<p>ಹಿರಿಯ ನಟ ಶಿವರಾಂ ಅವರ ಸಿನಿಮಾ ಸಾಧನೆಗಾಗಿ ಈ ಬಾರಿ ಕನ್ನಡ ಚಿತ್ರರಂಗದ ಅತ್ಯುತ್ತಮ ಗೌರವಗಳಲ್ಲಿ ಒಂದಾದ `ರಾಜಕುಮಾರ್ ಪ್ರಶಸ್ತಿ~ ದೊರೆತಿದೆ. ಇದರೊಂದಿಗೇ ಸಬ್ಸಿಡಿ ಸಮಿತಿಯ ಲಂಚ ಹಗರಣ ಅವರ ಬೆನ್ನು ಹತ್ತಿದೆ. <br /> <br /> `ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು~ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ಬಹುತೇಕ ಮೌನಕ್ಕೆ ಶರಣಾಗಿದ್ದ ಶಿವರಾಂ ಅವರೊಂದಿಗೆ `ಸಿನಿಮಾ ರಂಜನೆ~ ಮಾತಿಗಿಳಿಯಿತು. ಆಗ...<br /> <br /> <strong>ಒಂದೆಡೆ ಚಲನಚಿತ್ರ ಸಬ್ಸಿಡಿ ಸಮಿತಿಯ ಲಂಚ ಹಗರಣ, ಮತ್ತೊಂದೆಡೆ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯದ ಅತ್ಯುನ್ನತ ಗೌರವ ಡಾ.ರಾಜ್ಕುಮಾರ್ ಪ್ರಶಸ್ತಿ. ಏನನ್ನಿಸುತ್ತಿದೆ ನಿಮಗೆ?<br /> <br /> </strong>ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಆದರೆ ಈ ಸಂದರ್ಭದಲ್ಲಿ ನನ್ನ ಪಾಲಿಗೆ ಬೇವು ಬೆಲ್ಲ ಎರಡೂ ಸಿಕ್ಕಂತಾಗಿದೆ. ನನಗೆ ಶುಭ ಕೋರುವವರಿಗೂ ಏನೋ ಒಂದು ರೀತಿಯ ಕಸಿವಿಸಿ. ಅಂಥ ಶ್ರೇಷ್ಠ ಪ್ರಶಸ್ತಿಯನ್ನು ಶಿವರಾಂ ಅವರಿಗೆ ಕೊಟ್ಟರೆ ಪ್ರಶಸ್ತಿಗೇ ಅವಮಾನ ಎಂದು ಕೆಲವರು ಮಾತನಾಡಿದ್ದಾರೆ. <br /> <br /> ಸಬ್ಸಿಡಿ ಸಮಿತಿಯ ಹಗರಣದಲ್ಲಿ ನನ್ನ ಪಾಲು ಏನೂ ಇಲ್ಲದಿದ್ದರೂ ಅದೊಂದು ದೃಷ್ಟಿಬೊಟ್ಟು ಉಳಿದು ಹೋಯಿತು. ಈ ವ್ಯಥೆಯಲ್ಲಿದ್ದಾಗ ರಾಜ್ ಕುಟುಂಬ ತುಂಬಾ ಬೆಂಬಲ ನೀಡಿತು. ಚಿತ್ರರಂಗಕ್ಕೆ ನಾನು ಸಲ್ಲಿಸಿದ ಸೇವೆಯನ್ನು ರಾಜ್ ಕುಟುಂಬದವರು ಸ್ಮರಿಸಿದರು. ಅದು ನನಗೆ ಪ್ರಶಸ್ತಿಗಿಂತಲೂ ಹಿರಿದು.</p>.<p><strong>ಸಬ್ಸಿಡಿ ಸಮಿತಿಯ ಅಧ್ಯಕ್ಷರಿಗೂ ಲಂಚಕೊಡಬೇಕು ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದರಲ್ಲ?<br /> </strong>ಒಂದು ರೂಪಾಯಿಯನ್ನೂ ನಾನು ಮುಟ್ಟಿಲ್ಲ. `ಲಾವ್ ಲಾವ್~ ವ್ಯವಹಾರ ನಡೆಯುತ್ತಿದೆ ಎಂದು ಕೆಲವು ಅನಾಮಿಕ ಪತ್ರಗಳು ಬಂದಾಗ ಪರೋಕ್ಷವಾಗಿ ಸಮಿತಿಯ ಸದಸ್ಯರನ್ನು ಎಚ್ಚರಿಸಿದೆ. ಪ್ರಾಮಾಣಿಕವಾಗಿ ಚಿತ್ರ ನಿರ್ಮಿಸಿದವರಿಗೆ ಒಳ್ಳೆಯದು ಮಾಡಬೇಕು ಎಂದು ಕಿವಿಮಾತು ಹೇಳಿದೆ. <br /> <br /> ಸಮಿತಿಯ ಸದಸ್ಯರ ಶುಲ್ಕವನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದೆ. ಕೆಲವರು ನನ್ನ ಬಳಿಯೂ ವ್ಯವಹಾರ ಕುದುರಿಸಲು ಹೊರಟರು. ಆಗ ಈ ಅವ್ಯವಹಾರವೇ ಸಾಕು ನಿಮ್ಮ ಚಿತ್ರವನ್ನು ಅನರ್ಹಗೊಳಿಸಲು ಎಂದು ಖಂಡತುಂಡವಾಗಿ ಹೇಳಿದೆ. ಸಮಿತಿಯ ಸದಸ್ಯ ಸುರೇಶ್ ಮಂಗಳೂರು ನನ್ನ ಮೇಲೆ ಗೂಬೆ ಕೂರಿಸಿದರು.