<p>ಉಪವಾಸ ಸತ್ಯಾಗ್ರಹ ನಡೆಯುವುದು ಮುಖ್ಯವಾಗಿ ಮೂರು ಕಾರಣಗಳಿಗಾಗಿ. ಬೇಡಿಕೆಗಳ ಈಡೇರಿಕೆಗೆ ಆಗ್ರಹ, ತಪ್ಪಿತಸ್ಥರ ಮನಃಪರಿವರ್ತನೆ ಇಲ್ಲವೇ ಸ್ವಂತ ಪಾಪದ ಪ್ರಾಯಶ್ಚಿತ. <br /> <br /> ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು ನಡೆಸಿರುವ ಮೂರು ದಿನಗಳ ಸದ್ಭಾವನಾ ಉಪವಾಸ ಇವುಗಳಲ್ಲಿ ಯಾವ ಉದ್ದೇಶವನ್ನು ಹೊಂದಿದೆ ಎನ್ನುವುದು ಸ್ಪಷ್ಟವಾಗಿಲ್ಲ. <br /> <br /> ಅವರು ಯಾವುದೇ ಬೇಡಿಕೆಗಳನ್ನು ಮುಂದಿಟ್ಟಿಲ್ಲ. ಮುಖ್ಯಮಂತ್ರಿಗಳಾಗಿರುವ ಅವರು ನೀಡುವ ಸಾಮರ್ಥ್ಯ ಉಳ್ಳವರು, ಬೇಡುವ ಅಗತ್ಯವೂ ಅವರಿಗಿಲ್ಲ.<br /> <br /> ಯಾವ ತಪ್ಪಿತಸ್ಥರನ್ನೂ ಅವರು ಹೆಸರಿಸದೆ ಇರುವುದರಿಂದ ಮನಃಪರಿವರ್ತನೆಯ ಉದ್ದೇಶವೂ ಅವರಿಗೆ ಇದ್ದಂತಿಲ್ಲ. ಸ್ವಂತ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಂಡಿರಬಹುದೇ? ಈ ಬಗ್ಗೆಯೂ ಅವರು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. <br /> <br /> `ರಾಜ್ಯದ ಯಾವುದೇ ವ್ಯಕ್ತಿಗೂ ನೋವಾದರೂ ಮುಖ್ಯಮಂತ್ರಿಯಾಗಿ ಅದು ನನ್ನ ನೋವೆಂದು ಭಾವಿಸುತ್ತೇನೆ ಮತ್ತು ಅಂತಹವರಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ~ ಎಂದಷ್ಟೇ ನರೇಂದ್ರ ಮೋದಿ ಹೇಳಿದ್ದಾರೆ. <br /> <br /> ಆದರೆ ನೋವಿಗೀಡಾಗಿರುವ ವ್ಯಕ್ತಿಗಳು ಯಾರು? ಆ ನೋವಿಗೆ ಕಾರಣಕರ್ತರು ಯಾರು? ಎನ್ನುವುದನ್ನು ವಿವರಿಸದೆ ಇರುವುದರಿಂದ ಅವರ ಈ ಹೇಳಿಕೆ ಪ್ರಾಮಾಣಿಕವಾದುದು ಎಂಬ ನಂಬಿಕೆ ಹುಟ್ಟಿಸುವುದಿಲ್ಲ. <br /> <br /> ಪ್ರಧಾನಿ ಪಟ್ಟದ ಅಭ್ಯರ್ಥಿಯಾಗಲು ಭಾರತೀಯ ಜನತಾ ಪಕ್ಷದೊಳಗೆ ಈಗಾಗಲೇ ಶೀತಲವಾದ ಪೈಪೋಟಿ ಪ್ರಾರಂಭವಾಗಿದೆ. ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಯಾತ್ರೆ ಹೊರಡಲು ಸಿದ್ಧತೆ ನಡೆಸಿದ್ದಾರೆ. <br /> <br /> ಮೋದಿ ಅವರು ಬಹುಪ್ರಚಾರದ ಉಪವಾಸ ಕೈಗೊಂಡಿರುವುದು ಕೂಡಾ ಈ ಪೈಪೋಟಿಯ ಭಾಗವೆಂದೇ ಹೇಳಬೇಕಾಗುತ್ತದೆ. ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವ ಉದ್ದೇಶ ಅವರಿಗಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಅದನ್ನು ಅವರು ನೇರವಾಗಿ ಹೇಳಿಬಿಡಬೇಕು. <br /> <br /> ಆದರೆ ಅದಕ್ಕಿಂತ ಮೊದಲು ಒಂಬತ್ತು ವರ್ಷಗಳ ಹಿಂದೆ ಗುಜರಾತ್ನಲ್ಲಿ ನಡೆದ ನರಮೇಧದ ಬಗ್ಗೆ ದೇಶದ ಜನರಿಗೆ ಅವರು ವಿವರಣೆ ನೀಡಬೇಕಾಗುತ್ತದೆ. ಈ ಆರೋಪದಿಂದ ನ್ಯಾಯಾಲಯ ಅವರನ್ನು ಇನ್ನೂ ಮುಕ್ತಗೊಳಿಸಿಲ್ಲ ಎನ್ನುವುದನ್ನು ಅವರು ಮರೆಯಬಾರದು. ಆ ಹಿಂಸಾಚಾರದಲ್ಲಿ ಅವರು ನೇರವಾಗಿ ಭಾಗವಹಿಸದೆ ಇರಬಹುದು. <br /> <br /> ಆದರೆ ಆ ಕಾಲದಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಅವರ ಕೈಯಲ್ಲೇ ಇದ್ದ ಕಾರಣ ಆ ದುರ್ಘಟನೆಗೆ ನೈತಿಕ ಹೊಣೆಗಾರರು ಅವರೇ ಆಗಿರುತ್ತಾರೆ. ಈ ಘೋರ ಕರ್ತವ್ಯಲೋಪದ ಬಗ್ಗೆ ಮೋದಿ ಅವರು ಇಲ್ಲಿಯವರೆಗೆ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ. <br /> <br /> ಧಾರ್ಮಿಕ ಉದ್ದೇಶದ ಉಪವಾಸವನ್ನು ರಾಜಕೀಯ ಹೋರಾಟದ ಅಸ್ತ್ರವನ್ನಾಗಿ ಯಶಸ್ವಿಯಾಗಿ ಪ್ರಯೋಗಿಸಿದ್ದು ಮಹಾತ್ಮ ಗಾಂಧೀಜಿ. ಆದರೆ ಸ್ವತಂತ್ರ ಭಾರತದಲ್ಲಿ ಅಹಿಂಸಾತ್ಮಕ ಹೋರಾಟದ ಪ್ರಬಲ ಸಾಧನವಾಗಿರುವ ಉಪವಾಸ ಸತ್ಯಾಗ್ರಹ ದುರ್ಬಳಕೆಯಾಗಿದ್ದೇ ಹೆಚ್ಚು. <br /> <br /> ಉಪವಾಸ ಕೂರುವ ಮನುಷ್ಯ ಪಾರದರ್ಶಕವಾಗಿ ಇರದೆ ಇದ್ದರೆ ಇಲ್ಲವೇ ದುರುದ್ದೇಶ ಹೊಂದಿದ್ದರೆ ಅದರ ಪಾವಿತ್ರ್ಯ ನಾಶವಾಗುತ್ತದೆ. ನರೇಂದ್ರ ಮೋದಿ ಅವರು ತಮ್ಮ ಸಂಶಯಾತ್ಮಕ ನಡೆ-ನುಡಿಗಳ ಮೂಲಕ ಉಪವಾಸದ ಪಾವಿತ್ರ್ಯ ನಾಶ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಪವಾಸ ಸತ್ಯಾಗ್ರಹ ನಡೆಯುವುದು ಮುಖ್ಯವಾಗಿ ಮೂರು ಕಾರಣಗಳಿಗಾಗಿ. ಬೇಡಿಕೆಗಳ ಈಡೇರಿಕೆಗೆ ಆಗ್ರಹ, ತಪ್ಪಿತಸ್ಥರ ಮನಃಪರಿವರ್ತನೆ ಇಲ್ಲವೇ ಸ್ವಂತ ಪಾಪದ ಪ್ರಾಯಶ್ಚಿತ. <br /> <br /> ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು ನಡೆಸಿರುವ ಮೂರು ದಿನಗಳ ಸದ್ಭಾವನಾ ಉಪವಾಸ ಇವುಗಳಲ್ಲಿ ಯಾವ ಉದ್ದೇಶವನ್ನು ಹೊಂದಿದೆ ಎನ್ನುವುದು ಸ್ಪಷ್ಟವಾಗಿಲ್ಲ. <br /> <br /> ಅವರು ಯಾವುದೇ ಬೇಡಿಕೆಗಳನ್ನು ಮುಂದಿಟ್ಟಿಲ್ಲ. ಮುಖ್ಯಮಂತ್ರಿಗಳಾಗಿರುವ ಅವರು ನೀಡುವ ಸಾಮರ್ಥ್ಯ ಉಳ್ಳವರು, ಬೇಡುವ ಅಗತ್ಯವೂ ಅವರಿಗಿಲ್ಲ.<br /> <br /> ಯಾವ ತಪ್ಪಿತಸ್ಥರನ್ನೂ ಅವರು ಹೆಸರಿಸದೆ ಇರುವುದರಿಂದ ಮನಃಪರಿವರ್ತನೆಯ ಉದ್ದೇಶವೂ ಅವರಿಗೆ ಇದ್ದಂತಿಲ್ಲ. ಸ್ವಂತ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಂಡಿರಬಹುದೇ? ಈ ಬಗ್ಗೆಯೂ ಅವರು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. <br /> <br /> `ರಾಜ್ಯದ ಯಾವುದೇ ವ್ಯಕ್ತಿಗೂ ನೋವಾದರೂ ಮುಖ್ಯಮಂತ್ರಿಯಾಗಿ ಅದು ನನ್ನ ನೋವೆಂದು ಭಾವಿಸುತ್ತೇನೆ ಮತ್ತು ಅಂತಹವರಿಗೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ~ ಎಂದಷ್ಟೇ ನರೇಂದ್ರ ಮೋದಿ ಹೇಳಿದ್ದಾರೆ. <br /> <br /> ಆದರೆ ನೋವಿಗೀಡಾಗಿರುವ ವ್ಯಕ್ತಿಗಳು ಯಾರು? ಆ ನೋವಿಗೆ ಕಾರಣಕರ್ತರು ಯಾರು? ಎನ್ನುವುದನ್ನು ವಿವರಿಸದೆ ಇರುವುದರಿಂದ ಅವರ ಈ ಹೇಳಿಕೆ ಪ್ರಾಮಾಣಿಕವಾದುದು ಎಂಬ ನಂಬಿಕೆ ಹುಟ್ಟಿಸುವುದಿಲ್ಲ. <br /> <br /> ಪ್ರಧಾನಿ ಪಟ್ಟದ ಅಭ್ಯರ್ಥಿಯಾಗಲು ಭಾರತೀಯ ಜನತಾ ಪಕ್ಷದೊಳಗೆ ಈಗಾಗಲೇ ಶೀತಲವಾದ ಪೈಪೋಟಿ ಪ್ರಾರಂಭವಾಗಿದೆ. ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಯಾತ್ರೆ ಹೊರಡಲು ಸಿದ್ಧತೆ ನಡೆಸಿದ್ದಾರೆ. <br /> <br /> ಮೋದಿ ಅವರು ಬಹುಪ್ರಚಾರದ ಉಪವಾಸ ಕೈಗೊಂಡಿರುವುದು ಕೂಡಾ ಈ ಪೈಪೋಟಿಯ ಭಾಗವೆಂದೇ ಹೇಳಬೇಕಾಗುತ್ತದೆ. ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವ ಉದ್ದೇಶ ಅವರಿಗಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಅದನ್ನು ಅವರು ನೇರವಾಗಿ ಹೇಳಿಬಿಡಬೇಕು. <br /> <br /> ಆದರೆ ಅದಕ್ಕಿಂತ ಮೊದಲು ಒಂಬತ್ತು ವರ್ಷಗಳ ಹಿಂದೆ ಗುಜರಾತ್ನಲ್ಲಿ ನಡೆದ ನರಮೇಧದ ಬಗ್ಗೆ ದೇಶದ ಜನರಿಗೆ ಅವರು ವಿವರಣೆ ನೀಡಬೇಕಾಗುತ್ತದೆ. ಈ ಆರೋಪದಿಂದ ನ್ಯಾಯಾಲಯ ಅವರನ್ನು ಇನ್ನೂ ಮುಕ್ತಗೊಳಿಸಿಲ್ಲ ಎನ್ನುವುದನ್ನು ಅವರು ಮರೆಯಬಾರದು. ಆ ಹಿಂಸಾಚಾರದಲ್ಲಿ ಅವರು ನೇರವಾಗಿ ಭಾಗವಹಿಸದೆ ಇರಬಹುದು. <br /> <br /> ಆದರೆ ಆ ಕಾಲದಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಅವರ ಕೈಯಲ್ಲೇ ಇದ್ದ ಕಾರಣ ಆ ದುರ್ಘಟನೆಗೆ ನೈತಿಕ ಹೊಣೆಗಾರರು ಅವರೇ ಆಗಿರುತ್ತಾರೆ. ಈ ಘೋರ ಕರ್ತವ್ಯಲೋಪದ ಬಗ್ಗೆ ಮೋದಿ ಅವರು ಇಲ್ಲಿಯವರೆಗೆ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ. <br /> <br /> ಧಾರ್ಮಿಕ ಉದ್ದೇಶದ ಉಪವಾಸವನ್ನು ರಾಜಕೀಯ ಹೋರಾಟದ ಅಸ್ತ್ರವನ್ನಾಗಿ ಯಶಸ್ವಿಯಾಗಿ ಪ್ರಯೋಗಿಸಿದ್ದು ಮಹಾತ್ಮ ಗಾಂಧೀಜಿ. ಆದರೆ ಸ್ವತಂತ್ರ ಭಾರತದಲ್ಲಿ ಅಹಿಂಸಾತ್ಮಕ ಹೋರಾಟದ ಪ್ರಬಲ ಸಾಧನವಾಗಿರುವ ಉಪವಾಸ ಸತ್ಯಾಗ್ರಹ ದುರ್ಬಳಕೆಯಾಗಿದ್ದೇ ಹೆಚ್ಚು. <br /> <br /> ಉಪವಾಸ ಕೂರುವ ಮನುಷ್ಯ ಪಾರದರ್ಶಕವಾಗಿ ಇರದೆ ಇದ್ದರೆ ಇಲ್ಲವೇ ದುರುದ್ದೇಶ ಹೊಂದಿದ್ದರೆ ಅದರ ಪಾವಿತ್ರ್ಯ ನಾಶವಾಗುತ್ತದೆ. ನರೇಂದ್ರ ಮೋದಿ ಅವರು ತಮ್ಮ ಸಂಶಯಾತ್ಮಕ ನಡೆ-ನುಡಿಗಳ ಮೂಲಕ ಉಪವಾಸದ ಪಾವಿತ್ರ್ಯ ನಾಶ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>