<p><strong>ಮೈಸೂರು:</strong> ರಾಜ್ಯದ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಅಂಧ ವಿದ್ಯಾರ್ಥಿಗಳು ಈಗ ಹಳೆಯ ವಿದ್ಯಾರ್ಥಿಗಳ ಮನೆಯ ಬಾಗಿಲು ತಟ್ಟುತ್ತಿದ್ದಾರೆ. ಯಾಕೆಂದರೆ ಅವರಿಗೆ ಬ್ರೈಲ್ ಲಿಪಿಯಲ್ಲಿರುವ ಪಠ್ಯ ಪುಸ್ತಕಗಳು ಸಿಗುತ್ತಿಲ್ಲ.<br /> <br /> ಒಂದರಿಂದ ಹತ್ತನೇ ತರಗತಿವರೆಗಿನ ಕನ್ನಡ ಮಾಧ್ಯಮದ ಬ್ರೈಲ್ ಲಿಪಿ ಪಠ್ಯಪುಸ್ತಕಗಳನ್ನು ನಿಗದಿತ ಸಮಯದಲ್ಲಿ ಮುದ್ರಣ ಮಾಡಿ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತೊಂದರೆಗೆ ಸಿಲುಕಿದ್ದಾರೆ. <br /> <br /> ಪಠ್ಯಪುಸ್ತಗಳು ಮಾರುಕಟ್ಟೆಯಲ್ಲಿ ದೊರಕದಿರುವುದರಿಂದ ಹಳೆಯ ವಿದ್ಯಾರ್ಥಿಗಳ ಮೊರೆ ಹೋಗಿ ಪಠ್ಯಗಳನ್ನು ಕೇಳಿ ಪಡೆಯುತ್ತಿದ್ದಾರೆ. ಬಹುತೇಕ ಮಂದಿಗೆ ಇದೂ ಸಹ ಸಿಗುತ್ತಿಲ್ಲ.ಈಗಾಗಲೇ ಶಾಲೆಗಳು ಆರಂಭವಾಗಿವೆ. ಆದರೆ, ಪಠ್ಯ ಪುಸ್ತಕಗಳು ಇನ್ನೂ ಮುದ್ರಣವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.<br /> <br /> ಪಠ್ಯ ಪುಸ್ತಕಗಳ ಕೊರತೆ ಒಂದೆಡೆಯಾದರೆ, ಕಾಲ ಕಾಲಕ್ಕೆ ಪಠ್ಯಕ್ರಮ ಬದಲಾಗುತ್ತಿರುತ್ತವೆ. ಬದಲಾದ ಪಠ್ಯಪುಸ್ತಕಗಳನ್ನು ಸರಬರಾಜು ಮಾಡದೆ ಹಳೆಯ ಪಠ್ಯಕ್ರಮ ಇರುವ ಪುಸ್ತಕಗಳನ್ನೇ ಸರಬರಾಜು ಮಾಡುತ್ತಿರುವುದೂ ಸಮಸ್ಯೆಯಾಗಿದೆ. 2004ನೇ ಸಾಲಿನಲ್ಲೇ 6 ನೇ ತರಗತಿ ಹಿಂದಿ ಪಠ್ಯಕ್ರಮವನ್ನು ಬದಲಾಯಿಸಲಾಗಿದೆ. <br /> <br /> ಇಲ್ಲಿವರೆಗೂ ಹೊಸ ಪಠ್ಯಕ್ರಮದ ಪಠ್ಯವನ್ನು ಬ್ರೈಲ್ನಲ್ಲಿ ಮುದ್ರಣ ಮಾಡಿಲ್ಲ. ಹಳೆಯ ಪಠ್ಯಪುಸ್ತಕವೇ ಈಗಲೂ ಚಾಲ್ತಿಯಲ್ಲಿದೆ. ಮತ್ತೊಂದೆಡೆ ಆಂಗ್ಲ ಮಾಧ್ಯಮದ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಗಳಲ್ಲಿ ಮುದ್ರಣ ಮಾಡುತ್ತಿಲ್ಲ. ಆಂಗ್ಲ ಶಿಕ್ಷಣ ಸಂಸ್ಥೆ ನಡೆಸುವವರೇ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗಿದೆ. <br /> <br /> ಆಂಗ್ಲ ಮಾಧ್ಯಮದ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡುವಂತೆ ಸರ್ಕಾರದ ಮೊರೆ ಹೋಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪದವಿಪೂರ್ವ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡುತ್ತಿಲ್ಲ. ಬದಲಿಗೆ ಸರ್ಕಾರ ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ ನೀಡಿ ಕೈ ತೊಳೆದುಕೊಳ್ಳುತ್ತಿದೆ. <br /> <br /> ಅಂಧರ ಪ್ರೌಢಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳು ಇರುವುದಿಲ್ಲ. ಇದರ ಬದಲಿಗೆ ಭಾರತೀಯ ಅರ್ಥಶಾಸ್ತ್ರ, ಭಾರತೀಯ ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಂಗೀತ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಾಗಿದೆ. <br /> <br /> 1982 ರಿಂದ ಈ ನಾಲ್ಕು ವಿಷಯಗಳ ಪಠ್ಯಕ್ರಮ ಬದಲಾಗಿಲ್ಲ. ಕಾಲಕಾಲಕ್ಕೆ ಪಠ್ಯಕ್ರಮ ಬದಲಿಸಬೇಕಾದ ಸರ್ಕಾರ ಮೈಮರೆತಿದೆ. ಈ ಪಠ್ಯಪುಸ್ತಕಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.<br /> </p>.<p><strong>ಅಂಧರ ಶಾಲೆಗಳ ನಿರ್ಲಕ್ಷ್ಯ<br /> </strong>`ರಾಜ್ಯದಲ್ಲಿ ಒಟ್ಟು 40 ಸರ್ಕಾರಿ ಮತ್ತು ಖಾಸಗಿ ಅಂಧ ಶಾಲೆಗಳು ಇವೆ. ಈ ಪೈಕಿ ಮೈಸೂರು, ಗುಲ್ಬರ್ಗ, ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ 4 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಿಗೆ ಬ್ರೈಲ್ ಲಿಪಿ ಪಠ್ಯಪುಸ್ತಕಗಳು ಸರಿಯಾಗಿ ಸರಬರಾಜು ಆಗುತ್ತಿಲ್ಲ. <br /> <br /> ಸರ್ವಶಿಕ್ಷಣ ಅಭಿಯಾನಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಅಂಧರ ಶಾಲೆಗಳನ್ನು ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದರಿಂದ ಅಂಧರ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅಂಧರ ಶಾಲೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು<br /> <strong>-ಎನ್.ಸಿದ್ದರಾಜು, ಅಧ್ಯಕ್ಷರು, ಅಂಧರ ರಾಷ್ಟ್ರೀಯ ಒಕ್ಕೂಟಮೈಸೂರು ಘಟಕ <br /> ಸಮರ್ಪಕ ಪೂರೈಕೆ<br /> </strong>`ಬ್ರೈಲ್ ಲಿಪಿ ಪಠ್ಯಪುಸ್ತಕಗಳ ಸರಬರಾಜು ವಿಳಂಬ ಆಗಿತ್ತು. ಈಗ ಸರಿಯಾಗಿ ಸರಬರಾಜು ಮಾಡಲಾಗುತ್ತಿದೆ. ಹೊಸ ಪಠ್ಯಕ್ರಮದ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಇನ್ನೂ ಮುದ್ರಣ ಮಾಡಿಲ್ಲ. ಆಂಗ್ಲ ಮಾಧ್ಯಮದ ಬ್ರೈಲ್ ಲಿಪಿ ಪಠ್ಯಪುಸ್ತಕಗಳನ್ನು ಸರ್ಕಾರ ಮುದ್ರಿಸುವುದಿಲ್ಲ. <br /> <br /> ಆಯಾ ಶಾಲೆಯವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಪಿಯುಸಿ ಅಂಧ ವಿದ್ಯಾರ್ಥಿಗಳಿಗೆ ಟೇಪ್ ರೆಕಾರ್ಡ್ರ್ ಮತ್ತು ಕ್ಯಾಸೆಟ್ ನೀಡಲಾಗುತ್ತಿದೆ <br /> -<strong>ಚನ್ನಯ್ಯ, ಸಹಾಯಕ ನಿರ್ದೇಶಕರು, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ<br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರಾಜ್ಯದ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಅಂಧ ವಿದ್ಯಾರ್ಥಿಗಳು ಈಗ ಹಳೆಯ ವಿದ್ಯಾರ್ಥಿಗಳ ಮನೆಯ ಬಾಗಿಲು ತಟ್ಟುತ್ತಿದ್ದಾರೆ. ಯಾಕೆಂದರೆ ಅವರಿಗೆ ಬ್ರೈಲ್ ಲಿಪಿಯಲ್ಲಿರುವ ಪಠ್ಯ ಪುಸ್ತಕಗಳು ಸಿಗುತ್ತಿಲ್ಲ.