<br /> <br /> ಹೀಗ್ಯಾಕೆ ಮಾಡಿದಿರಿ ಎಂದು ಅವರ ಬಳಿ ಕಣ್ಣೀರಿಟ್ಟೆ. ಕುಡಿದ ಅಮಲಿನಲ್ಲಿ ಅವರು ನನ್ನ ವಿರುದ್ಧ ಆರೋಪ ಮಾಡಿದರು ಎಂದು ಈ ಹಿಂದೆ ಹೇಳಿದ್ದು ನಿಜ. ಆದರೆ ಅದನ್ನೇ ಮುಂದು ಮಾಡಿಕೊಂಡು ಅವರ ಪರ ಇದ್ದೇನೆ ಎಂದು ಬಿಂಬಿಸಲಾಯಿತು. 2.5 ಲಕ್ಷ ರೂಪಾಯಿ ಸುರೇಶ್ ಅಕೌಂಟ್ಗೆ ಸೇರಿ ಹೋಗಿತ್ತು. <br /> <br /> ನನ್ನಂಥ ಹಿರಿಯ ಕಲಾವಿದನಿಗೇ ಅಷ್ಟು ಅಡ್ವಾನ್ಸ್ ಯಾರೂ ಕೊಡುವುದಿಲ್ಲ, ನಿಮಗೆ ಹ್ಯಾಗೆ ದೊರೆಯಿತು ಎಂದು ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಆತ ಕ್ಷಮಾಪಣೆ ಪತ್ರ ನೀಡಿದರು.</p>.<p><strong>ಇದನ್ನೆಲ್ಲಾ ಪ್ರತಿಭಟಿಸಿ ನೀವು ರಾಜೀನಾಮೆ ಕೊಡಬಹುದಿತ್ತಲ್ಲ? ಕಠಿಣ ಕ್ರಮಕ್ಕೆ ಶಿಫಾರಸು ಮಾಡಬಹುದಿತ್ತಲ್ಲ?<br /> <br /> </strong>ಅನಾಮಿಕ ಪತ್ರಗಳು ಬಂದದ್ದು ಹೊರತುಪಡಿಸಿದರೆ 1.5 ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿದೆ ಎಂದು ಗೊತ್ತಾದದ್ದೇ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ. ಅದು ನನ್ನ ಊಹೆಗೂ ನಿಲುಕದ ವಿಚಾರವಾಗಿತ್ತು. ಮೊದಲೇ ಗೊತ್ತಿದ್ದರೆ ಮುಖ್ಯಮಂತ್ರಿಗಳನ್ನು ಸಂಪರ್ಕಿಸುತ್ತಿದ್ದೆ. ಸರ್ಕಾರಕ್ಕೆ ಪಟ್ಟಿ ಸಲ್ಲಿಸಿದ ಬಳಿಕ ಅದು ಸೋರಿಕೆಯಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದೆ. ಅವರಿಂದಲೂ ಹೇಗೆ ಸೋರಿಕೆಯಾಯಿತು ಎಂಬ ಉತ್ತರವಿಲ್ಲ. <br /> <strong>ಹಗರಣ ಬಯಲಾದ ಬಳಿಕವೂ ನಿಮ್ಮ ಮೌನ ಅನೇಕ ಸಂದೇಹಗಳಿಗೆ ಎಡೆ ಮಾಡಿಕೊಟ್ಟಿತಲ್ಲ?<br /> </strong><br /> ನನ್ನನ್ನು ನೇಮಿಸಿದ್ದು ಸರ್ಕಾರ. ಅದಾಗಲೇ ಸರ್ಕಾರಕ್ಕೆ ಪಟ್ಟಿ ಸಲ್ಲಿಸಿಯಾಗಿತ್ತು. ಹಾಗಾಗಿ ನಾನು ಹೇಳಿಕೆ ನೀಡಿದರೆ ಸರ್ಕಾರದ ಅಸಮಾಧಾನಕ್ಕೆ ತುತ್ತಾಗುವ ಸಂಭವವಿತ್ತು. ಇದಿಷ್ಟೇ ನನ್ನ ಮೌನಕ್ಕೆ ಕಾರಣ.</p>.<p><strong>ಒಂದೆಡೆ ಸಮಿತಿಯ ಪದಾಧಿಕಾರಿಗಳು ಆರೋಪಿ ಸ್ಥಾನದಲ್ಲಿಯೇ ಇದ್ದಾರೆ. ಇದೇ ವೇಳೆ ಮುಖ್ಯಮಂತ್ರಿಗಳು ಪಟ್ಟಿಯನ್ನು ಅಂಗೀಕರಿಸಿದ್ದಾರೆ. ಇದು ಸಮಿತಿಯ ಮೇಲಿನ ಅನುಮಾನವನ್ನು ಇನ್ನಷ್ಟು ಬಲಗೊಳಿಸಿದಂತೆ ಆಯಿತಲ್ಲವೆ?<br /> </strong>ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಮುಖ್ಯಮಂತ್ರಿಗಳು ಪಟ್ಟಿಯನ್ನು ಅಂಗೀಕರಿಸಬಾರದು ಎಂದು ಹೇಳಲಾಗದು. ನಾವು ಶ್ರಮಪಟ್ಟು ಪ್ರಾಮಾಣಿಕವಾಗಿ ಪಟ್ಟಿ ತಯಾರಿಸಿದ್ದೇವೆ.