<p><strong>ಬೆಂಗಳೂರು (ಪಿಟಿಐ):</strong> ಬೆನ್ನತ್ತಿದ ಅಕ್ರಮ ಗಣಿ ಭೂತದಿಂದ ಅಧಿಕಾರ ಕಳೆದುಕೊಂಡು ಹೈರಾಣಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದದ ಅಕ್ರಮ ಗಣಿಗಾರಿಕೆಗೆ ಸಂಬಂಧಿತ ಎಫ್ಐಆರ್ ಒಂದನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದ್ದು, ಇದರಿಂದ `ಆರೋಪಮುಕ್ತ~ರಾಗುವ ಆತುರದಲ್ಲಿರುವ ಬಿಎಸ್ವೈ ಕೊಂಚ ನಿರಾಳರಾಗಿದ್ದಾರೆ.<br /> <br /> ಸರ್ಕಾರಕ್ಕೆ ಸಲ್ಲಿಸಲಾದ ಲೋಕಾಯುಕ್ತ ವರದಿಯ ಆಧಾರದ ಮೇಲೆ ಕಳೆದ ಆಗಸ್ಟ್ನಲ್ಲಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅವರ ವಿರುದ್ದ ಎಫ್ಐಆರ್ ಒಂದನ್ನು ದಾಖಲಿಸಿದ್ದರು.</p>.<p> ಅಲ್ಲದೇ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಬಿಎಸ್ವೈ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು.</p>.<p>ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಕ್ತವತ್ಸಲ ಹಾಗೂ ಗೊವಿಂದರಾಜು ಅವರನ್ನು ಒಳಗೊಂಡ ವಿಭಾಗೀಯ ಪೀಠವು ಎಫ್ಆರ್ಐ ರದ್ದುಗೊಳಿಸಿದೆ.<br /> <br /> ಇದೇ ಸಂದರ್ಭದಲ್ಲಿ ಪೀಠವು `ಪ್ರಕರಣ ಕುರಿತಂತೆ ತಮಗೆ ವಿವರಣೆ ನೀಡಲು ಅವಕಾಶ ಕೊಡದೇ ತಮ್ಮ ವಿರುದ್ದ ಕ್ರಮಗೊಳ್ಳಲಾಗಿದೆ~ ಎಂಬ ಯಡಿಯೂರಪ್ಪ ಅವರ ವಾದವನ್ನು ಎತ್ತಿ ಹಿಡಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು (ಪಿಟಿಐ):</strong> ಬೆನ್ನತ್ತಿದ ಅಕ್ರಮ ಗಣಿ ಭೂತದಿಂದ ಅಧಿಕಾರ ಕಳೆದುಕೊಂಡು ಹೈರಾಣಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದದ ಅಕ್ರಮ ಗಣಿಗಾರಿಕೆಗೆ ಸಂಬಂಧಿತ ಎಫ್ಐಆರ್ ಒಂದನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದ್ದು, ಇದರಿಂದ `ಆರೋಪಮುಕ್ತ~ರಾಗುವ ಆತುರದಲ್ಲಿರುವ ಬಿಎಸ್ವೈ ಕೊಂಚ ನಿರಾಳರಾಗಿದ್ದಾರೆ.<br /> <br /> ಸರ್ಕಾರಕ್ಕೆ ಸಲ್ಲಿಸಲಾದ ಲೋಕಾಯುಕ್ತ ವರದಿಯ ಆಧಾರದ ಮೇಲೆ ಕಳೆದ ಆಗಸ್ಟ್ನಲ್ಲಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅವರ ವಿರುದ್ದ ಎಫ್ಐಆರ್ ಒಂದನ್ನು ದಾಖಲಿಸಿದ್ದರು.</p>.<p> ಅಲ್ಲದೇ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಬಿಎಸ್ವೈ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು.</p>.<p>ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಕ್ತವತ್ಸಲ ಹಾಗೂ ಗೊವಿಂದರಾಜು ಅವರನ್ನು ಒಳಗೊಂಡ ವಿಭಾಗೀಯ ಪೀಠವು ಎಫ್ಆರ್ಐ ರದ್ದುಗೊಳಿಸಿದೆ.<br /> <br /> ಇದೇ ಸಂದರ್ಭದಲ್ಲಿ ಪೀಠವು `ಪ್ರಕರಣ ಕುರಿತಂತೆ ತಮಗೆ ವಿವರಣೆ ನೀಡಲು ಅವಕಾಶ ಕೊಡದೇ ತಮ್ಮ ವಿರುದ್ದ ಕ್ರಮಗೊಳ್ಳಲಾಗಿದೆ~ ಎಂಬ ಯಡಿಯೂರಪ್ಪ ಅವರ ವಾದವನ್ನು ಎತ್ತಿ ಹಿಡಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>