<p><strong>ಬೆಂಗಳೂರು:</strong> ಬಿ.ಎಸ್.ಆರ್ ಕಾಂಗ್ರೆಸ್ ಸಂಸ್ಥಾಪಕ, ಶಾಸಕ ಬಿ.ಶ್ರೀರಾಮುಲು ಶುಕ್ರವಾರ ಸಂಜೆ ಮಾತೃಪಕ್ಷ ಬಿಜೆಪಿ ಸೇರಿದರು.<br /> <br /> ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಮುಖಂಡರಾದ ಜಗದೀಶ ಶೆಟ್ಟರ್, ಆರ್.ಅಶೋಕ ಅವರು ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಈ ಸಂದರ್ಭದಲ್ಲಿ ರಾಮುಲು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.<br /> <br /> ‘ತಾಂತ್ರಿಕ ಕಾರಣಗಳಿಂದ ಪಕ್ಷವನ್ನು ವಿಲೀನಗೊಳಿಸಲು ಸಾಧ್ಯವಾಗಿಲ್ಲ. ಈಗ ನಾನು ಮಾತ್ರ ಬಿಜೆಪಿ ಸೇರುತ್ತಿದ್ದೇನೆ’ ಎಂದು ಶ್ರೀರಾಮುಲು ಸಮಜಾಯಿಷಿ ನೀಡಿದರು.<br /> <br /> ಹಾಲಿ ಇರುವ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೇ ಬೇರೊಂದು ಪಕ್ಷಕ್ಕೆ ಸೇರಲು ಕಾನೂನಿನಲ್ಲಿ ಅವಕಾಶ. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ. ಈ ಭಯದಿಂದಲೇ ಶ್ರೀರಾಮುಲು ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯಲಿಲ್ಲ ಎನ್ನಲಾಗಿದೆ.<br /> <br /> ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಅಭಿಪ್ರಾಯ ಪಡೆದು, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೋಶಿ ಸುದ್ದಿಗಾರರಿಗೆ ತಿಳಿಸಿದರು.<br /> <br /> <strong>ವಿಲೀನಕ್ಕೆ ವಿರೋಧ:</strong> ಶ್ರೀರಾಮುಲು ಸೇರ್ಪಡೆ ಅಥವಾ ಅವರ ಪಕ್ಷದ ವಿಲೀನಕ್ಕೆ ಸುಷ್ಮಾ ಸ್ವರಾಜ್ ಇನ್ನೂ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಅವರ ವಿರೋಧದ ನಡುವೆಯೂ ಕೇವಲ ಶ್ರೀರಾಮುಲು ಅವರ ಸೇರ್ಪಡೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ಒಪ್ಪಿಗೆ ಸೂಚಿಸಿದರು ಎಂದು ಗೊತ್ತಾಗಿದೆ.<br /> <br /> ವಿಲೀನ ಮಾಡಿಕೊಂಡರೆ ಅಕ್ರಮ ಗಣಿಗಾರಿಕೆ ಆಪಾದನೆ ಇರುವವರನ್ನೂ ಬಿಜೆಪಿಗೆ ಸೇರಿಸಿಕೊಳ್ಳಬೇಕಾಗುತ್ತದೆ. ಅದರಿಂದಾಗುವ ಮುಜುಗರ ತಪ್ಪಿಸಲು ಕೇವಲ ಶ್ರೀರಾಮುಲು ಅವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಒಂದೆರಡು ದಿನಗಳಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ-ದ್ದಾರೆ. ಅದರ ನಂತರವೇ ಬಿಜೆಪಿ ಟಿಕೆಟ್ ಮೇಲೆ ಬಳ್ಳಾರಿಯಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಗೊತ್ತಾಗಿದೆ.<br /> <br /> ತಮ್ಮ ಸೇರ್ಪಡೆಗೆ ಸುಷ್ಮಾ ಸ್ವರಾಜ್ ಅವರ ವಿರೋಧ ಇನ್ನೂ ಇದೆಯಲ್ಲ ಎನ್ನುವ ಪ್ರಶ್ನೆಗೆ ‘ಹಾಗೇನೂ ಇಲ್ಲ. ರಾಷ್ಟ್ರದ ಎಲ್ಲ ನಾಯಕರ ಒಪ್ಪಿಗೆ ನಂತರವೇ ನಾನು ಬಿಜೆಪಿಗೆ ವಾಪಸಾಗಿದ್ದೇನೆ’ ಎಂದರು.<br /> <br /> <strong>ಮೂವರು ಸಂಸದರ ಅಮಾನತು ರದ್ದು<br /> ಬೆಂಗಳೂರು:</strong> ಬಳ್ಳಾರಿ ಸಂಸದೆ ಜೆ.