<br /> <br /> ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇವೆ. ಪಟ್ಟಿ ಅಂಗೀಕರಿಸಬಾರದು ಎಂದರೆ ನಮ್ಮ ಬಗ್ಗೆ ನಾವೇ ಸಂಶಯ ಪಟ್ಟುಕೊಂಡಂತಾಗುತ್ತದೆ. ರಾಮಕೃಷ್ಣ ಹಾಗೂ ಶಿವರಾಂ ಬಿಟ್ಟರೆ ಸಮಿತಿಯ ಸದಸ್ಯರ ಪರಿಚಯವೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾದರೆ ಸಮಿತಿಯಲ್ಲಿ ನಾಡಿನ ಕವಿಗಳೂ ಇದ್ದರು. <br /> <br /> ಅವರ ಪರಿಚಯವೂ ಇವರಿಗೆ ಇಲ್ಲವೆ? `ಕಾರಂಜಿ~ ಚಿತ್ರ ಹಾಗೂ ಕನ್ನಡದ ತಿರುಳನ್ನು ಬಿಂಬಿಸುವ ಇನ್ನೂ ನಾಲ್ಕು ಚಿತ್ರಗಳಿಗೆ ಸಬ್ಸಿಡಿ ಕೊಡಬಹುದಿತ್ತು. ಆದರೆ 45 ಚಿತ್ರಗಳಿಗೇ ಮಿತಿ ಇದ್ದುದರಿಂದ ಅದೆಲ್ಲಾ ಸಾಧ್ಯವಾಗಲಿಲ್ಲ.</p>.<p>`<strong>ನಿರ್ದೋಷಿ~ಯಂಥ ಅಶ್ಲೀಲ ಚಿತ್ರಕ್ಕೆ ಸಬ್ಸಿಡಿ ಕೊಡುವ ಅಗತ್ಯವಿತ್ತೆ? ಪಟ್ಟಿಯಲ್ಲಿ ಕೆಲವು ರಿಮೇಕ್ ಚಿತ್ರಗಳೂ ಇವೆಯಂತಲ್ಲ?<br /> <br /> </strong>ಕನ್ನಡದ ಬೇರೆ ಚಿತ್ರಗಳಲ್ಲಿ ಅದಕ್ಕಿಂತ ಅಶ್ಲೀಲತೆ ಇರುವುದನ್ನು ತೋರಿಸಬಲ್ಲೆ. ಅದೊಂದು ಪ್ರಯೋಗಶೀಲ ಚಿತ್ರ. ವಿಧಾನ ಸೌಧದ ಬ್ಲೂಫಿಲಂ ಪ್ರಕರಣಕ್ಕೆ ಹೋಲಿಸಿದರೆ ಅದು ಕೆಟ್ಟದೇನೂ ಅಲ್ಲ. ಇಷ್ಟಾದರೂ ಕಲಾವಿದರು ಕನ್ನಡದವರಲ್ಲ ಎಂಬ ಕಾರಣಕ್ಕೆ ಚಿತ್ರಕ್ಕೆ ನಾನು ಮತ ಹಾಕಲಿಲ್ಲ. <br /> <br /> ರಿಮೇಕ್ ಹೌದೇ ಅಲ್ಲವೇ ಎಂದು ಪರಿಗಣಿಸಲು ಸರ್ಕಾರ ಪ್ರತ್ಯೇಕವಾದ ಸಮಿತಿಯನ್ನೇ ರಚಿಸಿದೆ. ಸರ್ಕಾರ ಕೊಟ್ಟ ಚಿತ್ರಗಳ ಪಟ್ಟಿಯನ್ನು ಮಾತ್ರ ನಾವು ಅಂಗೀಕರಿಸಬೇಕು. ಇದರಲ್ಲಿ ಸಮಿತಿಯ ತಪ್ಪೇನೂ ಇಲ್ಲ.<br /> <br /> ಬೇರೆ ಬೇರೆ ಭಾಷೆಗಳ ಎರಡು ಮೂರು ಕತೆಗಳನ್ನು ಕದ್ದು ತಮ್ಮದೇ ಸ್ವಂತ ಚಿತ್ರ ಎಂದು ಹೇಳುವ ಜಾಣರು ಚಿತ್ರರಂಗದಲ್ಲೇ ಇದ್ದಾರೆ. ಇದಕ್ಕೆ ಏನು ಏಳುವುದು? ಸಮಿತಿಯ ವಿರುದ್ಧ ಆರೋಪ ಹೊರಿಸಿರುವ ಕೂಡ್ಲು ರಾಮಕೃಷ್ಣ ಅವರ `ಬೆಟ್ಟದಪುರದ ದಿಟ್ಟಮಕ್ಕಳು~ ಮಕ್ಕಳ ಚಿತ್ರವಲ್ಲ. <br /> <br /> ಸಮಿತಿಯ ಸದಸ್ಯರಿಗೆ ಹಣ ಕೊಡುವ ಬದಲು ಸೆನ್ಸಾರ್ ಮಂಡಳಿಯಲ್ಲೇ ಹೋರಾಟ ನಡೆಸಿ ಅಲ್ಲಿಂದಲೇ `ಸಿ~ ಸರ್ಟಿಫಿಕೇಟ್ ತರಬಹುದಿತ್ತು. ಆದರೆ ಆರೋಪ ಹೊರಿಸುವ ಮೂಲಕ ಸ್ಯಾಡಿಸ್ಟ್ ರೀತಿಯಲ್ಲಿ ಅವರು ವರ್ತಿಸಿದ್ದಾರೆ. <br /> <br /> <strong>ಸುಧಾರಣೆ ಆಗಬೇಕಿರುವುದು ಎಲ್ಲಿ?</strong><br /> ಕೆಲವು ನಿರ್ಮಾಪಕರ ಲಾಭಕೋರತನವೇ ಇಂಥ ಅವ್ಯವಹಾರ ನಡೆಯಲು ಕಾರಣ. ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಕೈಕಟ್ಟಿ ಕುಳಿತುಕೊಂಡಿದೆ. ಪೈರಸಿ ವಿರುದ್ಧ ನಡೆದ ಹೋರಾಟದ ಮಾದರಿಯಲ್ಲಿಯೇ ಲಂಚಕೋರತನದ ವಿರುದ್ಧವೂ ಹೋರಾಟ ನಡೆಯಬೇಕು. <br /> <br /> ನಿರ್ಮಾಪಕರು ಆಮಿಷ ಒಡ್ಡುವುದನ್ನು ಕೈ ಬಿಡಬೇಕು. ತಪ್ಪಿತಸ್ಥರನ್ನು ಹಿಡಿಯಲು ನಾನೂ ಸಹಕರಿಸುತ್ತೇನೆ, ಸಂಬಂಧಪಟ್ಟವರು ಮುಂದಾಗಲಿ. ಅಧಿಕಾರಿಗಳು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು.