<p> ನವದೆಹಲಿ (ಪಿಟಿಐ): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳಿಂದ ರಾಜಸ್ತಾನದ ಅಜ್ಮೇರ್ ಜೈಲಿನಲ್ಲಿರುವ ಪಾಕಿಸ್ತಾನಿ ವಿಜ್ಞಾನಿ ಡಾ. ಮೊಹಮ್ಮದ್ ಖಲೀಲ್ ಚಿಸ್ತಿ ಅವರಿಗೆಸುಪ್ರೀಂ ಕೋರ್ಟ್ ಮಾನವೀಯತೆಯ ಆಧಾರದಲ್ಲಿ ಜಾಮೀನು ನೀಡಿದೆ.<br /> <br /> 80 ವರ್ಷದವರಾದ ಡಾ. ಚಿಸ್ತಿ ಕಾಯಿಲೆಯಿಂದ ಬಳಲುತ್ತಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಚಿಸ್ತಿ ಅವರ ವಯಸ್ಸು ಹಾಗೂ 1992ರಿಂದ ಅವರು ಭಾರತದ ಜೈಲಿನಲ್ಲೇ ಇರುವ ಅಂಶವನ್ನು ಪರಿಗಣಿಸಿ ನ್ಯಾಯಮೂರ್ತಿ ಪಿ. ಸದಾಸಿವಂ ಹಾಗೂ ಜೆ. ಚೆಲ್ಮೇಶ್ವರ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಜಾಮೀನು ನೀಡಿದೆ.<br /> <br /> `ಜಾಮೀನು ನೀಡಲು ಈ ಪ್ರಕರಣ ಅರ್ಹವಾಗಿದೆ ಎಂದು ನಮಗೆ ಅನಿಸಿದೆ~ ಎಂಬುದಾಗಿ ತಿಳಿಸಿದ ನ್ಯಾಯಮೂರ್ತಿಗಳು, ಷರತ್ತಿನ ಮೇಲೆ ಚಿಸ್ತಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು. ಆದರೆ ಮುಂದಿನ ಆದೇಶದವರೆಗೆ ಅಜ್ಮೇರ್ನಿಂದ ಹೊರಹೋಗಬಾರದು ಎಂಬ ಸ್ಪಷ್ಟ ಸೂಚನೆಯನ್ನೂ ನ್ಯಾಯಪೀಠ ನೀಡಿತು.<br /> <br /> `ಚಿಸ್ತಿ ದೆಹಲಿಯಲ್ಲಿ ವಾಸಿಸಲಾದರೂ ಅನುಮತಿ ನೀಡಬೇಕು~ ಎಂದು ಅವರ ಪರ ವಕೀಲ ಯು. ಲಲಿತ್ ಮಾಡಿಕೊಂಡ ಮನವಿಗೆ, ಅದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಸೂಚಿಸಿದರು. `ನೀವು ನಿಮ್ಮ ದೇಶಕ್ಕೆ ವಾಪಸು ತೆರಳಬೇಕು ಎಂಬುದನ್ನೆಲ್ಲ ಆ ಅರ್ಜಿಯಲ್ಲಿ ವಿವರಿಸಿ. ನಾವು ಪರಿಗಣಿಸುತ್ತೇವೆ~ ಎಂಬ ಭರವಸೆಯನ್ನೂ ನೀಡಿದರು. <br /> <br /> ಚಿಸ್ತಿ ದೆಹಲಿಗೆ ತೆರಳುವುದನ್ನು ವಿರೋಧಿಸಿರುವ ರಾಜಸ್ತಾನ ಸರ್ಕಾರವು, ಅವರಿಗೆ ನೀಡಿದ `ವೀಸಾ ಅನ್ವಯ ಅಜ್ಮೇರ್ ಅಥವಾ ಸುತ್ತಲಿನ ಪ್ರದೇಶದಲ್ಲಿ ಮಾತ್ರ ವಾಸಿಸಬಹುದಾಗಿದೆ~ ಎಂದು ತಿಳಿಸಿದೆ.<br /> <br /> ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ನಡುವೆ ಭಾನುವಾರ ನಡೆದ ಮಾತುಕತೆಯಲ್ಲಿ ಚಿಸ್ತಿ ವಿಚಾರವೂ ಪ್ರಸ್ತಾಪವಾಗಿತ್ತು. ಮರುದಿನವೇ ಅವರಿಗೆ ಜಾಮೀನು ದೊರಕಿರುವುದು ವಿಶೇಷ.