<p><strong>ಬೆಂಗಳೂರು:</strong> ಲಿಖಿತ ಉತ್ತರದ ಪರೀಕ್ಷೆಯಲ್ಲಿ ಫೈನಲ್ ತಲುಪಲು ಅರ್ಹತೆ ಗಿಟ್ಟಿಸದೆ ಸಭಿಕರಲ್ಲಿ ಕುಳಿತಿದ್ದ ಹುಡುಗ ಪೂರ್ಣಪ್ರಜ್ಞ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಸುಹಾಸ್ ಅಡಿಗ. ಕ್ವಿಜ್ ಮಾಸ್ಟರ್ ಕೇಳಿದ ಪ್ರಶ್ನೆಗೆ ಸ್ಪರ್ಧಿಗಳು ತಲೆ ಕೆರೆದುಕೊಳ್ಳುತ್ತಿದ್ದರೆ ಈ ಹುಡುಗ ಕೈಎತ್ತಿ ಉತ್ತರ ಹೇಳಲು ತವಕಿಸುತ್ತಿದ್ದ. ಯಾವುದೇ ಪ್ರಶ್ನೆ ಕೇಳಿದರೂ ಕೈ ಎತ್ತುತ್ತಿದ್ದ ಆತನನ್ನು ಕಂಡು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದರು.<br /> <br /> ಪ್ರೇಕ್ಷಕರಿಗೆ ವರ್ಗಾವಣೆಗೊಂಡ ಪ್ರಶ್ನೆಗಳಲ್ಲಿ ಒಂದೂ ಸುಹಾಸ್ನತ್ತ ಸುಳಿಯದಿದ್ದಾಗ ಸ್ವತಃ ಕುಲಪತಿ ಅವರು ಮೈಕ್ ಪಡೆದು ಆತನ ಕೈಗಿತ್ತರು. ಸರಿ ಉತ್ತರ ಹೇಳಿದ ಆತ, ಬಹುಮಾನ ಪಡೆದು ಸಂಭ್ರಮಿಸಿದ.<br /> <br /> ‘ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಿಸಲು ನಿತ್ಯ ಕೆಲಕಾಲ ಮೀಸಲಿಡುತ್ತೇನೆ’ ಎಂದು ಆತ ಹೇಳಿದ. ‘ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿದ್ದರೆ ಮೊದಲ ಪ್ರಶಸ್ತಿ ಪಡೆಯಲು ಯತ್ನಿಸುತ್ತಿದ್ದೆ’ ಎಂದು ಆತ್ಮವಿಶ್ವಾಸದಿಂದ ನುಡಿದ. ಉತ್ತರ ಹೇಳಿ ಬಹುಮಾನ ಪಡೆದಿದ್ದಕ್ಕೆ ಸ್ನೇಹಿತರು ಆತನನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಲಿಖಿತ ಉತ್ತರದ ಪರೀಕ್ಷೆಯಲ್ಲಿ ಫೈನಲ್ ತಲುಪಲು ಅರ್ಹತೆ ಗಿಟ್ಟಿಸದೆ ಸಭಿಕರಲ್ಲಿ ಕುಳಿತಿದ್ದ ಹುಡುಗ ಪೂರ್ಣಪ್ರಜ್ಞ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಸುಹಾಸ್ ಅಡಿಗ. ಕ್ವಿಜ್ ಮಾಸ್ಟರ್ ಕೇಳಿದ ಪ್ರಶ್ನೆಗೆ ಸ್ಪರ್ಧಿಗಳು ತಲೆ ಕೆರೆದುಕೊಳ್ಳುತ್ತಿದ್ದರೆ ಈ ಹುಡುಗ ಕೈಎತ್ತಿ ಉತ್ತರ ಹೇಳಲು ತವಕಿಸುತ್ತಿದ್ದ. ಯಾವುದೇ ಪ್ರಶ್ನೆ ಕೇಳಿದರೂ ಕೈ ಎತ್ತುತ್ತಿದ್ದ ಆತನನ್ನು ಕಂಡು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದರು.<br /> <br /> ಪ್ರೇಕ್ಷಕರಿಗೆ ವರ್ಗಾವಣೆಗೊಂಡ ಪ್ರಶ್ನೆಗಳಲ್ಲಿ ಒಂದೂ ಸುಹಾಸ್ನತ್ತ ಸುಳಿಯದಿದ್ದಾಗ ಸ್ವತಃ ಕುಲಪತಿ ಅವರು ಮೈಕ್ ಪಡೆದು ಆತನ ಕೈಗಿತ್ತರು. ಸರಿ ಉತ್ತರ ಹೇಳಿದ ಆತ, ಬಹುಮಾನ ಪಡೆದು ಸಂಭ್ರಮಿಸಿದ.<br /> <br /> ‘ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಿಸಲು ನಿತ್ಯ ಕೆಲಕಾಲ ಮೀಸಲಿಡುತ್ತೇನೆ’ ಎಂದು ಆತ ಹೇಳಿದ. ‘ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿದ್ದರೆ ಮೊದಲ ಪ್ರಶಸ್ತಿ ಪಡೆಯಲು ಯತ್ನಿಸುತ್ತಿದ್ದೆ’ ಎಂದು ಆತ್ಮವಿಶ್ವಾಸದಿಂದ ನುಡಿದ. ಉತ್ತರ ಹೇಳಿ ಬಹುಮಾನ ಪಡೆದಿದ್ದಕ್ಕೆ ಸ್ನೇಹಿತರು ಆತನನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>