</p>.<p><strong>ಇತ್ತ ರಾಜ್ಕುಮಾರ್ ಪ್ರಶಸ್ತಿ ಬಂತು. ಅದೇ ದಿನ ಮುಖ್ಯಮಂತ್ರಿಗಳಿಂದ ಸಬ್ಸಿಡಿಯ ಬಗ್ಗೆ ಕ್ಲೀನ್ಚಿಟ್ ಕೂಡ ದೊರೆಯಿತು. ಶಿವರಾಂ ಅವರಿಗೆ ಡಬಲ್ ಧಮಾಕಾ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ?<br /> </strong><br /> ಪ್ರಶಸ್ತಿ ಬಂದದ್ದು, ಪಟ್ಟಿಯನ್ನು ಅಂಗೀಕರಿಸಿದ್ದು ಕಾಕತಾಳೀಯವಾಗಿ ನಡೆದಿರಬಹುದು. ಪ್ರಶಸ್ತಿ ಆಯ್ಕೆ ಸಮಿತಿ ಬಯಸಿದರೆ ಈಗಲೂ ಪ್ರಶಸ್ತಿಯನ್ನು ಹಿಂತಿರುಗಿಸಲು ಸಿದ್ಧ. ಕಳಂಕಿತರಿಗೆ ಪ್ರಶಸ್ತಿ ಕೊಡಲಾಗಿದೆ ಎಂದು ಆರೋಪಿಸುತ್ತಿರುವವರಿಗೇ ಅದು ಸಿಗಲಿ.</p>.<p><strong>ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ಸ್ನೇಹ-ಸಂಬಂಧಗಳು ಕೆಲಸ ಮಾಡಿವೆ ಎಂಬ ಮಾತುಗಳೂ ಇವೆ...<br /> </strong><br /> ವಿಷ್ಣುವರ್ಧನ್ ಕುಟುಂಬದ ಸದಸ್ಯರೊಂದಿಗೆ ಸ್ನೇಹ ಹೊಂದಿರುವಂತೆಯೇ ಚಿತ್ರರಂಗದ ಅನೇಕರ ಜತೆ ಒಡನಾಟ ಹೊಂದಿದ್ದೇನೆ. ಚಿತ್ರರಂಗದ ಅಮೃತಮಹೋತ್ಸವದ ಸಂದರ್ಭದಲ್ಲಿಯೇ ಪ್ರಶಸ್ತಿಯೊಂದು ಅರಸಿ ಬಂದಿತ್ತು. ನಾನು ಒಲ್ಲೆ ಎಂದೆ. ಇದೆಲ್ಲಾ ವಿಕೃತ ಮನೋಭಾವದವರು ಮಾಡುವ ಆರೋಪ. <br /> </p>.<p><strong>ಮುಂದಿನ ನಿಮ್ಮ ಹೆಜ್ಜೆ?</strong><br /> ನಾನೀಗ ಬಹುತೇಕ ಹೊರ ನಡೆಯುತ್ತಿದ್ದೇನೆ. ದೇಹಸ್ಥಿತಿಯೂ ಸರಿ ಇಲ್ಲ. ಕಲಾವಿದರ ಕ್ಷೇಮನಿಧಿ ಸ್ಥಾಪಿಸಬೇಕು. ಅದಕ್ಕಾಗಿ ರಾಜ್ಯದೆಲ್ಲೆಡೆ ನಾಟಕಗಳನ್ನು ಆಡಿಸಿ ನಿಧಿ ಸಂಗ್ರಹಿಸಬೇಕು ಎಂದುಕೊಂಡಿದ್ದೇನೆ. ಇದೇ ವೇಳೆ `ನಿರ್ಮಾಪಕರ ಕೈಪಿಡಿ~ ಹಾಗೂ `ಚಿತ್ರ ನಿರ್ಮಾಣ~ ಎಂಬ ಎರಡು ಪುಸ್ತಕಗಳನ್ನು ಹೊರತರಬೇಕಿದೆ. ಇದು ಚಿತ್ರರಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಲಿದೆ ಎಂಬುದು ನನ್ನ ಭಾವನೆ.<br /> </p>.<table align="right" border="1" cellpadding="3" cellspacing="2" width="250"> <tbody> <tr> <td bgcolor="#f2f0f0">`<span style="font-size: small">ಕೂಡ್ಲು ರಾಮಕೃಷ್ಣರ `ಬೆಟ್ಟದಪುರದ ದಿಟ್ಟಮಕ್ಕಳು~ ಮಕ್ಕಳ ಚಿತ್ರವಲ್ಲ. ಸಮಿತಿಯ ಸದಸ್ಯರಿಗೆ ಹಣ ಕೊಡುವ ಬದಲು ಸೆನ್ಸಾರ್ ಮಂಡಳಿಯಲ್ಲೇ ಹೋರಾಟ ನಡೆಸಿ ಅಲ್ಲಿಂದಲೇ `ಸಿ~ ಸರ್ಟಿಫಿಕೇಟ್ ತರಬಹುದಿತ್ತು. ಅವರು ಸ್ಯಾಡಿಸ್ಟ್ ರೀತಿ ವರ್ತಿಸಿದ್ದಾರೆ..