ಶಾಂತಾ, ರಾಯಚೂರು ಸಂಸದ ಸಣ್ಣ ಫಕೀರಪ್ಪ ಮತ್ತು ತುಮಕೂರು ಸಂಸದ ಜಿ.ಎಸ್.ಬಸವರಾಜು ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯುವುದಾಗಿ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಶುಕ್ರವಾರ ಇಲ್ಲಿ ತಿಳಿಸಿದರು.<br /> <br /> ಶ್ರೀರಾಮುಲು ಅವರನ್ನು ಬಿಜೆಪಿಗೆ ಸೇರಿಸಿಕೊಂಡ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ಬಿಎಸ್ಆರ್ ಕಾಂಗ್ರೆಸ್ ಜತೆ ಗುರುತಿಸಿಕೊಂಡು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು ಎನ್ನುವ ಆರೋಪದ ಮೇಲೆ ಶಾಂತ ಮತ್ತು ಫಕೀರಪ್ಪ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.<br /> <br /> ಕೆಜೆಪಿ ಜತೆ ಗುರುತಿಸಿಕೊಂಡು ಪಕ್ಷದ ಮುಖಂಡರ ವಿರುದ್ಧ ಟೀಕೆ ಮಾಡಿದ್ದರು ಎನ್ನುವ ಕಾರಣಕ್ಕೆ ಬಸವರಾಜು ಅವರನ್ನು ಅಮಾನತು ಮಾಡಲಾಗಿತ್ತು.<br /> <br /> <strong>ಬಿಜೆಪಿ ಸೇರಿದ ಪ್ರತಾಪ್</strong><br /> ಮೈಸೂರು ಅಭ್ಯರ್ಥಿ, ಪತ್ರಕರ್ತ ಪ್ರತಾಪ್ ಸಿಂಹ ಮತ್ತು ಮಂಡ್ಯ ಅಭ್ಯರ್ಥಿ ಪ್ರೊ.ಶಿವಲಿಂಗಯ್ಯ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯುವುದರ ಮೂಲಕ ಆ ಪಕ್ಷದ ಸದಸ್ಯರಾದರು.<br /> <br /> ಪಕ್ಷ ಸೇರುವುದಕ್ಕೂ ಮುನ್ನವೇ ಇವರಿಬ್ಬರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.<br /> <br /> <strong>ಸ್ವಾಭಿಮಾನಕ್ಕಿಂತ ದೇಶ ಮುಖ್ಯ</strong><br /> ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹೊಸ ಪಕ್ಷ ಕಟ್ಟಿದೆ. ಆದರೆ, ಈಗ ಸ್ವಾಭಿಮಾನಕ್ಕಿಂತ ದೇಶ ಮುಖ್ಯ ಎನ್ನುವ ಕಾರಣಕ್ಕೆ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ವಾಪಸಾಗಿದ್ದೇನೆ. ಇದಕ್ಕೆ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರ ಒಪ್ಪಿಗೆಯೂ ಇದೆ’<br /> <strong>– ಬಿ.ಶ್ರೀರಾಮುಲು<br /> <br /> ಬಿಜೆಪಿ ಸೇರಲು ರಾಜೀವ್ ವಿರೋಧ</strong><br /> ಬೆಂಗಳೂರು: ಬಿಎಸ್ಆರ್ ಕಾಂಗ್ರೆಸ್ನ ಕುಡಚಿ ಶಾಸಕ ಪಿ.ರಾಜೀವ್ ಅವರು ಬಿಜೆಪಿ ಸೇರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.<br /> <br /> ‘ಬಿಜೆಪಿ ಸೇರುವುದಾದರೆ ನಾನು ನಿಮ್ಮ ಜತೆ ಇರುವುದಿಲ್ಲ’ ಎಂಬುದನ್ನು ರಾಜೀವ್ ಅವರು ಶ್ರೀರಾಮುಲು ಅವರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.<br /> <br /> ಬಿಎಸ್ಆರ್ ಕಾಂಗ್ರೆಸ್ನ ನಾಲ್ಕು ಶಾಸಕರ ಪೈಕಿ ಶ್ರೀರಾಮುಲು ಮಾತ್ರ ಬಿಜೆಪಿ ಸೇರಿದ್ದಾರೆ. ಅವರ ಅಳಿಯ ಸುರೇಶ ಬಾಬು ಜೈಲಿನಲ್ಲಿದ್ದಾರೆ. ಮತ್ತೊಬ್ಬ ಶಾಸಕ ಎಸ್.ತಿಪ್ಪೇಸ್ವಾಮಿ ಅವರು ರಾಮುಲು ಜತೆ ಇದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿ.ಎಸ್.ಆರ್ ಕಾಂಗ್ರೆಸ್ ಸಂಸ್ಥಾಪಕ, ಶಾಸಕ ಬಿ.ಶ್ರೀರಾಮುಲು ಶುಕ್ರವಾರ ಸಂಜೆ ಮಾತೃಪಕ್ಷ ಬಿಜೆಪಿ ಸೇರಿದರು.<br /> <br /> ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಮುಖಂಡರಾದ ಜಗದೀಶ ಶೆಟ್ಟರ್, ಆರ್.ಅಶೋಕ ಅವರು ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಈ ಸಂದರ್ಭದಲ್ಲಿ ರಾಮುಲು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.<br /> <br /> ‘ತಾಂತ್ರಿಕ ಕಾರಣಗಳಿಂದ ಪಕ್ಷವನ್ನು ವಿಲೀನಗೊಳಿಸಲು ಸಾಧ್ಯವಾಗಿಲ್ಲ. ಈಗ ನಾನು ಮಾತ್ರ ಬಿಜೆಪಿ ಸೇರುತ್ತಿದ್ದೇನೆ’ ಎಂದು ಶ್ರೀರಾಮುಲು ಸಮಜಾಯಿಷಿ ನೀಡಿದರು.<br /> <br /> ಹಾಲಿ ಇರುವ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೇ ಬೇರೊಂದು ಪಕ್ಷಕ್ಕೆ ಸೇರಲು ಕಾನೂನಿನಲ್ಲಿ ಅವಕಾಶ. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ. ಈ ಭಯದಿಂದಲೇ ಶ್ರೀರಾಮುಲು ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯಲಿಲ್ಲ ಎನ್ನಲಾಗಿದೆ.<br /> <br /> ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಅಭಿಪ್ರಾಯ ಪಡೆದು, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೋಶಿ ಸುದ್ದಿಗಾರರಿಗೆ ತಿಳಿಸಿದರು.<br /> <br /> <strong>ವಿಲೀನಕ್ಕೆ ವಿರೋಧ:</strong> ಶ್ರೀರಾಮುಲು ಸೇರ್ಪಡೆ ಅಥವಾ ಅವರ ಪಕ್ಷದ ವಿಲೀನಕ್ಕೆ ಸುಷ್ಮಾ ಸ್ವರಾಜ್ ಇನ್ನೂ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಅವರ ವಿರೋಧದ ನಡುವೆಯೂ ಕೇವಲ ಶ್ರೀರಾಮುಲು ಅವರ ಸೇರ್ಪಡೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ಒಪ್ಪಿಗೆ ಸೂಚಿಸಿದರು ಎಂದು ಗೊತ್ತಾಗಿದೆ.<br /> <br /> ವಿಲೀನ ಮಾಡಿಕೊಂಡರೆ ಅಕ್ರಮ ಗಣಿಗಾರಿಕೆ ಆಪಾದನೆ ಇರುವವರನ್ನೂ ಬಿಜೆಪಿಗೆ ಸೇರಿಸಿಕೊಳ್ಳಬೇಕಾಗುತ್ತದೆ. ಅದರಿಂದಾಗುವ ಮುಜುಗರ ತಪ್ಪಿಸಲು ಕೇವಲ ಶ್ರೀರಾಮುಲು ಅವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> <br /> ಒಂದೆರಡು ದಿನಗಳಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ-ದ್ದಾರೆ. ಅದರ ನಂತರವೇ ಬಿಜೆಪಿ ಟಿಕೆಟ್ ಮೇಲೆ ಬಳ್ಳಾರಿಯಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಗೊತ್ತಾಗಿದೆ.<br /> <br /> ತಮ್ಮ ಸೇರ್ಪಡೆಗೆ ಸುಷ್ಮಾ ಸ್ವರಾಜ್ ಅವರ ವಿರೋಧ ಇನ್ನೂ ಇದೆಯಲ್ಲ ಎನ್ನುವ ಪ್ರಶ್ನೆಗೆ ‘ಹಾಗೇನೂ ಇಲ್ಲ. ರಾಷ್ಟ್ರದ ಎಲ್ಲ ನಾಯಕರ ಒಪ್ಪಿಗೆ ನಂತರವೇ ನಾನು ಬಿಜೆಪಿಗೆ ವಾಪಸಾಗಿದ್ದೇನೆ’ ಎಂದರು.<br /> <br /> <strong>ಮೂವರು ಸಂಸದರ ಅಮಾನತು ರದ್ದು<br /> ಬೆಂಗಳೂರು:</strong> ಬಳ್ಳಾರಿ ಸಂಸದೆ ಜೆ.