<p><strong>ನವದೆಹಲಿ/ ನಾಗಪುರ/</strong><strong>ಹುಬ್ಬಳ್ಳಿ </strong><strong> (ಪಿಟಿಐ): </strong>ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ಬಗ್ಗೆ ಇತರ ಪಕ್ಷಗಳಿಂದ ಟೀಕೆ–ವಿರೋಧ ವ್ಯಕ್ತವಾದ ಬೆನ್ನಲ್ಲೆ ಅವರ ಸೇರ್ಪಡೆಯನ್ನು ಪಕ್ಷವು ಕೆಲವೇ ಗಂಟೆಗಳಲ್ಲಿ ರದ್ದು ಪಡಿಸಿದೆ.</p>.<p>2009ರಲ್ಲಿ ಮಂಗಳೂರಿನಲ್ಲಿ ಪಬ್ವೊಂದರಲ್ಲಿ ಮಹಿಳೆ ಮೇಲಿನ ದಾಳಿ ಘಟನೆಯೊಂದಿಗೆ ‘ಗುರುತಿಸಿ’ಕೊಂಡಿದ್ದ ಮುತಾಲಿಕ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್.ಈಶ್ವರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ವಿಧ್ಯುಕ್ತವಾಗಿ ಭಾನುವಾರ ಬೆಳಿಗ್ಗೆಯಷ್ಟೇ ಸೇರ್ಪಡೆಗೊಂಡಿದ್ದರು.</p>.<p>ಆದರೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಂದ ಟೀಕೆ ವ್ಯಕ್ತವಾಗುವ ಜೊತೆಗೆ ಬಿಜೆಪಿಯಲ್ಲೂ ಅಪಸ್ವರ ಕೇಳಿಬಂದ ಹಿನ್ನಲೆಯಲ್ಲಿ ಮುತಾಲಿಕ್ ಅವರ ಸೇರ್ಪಡೆಯನ್ನು ರದ್ದುಗೊಳಿಸುವಂತೆ ರಾಜ್ಯ ಘಟಕದ ಅಧ್ಯಕ್ಷ ಜೋಶಿ ಅವರಿಗೆ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜನಾಥ್ ಸಿಂಗ್ ಸೂಚಿಸಿದ್ದಾರೆ.</p>.<p>ಮುತಾಲಿಕ್ ಸೇರ್ಪಡೆ ಕುರಿತು ರಾಷ್ಟ್ರೀಯ ನಾಯಕತ್ವದೊಂದಿಗೆ ರಾಜ್ಯ ಘಟಕ ಚರ್ಚಿಸಿರಲಿಲ್ಲ. ಹಾಗೂ ಈ ನಿರ್ಧಾರವನ್ನು ರಾಷ್ಟ್ರೀಯ ಘಟಕವು ಅನುಮೋದಿಸಿರಲಿಲ್ಲ. ‘ಮುತಾಲಿಕ್ ಸದಸ್ಯತ್ವವನ್ನು ವಜಾಗೊಳಿಸುವಂತೆ ರಾಜ್ಯ ಬಿಜೆಪಿ ಘಟಕಕ್ಕೆ ಸೂಚಿಸಲಾಗಿದೆ’ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ ತಿಳಿಸಿದ್ದಾರೆ.</p>.<p>ಇನ್ನು, ‘ಹಲವು ಕಾರಣಾಂತರಗಳಿಂದಾಗಿ ಪಕ್ಷದ ಕೇಂದ್ರೀಯ ನಿರ್ದೇಶನದಂತೆ ಮುತಾಲಿಕ್ ಅವರ ಸೇರ್ಪಡೆಯನ್ನು ರಾಜ್ಯ ಘಟಕದ ಅಧ್ಯಕ್ಷ ಜೋಶಿ ಅವರು ರದ್ದು ಪಡಿಸಿದ್ದಾರೆ’ ಎಂದು ಪಕ್ಷದ ಕರ್ನಾಟಕ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಗೊಂದಲದ ಬಗ್ಗೆ ಪ್ರಶ್ನಿಸಿದಾಗ. ‘ಮುತಾಲಿಕ್ ಅವರ ಪಕ್ಷ ಸೇರ್ಪಡೆಯನ್ನು ರಾಜ್ಯ ಮಟ್ಟದಲ್ಲಿ ನಿರ್ಧರಿಸಲಾಗಿತ್ತು’ ಎಂದು ಜೋಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ ನಾಗಪುರ/</strong><strong>ಹುಬ್ಬಳ್ಳಿ </strong><strong> (ಪಿಟಿಐ): </strong>ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ಬಗ್ಗೆ ಇತರ ಪಕ್ಷಗಳಿಂದ ಟೀಕೆ–ವಿರೋಧ ವ್ಯಕ್ತವಾದ ಬೆನ್ನಲ್ಲೆ ಅವರ ಸೇರ್ಪಡೆಯನ್ನು ಪಕ್ಷವು ಕೆಲವೇ ಗಂಟೆಗಳಲ್ಲಿ ರದ್ದು ಪಡಿಸಿದೆ.</p>.<p>2009ರಲ್ಲಿ ಮಂಗಳೂರಿನಲ್ಲಿ ಪಬ್ವೊಂದರಲ್ಲಿ ಮಹಿಳೆ ಮೇಲಿನ ದಾಳಿ ಘಟನೆಯೊಂದಿಗೆ ‘ಗುರುತಿಸಿ’ಕೊಂಡಿದ್ದ ಮುತಾಲಿಕ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್.ಈಶ್ವರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ವಿಧ್ಯುಕ್ತವಾಗಿ ಭಾನುವಾರ ಬೆಳಿಗ್ಗೆಯಷ್ಟೇ ಸೇರ್ಪಡೆಗೊಂಡಿದ್ದರು.</p>.<p>ಆದರೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಂದ ಟೀಕೆ ವ್ಯಕ್ತವಾಗುವ ಜೊತೆಗೆ ಬಿಜೆಪಿಯಲ್ಲೂ ಅಪಸ್ವರ ಕೇಳಿಬಂದ ಹಿನ್ನಲೆಯಲ್ಲಿ ಮುತಾಲಿಕ್ ಅವರ ಸೇರ್ಪಡೆಯನ್ನು ರದ್ದುಗೊಳಿಸುವಂತೆ ರಾಜ್ಯ ಘಟಕದ ಅಧ್ಯಕ್ಷ ಜೋಶಿ ಅವರಿಗೆ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜನಾಥ್ ಸಿಂಗ್ ಸೂಚಿಸಿದ್ದಾರೆ.</p>.<p>ಮುತಾಲಿಕ್ ಸೇರ್ಪಡೆ ಕುರಿತು ರಾಷ್ಟ್ರೀಯ ನಾಯಕತ್ವದೊಂದಿಗೆ ರಾಜ್ಯ ಘಟಕ ಚರ್ಚಿಸಿರಲಿಲ್ಲ. ಹಾಗೂ ಈ ನಿರ್ಧಾರವನ್ನು ರಾಷ್ಟ್ರೀಯ ಘಟಕವು ಅನುಮೋದಿಸಿರಲಿಲ್ಲ. ‘ಮುತಾಲಿಕ್ ಸದಸ್ಯತ್ವವನ್ನು ವಜಾಗೊಳಿಸುವಂತೆ ರಾಜ್ಯ ಬಿಜೆಪಿ ಘಟಕಕ್ಕೆ ಸೂಚಿಸಲಾಗಿದೆ’ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ ತಿಳಿಸಿದ್ದಾರೆ.</p>.<p>ಇನ್ನು, ‘ಹಲವು ಕಾರಣಾಂತರಗಳಿಂದಾಗಿ ಪಕ್ಷದ ಕೇಂದ್ರೀಯ ನಿರ್ದೇಶನದಂತೆ ಮುತಾಲಿಕ್ ಅವರ ಸೇರ್ಪಡೆಯನ್ನು ರಾಜ್ಯ ಘಟಕದ ಅಧ್ಯಕ್ಷ ಜೋಶಿ ಅವರು ರದ್ದು ಪಡಿಸಿದ್ದಾರೆ’ ಎಂದು ಪಕ್ಷದ ಕರ್ನಾಟಕ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಗೊಂದಲದ ಬಗ್ಗೆ ಪ್ರಶ್ನಿಸಿದಾಗ. ‘ಮುತಾಲಿಕ್ ಅವರ ಪಕ್ಷ ಸೇರ್ಪಡೆಯನ್ನು ರಾಜ್ಯ ಮಟ್ಟದಲ್ಲಿ ನಿರ್ಧರಿಸಲಾಗಿತ್ತು’ ಎಂದು ಜೋಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>