<br /> <br /> ಒಂದರಿಂದ ಹತ್ತನೇ ತರಗತಿವರೆಗಿನ ಕನ್ನಡ ಮಾಧ್ಯಮದ ಬ್ರೈಲ್ ಲಿಪಿ ಪಠ್ಯಪುಸ್ತಕಗಳನ್ನು ನಿಗದಿತ ಸಮಯದಲ್ಲಿ ಮುದ್ರಣ ಮಾಡಿ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತೊಂದರೆಗೆ ಸಿಲುಕಿದ್ದಾರೆ. <br /> <br /> ಪಠ್ಯಪುಸ್ತಗಳು ಮಾರುಕಟ್ಟೆಯಲ್ಲಿ ದೊರಕದಿರುವುದರಿಂದ ಹಳೆಯ ವಿದ್ಯಾರ್ಥಿಗಳ ಮೊರೆ ಹೋಗಿ ಪಠ್ಯಗಳನ್ನು ಕೇಳಿ ಪಡೆಯುತ್ತಿದ್ದಾರೆ. ಬಹುತೇಕ ಮಂದಿಗೆ ಇದೂ ಸಹ ಸಿಗುತ್ತಿಲ್ಲ.ಈಗಾಗಲೇ ಶಾಲೆಗಳು ಆರಂಭವಾಗಿವೆ. ಆದರೆ, ಪಠ್ಯ ಪುಸ್ತಕಗಳು ಇನ್ನೂ ಮುದ್ರಣವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.<br /> <br /> ಪಠ್ಯ ಪುಸ್ತಕಗಳ ಕೊರತೆ ಒಂದೆಡೆಯಾದರೆ, ಕಾಲ ಕಾಲಕ್ಕೆ ಪಠ್ಯಕ್ರಮ ಬದಲಾಗುತ್ತಿರುತ್ತವೆ. ಬದಲಾದ ಪಠ್ಯಪುಸ್ತಕಗಳನ್ನು ಸರಬರಾಜು ಮಾಡದೆ ಹಳೆಯ ಪಠ್ಯಕ್ರಮ ಇರುವ ಪುಸ್ತಕಗಳನ್ನೇ ಸರಬರಾಜು ಮಾಡುತ್ತಿರುವುದೂ ಸಮಸ್ಯೆಯಾಗಿದೆ. 2004ನೇ ಸಾಲಿನಲ್ಲೇ 6 ನೇ ತರಗತಿ ಹಿಂದಿ ಪಠ್ಯಕ್ರಮವನ್ನು ಬದಲಾಯಿಸಲಾಗಿದೆ. <br /> <br /> ಇಲ್ಲಿವರೆಗೂ ಹೊಸ ಪಠ್ಯಕ್ರಮದ ಪಠ್ಯವನ್ನು ಬ್ರೈಲ್ನಲ್ಲಿ ಮುದ್ರಣ ಮಾಡಿಲ್ಲ. ಹಳೆಯ ಪಠ್ಯಪುಸ್ತಕವೇ ಈಗಲೂ ಚಾಲ್ತಿಯಲ್ಲಿದೆ. ಮತ್ತೊಂದೆಡೆ ಆಂಗ್ಲ ಮಾಧ್ಯಮದ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಗಳಲ್ಲಿ ಮುದ್ರಣ ಮಾಡುತ್ತಿಲ್ಲ. ಆಂಗ್ಲ ಶಿಕ್ಷಣ ಸಂಸ್ಥೆ ನಡೆಸುವವರೇ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗಿದೆ. <br /> <br /> ಆಂಗ್ಲ ಮಾಧ್ಯಮದ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡುವಂತೆ ಸರ್ಕಾರದ ಮೊರೆ ಹೋಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪದವಿಪೂರ್ವ ಪಠ್ಯ ಪುಸ್ತಕಗಳನ್ನು ಮುದ್ರಣ ಮಾಡುತ್ತಿಲ್ಲ. ಬದಲಿಗೆ ಸರ್ಕಾರ ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ ನೀಡಿ ಕೈ ತೊಳೆದುಕೊಳ್ಳುತ್ತಿದೆ. <br /> <br /> ಅಂಧರ ಪ್ರೌಢಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳು ಇರುವುದಿಲ್ಲ. ಇದರ ಬದಲಿಗೆ ಭಾರತೀಯ ಅರ್ಥಶಾಸ್ತ್ರ, ಭಾರತೀಯ ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಂಗೀತ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಾಗಿದೆ. <br /> <br /> 1982 ರಿಂದ ಈ ನಾಲ್ಕು ವಿಷಯಗಳ ಪಠ್ಯಕ್ರಮ ಬದಲಾಗಿಲ್ಲ. ಕಾಲಕಾಲಕ್ಕೆ ಪಠ್ಯಕ್ರಮ ಬದಲಿಸಬೇಕಾದ ಸರ್ಕಾರ ಮೈಮರೆತಿದೆ. ಈ ಪಠ್ಯಪುಸ್ತಕಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪಗಳು ಕೇಳಿಬಂದಿವೆ.<br /> </p>.<p><strong>ಅಂಧರ ಶಾಲೆಗಳ ನಿರ್ಲಕ್ಷ್ಯ<br /> </strong>`ರಾಜ್ಯದಲ್ಲಿ ಒಟ್ಟು 40 ಸರ್ಕಾರಿ ಮತ್ತು ಖಾಸಗಿ ಅಂಧ ಶಾಲೆಗಳು ಇವೆ. ಈ ಪೈಕಿ ಮೈಸೂರು, ಗುಲ್ಬರ್ಗ, ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ 4 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಿಗೆ ಬ್ರೈಲ್ ಲಿಪಿ ಪಠ್ಯಪುಸ್ತಕಗಳು ಸರಿಯಾಗಿ ಸರಬರಾಜು ಆಗುತ್ತಿಲ್ಲ. <br /> <br /> ಸರ್ವಶಿಕ್ಷಣ ಅಭಿಯಾನಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಅಂಧರ ಶಾಲೆಗಳನ್ನು ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದರಿಂದ ಅಂಧರ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅಂಧರ ಶಾಲೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು<br /> <strong>-ಎನ್.ಸಿದ್ದರಾಜು, ಅಧ್ಯಕ್ಷರು, ಅಂಧರ ರಾಷ್ಟ್ರೀಯ ಒಕ್ಕೂಟಮೈಸೂರು ಘಟಕ <br /> ಸಮರ್ಪಕ ಪೂರೈಕೆ<br /> </strong>`ಬ್ರೈಲ್ ಲಿಪಿ ಪಠ್ಯಪುಸ್ತಕಗಳ ಸರಬರಾಜು ವಿಳಂಬ ಆಗಿತ್ತು. ಈಗ ಸರಿಯಾಗಿ ಸರಬರಾಜು ಮಾಡಲಾಗುತ್ತಿದೆ. ಹೊಸ ಪಠ್ಯಕ್ರಮದ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಇನ್ನೂ ಮುದ್ರಣ ಮಾಡಿಲ್ಲ. ಆಂಗ್ಲ ಮಾಧ್ಯಮದ ಬ್ರೈಲ್ ಲಿಪಿ ಪಠ್ಯಪುಸ್ತಕಗಳನ್ನು ಸರ್ಕಾರ ಮುದ್ರಿಸುವುದಿಲ್ಲ. <br /> <br /> ಆಯಾ ಶಾಲೆಯವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಪಿಯುಸಿ ಅಂಧ ವಿದ್ಯಾರ್ಥಿಗಳಿಗೆ ಟೇಪ್ ರೆಕಾರ್ಡ್ರ್ ಮತ್ತು ಕ್ಯಾಸೆಟ್ ನೀಡಲಾಗುತ್ತಿದೆ <br /> -<strong>ಚನ್ನಯ್ಯ, ಸಹಾಯಕ ನಿರ್ದೇಶಕರು, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ<br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>