<p><strong>ಮೈಸೂರು: </strong>ವಿಶ್ವೇಶ್ವರನಗರ 2ನೇ ಹಂತದ ದೇವರಾಜ ಅರಸು ಕಾಲೋನಿಯಲ್ಲಿ ಮಂಗಳವಾರ ಅಕ್ಷರಶಃ ಹಬ್ಬದ ವಾತಾವರಣ. ಕಾಲೋನಿಯ ಎಲ್ಲ ಬೀದಿಗಳಲ್ಲಿ ಬಣ್ಣ ಬಣ್ಣದ ರಂಗೋಲಿ. ಹಸಿರು ತೋರಣಗಳು ಕಂಗೊಳಿಸಿದವು. ಗುಡಿಸಲು ಮನೆಯೊಂದರಲ್ಲಿ ದಸರಾ ಬೊಂಬೆಗಳ ಸಂಭ್ರಮ.<br /> <br /> ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ `ಮನೆ ಮನೆ ದಸರಾ~ದ ನೋಟವಿದು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ಪಟ್ಟಾಲದಮ್ಮ ದೇವಸ್ಥಾನದಲ್ಲಿ ಬೊಂಬೆಗಳಿಗೆ ಪೂಜೆ ಸಲ್ಲಿಸಿದರು. <br /> <br /> ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಳೆತ್ತರದಲ್ಲಿ ನೇತಾಡುತ್ತಿದ್ದ ಮಡಿಕೆಯನ್ನು ದೊಣ್ಣೆಯಿಂದ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.<br /> <br /> ಕಾಲೋನಿಯ ಬೀದಿಗಳಲ್ಲಿ ಹಾಕಲಾಗಿದ್ದ ಬಣ್ಣದ ರಂಗೋಲಿಗಳನ್ನು ರಾಮದಾಸ್ ಮತ್ತು ಅಧಿಕಾರಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಚಿಹ್ನೆ ಕಮಲದ ರಂಗೋಲಿಯನ್ನು ಅಚ್ಚುಕಟ್ಟಾಗಿ ಬಿಡಿಸಿದ್ದನ್ನು ಕಂಡ ಸಚಿವರ ಹರ್ಷ ಇಮ್ಮಡಿಯಾಯಿತು. <br /> <br /> ಕಾಲೋನಿಯಲ್ಲಿ ಕೂರಿಸಲಾಗಿದ್ದ ಬೊಂಬೆಗಳು ನೋಡುಗರ ಮನಸೂರೆಗೊಂಡವು. ಅಲ್ಲದೆ ಕಾಲೋನಿಯ ಪುಟ್ಟ ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಎಲ್ಲರ ಗಮನ ಸೆಳೆದರು.<br /> <br /> ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮದಾಸ್ ಅವರು `ಕಳೆದ ವರ್ಷದಂತೆ ಈ ಬಾರಿಯೂ ಮನೆ ಮನೆ ದಸರಾ ಆಚರಿಸಲಾಗುತ್ತಿದೆ. ನಾಡಹಬ್ಬ ದಸರಾ ಸರ್ಕಾರಿ ಕಾರ್ಯಕ್ರಮ ಆಗಬಾರದು. ಪ್ರತಿ ಮನೆ-ಮನಗಳಲ್ಲೂ ಹಬ್ಬ ಆಚರಿಸುವಂತಾಗಬೇಕು. ನಿತ್ಯ ಜೀವನದಲ್ಲಿ ಮಕ್ಕಳು ಆಟವಾಡುವ ಪಗಡೆ, ಲಗೋರಿ, ಕುಂಟಬಿಲ್ಲೆಗಳಿಗೂ ಅವಕಾಶ ಇರಬೇಕು. ಮಹಿಳೆ ಮತ್ತು ಪುರುಷರಿಗೆ ಓಟದ ಸ್ಪರ್ಧೆ, ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುತ್ತದೆ~ ಎಂದು ತಿಳಿಸಿದರು.<br /> <br /> `ಮಹಾನಗರಪಾಲಿಕೆ ವ್ಯಾಪ್ತಿಯ 65 ವಾರ್ಡ್ಗಳಲ್ಲಿ ಸೆ.27 ರವರೆಗೆ ಮನೆ ಮನೆ ದಸರಾ ಕಾರ್ಯಕ್ರಮ ನಡೆಸಲಾಗುವುದು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಪ್ರತಿಯೊಬ್ಬರ ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬೇಕು~ ಎಂದು ಕರೆ ನೀಡಿದರು. <br /> <br /> ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಉಪ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ಪಾಲಿಕೆ ಸದಸ್ಯೆ ಆಶಾ ಲಕ್ಷ್ಮಿನಾರಾಯಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ವಿಶ್ವೇಶ್ವರನಗರ 2ನೇ ಹಂತದ ದೇವರಾಜ ಅರಸು ಕಾಲೋನಿಯಲ್ಲಿ ಮಂಗಳವಾರ ಅಕ್ಷರಶಃ ಹಬ್ಬದ ವಾತಾವರಣ. ಕಾಲೋನಿಯ ಎಲ್ಲ ಬೀದಿಗಳಲ್ಲಿ ಬಣ್ಣ ಬಣ್ಣದ ರಂಗೋಲಿ. ಹಸಿರು ತೋರಣಗಳು ಕಂಗೊಳಿಸಿದವು. ಗುಡಿಸಲು ಮನೆಯೊಂದರಲ್ಲಿ ದಸರಾ ಬೊಂಬೆಗಳ ಸಂಭ್ರಮ.<br /> <br /> ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ `ಮನೆ ಮನೆ ದಸರಾ~ದ ನೋಟವಿದು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ಪಟ್ಟಾಲದಮ್ಮ ದೇವಸ್ಥಾನದಲ್ಲಿ ಬೊಂಬೆಗಳಿಗೆ ಪೂಜೆ ಸಲ್ಲಿಸಿದರು. <br /> <br /> ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಳೆತ್ತರದಲ್ಲಿ ನೇತಾಡುತ್ತಿದ್ದ ಮಡಿಕೆಯನ್ನು ದೊಣ್ಣೆಯಿಂದ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.<br /> <br /> ಕಾಲೋನಿಯ ಬೀದಿಗಳಲ್ಲಿ ಹಾಕಲಾಗಿದ್ದ ಬಣ್ಣದ ರಂಗೋಲಿಗಳನ್ನು ರಾಮದಾಸ್ ಮತ್ತು ಅಧಿಕಾರಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಚಿಹ್ನೆ ಕಮಲದ ರಂಗೋಲಿಯನ್ನು ಅಚ್ಚುಕಟ್ಟಾಗಿ ಬಿಡಿಸಿದ್ದನ್ನು ಕಂಡ ಸಚಿವರ ಹರ್ಷ ಇಮ್ಮಡಿಯಾಯಿತು. <br /> <br /> ಕಾಲೋನಿಯಲ್ಲಿ ಕೂರಿಸಲಾಗಿದ್ದ ಬೊಂಬೆಗಳು ನೋಡುಗರ ಮನಸೂರೆಗೊಂಡವು. ಅಲ್ಲದೆ ಕಾಲೋನಿಯ ಪುಟ್ಟ ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಎಲ್ಲರ ಗಮನ ಸೆಳೆದರು.<br /> <br /> ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮದಾಸ್ ಅವರು `ಕಳೆದ ವರ್ಷದಂತೆ ಈ ಬಾರಿಯೂ ಮನೆ ಮನೆ ದಸರಾ ಆಚರಿಸಲಾಗುತ್ತಿದೆ. ನಾಡಹಬ್ಬ ದಸರಾ ಸರ್ಕಾರಿ ಕಾರ್ಯಕ್ರಮ ಆಗಬಾರದು. ಪ್ರತಿ ಮನೆ-ಮನಗಳಲ್ಲೂ ಹಬ್ಬ ಆಚರಿಸುವಂತಾಗಬೇಕು. ನಿತ್ಯ ಜೀವನದಲ್ಲಿ ಮಕ್ಕಳು ಆಟವಾಡುವ ಪಗಡೆ, ಲಗೋರಿ, ಕುಂಟಬಿಲ್ಲೆಗಳಿಗೂ ಅವಕಾಶ ಇರಬೇಕು. ಮಹಿಳೆ ಮತ್ತು ಪುರುಷರಿಗೆ ಓಟದ ಸ್ಪರ್ಧೆ, ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುತ್ತದೆ~ ಎಂದು ತಿಳಿಸಿದರು.<br /> <br /> `ಮಹಾನಗರಪಾಲಿಕೆ ವ್ಯಾಪ್ತಿಯ 65 ವಾರ್ಡ್ಗಳಲ್ಲಿ ಸೆ.27 ರವರೆಗೆ ಮನೆ ಮನೆ ದಸರಾ ಕಾರ್ಯಕ್ರಮ ನಡೆಸಲಾಗುವುದು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಪ್ರತಿಯೊಬ್ಬರ ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬೇಕು~ ಎಂದು ಕರೆ ನೀಡಿದರು. <br /> <br /> ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಉಪ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ಪಾಲಿಕೆ ಸದಸ್ಯೆ ಆಶಾ ಲಕ್ಷ್ಮಿನಾರಾಯಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>