<p><strong>ಹುಬ್ಬಳ್ಳಿ: </strong>ಬಿಪಿಓ (ಬಿಸಿನೆಸ್ ಪ್ರೊಸೆಸ್ ಓಟ್ಸೋರ್ಸಿಂಗ್) ತರಬೇತಿ ನೀಡುವ ಕೃತಿ ಬಿಸಿನೆಸ್ ಸೊಲ್ಯುಷನ್ಸ್ ಕೇಂದ್ರ ಇದೇ 3ರಂದು ಸಂಜೆ 5 ಗಂಟೆಗೆ ನಗರದ ಐ.ಟಿ. ಪಾರ್ಕ್ನಲ್ಲಿ ಉದ್ಘಾಟನೆ ಯಾಗಲಿದೆ.<br /> <br /> `ಕೇಂದ್ರವನ್ನು ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಪಿಯುಸಿ ಪಾಸಾದ ಇಲ್ಲವೆ ಫೇಲಾದ ಹಾಗೂ ಪದವೀಧರರಿಗೆ ಉದ್ಯೋಗ ಕುರಿತು ಮಾಹಿತಿ ಮತ್ತು ತರಬೇತಿ ನೀಡುವ ಸಲುವಾಗಿ ಈ ಕೇಂದ್ರವನ್ನು ಆರಂಭಿಸು ತ್ತಿದ್ದೇವೆ~ ಎಂದು ಕೃತಿ ಬಿಸಿನೆಸ್ ಸೊಲ್ಯುಷನ್ಸ್ ಕೇಂದ್ರದ ಪಾಲುದಾರ ರಾದ ವಾದಿರಾಜ ಚಿಪ್ಪಲಗಟ್ಟಿ ಹಾಗೂ ವಿಶ್ವನಾಥ ರಾಯದುರ್ಗ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಕಂಪ್ಯೂಟರ್ ಲ್ಯಾಬ್ ಹಾಗೂ ತರಗತಿ ಕೋಣೆಗಳನ್ನು ಒಳಗೊಂಡ ಕೇಂದ್ರದಲ್ಲಿ 25 ದಿನಗಳವರೆಗೆ ನಿತ್ಯ 2 ಗಂಟೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ರೂ 10,000 ಪ್ರವೇಶ ಶುಲ್ಕ ಕೊಡಬೇಕಾಗುತ್ತದೆ.<br /> <br /> ಪ್ರತಿ ತಂಡದಲ್ಲಿ 20 ಅಭ್ಯರ್ಥಿಗಳನ್ನು ಆಯ್ಕೆಗೊಳಿಸ ಲಾಗುತ್ತದೆ. 35 ವರ್ಷದೊಳಗಿನವರು ತರಬೇತಿ ಪಡೆಯಬಹುದು. ತರಬೇತಿ ನಂತರ ವಿವಿಧ ಕಂಪೆನಿಗಳ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗು ತ್ತದೆ~ ಎಂದು ಅವರು ಹೇಳಿದರು.<br /> <br /> `ಬಿಪಿಓದಲ್ಲಿ ಅನೇಕ ಉದ್ಯೋಗಗಳಿವೆ. ಆದರೆ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ಸಿಕ್ಕಿರುವುದಿಲ್ಲ. ತರಬೇತಿ ನೀಡುವ ಮೂಲಕ ಉದ್ಯೋಗ ಸಿಗಲು ನೆರವಾಗುವಂಥ ಕೆಲಸವನ್ನು ನಮ್ಮ ಕೇಂದ್ರ ಮಾಡುತ್ತದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಬಿಪಿಓ (ಬಿಸಿನೆಸ್ ಪ್ರೊಸೆಸ್ ಓಟ್ಸೋರ್ಸಿಂಗ್) ತರಬೇತಿ ನೀಡುವ ಕೃತಿ ಬಿಸಿನೆಸ್ ಸೊಲ್ಯುಷನ್ಸ್ ಕೇಂದ್ರ ಇದೇ 3ರಂದು ಸಂಜೆ 5 ಗಂಟೆಗೆ ನಗರದ ಐ.ಟಿ. ಪಾರ್ಕ್ನಲ್ಲಿ ಉದ್ಘಾಟನೆ ಯಾಗಲಿದೆ.<br /> <br /> `ಕೇಂದ್ರವನ್ನು ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಪಿಯುಸಿ ಪಾಸಾದ ಇಲ್ಲವೆ ಫೇಲಾದ ಹಾಗೂ ಪದವೀಧರರಿಗೆ ಉದ್ಯೋಗ ಕುರಿತು ಮಾಹಿತಿ ಮತ್ತು ತರಬೇತಿ ನೀಡುವ ಸಲುವಾಗಿ ಈ ಕೇಂದ್ರವನ್ನು ಆರಂಭಿಸು ತ್ತಿದ್ದೇವೆ~ ಎಂದು ಕೃತಿ ಬಿಸಿನೆಸ್ ಸೊಲ್ಯುಷನ್ಸ್ ಕೇಂದ್ರದ ಪಾಲುದಾರ ರಾದ ವಾದಿರಾಜ ಚಿಪ್ಪಲಗಟ್ಟಿ ಹಾಗೂ ವಿಶ್ವನಾಥ ರಾಯದುರ್ಗ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಕಂಪ್ಯೂಟರ್ ಲ್ಯಾಬ್ ಹಾಗೂ ತರಗತಿ ಕೋಣೆಗಳನ್ನು ಒಳಗೊಂಡ ಕೇಂದ್ರದಲ್ಲಿ 25 ದಿನಗಳವರೆಗೆ ನಿತ್ಯ 2 ಗಂಟೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ರೂ 10,000 ಪ್ರವೇಶ ಶುಲ್ಕ ಕೊಡಬೇಕಾಗುತ್ತದೆ.<br /> <br /> ಪ್ರತಿ ತಂಡದಲ್ಲಿ 20 ಅಭ್ಯರ್ಥಿಗಳನ್ನು ಆಯ್ಕೆಗೊಳಿಸ ಲಾಗುತ್ತದೆ. 35 ವರ್ಷದೊಳಗಿನವರು ತರಬೇತಿ ಪಡೆಯಬಹುದು. ತರಬೇತಿ ನಂತರ ವಿವಿಧ ಕಂಪೆನಿಗಳ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗು ತ್ತದೆ~ ಎಂದು ಅವರು ಹೇಳಿದರು.<br /> <br /> `ಬಿಪಿಓದಲ್ಲಿ ಅನೇಕ ಉದ್ಯೋಗಗಳಿವೆ. ಆದರೆ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ಸಿಕ್ಕಿರುವುದಿಲ್ಲ. ತರಬೇತಿ ನೀಡುವ ಮೂಲಕ ಉದ್ಯೋಗ ಸಿಗಲು ನೆರವಾಗುವಂಥ ಕೆಲಸವನ್ನು ನಮ್ಮ ಕೇಂದ್ರ ಮಾಡುತ್ತದೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>