<br /> </span></td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರಿಯ ನಟ ಶಿವರಾಂ ಅವರ ಸಿನಿಮಾ ಸಾಧನೆಗಾಗಿ ಈ ಬಾರಿ ಕನ್ನಡ ಚಿತ್ರರಂಗದ ಅತ್ಯುತ್ತಮ ಗೌರವಗಳಲ್ಲಿ ಒಂದಾದ `ರಾಜಕುಮಾರ್ ಪ್ರಶಸ್ತಿ~ ದೊರೆತಿದೆ. ಇದರೊಂದಿಗೇ ಸಬ್ಸಿಡಿ ಸಮಿತಿಯ ಲಂಚ ಹಗರಣ ಅವರ ಬೆನ್ನು ಹತ್ತಿದೆ. <br /> <br /> `ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು~ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ಬಹುತೇಕ ಮೌನಕ್ಕೆ ಶರಣಾಗಿದ್ದ ಶಿವರಾಂ ಅವರೊಂದಿಗೆ `ಸಿನಿಮಾ ರಂಜನೆ~ ಮಾತಿಗಿಳಿಯಿತು. ಆಗ...<br /> <br /> <strong>ಒಂದೆಡೆ ಚಲನಚಿತ್ರ ಸಬ್ಸಿಡಿ ಸಮಿತಿಯ ಲಂಚ ಹಗರಣ, ಮತ್ತೊಂದೆಡೆ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯದ ಅತ್ಯುನ್ನತ ಗೌರವ ಡಾ.ರಾಜ್ಕುಮಾರ್ ಪ್ರಶಸ್ತಿ. ಏನನ್ನಿಸುತ್ತಿದೆ ನಿಮಗೆ?<br /> <br /> </strong>ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಆದರೆ ಈ ಸಂದರ್ಭದಲ್ಲಿ ನನ್ನ ಪಾಲಿಗೆ ಬೇವು ಬೆಲ್ಲ ಎರಡೂ ಸಿಕ್ಕಂತಾಗಿದೆ. ನನಗೆ ಶುಭ ಕೋರುವವರಿಗೂ ಏನೋ ಒಂದು ರೀತಿಯ ಕಸಿವಿಸಿ. ಅಂಥ ಶ್ರೇಷ್ಠ ಪ್ರಶಸ್ತಿಯನ್ನು ಶಿವರಾಂ ಅವರಿಗೆ ಕೊಟ್ಟರೆ ಪ್ರಶಸ್ತಿಗೇ ಅವಮಾನ ಎಂದು ಕೆಲವರು ಮಾತನಾಡಿದ್ದಾರೆ. <br /> <br /> ಸಬ್ಸಿಡಿ ಸಮಿತಿಯ ಹಗರಣದಲ್ಲಿ ನನ್ನ ಪಾಲು ಏನೂ ಇಲ್ಲದಿದ್ದರೂ ಅದೊಂದು ದೃಷ್ಟಿಬೊಟ್ಟು ಉಳಿದು ಹೋಯಿತು. ಈ ವ್ಯಥೆಯಲ್ಲಿದ್ದಾಗ ರಾಜ್ ಕುಟುಂಬ ತುಂಬಾ ಬೆಂಬಲ ನೀಡಿತು. ಚಿತ್ರರಂಗಕ್ಕೆ ನಾನು ಸಲ್ಲಿಸಿದ ಸೇವೆಯನ್ನು ರಾಜ್ ಕುಟುಂಬದವರು ಸ್ಮರಿಸಿದರು. ಅದು ನನಗೆ ಪ್ರಶಸ್ತಿಗಿಂತಲೂ ಹಿರಿದು.</p>.<p><strong>ಸಬ್ಸಿಡಿ ಸಮಿತಿಯ ಅಧ್ಯಕ್ಷರಿಗೂ ಲಂಚಕೊಡಬೇಕು ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದರಲ್ಲ?<br /> </strong>ಒಂದು ರೂಪಾಯಿಯನ್ನೂ ನಾನು ಮುಟ್ಟಿಲ್ಲ. `ಲಾವ್ ಲಾವ್~ ವ್ಯವಹಾರ ನಡೆಯುತ್ತಿದೆ ಎಂದು ಕೆಲವು ಅನಾಮಿಕ ಪತ್ರಗಳು ಬಂದಾಗ ಪರೋಕ್ಷವಾಗಿ ಸಮಿತಿಯ ಸದಸ್ಯರನ್ನು ಎಚ್ಚರಿಸಿದೆ. ಪ್ರಾಮಾಣಿಕವಾಗಿ ಚಿತ್ರ ನಿರ್ಮಿಸಿದವರಿಗೆ ಒಳ್ಳೆಯದು ಮಾಡಬೇಕು ಎಂದು ಕಿವಿಮಾತು ಹೇಳಿದೆ. <br /> <br /> ಸಮಿತಿಯ ಸದಸ್ಯರ ಶುಲ್ಕವನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದೆ. ಕೆಲವರು ನನ್ನ ಬಳಿಯೂ ವ್ಯವಹಾರ ಕುದುರಿಸಲು ಹೊರಟರು. ಆಗ ಈ ಅವ್ಯವಹಾರವೇ ಸಾಕು ನಿಮ್ಮ ಚಿತ್ರವನ್ನು ಅನರ್ಹಗೊಳಿಸಲು ಎಂದು ಖಂಡತುಂಡವಾಗಿ ಹೇಳಿದೆ. ಸಮಿತಿಯ ಸದಸ್ಯ ಸುರೇಶ್ ಮಂಗಳೂರು ನನ್ನ ಮೇಲೆ ಗೂಬೆ ಕೂರಿಸಿದರು.