<p><strong>ಭುವನೇಶ್ವರ್: </strong>ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಒಡಿಶಾದ ಸಚಿವ ಜೋಗೇಂದ್ರ ಬೆಹೆರಾ ಚಪ್ಪಲಿಯ ಸ್ಟ್ರಾಪ್ ಹಾಕುವಂತೆ ವೈಯಕ್ತಿಕ ಭದ್ರತಾ ಅಧಿಕಾರಿಗೆ ಆದೇಶಿಸಿ ಅಧಿಕಾರಿಯ ಕೈಯಿಂದಲೇ ಚಪ್ಪಲಿ ಹಾಕಿಸಿಕೊಂಡ ಘಟನೆಯೀಗ ವಿವಾದಕ್ಕೀಡಾಗಿದೆ.</p>.<p>ಸಣ್ಣ ಹಾಗು ಮಧ್ಯಮ ಉದ್ಯಮಗಳ ಸಚಿವರಾಗಿರುವ ಬೆಹರಾ ಅಗಸ್ಟ್ 15 ರಂದು ಕಿಯೊಂಜಹಾರ್ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಧ್ವಜಾರೋಹಣದ ನಂತರ ವೇದಿಕೆಗೆ ಬಂದ ಸಚಿವರು ತನ್ನ ಚಪ್ಪಲಿಯ ಸ್ಟ್ರಾಪ್ ಬಿಗಿ ಮಾಡುವಂತೆ ಭದ್ರತಾ ಅಧಿಕಾರಿಗೆ ಆದೇಶಿಸಿದ್ದರು.<br /> <br /> ವೇದಿಕೆಯಲ್ಲಿಯೇ ಭದ್ರತಾ ಅಧಿಕಾರಿಯಿಂದ ಚಪ್ಪಲಿ ಸರಿಮಾಡುವಂತೆ ಹೇಳಿ ದರ್ಪ ಮೆರೆದ ಸಚಿವರ ನಡೆ ಪತ್ರಕರ್ತರ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಬೆಹೆರಾ ವಿರುದ್ಧ ಟೀಕಾ ಪ್ರಹಾರ ನಡೆದಿದೆ.<br /> <br /> ನಾನೊಬ್ಬ ವಿಐಪಿ. ನಾನು ಧ್ವಜಾರೋಹಣ ಮಾಡಿದ್ದೇನೆ. ಈತ ( ಭದ್ರತಾ ಅಧಿಕಾರಿ) ಅದಕ್ಕೆ ಈ ಕೆಲಸ ಮಾಡಿದ್ದಾನೆ (ಚಪ್ಪಲಿಯ ಸ್ಟ್ರಾಪ್ ಬಿಗಿ ಮಾಡಿದ್ದು) ಎಂದು ಈ ಘಟನೆ ಬಗ್ಗೆ ಬೆಹರಾ ಪ್ರತಿಕ್ರಿಯೆ ನೀಡಿದ್ದರು. ಅವರ ಈ ಉದ್ದಟತನದ ಹೇಳಿಕೆಯೂ ವಿವಾದಕ್ಕೀಡಾಗುತ್ತಿದ್ದಂತೆ ಎಚ್ಚೆತ್ತ ಸಚಿವರು ತನಗೆ ಮಂಡಿ ನೋವು ಇದೆ. ಆದ್ದರಿಂದ ಬಗ್ಗಲು ಸಾಧ್ಯವಿಲ್ಲ. ಅದಕ್ಕಾಗಿ ಭದ್ರತಾ ಅಧಿಕಾರಿಯ ಸಹಾಯ ಬೇಡಿದೆ ಎಂದಿದ್ದಾರೆ.<br /> <br /> ಏತನ್ಮಧ್ಯೆ, ಬೆಹೆರಾ ಅವರ ನಡೆಯನ್ನು ಖಂಡಿಸಿರುವ ವಿಪಕ್ಷಗಳು ಸಚಿವರು ಆದಷ್ಟು ಬೇಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.</p>.<p><strong>ವಿಡಿಯೊ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ್: </strong>ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಒಡಿಶಾದ ಸಚಿವ ಜೋಗೇಂದ್ರ ಬೆಹೆರಾ ಚಪ್ಪಲಿಯ ಸ್ಟ್ರಾಪ್ ಹಾಕುವಂತೆ ವೈಯಕ್ತಿಕ ಭದ್ರತಾ ಅಧಿಕಾರಿಗೆ ಆದೇಶಿಸಿ ಅಧಿಕಾರಿಯ ಕೈಯಿಂದಲೇ ಚಪ್ಪಲಿ ಹಾಕಿಸಿಕೊಂಡ ಘಟನೆಯೀಗ ವಿವಾದಕ್ಕೀಡಾಗಿದೆ.</p>.<p>ಸಣ್ಣ ಹಾಗು ಮಧ್ಯಮ ಉದ್ಯಮಗಳ ಸಚಿವರಾಗಿರುವ ಬೆಹರಾ ಅಗಸ್ಟ್ 15 ರಂದು ಕಿಯೊಂಜಹಾರ್ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಧ್ವಜಾರೋಹಣದ ನಂತರ ವೇದಿಕೆಗೆ ಬಂದ ಸಚಿವರು ತನ್ನ ಚಪ್ಪಲಿಯ ಸ್ಟ್ರಾಪ್ ಬಿಗಿ ಮಾಡುವಂತೆ ಭದ್ರತಾ ಅಧಿಕಾರಿಗೆ ಆದೇಶಿಸಿದ್ದರು.<br /> <br /> ವೇದಿಕೆಯಲ್ಲಿಯೇ ಭದ್ರತಾ ಅಧಿಕಾರಿಯಿಂದ ಚಪ್ಪಲಿ ಸರಿಮಾಡುವಂತೆ ಹೇಳಿ ದರ್ಪ ಮೆರೆದ ಸಚಿವರ ನಡೆ ಪತ್ರಕರ್ತರ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಬೆಹೆರಾ ವಿರುದ್ಧ ಟೀಕಾ ಪ್ರಹಾರ ನಡೆದಿದೆ.<br /> <br /> ನಾನೊಬ್ಬ ವಿಐಪಿ. ನಾನು ಧ್ವಜಾರೋಹಣ ಮಾಡಿದ್ದೇನೆ. ಈತ ( ಭದ್ರತಾ ಅಧಿಕಾರಿ) ಅದಕ್ಕೆ ಈ ಕೆಲಸ ಮಾಡಿದ್ದಾನೆ (ಚಪ್ಪಲಿಯ ಸ್ಟ್ರಾಪ್ ಬಿಗಿ ಮಾಡಿದ್ದು) ಎಂದು ಈ ಘಟನೆ ಬಗ್ಗೆ ಬೆಹರಾ ಪ್ರತಿಕ್ರಿಯೆ ನೀಡಿದ್ದರು. ಅವರ ಈ ಉದ್ದಟತನದ ಹೇಳಿಕೆಯೂ ವಿವಾದಕ್ಕೀಡಾಗುತ್ತಿದ್ದಂತೆ ಎಚ್ಚೆತ್ತ ಸಚಿವರು ತನಗೆ ಮಂಡಿ ನೋವು ಇದೆ. ಆದ್ದರಿಂದ ಬಗ್ಗಲು ಸಾಧ್ಯವಿಲ್ಲ. ಅದಕ್ಕಾಗಿ ಭದ್ರತಾ ಅಧಿಕಾರಿಯ ಸಹಾಯ ಬೇಡಿದೆ ಎಂದಿದ್ದಾರೆ.<br /> <br /> ಏತನ್ಮಧ್ಯೆ, ಬೆಹೆರಾ ಅವರ ನಡೆಯನ್ನು ಖಂಡಿಸಿರುವ ವಿಪಕ್ಷಗಳು ಸಚಿವರು ಆದಷ್ಟು ಬೇಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.</p>.<p><strong>ವಿಡಿಯೊ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>