<br /> <br /> ಹಿನ್ನೆಲೆ: ಅಜ್ಮೇರ್ನ ಖ್ವಾಜಾ ಮೋಯಿದ್ದೀನ್ ಚಿಸ್ತಿ ದರ್ಗಾದ ಉಸ್ತುವಾರಿ ಹೊತ್ತಿರುವ ಪ್ರತಿಷ್ಠಿತ ಚಿಸ್ತಿ ಮನೆತನಕ್ಕೆ ಸೇರಿರುವ ಮೊಹಮ್ಮದ್ ಖಲೀಲ್ ಚಿಸ್ತಿ ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ಓದುತ್ತಿದ್ದರು. ಆನಂತರ ಅಲ್ಲಿಯೇ ಉಳಿಯಲು ನಿರ್ಧರಿಸಿದರು. <br /> <br /> ಸೂಕ್ಷ್ಮಜೀವಿಶಾಸ್ತ್ರಜ್ಞರಾಗಿದ್ದ ಅವರು 1992ರಲ್ಲಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಾಯಿಯನ್ನು ನೋಡಲು ಅಜ್ಮೇರ್ಗೆ ಬಂದಿದ್ದರು. ಆ ಸಂದರ್ಭದಲ್ಲಿ ನಡೆದ ಸಣ್ಣ ಗಲಾಟೆಯಲ್ಲಿ ಚಿಸ್ತಿ ನೆರೆಮನೆಯಾತ ಗುಂಡು ತಾಗಿ ಮೃತಪಟ್ಟಿದ್ದ ಮತ್ತು ಅವರ ಸೋದರ ಸಂಬಂಧಿಯೊಬ್ಬನಿಗೆ ಗಾಯವಾಗಿತ್ತು. ಈ ಪ್ರಕರಣದ ವಿಚಾರಣೆಯ ನಂತರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.</p>.<p><strong>ಖಲೀಲ್ ಬಿಡುಗಡೆಗೆ ಪಾಕ್ ಸ್ವಾಗತ<br /> ಇಸ್ಲಾಮಾಬಾದ್(ಐಎಎನ್ಎಸ್): </strong>ಜೀವಾವಧಿ ಶಿಕ್ಷೆಗೆ ಗುರಿಯಾಗಿ ಅಜ್ಮೇರ್ ಜೈಲ್ನಲ್ಲಿದ್ದ ಪಾಕ್ ಪ್ರಜೆ ಖಲೀಲ್ ಚಿಸ್ತಿಗೆ ಭಾರತದ ಸುಪ್ರೀಂಕೋರ್ಟ್ ಜಾಮೀನು ನೀಡಿರುವುದನ್ನು ಪಾಕಿಸ್ತಾನ ಸ್ವಾಗತಿಸಿದೆ.<br /> <br /> `ಇದೊಂದು ಸಕಾರಾತ್ಮಕ ಹೆಜ್ಜೆ~ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಅಬ್ದುಲ್ ಬಾಸಿತ್ ಸೋಮವಾರ ಆನ್ಲೈನ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ನವದೆಹಲಿ (ಪಿಟಿಐ): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳಿಂದ ರಾಜಸ್ತಾನದ ಅಜ್ಮೇರ್ ಜೈಲಿನಲ್ಲಿರುವ ಪಾಕಿಸ್ತಾನಿ ವಿಜ್ಞಾನಿ ಡಾ. ಮೊಹಮ್ಮದ್ ಖಲೀಲ್ ಚಿಸ್ತಿ ಅವರಿಗೆಸುಪ್ರೀಂ ಕೋರ್ಟ್ ಮಾನವೀಯತೆಯ ಆಧಾರದಲ್ಲಿ ಜಾಮೀನು ನೀಡಿದೆ.<br /> <br /> 80 ವರ್ಷದವರಾದ ಡಾ. ಚಿಸ್ತಿ ಕಾಯಿಲೆಯಿಂದ ಬಳಲುತ್ತಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಚಿಸ್ತಿ ಅವರ ವಯಸ್ಸು ಹಾಗೂ 1992ರಿಂದ ಅವರು ಭಾರತದ ಜೈಲಿನಲ್ಲೇ ಇರುವ ಅಂಶವನ್ನು ಪರಿಗಣಿಸಿ ನ್ಯಾಯಮೂರ್ತಿ ಪಿ. ಸದಾಸಿವಂ ಹಾಗೂ ಜೆ. ಚೆಲ್ಮೇಶ್ವರ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಜಾಮೀನು ನೀಡಿದೆ.<br /> <br /> `ಜಾಮೀನು ನೀಡಲು ಈ ಪ್ರಕರಣ ಅರ್ಹವಾಗಿದೆ ಎಂದು ನಮಗೆ ಅನಿಸಿದೆ~ ಎಂಬುದಾಗಿ ತಿಳಿಸಿದ ನ್ಯಾಯಮೂರ್ತಿಗಳು, ಷರತ್ತಿನ ಮೇಲೆ ಚಿಸ್ತಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು. ಆದರೆ ಮುಂದಿನ ಆದೇಶದವರೆಗೆ ಅಜ್ಮೇರ್ನಿಂದ ಹೊರಹೋಗಬಾರದು ಎಂಬ ಸ್ಪಷ್ಟ ಸೂಚನೆಯನ್ನೂ ನ್ಯಾಯಪೀಠ ನೀಡಿತು.