<p><strong>ಇಸ್ಲಾಮಾಬಾದ್ (ಪಿಟಿಐ):</strong> ಪಾಕಿಸ್ತಾನದ ವಿರುದ್ಧ ಭಾರತವು ‘ಭಯೋತ್ಪಾನೆಯ ಕುರಿತು ಆಧಾರ ರಹಿತ ಆರೋಪ’ಗಳನ್ನು ಮಾಡುತ್ತದೆ ಎಂದು ಪಾಕಿಸ್ತಾನ ಗುರುವಾರ ಆರೋಪಿಸಿದೆ.</p>.<p>ಇದರಿಂದ ‘ಜತೆಗೂಡಿ’ ಉಗ್ರವಾದವನ್ನು ತೊಡೆದು ಹಾಕುವ ಯತ್ನಗಳು ದುರ್ಬಲಗೊಳ್ಳುತ್ತವೆ ಎಂದೂ ದೂರಿದೆ.</p>.<p>ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿದೇಶಾಂಗ ಇಲಾಖೆಯ ವಕ್ತಾರ ಖಾಜಿ ಖಲಿಲುಲ್ಲಾಹ್, ‘ಭಯೋತ್ಪಾದನೆಯು ಬರಿ ಭಾರತಕ್ಕೆ ಮಾತ್ರವಲ್ಲ, ಪಾಕಿಸ್ತಾನಕ್ಕೂ ಒಂದು ಸಮಸ್ಯೆ. ಜಗತ್ತಿಗೂ ಇದೊಂದು ಸಂದಿಗ್ಧ’ ಎಂದರು.</p>.<p>ಉಗ್ರರ ದಾಳಿ ನಡೆದಾಗೆಲ್ಲವೂ ಪಾಕಿಸ್ತಾನವನ್ನು ಟೀಕಿಸಲಾಗುತ್ತದೆಯಲ್ಲ ಎಂಬ ಪ್ರಶ್ನೆ ಅವರು ಉತ್ತರಿಸಿದರು.</p>.<p>ಪಾಕಿಸ್ತಾನದ ವಿರುದ್ಧ ಭಯೋತ್ಪಾನೆಯ ಕುರಿತು ಆಧಾರ ರಹಿತ ಆರೋಪ ಮಾಡುವುದನ್ನು ಭಾರತ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.</p>.<p>ಇದೇ ವೇಳೆ, ಇಂಡೋ–ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ದಿನಾಂಕ ನಿಗದಿ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ನಿಕಟ ಸಂಪರ್ಕದಲ್ಲಿವೆ ಎಂದರು. ಆದರೆ, ಮಾತುಕತೆಯ ಕಾಲಮಿತಿ ಸ್ಪಷ್ಟಪಡಿಸಲು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ (ಪಿಟಿಐ):</strong> ಪಾಕಿಸ್ತಾನದ ವಿರುದ್ಧ ಭಾರತವು ‘ಭಯೋತ್ಪಾನೆಯ ಕುರಿತು ಆಧಾರ ರಹಿತ ಆರೋಪ’ಗಳನ್ನು ಮಾಡುತ್ತದೆ ಎಂದು ಪಾಕಿಸ್ತಾನ ಗುರುವಾರ ಆರೋಪಿಸಿದೆ.</p>.<p>ಇದರಿಂದ ‘ಜತೆಗೂಡಿ’ ಉಗ್ರವಾದವನ್ನು ತೊಡೆದು ಹಾಕುವ ಯತ್ನಗಳು ದುರ್ಬಲಗೊಳ್ಳುತ್ತವೆ ಎಂದೂ ದೂರಿದೆ.</p>.<p>ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿದೇಶಾಂಗ ಇಲಾಖೆಯ ವಕ್ತಾರ ಖಾಜಿ ಖಲಿಲುಲ್ಲಾಹ್, ‘ಭಯೋತ್ಪಾದನೆಯು ಬರಿ ಭಾರತಕ್ಕೆ ಮಾತ್ರವಲ್ಲ, ಪಾಕಿಸ್ತಾನಕ್ಕೂ ಒಂದು ಸಮಸ್ಯೆ. ಜಗತ್ತಿಗೂ ಇದೊಂದು ಸಂದಿಗ್ಧ’ ಎಂದರು.</p>.<p>ಉಗ್ರರ ದಾಳಿ ನಡೆದಾಗೆಲ್ಲವೂ ಪಾಕಿಸ್ತಾನವನ್ನು ಟೀಕಿಸಲಾಗುತ್ತದೆಯಲ್ಲ ಎಂಬ ಪ್ರಶ್ನೆ ಅವರು ಉತ್ತರಿಸಿದರು.</p>.<p>ಪಾಕಿಸ್ತಾನದ ವಿರುದ್ಧ ಭಯೋತ್ಪಾನೆಯ ಕುರಿತು ಆಧಾರ ರಹಿತ ಆರೋಪ ಮಾಡುವುದನ್ನು ಭಾರತ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.</p>.<p>ಇದೇ ವೇಳೆ, ಇಂಡೋ–ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ದಿನಾಂಕ ನಿಗದಿ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ನಿಕಟ ಸಂಪರ್ಕದಲ್ಲಿವೆ ಎಂದರು. ಆದರೆ, ಮಾತುಕತೆಯ ಕಾಲಮಿತಿ ಸ್ಪಷ್ಟಪಡಿಸಲು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>