ಶಾಂತಾ, ರಾಯಚೂರು ಸಂಸದ ಸಣ್ಣ ಫಕೀರಪ್ಪ ಮತ್ತು ತುಮಕೂರು ಸಂಸದ ಜಿ.ಎಸ್.ಬಸವರಾಜು ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯುವುದಾಗಿ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಶುಕ್ರವಾರ ಇಲ್ಲಿ ತಿಳಿಸಿದರು.<br /> <br /> ಶ್ರೀರಾಮುಲು ಅವರನ್ನು ಬಿಜೆಪಿಗೆ ಸೇರಿಸಿಕೊಂಡ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ಬಿಎಸ್ಆರ್ ಕಾಂಗ್ರೆಸ್ ಜತೆ ಗುರುತಿಸಿಕೊಂಡು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು ಎನ್ನುವ ಆರೋಪದ ಮೇಲೆ ಶಾಂತ ಮತ್ತು ಫಕೀರಪ್ಪ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.<br /> <br /> ಕೆಜೆಪಿ ಜತೆ ಗುರುತಿಸಿಕೊಂಡು ಪಕ್ಷದ ಮುಖಂಡರ ವಿರುದ್ಧ ಟೀಕೆ ಮಾಡಿದ್ದರು ಎನ್ನುವ ಕಾರಣಕ್ಕೆ ಬಸವರಾಜು ಅವರನ್ನು ಅಮಾನತು ಮಾಡಲಾಗಿತ್ತು.<br /> <br /> <strong>ಬಿಜೆಪಿ ಸೇರಿದ ಪ್ರತಾಪ್</strong><br /> ಮೈಸೂರು ಅಭ್ಯರ್ಥಿ, ಪತ್ರಕರ್ತ ಪ್ರತಾಪ್ ಸಿಂಹ ಮತ್ತು ಮಂಡ್ಯ ಅಭ್ಯರ್ಥಿ ಪ್ರೊ.ಶಿವಲಿಂಗಯ್ಯ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯುವುದರ ಮೂಲಕ ಆ ಪಕ್ಷದ ಸದಸ್ಯರಾದರು.<br /> <br /> ಪಕ್ಷ ಸೇರುವುದಕ್ಕೂ ಮುನ್ನವೇ ಇವರಿಬ್ಬರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.<br /> <br /> <strong>ಸ್ವಾಭಿಮಾನಕ್ಕಿಂತ ದೇಶ ಮುಖ್ಯ</strong><br /> ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹೊಸ ಪಕ್ಷ ಕಟ್ಟಿದೆ. ಆದರೆ, ಈಗ ಸ್ವಾಭಿಮಾನಕ್ಕಿಂತ ದೇಶ ಮುಖ್ಯ ಎನ್ನುವ ಕಾರಣಕ್ಕೆ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ವಾಪಸಾಗಿದ್ದೇನೆ. ಇದಕ್ಕೆ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರ ಒಪ್ಪಿಗೆಯೂ ಇದೆ’<br /> <strong>– ಬಿ.ಶ್ರೀರಾಮುಲು<br /> <br /> ಬಿಜೆಪಿ ಸೇರಲು ರಾಜೀವ್ ವಿರೋಧ</strong><br /> ಬೆಂಗಳೂರು: ಬಿಎಸ್ಆರ್ ಕಾಂಗ್ರೆಸ್ನ ಕುಡಚಿ ಶಾಸಕ ಪಿ.ರಾಜೀವ್ ಅವರು ಬಿಜೆಪಿ ಸೇರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.<br /> <br /> ‘ಬಿಜೆಪಿ ಸೇರುವುದಾದರೆ ನಾನು ನಿಮ್ಮ ಜತೆ ಇರುವುದಿಲ್ಲ’ ಎಂಬುದನ್ನು ರಾಜೀವ್ ಅವರು ಶ್ರೀರಾಮುಲು ಅವರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.<br /> <br /> ಬಿಎಸ್ಆರ್ ಕಾಂಗ್ರೆಸ್ನ ನಾಲ್ಕು ಶಾಸಕರ ಪೈಕಿ ಶ್ರೀರಾಮುಲು ಮಾತ್ರ ಬಿಜೆಪಿ ಸೇರಿದ್ದಾರೆ. ಅವರ ಅಳಿಯ ಸುರೇಶ ಬಾಬು ಜೈಲಿನಲ್ಲಿದ್ದಾರೆ. ಮತ್ತೊಬ್ಬ ಶಾಸಕ ಎಸ್.ತಿಪ್ಪೇಸ್ವಾಮಿ ಅವರು ರಾಮುಲು ಜತೆ ಇದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>