<br /> <br /> ಹೀಗ್ಯಾಕೆ ಮಾಡಿದಿರಿ ಎಂದು ಅವರ ಬಳಿ ಕಣ್ಣೀರಿಟ್ಟೆ. ಕುಡಿದ ಅಮಲಿನಲ್ಲಿ ಅವರು ನನ್ನ ವಿರುದ್ಧ ಆರೋಪ ಮಾಡಿದರು ಎಂದು ಈ ಹಿಂದೆ ಹೇಳಿದ್ದು ನಿಜ. ಆದರೆ ಅದನ್ನೇ ಮುಂದು ಮಾಡಿಕೊಂಡು ಅವರ ಪರ ಇದ್ದೇನೆ ಎಂದು ಬಿಂಬಿಸಲಾಯಿತು. 2.5 ಲಕ್ಷ ರೂಪಾಯಿ ಸುರೇಶ್ ಅಕೌಂಟ್ಗೆ ಸೇರಿ ಹೋಗಿತ್ತು. <br /> <br /> ನನ್ನಂಥ ಹಿರಿಯ ಕಲಾವಿದನಿಗೇ ಅಷ್ಟು ಅಡ್ವಾನ್ಸ್ ಯಾರೂ ಕೊಡುವುದಿಲ್ಲ, ನಿಮಗೆ ಹ್ಯಾಗೆ ದೊರೆಯಿತು ಎಂದು ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಆತ ಕ್ಷಮಾಪಣೆ ಪತ್ರ ನೀಡಿದರು.</p>.<p><strong>ಇದನ್ನೆಲ್ಲಾ ಪ್ರತಿಭಟಿಸಿ ನೀವು ರಾಜೀನಾಮೆ ಕೊಡಬಹುದಿತ್ತಲ್ಲ? ಕಠಿಣ ಕ್ರಮಕ್ಕೆ ಶಿಫಾರಸು ಮಾಡಬಹುದಿತ್ತಲ್ಲ?<br /> <br /> </strong>ಅನಾಮಿಕ ಪತ್ರಗಳು ಬಂದದ್ದು ಹೊರತುಪಡಿಸಿದರೆ 1.5 ಕೋಟಿ ರೂಪಾಯಿಯಷ್ಟು ಅವ್ಯವಹಾರ ನಡೆದಿದೆ ಎಂದು ಗೊತ್ತಾದದ್ದೇ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ. ಅದು ನನ್ನ ಊಹೆಗೂ ನಿಲುಕದ ವಿಚಾರವಾಗಿತ್ತು. ಮೊದಲೇ ಗೊತ್ತಿದ್ದರೆ ಮುಖ್ಯಮಂತ್ರಿಗಳನ್ನು ಸಂಪರ್ಕಿಸುತ್ತಿದ್ದೆ. ಸರ್ಕಾರಕ್ಕೆ ಪಟ್ಟಿ ಸಲ್ಲಿಸಿದ ಬಳಿಕ ಅದು ಸೋರಿಕೆಯಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದೆ. ಅವರಿಂದಲೂ ಹೇಗೆ ಸೋರಿಕೆಯಾಯಿತು ಎಂಬ ಉತ್ತರವಿಲ್ಲ. <br /> <strong>ಹಗರಣ ಬಯಲಾದ ಬಳಿಕವೂ ನಿಮ್ಮ ಮೌನ ಅನೇಕ ಸಂದೇಹಗಳಿಗೆ ಎಡೆ ಮಾಡಿಕೊಟ್ಟಿತಲ್ಲ?<br /> </strong><br /> ನನ್ನನ್ನು ನೇಮಿಸಿದ್ದು ಸರ್ಕಾರ. ಅದಾಗಲೇ ಸರ್ಕಾರಕ್ಕೆ ಪಟ್ಟಿ ಸಲ್ಲಿಸಿಯಾಗಿತ್ತು. ಹಾಗಾಗಿ ನಾನು ಹೇಳಿಕೆ ನೀಡಿದರೆ ಸರ್ಕಾರದ ಅಸಮಾಧಾನಕ್ಕೆ ತುತ್ತಾಗುವ ಸಂಭವವಿತ್ತು. ಇದಿಷ್ಟೇ ನನ್ನ ಮೌನಕ್ಕೆ ಕಾರಣ.</p>.<p><strong>ಒಂದೆಡೆ ಸಮಿತಿಯ ಪದಾಧಿಕಾರಿಗಳು ಆರೋಪಿ ಸ್ಥಾನದಲ್ಲಿಯೇ ಇದ್ದಾರೆ. ಇದೇ ವೇಳೆ ಮುಖ್ಯಮಂತ್ರಿಗಳು ಪಟ್ಟಿಯನ್ನು ಅಂಗೀಕರಿಸಿದ್ದಾರೆ. ಇದು ಸಮಿತಿಯ ಮೇಲಿನ ಅನುಮಾನವನ್ನು ಇನ್ನಷ್ಟು ಬಲಗೊಳಿಸಿದಂತೆ ಆಯಿತಲ್ಲವೆ?<br /> </strong>ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಮುಖ್ಯಮಂತ್ರಿಗಳು ಪಟ್ಟಿಯನ್ನು ಅಂಗೀಕರಿಸಬಾರದು ಎಂದು ಹೇಳಲಾಗದು. ನಾವು ಶ್ರಮಪಟ್ಟು ಪ್ರಾಮಾಣಿಕವಾಗಿ ಪಟ್ಟಿ ತಯಾರಿಸಿದ್ದೇವೆ.