<p><strong>ಗದಗ:</strong> ಇಲ್ಲಿನ ವಿದ್ಯಾದಾನ ಸಮಿತಿ ಮೈದಾನದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಮಂಗಳವಾರ ಆರಂಭಿಸಿ ರುವ 48 ಗಂಟೆಗಳ ಉಪವಾಸ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ 108 ಪ್ರಶ್ನೆಗಳನ್ನು ಕೇಳಿದ್ದಾರೆ. <br /> <br /> ಸರ್ಕಾರಗಳು ಇವುಗಳಿಗೆ ಉತ್ತರ ನೀಡುವುದರ ಜೊತೆಗೆ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಟಾನಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ. <br /> <br /> <strong>ಕೆಲವು ಮುಖ್ಯ ಪ್ರಶ್ನೆಗಳು ಈ ಕೆಳಗಿನಂತಿವೆ.</strong><br /> *ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಚನೆಗೊಂಡ ಡಾ.ಡಿ.ಎಂ. ನಂಜುಡಪ್ಪ ನೇತತ್ವದ ಸಮಿತಿ ಸಲ್ಲಿಸಿದ ವರದಿಯ ಸಮಗ್ರ ಜಾರಿ ಯಾವಾಗ? <br /> <br /> *ನಂಜುಂಡಪ್ಪ ವರದಿಯನ್ನು ಜಾರಿ ತರುವ ನೆಪದಲ್ಲಿ ಯೋಜನಾ ವೆಚ್ಚ ಕಡಿತಗೊಳಿಸುತ್ತಿದೆ. ಇದರಿಂದ ಹಿಂದುಳಿದ ಪ್ರದೇಶಗಳು ಅಭಿವದ್ಧಿ ಹೊಂದುವುದು ಸಾಧ್ಯವಿದೆಯೇ?<br /> <br /> * ಹೈ-ಕ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಸಂವಿಧಾನದ 371 ನೇ ಪರಿಚ್ಛೇದವನ್ನು ಇಲ್ಲಿಗೆ ಜಾರಿ ಬರುವಂತೆ ಮಾಡಿಸುವುದು ಯಾವಾಗ ?<br /> <br /> *ಉತ್ತರ ಕರ್ನಾಟಕದ ಹತ್ತಾರು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿರುವುದು ಏಕೆ ?<br /> <br /> *ಜಲಾಶಯ, ಕಾಲುವೆ ನಿರ್ಮಾಣದ ವಿಚಾರದಲ್ಲಿ ದಕ್ಷಿಣ ಕರ್ನಾಟಕ ಭಾಗದಲ್ಲಿ ನೀಡಿದ ಆಸಕ್ತಿಯನ್ನು ಉತ್ತರ ಕರ್ನಾಟಕದಲ್ಲಿ ಏಕೆ ತೋರಿಸಿಲ್ಲ ?<br /> <br /> *ಉತ್ತರ ಕರ್ನಾಟಕ ಭಾಗದ ಶಿಕ್ಷಣ ವ್ಯವಸ್ಥೆ ತೀರಾ ಕಳಪೆಯಾಗಲು ಕಾರಣ ಏನು ಎಂಬುವುದರ ವೈಜ್ಞಾನಿಕ ವಿಮರ್ಶೆ ನಡೆದಿದೆಯೇ ?<br /> <br /> *ಗಡಿ ತಕರಾರಿನಿಂದ ಮಾತ್ರ ಬೆಳಗಾವಿ ಸದಾ ಗಮನ ಸೆಳೆಯುತ್ತಿರಬೇಕೆ ? ಅಲ್ಲಿ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಶಾಶ್ವತ ಯೋಜನೆಗಳನ್ನು ರೂಪಿಸುವುದಿಲ್ಲವೇ ?<br /> <br /> *ಉದ್ಯಮಗಳಿಗಾಗಿ ರೈತರ ಜಮೀನನ್ನು ಸ್ವಾಧಿನ ಪಡೆಸುವಾಗ ಯಾವ ಮಾರ್ಗ ಸೂಚಿ ಅನುಸರಿಸಿದ್ದೀರಿ ? ರೈತರ ತ್ಯಾಗಕ್ಕೆ ಸರಿಯಾಗಿ ಅವರಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಡವೇ ?