕ ರಂಗದಲ್ಲಿ `ರೂಪಾಂತರ~ ಮತ್ತು `ಅನುವಾದ~ಗಳೆಂಬ ತ್ರಿಶಂಕು ಸ್ವರ್ಗವನ್ನು ಅನಾವಶ್ಯಕವಾಗಿ ಸೃಷ್ಟಿಸಲಾಗಿದೆ. ಮಹಾನ್ ನಾಟಕಕಾರರೆಲ್ಲರೂ ಇತರೆ ಭಾಷೆಗಳ ನಾಟಕವನ್ನು ತಮ್ಮ ಸೃಜನಶೀಲತೆಯಿಂದ ಮರು ವ್ಯಾಖ್ಯಾನಗೊಳಿಸಿದ್ದು, ಇದನ್ನು ರೂಪಾಂತರ ಎಂಬ ಕ್ಲೀಷೆಯಿಂದ ಕರೆಯುವ ಅಗತ್ಯವಿಲ್ಲ~ ಎಂದರು. <br /> <br /> ವಿಮರ್ಶಕ ಕೆ.ಮರುಳಸಿದ್ಧಪ್ಪ, `ಎಪ್ಪತ್ತರ ದಶಕದಲ್ಲಿ ರಾಜಕೀಯ ಅಂಶಗಳನ್ನಿಟ್ಟುಕೊಂಡು ಮೂಡಿ ಬಂದ ನಾಟಕಗಳು ಪರಿಣಾಮಕಾರಿಯಾಗಿದ್ದವು. ಅಷ್ಟೇ ಜನಪ್ರಿಯತೆ ಪಡೆದುಕೊಂಡವು. ನಾಟಕ ವಲಯದ ಸಮಗ್ರ ವಿಮರ್ಶೆಯನ್ನು ನಡೆಸುವ ಮೂಲಕ ಹೊಸ ದಿಕ್ಕನ್ನು ಕಂಡುಕೊಳ್ಳಬೇಕಿದೆ~ ಎಂದರು. <br /> <br /> `ನವ್ಯೋತ್ತರ ಕಾಲಘಟ್ಟದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಬೀದಿ ನಾಟಕಗಳು ವಿಮರ್ಶೆಗೆ ಒಳಪಡದೇ ಇದ್ದರೂ ನಾಟಕದ ಇತಿಹಾಸದಲ್ಲಿಯೇ ಮಹತ್ತರ ಪಾತ್ರವನ್ನು ಪಡೆದುಕೊಳ್ಳುತ್ತವೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ಹೆಚ್ಚು ತಿರುವು ಪಡೆದುಕೊಂಡ ಎಪ್ಪತ್ತರ ದಶಕವು ರಂಗಭೂಮಿ ಚಟುವಟಿಕೆಗಳನ್ನು ಹೆಚ್ಚು ಜನಪ್ರಿಯಗೊಳಿಸಿತು~ ಎಂದರು. <br /> <br /> ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಪ್ರಾದೇಶಿಕ ಕಾರ್ಯದರ್ಶಿ ಎ.ಎಸ್.ಇಳಂಗೋವನ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>