<br /> <br /> ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇವೆ. ಪಟ್ಟಿ ಅಂಗೀಕರಿಸಬಾರದು ಎಂದರೆ ನಮ್ಮ ಬಗ್ಗೆ ನಾವೇ ಸಂಶಯ ಪಟ್ಟುಕೊಂಡಂತಾಗುತ್ತದೆ. ರಾಮಕೃಷ್ಣ ಹಾಗೂ ಶಿವರಾಂ ಬಿಟ್ಟರೆ ಸಮಿತಿಯ ಸದಸ್ಯರ ಪರಿಚಯವೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾದರೆ ಸಮಿತಿಯಲ್ಲಿ ನಾಡಿನ ಕವಿಗಳೂ ಇದ್ದರು. <br /> <br /> ಅವರ ಪರಿಚಯವೂ ಇವರಿಗೆ ಇಲ್ಲವೆ? `ಕಾರಂಜಿ~ ಚಿತ್ರ ಹಾಗೂ ಕನ್ನಡದ ತಿರುಳನ್ನು ಬಿಂಬಿಸುವ ಇನ್ನೂ ನಾಲ್ಕು ಚಿತ್ರಗಳಿಗೆ ಸಬ್ಸಿಡಿ ಕೊಡಬಹುದಿತ್ತು. ಆದರೆ 45 ಚಿತ್ರಗಳಿಗೇ ಮಿತಿ ಇದ್ದುದರಿಂದ ಅದೆಲ್ಲಾ ಸಾಧ್ಯವಾಗಲಿಲ್ಲ.</p>.<p>`<strong>ನಿರ್ದೋಷಿ~ಯಂಥ ಅಶ್ಲೀಲ ಚಿತ್ರಕ್ಕೆ ಸಬ್ಸಿಡಿ ಕೊಡುವ ಅಗತ್ಯವಿತ್ತೆ? ಪಟ್ಟಿಯಲ್ಲಿ ಕೆಲವು ರಿಮೇಕ್ ಚಿತ್ರಗಳೂ ಇವೆಯಂತಲ್ಲ?<br /> <br /> </strong>ಕನ್ನಡದ ಬೇರೆ ಚಿತ್ರಗಳಲ್ಲಿ ಅದಕ್ಕಿಂತ ಅಶ್ಲೀಲತೆ ಇರುವುದನ್ನು ತೋರಿಸಬಲ್ಲೆ. ಅದೊಂದು ಪ್ರಯೋಗಶೀಲ ಚಿತ್ರ. ವಿಧಾನ ಸೌಧದ ಬ್ಲೂಫಿಲಂ ಪ್ರಕರಣಕ್ಕೆ ಹೋಲಿಸಿದರೆ ಅದು ಕೆಟ್ಟದೇನೂ ಅಲ್ಲ. ಇಷ್ಟಾದರೂ ಕಲಾವಿದರು ಕನ್ನಡದವರಲ್ಲ ಎಂಬ ಕಾರಣಕ್ಕೆ ಚಿತ್ರಕ್ಕೆ ನಾನು ಮತ ಹಾಕಲಿಲ್ಲ. <br /> <br /> ರಿಮೇಕ್ ಹೌದೇ ಅಲ್ಲವೇ ಎಂದು ಪರಿಗಣಿಸಲು ಸರ್ಕಾರ ಪ್ರತ್ಯೇಕವಾದ ಸಮಿತಿಯನ್ನೇ ರಚಿಸಿದೆ. ಸರ್ಕಾರ ಕೊಟ್ಟ ಚಿತ್ರಗಳ ಪಟ್ಟಿಯನ್ನು ಮಾತ್ರ ನಾವು ಅಂಗೀಕರಿಸಬೇಕು. ಇದರಲ್ಲಿ ಸಮಿತಿಯ ತಪ್ಪೇನೂ ಇಲ್ಲ.<br /> <br /> ಬೇರೆ ಬೇರೆ ಭಾಷೆಗಳ ಎರಡು ಮೂರು ಕತೆಗಳನ್ನು ಕದ್ದು ತಮ್ಮದೇ ಸ್ವಂತ ಚಿತ್ರ ಎಂದು ಹೇಳುವ ಜಾಣರು ಚಿತ್ರರಂಗದಲ್ಲೇ ಇದ್ದಾರೆ. ಇದಕ್ಕೆ ಏನು ಏಳುವುದು? ಸಮಿತಿಯ ವಿರುದ್ಧ ಆರೋಪ ಹೊರಿಸಿರುವ ಕೂಡ್ಲು ರಾಮಕೃಷ್ಣ ಅವರ `ಬೆಟ್ಟದಪುರದ ದಿಟ್ಟಮಕ್ಕಳು~ ಮಕ್ಕಳ ಚಿತ್ರವಲ್ಲ. <br /> <br /> ಸಮಿತಿಯ ಸದಸ್ಯರಿಗೆ ಹಣ ಕೊಡುವ ಬದಲು ಸೆನ್ಸಾರ್ ಮಂಡಳಿಯಲ್ಲೇ ಹೋರಾಟ ನಡೆಸಿ ಅಲ್ಲಿಂದಲೇ `ಸಿ~ ಸರ್ಟಿಫಿಕೇಟ್ ತರಬಹುದಿತ್ತು. ಆದರೆ ಆರೋಪ ಹೊರಿಸುವ ಮೂಲಕ ಸ್ಯಾಡಿಸ್ಟ್ ರೀತಿಯಲ್ಲಿ ಅವರು ವರ್ತಿಸಿದ್ದಾರೆ. <br /> <br /> <strong>ಸುಧಾರಣೆ ಆಗಬೇಕಿರುವುದು ಎಲ್ಲಿ?</strong><br /> ಕೆಲವು ನಿರ್ಮಾಪಕರ ಲಾಭಕೋರತನವೇ ಇಂಥ ಅವ್ಯವಹಾರ ನಡೆಯಲು ಕಾರಣ. ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಕೈಕಟ್ಟಿ ಕುಳಿತುಕೊಂಡಿದೆ. ಪೈರಸಿ ವಿರುದ್ಧ ನಡೆದ ಹೋರಾಟದ ಮಾದರಿಯಲ್ಲಿಯೇ ಲಂಚಕೋರತನದ ವಿರುದ್ಧವೂ ಹೋರಾಟ ನಡೆಯಬೇಕು. <br /> <br /> ನಿರ್ಮಾಪಕರು ಆಮಿಷ ಒಡ್ಡುವುದನ್ನು ಕೈ ಬಿಡಬೇಕು. ತಪ್ಪಿತಸ್ಥರನ್ನು ಹಿಡಿಯಲು ನಾನೂ ಸಹಕರಿಸುತ್ತೇನೆ, ಸಂಬಂಧಪಟ್ಟವರು ಮುಂದಾಗಲಿ. ಅಧಿಕಾರಿಗಳು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು.</p>.<p><strong>ಇತ್ತ ರಾಜ್ಕುಮಾರ್ ಪ್ರಶಸ್ತಿ ಬಂತು. ಅದೇ ದಿನ ಮುಖ್ಯಮಂತ್ರಿಗಳಿಂದ ಸಬ್ಸಿಡಿಯ ಬಗ್ಗೆ ಕ್ಲೀನ್ಚಿಟ್ ಕೂಡ ದೊರೆಯಿತು. ಶಿವರಾಂ ಅವರಿಗೆ ಡಬಲ್ ಧಮಾಕಾ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ?<br /> </strong><br /> ಪ್ರಶಸ್ತಿ ಬಂದದ್ದು, ಪಟ್ಟಿಯನ್ನು ಅಂಗೀಕರಿಸಿದ್ದು ಕಾಕತಾಳೀಯವಾಗಿ ನಡೆದಿರಬಹುದು. ಪ್ರಶಸ್ತಿ ಆಯ್ಕೆ ಸಮಿತಿ ಬಯಸಿದರೆ ಈಗಲೂ ಪ್ರಶಸ್ತಿಯನ್ನು ಹಿಂತಿರುಗಿಸಲು ಸಿದ್ಧ. ಕಳಂಕಿತರಿಗೆ ಪ್ರಶಸ್ತಿ ಕೊಡಲಾಗಿದೆ ಎಂದು ಆರೋಪಿಸುತ್ತಿರುವವರಿಗೇ ಅದು ಸಿಗಲಿ.</p>.<p><strong>ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ಸ್ನೇಹ-ಸಂಬಂಧಗಳು ಕೆಲಸ ಮಾಡಿವೆ ಎಂಬ ಮಾತುಗಳೂ ಇವೆ...<br /> </strong><br /> ವಿಷ್ಣುವರ್ಧನ್ ಕುಟುಂಬದ ಸದಸ್ಯರೊಂದಿಗೆ ಸ್ನೇಹ ಹೊಂದಿರುವಂತೆಯೇ ಚಿತ್ರರಂಗದ ಅನೇಕರ ಜತೆ ಒಡನಾಟ ಹೊಂದಿದ್ದೇನೆ. ಚಿತ್ರರಂಗದ ಅಮೃತಮಹೋತ್ಸವದ ಸಂದರ್ಭದಲ್ಲಿಯೇ ಪ್ರಶಸ್ತಿಯೊಂದು ಅರಸಿ ಬಂದಿತ್ತು. ನಾನು ಒಲ್ಲೆ ಎಂದೆ. ಇದೆಲ್ಲಾ ವಿಕೃತ ಮನೋಭಾವದವರು ಮಾಡುವ ಆರೋಪ. <br /> </p>.<p><strong>ಮುಂದಿನ ನಿಮ್ಮ ಹೆಜ್ಜೆ?</strong><br /> ನಾನೀಗ ಬಹುತೇಕ ಹೊರ ನಡೆಯುತ್ತಿದ್ದೇನೆ. ದೇಹಸ್ಥಿತಿಯೂ ಸರಿ ಇಲ್ಲ. ಕಲಾವಿದರ ಕ್ಷೇಮನಿಧಿ ಸ್ಥಾಪಿಸಬೇಕು. ಅದಕ್ಕಾಗಿ ರಾಜ್ಯದೆಲ್ಲೆಡೆ ನಾಟಕಗಳನ್ನು ಆಡಿಸಿ ನಿಧಿ ಸಂಗ್ರಹಿಸಬೇಕು ಎಂದುಕೊಂಡಿದ್ದೇನೆ. ಇದೇ ವೇಳೆ `ನಿರ್ಮಾಪಕರ ಕೈಪಿಡಿ~ ಹಾಗೂ `ಚಿತ್ರ ನಿರ್ಮಾಣ~ ಎಂಬ ಎರಡು ಪುಸ್ತಕಗಳನ್ನು ಹೊರತರಬೇಕಿದೆ. ಇದು ಚಿತ್ರರಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಲಿದೆ ಎಂಬುದು ನನ್ನ ಭಾವನೆ.<br /> </p>.<table align="right" border="1" cellpadding="3" cellspacing="2" width="250"> <tbody> <tr> <td bgcolor="#f2f0f0">`<span style="font-size: small">ಕೂಡ್ಲು ರಾಮಕೃಷ್ಣರ `ಬೆಟ್ಟದಪುರದ ದಿಟ್ಟಮಕ್ಕಳು~ ಮಕ್ಕಳ ಚಿತ್ರವಲ್ಲ. ಸಮಿತಿಯ ಸದಸ್ಯರಿಗೆ ಹಣ ಕೊಡುವ ಬದಲು ಸೆನ್ಸಾರ್ ಮಂಡಳಿಯಲ್ಲೇ ಹೋರಾಟ ನಡೆಸಿ ಅಲ್ಲಿಂದಲೇ `ಸಿ~ ಸರ್ಟಿಫಿಕೇಟ್ ತರಬಹುದಿತ್ತು. ಅವರು ಸ್ಯಾಡಿಸ್ಟ್ ರೀತಿ ವರ್ತಿಸಿದ್ದಾರೆ..<br /> </span></td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>