<br /> <br /> `ಚಿಸ್ತಿ ದೆಹಲಿಯಲ್ಲಿ ವಾಸಿಸಲಾದರೂ ಅನುಮತಿ ನೀಡಬೇಕು~ ಎಂದು ಅವರ ಪರ ವಕೀಲ ಯು. ಲಲಿತ್ ಮಾಡಿಕೊಂಡ ಮನವಿಗೆ, ಅದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಸೂಚಿಸಿದರು. `ನೀವು ನಿಮ್ಮ ದೇಶಕ್ಕೆ ವಾಪಸು ತೆರಳಬೇಕು ಎಂಬುದನ್ನೆಲ್ಲ ಆ ಅರ್ಜಿಯಲ್ಲಿ ವಿವರಿಸಿ. ನಾವು ಪರಿಗಣಿಸುತ್ತೇವೆ~ ಎಂಬ ಭರವಸೆಯನ್ನೂ ನೀಡಿದರು. <br /> <br /> ಚಿಸ್ತಿ ದೆಹಲಿಗೆ ತೆರಳುವುದನ್ನು ವಿರೋಧಿಸಿರುವ ರಾಜಸ್ತಾನ ಸರ್ಕಾರವು, ಅವರಿಗೆ ನೀಡಿದ `ವೀಸಾ ಅನ್ವಯ ಅಜ್ಮೇರ್ ಅಥವಾ ಸುತ್ತಲಿನ ಪ್ರದೇಶದಲ್ಲಿ ಮಾತ್ರ ವಾಸಿಸಬಹುದಾಗಿದೆ~ ಎಂದು ತಿಳಿಸಿದೆ.<br /> <br /> ಪಾಕಿಸ್ತಾನ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ನಡುವೆ ಭಾನುವಾರ ನಡೆದ ಮಾತುಕತೆಯಲ್ಲಿ ಚಿಸ್ತಿ ವಿಚಾರವೂ ಪ್ರಸ್ತಾಪವಾಗಿತ್ತು. ಮರುದಿನವೇ ಅವರಿಗೆ ಜಾಮೀನು ದೊರಕಿರುವುದು ವಿಶೇಷ.<br /> <br /> ಹಿನ್ನೆಲೆ: ಅಜ್ಮೇರ್ನ ಖ್ವಾಜಾ ಮೋಯಿದ್ದೀನ್ ಚಿಸ್ತಿ ದರ್ಗಾದ ಉಸ್ತುವಾರಿ ಹೊತ್ತಿರುವ ಪ್ರತಿಷ್ಠಿತ ಚಿಸ್ತಿ ಮನೆತನಕ್ಕೆ ಸೇರಿರುವ ಮೊಹಮ್ಮದ್ ಖಲೀಲ್ ಚಿಸ್ತಿ ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ಓದುತ್ತಿದ್ದರು. ಆನಂತರ ಅಲ್ಲಿಯೇ ಉಳಿಯಲು ನಿರ್ಧರಿಸಿದರು. <br /> <br /> ಸೂಕ್ಷ್ಮಜೀವಿಶಾಸ್ತ್ರಜ್ಞರಾಗಿದ್ದ ಅವರು 1992ರಲ್ಲಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಾಯಿಯನ್ನು ನೋಡಲು ಅಜ್ಮೇರ್ಗೆ ಬಂದಿದ್ದರು. ಆ ಸಂದರ್ಭದಲ್ಲಿ ನಡೆದ ಸಣ್ಣ ಗಲಾಟೆಯಲ್ಲಿ ಚಿಸ್ತಿ ನೆರೆಮನೆಯಾತ ಗುಂಡು ತಾಗಿ ಮೃತಪಟ್ಟಿದ್ದ ಮತ್ತು ಅವರ ಸೋದರ ಸಂಬಂಧಿಯೊಬ್ಬನಿಗೆ ಗಾಯವಾಗಿತ್ತು. ಈ ಪ್ರಕರಣದ ವಿಚಾರಣೆಯ ನಂತರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.</p>.<p><strong>ಖಲೀಲ್ ಬಿಡುಗಡೆಗೆ ಪಾಕ್ ಸ್ವಾಗತ<br /> ಇಸ್ಲಾಮಾಬಾದ್(ಐಎಎನ್ಎಸ್): </strong>ಜೀವಾವಧಿ ಶಿಕ್ಷೆಗೆ ಗುರಿಯಾಗಿ ಅಜ್ಮೇರ್ ಜೈಲ್ನಲ್ಲಿದ್ದ ಪಾಕ್ ಪ್ರಜೆ ಖಲೀಲ್ ಚಿಸ್ತಿಗೆ ಭಾರತದ ಸುಪ್ರೀಂಕೋರ್ಟ್ ಜಾಮೀನು ನೀಡಿರುವುದನ್ನು ಪಾಕಿಸ್ತಾನ ಸ್ವಾಗತಿಸಿದೆ.<br /> <br /> `ಇದೊಂದು ಸಕಾರಾತ್ಮಕ ಹೆಜ್ಜೆ~ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಅಬ್ದುಲ್ ಬಾಸಿತ್ ಸೋಮವಾರ ಆನ್ಲೈನ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>