<br /> <br /> *ಉತ್ತರ ಕರ್ನಾಟಕ ಹಲವಾರು ಜಿಲ್ಲೆಗಳಲ್ಲಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಇಲ್ಲಿವರೆಗೆ ಪೂರ್ಣವಾಗಿ ಆಶ್ರಯ ನೀಡಿಲ್ಲ, ಅದು ನೆರವೇರುವುದು ಯಾವಾಗ ?<br /> <br /> * ತುಂಗಭದ್ರಾ ನೀರು ಬಳಕೆಯಲ್ಲಿ ತೀವ್ರ ಸಮಸ್ಯೆ ಇದ್ದು, ಇದರ ನಿವಾರಣೆ ಯಾವಾಗ ?<br /> <br /> *ವಿಜಾಪುರ ಒಂದು ಐತಿಹಾಸಿಕ ಸ್ಥಳ, ಇಲ್ಲಿಗೆ ಬರುವ ಪ್ರವಾಸಿಗರು ಸಂಖ್ಯೆಯೂ ದೊಡ್ಡದು. ಈ ಪ್ರದೇಶದ ಅಭಿವೃದ್ಧಿ ಯಾವಾಗ ?<br /> <br /> *ಹೈ - ಕ ಭಾಗದಲ್ಲಿ ಶೇ. 20 ರಷ್ಟು ಮಕ್ಕಳು ಶಾಲೆಯಿಂದ ದೂರವೇ ಉಳಿದಿರುವುದು ಗೊತ್ತಾಗಿಲ್ಲವೇ ?<br /> <br /> * ರಾಯಚೂರ ಜಿಲ್ಲೆಯ ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ರೈತರ ಗೋಳು ಕೇಳಿದ್ದೀರಾ ?<br /> <br /> * ಎನ್ಆರ್ಬಿಸಿ ವಿಸ್ತರಣೆ ಇನ್ನೂ ನೆನಗುದಿಗೆ ಬಿದ್ದಿರುವುದು ಏಕೆ ?<br /> <br /> * ನೆನೆಗುದಿಗೆ ಬಿದ್ದಿರುವ ಕೊಪ್ಪಳ-ಮೆಹಬೂಬ್ನಗರ ರೈಲ್ವೆ ಯೋಜನೆ ಆರಂಭಗೊಳ್ಳುವುದು ಯಾವಾಗ ?<br /> <br /> * ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನಿರಂತರವೆಂಬುದು ಮನವರಿಕೆಯಾಗಿದೆಯೇ ?<br /> <br /> * ತುಂಗಭದ್ರಾ ನೀರು ಬಳಕೆಯಲ್ಲಿ ತೀವ್ರ ಸಮಸ್ಯೆ ಇದ್ದು, ಇದರ ನಿವಾರಣೆ ಯಾವಾಗ ?<br /> <br /> *ಹರಿಹರ - ಕೊಟ್ಟೂರ ರೈಲು ಮಾರ್ಗ ಪೂರ್ಣಗೊಳ್ಳುವುದು ಯಾವಾಗ ?<br /> <br /> * ಗಣಿ ಲಾರಿಗಳ ಸಂಚಾರದಿಂದಾಗಿ ಸೊಂಡೂರ-ಬಳ್ಳಾರಿ ಮತ್ತು ಸೊಂಡೂರ-ಹೊಸಪೇಟೆ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ, ಈ ರಸ್ತೆಗಳ ಅಭಿವೃದ್ಧಿಗಾಗಿ ಜನಾರ್ಧನ ರೆಡ್ಡಿ ಉಸ್ತುವಾರಿ ಸಚಿವರಾಗಿದ್ದಾಗ ಕಾಮಗಾರಿ ಪ್ರಾರಂಭವಾಗಿತ್ತು, ಅದನ್ನು ಪೂರ್ತಿಗೊಳಿಸುವುದು ಯಾವಾಗ ?<br /> <br /> * ಗಣಿಗಾರಿಕೆ ನಿಷೇಧದಿಂದಾಗಿ ಸೊಂಡೂರ, ಬಳ್ಳಾರಿ, ಹೊಸಪೇಟೆಗಳಲ್ಲಿ ಜನರು ಗುಳೆ ಹೋಗುತ್ತಿದ್ದಾರೆ, ಅವರಿಗೆ ಪರ್ಯಾಯ ಉದ್ಯೋಗ ದೊರಕಿಸುವುದಿಲ್ಲವೇ ?<br /> <br /> * ಬಳ್ಳಾರಿ ಮತ್ತು ಸಿರಗುಪ್ಪ ತಾಲ್ಲೂಕುಗಳ ನೀರಿನಲ್ಲಿ ಪ್ಲೋರೈಡ್ ಇರುವ ವಿಷಯ ಗೊತ್ತೆ ?</p>.<p>*ಪ್ರವಾಸೋದ್ಯಮ ಆಭಿವದ್ಧಿಗಾಗಿ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಉತ್ತರ ಕರ್ನಾಟಕಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದರೂ, ಅದನ್ನು ಮುಂದುವರಿಸುವ ಇಚ್ಛಾಶಕ್ತಿ ಇಲ್ಲವೇ? ಎಂಬ ಪ್ರಶ್ನೆ ಸೇರಿದಂತೆ 108 ಪ್ರಶ್ನೆಗಳನ್ನು ಶ್ರೀರಾಮುಲು ಕೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ಇಲ್ಲಿನ ವಿದ್ಯಾದಾನ ಸಮಿತಿ ಮೈದಾನದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಮಂಗಳವಾರ ಆರಂಭಿಸಿ ರುವ 48 ಗಂಟೆಗಳ ಉಪವಾಸ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ 108 ಪ್ರಶ್ನೆಗಳನ್ನು ಕೇಳಿದ್ದಾರೆ. <br /> <br /> ಸರ್ಕಾರಗಳು ಇವುಗಳಿಗೆ ಉತ್ತರ ನೀಡುವುದರ ಜೊತೆಗೆ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಟಾನಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ. <br /> <br /> <strong>ಕೆಲವು ಮುಖ್ಯ ಪ್ರಶ್ನೆಗಳು ಈ ಕೆಳಗಿನಂತಿವೆ.</strong><br /> *ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಚನೆಗೊಂಡ ಡಾ.ಡಿ.ಎಂ. ನಂಜುಡಪ್ಪ ನೇತತ್ವದ ಸಮಿತಿ ಸಲ್ಲಿಸಿದ ವರದಿಯ ಸಮಗ್ರ ಜಾರಿ ಯಾವಾಗ? <br /> <br /> *ನಂಜುಂಡಪ್ಪ ವರದಿಯನ್ನು ಜಾರಿ ತರುವ ನೆಪದಲ್ಲಿ ಯೋಜನಾ ವೆಚ್ಚ ಕಡಿತಗೊಳಿಸುತ್ತಿದೆ. ಇದರಿಂದ ಹಿಂದುಳಿದ ಪ್ರದೇಶಗಳು ಅಭಿವದ್ಧಿ ಹೊಂದುವುದು ಸಾಧ್ಯವಿದೆಯೇ?<br /> <br /> * ಹೈ-ಕ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಸಂವಿಧಾನದ 371 ನೇ ಪರಿಚ್ಛೇದವನ್ನು ಇಲ್ಲಿಗೆ ಜಾರಿ ಬರುವಂತೆ ಮಾಡಿಸುವುದು ಯಾವಾಗ ?<br /> <br /> *ಉತ್ತರ ಕರ್ನಾಟಕದ ಹತ್ತಾರು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿರುವುದು ಏಕೆ ?<br /> <br /> *ಜಲಾಶಯ, ಕಾಲುವೆ ನಿರ್ಮಾಣದ ವಿಚಾರದಲ್ಲಿ ದಕ್ಷಿಣ ಕರ್ನಾಟಕ ಭಾಗದಲ್ಲಿ ನೀಡಿದ ಆಸಕ್ತಿಯನ್ನು ಉತ್ತರ ಕರ್ನಾಟಕದಲ್ಲಿ ಏಕೆ ತೋರಿಸಿಲ್ಲ ?<br /> <br /> *ಉತ್ತರ ಕರ್ನಾಟಕ ಭಾಗದ ಶಿಕ್ಷಣ ವ್ಯವಸ್ಥೆ ತೀರಾ ಕಳಪೆಯಾಗಲು ಕಾರಣ ಏನು ಎಂಬುವುದರ ವೈಜ್ಞಾನಿಕ ವಿಮರ್ಶೆ ನಡೆದಿದೆಯೇ ?<br /> <br /> *ಗಡಿ ತಕರಾರಿನಿಂದ ಮಾತ್ರ ಬೆಳಗಾವಿ ಸದಾ ಗಮನ ಸೆಳೆಯುತ್ತಿರಬೇಕೆ ? ಅಲ್ಲಿ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಶಾಶ್ವತ ಯೋಜನೆಗಳನ್ನು ರೂಪಿಸುವುದಿಲ್ಲವೇ ?<br /> <br /> *ಉದ್ಯಮಗಳಿಗಾಗಿ ರೈತರ ಜಮೀನನ್ನು ಸ್ವಾಧಿನ ಪಡೆಸುವಾಗ ಯಾವ ಮಾರ್ಗ ಸೂಚಿ ಅನುಸರಿಸಿದ್ದೀರಿ ? ರೈತರ ತ್ಯಾಗಕ್ಕೆ ಸರಿಯಾಗಿ ಅವರಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಡವೇ ?<br /> <br /> *ಉತ್ತರ ಕರ್ನಾಟಕ ಹಲವಾರು ಜಿಲ್ಲೆಗಳಲ್ಲಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಇಲ್ಲಿವರೆಗೆ ಪೂರ್ಣವಾಗಿ ಆಶ್ರಯ ನೀಡಿಲ್ಲ, ಅದು ನೆರವೇರುವುದು ಯಾವಾಗ ?<br /> <br /> * ತುಂಗಭದ್ರಾ ನೀರು ಬಳಕೆಯಲ್ಲಿ ತೀವ್ರ ಸಮಸ್ಯೆ ಇದ್ದು, ಇದರ ನಿವಾರಣೆ ಯಾವಾಗ ?<br /> <br /> *ವಿಜಾಪುರ ಒಂದು ಐತಿಹಾಸಿಕ ಸ್ಥಳ, ಇಲ್ಲಿಗೆ ಬರುವ ಪ್ರವಾಸಿಗರು ಸಂಖ್ಯೆಯೂ ದೊಡ್ಡದು. ಈ ಪ್ರದೇಶದ ಅಭಿವೃದ್ಧಿ ಯಾವಾಗ ?<br /> <br /> *ಹೈ - ಕ ಭಾಗದಲ್ಲಿ ಶೇ. 20 ರಷ್ಟು ಮಕ್ಕಳು ಶಾಲೆಯಿಂದ ದೂರವೇ ಉಳಿದಿರುವುದು ಗೊತ್ತಾಗಿಲ್ಲವೇ ?<br /> <br /> * ರಾಯಚೂರ ಜಿಲ್ಲೆಯ ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ರೈತರ ಗೋಳು ಕೇಳಿದ್ದೀರಾ ?<br /> <br /> * ಎನ್ಆರ್ಬಿಸಿ ವಿಸ್ತರಣೆ ಇನ್ನೂ ನೆನಗುದಿಗೆ ಬಿದ್ದಿರುವುದು ಏಕೆ ?<br /> <br /> * ನೆನೆಗುದಿಗೆ ಬಿದ್ದಿರುವ ಕೊಪ್ಪಳ-ಮೆಹಬೂಬ್ನಗರ ರೈಲ್ವೆ ಯೋಜನೆ ಆರಂಭಗೊಳ್ಳುವುದು ಯಾವಾಗ ?<br /> <br /> * ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನಿರಂತರವೆಂಬುದು ಮನವರಿಕೆಯಾಗಿದೆಯೇ ?<br /> <br /> * ತುಂಗಭದ್ರಾ ನೀರು ಬಳಕೆಯಲ್ಲಿ ತೀವ್ರ ಸಮಸ್ಯೆ ಇದ್ದು, ಇದರ ನಿವಾರಣೆ ಯಾವಾಗ ?<br /> <br /> *ಹರಿಹರ - ಕೊಟ್ಟೂರ ರೈಲು ಮಾರ್ಗ ಪೂರ್ಣಗೊಳ್ಳುವುದು ಯಾವಾಗ ?<br /> <br /> * ಗಣಿ ಲಾರಿಗಳ ಸಂಚಾರದಿಂದಾಗಿ ಸೊಂಡೂರ-ಬಳ್ಳಾರಿ ಮತ್ತು ಸೊಂಡೂರ-ಹೊಸಪೇಟೆ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ, ಈ ರಸ್ತೆಗಳ ಅಭಿವೃದ್ಧಿಗಾಗಿ ಜನಾರ್ಧನ ರೆಡ್ಡಿ ಉಸ್ತುವಾರಿ ಸಚಿವರಾಗಿದ್ದಾಗ ಕಾಮಗಾರಿ ಪ್ರಾರಂಭವಾಗಿತ್ತು, ಅದನ್ನು ಪೂರ್ತಿಗೊಳಿಸುವುದು ಯಾವಾಗ ?<br /> <br /> * ಗಣಿಗಾರಿಕೆ ನಿಷೇಧದಿಂದಾಗಿ ಸೊಂಡೂರ, ಬಳ್ಳಾರಿ, ಹೊಸಪೇಟೆಗಳಲ್ಲಿ ಜನರು ಗುಳೆ ಹೋಗುತ್ತಿದ್ದಾರೆ, ಅವರಿಗೆ ಪರ್ಯಾಯ ಉದ್ಯೋಗ ದೊರಕಿಸುವುದಿಲ್ಲವೇ ?<br /> <br /> * ಬಳ್ಳಾರಿ ಮತ್ತು ಸಿರಗುಪ್ಪ ತಾಲ್ಲೂಕುಗಳ ನೀರಿನಲ್ಲಿ ಪ್ಲೋರೈಡ್ ಇರುವ ವಿಷಯ ಗೊತ್ತೆ ?</p>.<p>*ಪ್ರವಾಸೋದ್ಯಮ ಆಭಿವದ್ಧಿಗಾಗಿ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಉತ್ತರ ಕರ್ನಾಟಕಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದರೂ, ಅದನ್ನು ಮುಂದುವರಿಸುವ ಇಚ್ಛಾಶಕ್ತಿ ಇಲ್ಲವೇ? ಎಂಬ ಪ್ರಶ್ನೆ ಸೇರಿದಂತೆ 108 ಪ್ರಶ್ನೆಗಳನ್ನು ಶ್ರೀರಾಮುಲು ಕೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>